Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನಿನ್ನೆಯ ಆಯುಧಗಳಿಂದ ಇಂದಿನ ಯುದ್ಧ ಗೆಲ್ಲಲು ಸಾಧ್ಯವಿಲ್ಲ’ : CDS ಅನಿಲ್ ಚೌಹಾಣ್

16/07/2025 5:11 PM

BREAKING: ಸಾಗರ ತಹಶೀಲ್ದಾರ್ ಚಂದ್ರಶೇಖರ ನಾಯಕ್ ವರ್ಗಾವಣೆ: ನೂತನ ತಹಶೀಲ್ದಾರ್ ಆಗಿ ರಶ್ಮಿ ನೇಮಕ

16/07/2025 5:07 PM

BREAKING : 3 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ, ನಗರಸಭೆ ಬಿಜೆಪಿ ಸದಸ್ಯ, ಓರ್ವ ಅಧಿಕಾರಿ

16/07/2025 5:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂಬೇಡ್ಕರ್ ಅವರೇನು ಮಹಾ? ಎಂದ ಅಮಿತ್ ಷಾ ವಜಾಗೊಳಿಸಿ: ಸಚಿವ ಡಾ ಹೆಚ್ ಸಿ ಮಹದೇವಪ್ಪ ಒತ್ತಾಯ
KARNATAKA

ಅಂಬೇಡ್ಕರ್ ಅವರೇನು ಮಹಾ? ಎಂದ ಅಮಿತ್ ಷಾ ವಜಾಗೊಳಿಸಿ: ಸಚಿವ ಡಾ ಹೆಚ್ ಸಿ ಮಹದೇವಪ್ಪ ಒತ್ತಾಯ

By kannadanewsnow0923/12/2024 8:50 PM

ಬೆಂಗಳೂರು: ಅಂಬೇಡ್ಕರ್ ಅವರೇನು ಮಹಾ? ಎನ್ನುತ್ತಿರುವ ಅಮಿತ್ ಷಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಒತ್ತಾಯಿಸಿದ್ದಾರೆ.

ಸಂವಿಧಾನಕ್ಕೆ 75 ವರ್ಷಗಳು ಪೂರ್ಣವಾಗಿರುವ ಪ್ರಯುಕ್ತ ಸಂವಿಧಾನದಲ್ಲೇ ಚರ್ಚೆ ನಡೆಯುವ ಸಂದರ್ಭದಲ್ಲಿ ಸಂವಿಧಾನದ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಕೆಲಸ ಮಾಡಿರುವ ಬಿಜೆಪಿಯ ಅಮಿತ್ ಷಾ ಅವರು ಸಂವಿಧಾನಕ್ಕೆ ವಿರೋಧಿ ಧೋರಣೆಯನ್ನು ಅನಾವರಣಗೊಳಿಸಿದ್ದಾರೆ.

ಈ ನೂರು ವರ್ಷಗಳಿಂದಲೂ ಜನಸಂಘ ಅಥವಾ ಬಿಜೆಪಿಯು ನಿರಂತರವಾಗಿ ಸಂವಿಧಾನ ಬದಕಾವಣೆಯ ಪ್ರಯತ್ನವನ್ನು ಮಾಡುತ್ತಲೇ ಇದ್ದು ಈ ದಿನ ಸಂಸತ್ತಿನಲ್ಲೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿರುದ್ಧ ತಮ್ಮ ಅಸಹನೆಯನ್ನು ಬಹುರಂಗವಾಗಿಯೇ ಹೊರಹಾಕಿದ್ದು ಇದು ದೇಶದ ಉಳಿವಿನ ದೃಷ್ಟಿಯಲ್ಲಿ ಅತ್ಯಂತ ಅಪಾಯಕಾರಿಯಾದಂತಹ ಬೆಳವಣಿಗೆ ಆಗಿದೆ.

ಧರ್ಮ ಸಂಸತ್ ಮೂಲಕ ದೇಶದ ಆಡಳಿತವನ್ನು ನಿಯಂತ್ರಿಸುವ ಉದ್ದೇಶ ಹೊಂದಿದ್ದ ಬಿಜೆಪಿಗರಿಗೆ ಬಾಬಾ ಸಾಹೇಬರ ಸಂವಿಧಾನವು ಚೀನಾದ ಗೋಡೆಗೊಂತಲೂ ದೃಢವಾಗಿ ನಿಂತಿದೆ.

ಹೀಗಾಗಿಯೇ ಸಂವಿಧಾನ ಮತ್ತು ಅದನ್ನು ರಚಿಸಿದ ಅಂಬೇಡ್ಕರ್ ಅವರ ಮೇಲೆ ನಿರಂತರವಾದ ದಾಳಿಯನ್ನು ಮಾಡುತ್ತಲೇ ಇರುವ ಬಿಜೆಪಿಗರು ಈ ದಿನ ನೇರವಾಗಿ ಬಾಬಾ ಸಾಹೇಬರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಿದ್ದು ಅವರೇನು ಮಹಾ? ಎಂಬರ್ಥದಲ್ಲಿ ಮಾತನ್ನು ಆಡಲು ಶುರು ಮಾಡಿದ್ದು ಇದನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ.

ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ಸಂವಿಧಾನ ರಚನೆಗೆ ಬಾಬಾ ಸಾಹೇಬರನ್ನು ನೇಮಿಸಿದ ಕಾಂಗ್ರೆಸ್ ಪಕ್ಷವು ತನ್ನ ಆಡಳಿತದ ಉದ್ದಕ್ಕೂ ಸಂವಿಧಾನದ ಆಶಯಗಳ ಪರವಾಗಿ, ಬಡವರು ಮತ್ತು ಶೋಷಿತರ ಬದುಕಿನ ಏಳಿಗೆಯ ಪರವಾಗಿ ನಡೆದುಕೊಂಡಿದೆ.

ದೇಶದ ಶಿಕ್ಷಣ, ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಆಡಳಿತಾತ್ಮಕ ಸಂಸ್ಥೆಗಳನ್ನು ಸಧೃಢವಾಗಿ ಕಟ್ಟಿರುವ ಕಾಂಗ್ರೆಸ್ ಪಕ್ಷವು ತನ್ನ ಬದ್ದತೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೇ ಸಾರ್ವಜನಿಕ ಜೀವನದಲ್ಲಿ ಇರುವಂತಹ ಭರವಸೆಯ ಪಕ್ಷ. ಇಂತಹ ಪಕ್ಷದ ವಿರುದ್ಧ ಬಾಬಾ ಸಾಹೇಬರ ಹೆಸರಲ್ಲಿ ಸುಳ್ಳು ಆರೋಪ ಮಾಡುವ ಬಿಜೆಪಿಗರು ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಷಯದಲ್ಲಿ ಎಷ್ಟು ಸುಳ್ಳರು, ಕಪಟಿಗಳು ಮತ್ತು ದ್ರೋಹಿಗಳು ಎನ್ನುವುದಕ್ಕೆ ಸಂಸತ್ತಿನಲ್ಲಿ ಅಮಿತ್ ಷಾ ಅವರು ಆಡಿದ ಅಸೂಯೆಯ ಮತ್ತು ಅವಮಾನದ ಮಾತುಗಳೇ ಸಾಕ್ಷಿ.

ದೇಶದ ಸಂವಿಧಾನ ಮತ್ತು ಸಂವಿಧಾನವು ನಮಗೆ ರೂಪಿಸಿಕೊಟ್ಟ ರಾಷ್ಟ್ರ ನಾಯಕರ ಮೇಲೆ ಗೌರವವಿಲ್ಲದ ಅಮಿತ್ ಶಾ ಅಂತಹವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ ಮತ್ತು ಸಂವಿಧಾನದ ಪರಮೋಚ್ಛ ರಕ್ಷಕರಾದ ರಾಷ್ಟ್ರತಿಗಳು ಕೂಡಲೇ ಇವರನ್ನು ಸಚಿವ ಮತ್ತು ಸಂಸದನ ಸ್ಥಾನದಿಂದ ವಜಾ ಮಾಡಬೇಕು ಎಂದು ನಿರ್ಣಯವನ್ನು ಸಲ್ಲಿಸುತ್ತೇವೆ ಎಂದರು.

ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಬಂದೇ ಬರುತ್ತದೆ, ನಮ್ಮ Unfinished ಅಜೆಂಡಾ ಪೂರ್ಣ: HDK ವಿಶ್ವಾಸ

ಸಿಎಂ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಭೆಯಲ್ಲಿ ಮಹತ್ವದ ನಿರ್ಣಯ

Share. Facebook Twitter LinkedIn WhatsApp Email

Related Posts

BREAKING: ಸಾಗರ ತಹಶೀಲ್ದಾರ್ ಚಂದ್ರಶೇಖರ ನಾಯಕ್ ವರ್ಗಾವಣೆ: ನೂತನ ತಹಶೀಲ್ದಾರ್ ಆಗಿ ರಶ್ಮಿ ನೇಮಕ

16/07/2025 5:07 PM1 Min Read

BREAKING : 3 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ, ನಗರಸಭೆ ಬಿಜೆಪಿ ಸದಸ್ಯ, ಓರ್ವ ಅಧಿಕಾರಿ

16/07/2025 5:04 PM1 Min Read

BREAKING: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’59 ತಹಶೀಲ್ದಾರ್’ ವರ್ಗಾವಣೆ | Tahsildars Transfer

16/07/2025 4:56 PM1 Min Read
Recent News

‘ನಿನ್ನೆಯ ಆಯುಧಗಳಿಂದ ಇಂದಿನ ಯುದ್ಧ ಗೆಲ್ಲಲು ಸಾಧ್ಯವಿಲ್ಲ’ : CDS ಅನಿಲ್ ಚೌಹಾಣ್

16/07/2025 5:11 PM

BREAKING: ಸಾಗರ ತಹಶೀಲ್ದಾರ್ ಚಂದ್ರಶೇಖರ ನಾಯಕ್ ವರ್ಗಾವಣೆ: ನೂತನ ತಹಶೀಲ್ದಾರ್ ಆಗಿ ರಶ್ಮಿ ನೇಮಕ

16/07/2025 5:07 PM

BREAKING : 3 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ, ನಗರಸಭೆ ಬಿಜೆಪಿ ಸದಸ್ಯ, ಓರ್ವ ಅಧಿಕಾರಿ

16/07/2025 5:04 PM

BREAKING: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’59 ತಹಶೀಲ್ದಾರ್’ ವರ್ಗಾವಣೆ | Tahsildars Transfer

16/07/2025 4:56 PM
State News
KARNATAKA

BREAKING: ಸಾಗರ ತಹಶೀಲ್ದಾರ್ ಚಂದ್ರಶೇಖರ ನಾಯಕ್ ವರ್ಗಾವಣೆ: ನೂತನ ತಹಶೀಲ್ದಾರ್ ಆಗಿ ರಶ್ಮಿ ನೇಮಕ

By kannadanewsnow0916/07/2025 5:07 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ತಹಶೀಲ್ದಾರ್ ಆಗಿದ್ದಂತ ಚಂದ್ರಶೇಖರ ನಾಯಕ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ನೂತನ…

BREAKING : 3 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ, ನಗರಸಭೆ ಬಿಜೆಪಿ ಸದಸ್ಯ, ಓರ್ವ ಅಧಿಕಾರಿ

16/07/2025 5:04 PM

BREAKING: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’59 ತಹಶೀಲ್ದಾರ್’ ವರ್ಗಾವಣೆ | Tahsildars Transfer

16/07/2025 4:56 PM

BREAKING: ಬೆಂಗಳೂರಲ್ಲಿ ರೌಡಿಶೀಟರ್ ಬಿಕ್ಲು ಶಿವ ಬರ್ಬರ ಕೊಲೆ ಕೇಸ್: ಐವರು ಆರೋಪಿಗಳು ಅರೆಸ್ಟ್

16/07/2025 4:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.