ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿದ್ದಾರೆ. ಭಾರತದ ಸಾಮರ್ಥ್ಯ ಏನೆಂದು ಜಗತ್ತು ಇತ್ತೀಚೆಗೆ ನೋಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತೀಯರ ರಕ್ತ ಚೆಲ್ಲುವವರಿಗೆ ಯಾವುದೇ ಸ್ಥಳ ಸುರಕ್ಷಿತವಲ್ಲ ಎಂದು ನಾವು ತೋರಿಸಿದ್ದೇವೆ. ರಕ್ತ ಹರಿಸುವವರನ್ನ ಬಿಡಲಾಗುವುದಿಲ್ಲ. ನಾವು 22 ನಿಮಿಷಗಳಲ್ಲಿ ಶತ್ರುಗಳನ್ನ ಸೋಲಿಸಿದ್ದೇವೆ ಎಂದರು.
ಮಂಗಳವಾರ ದೆಹಲಿಯಲ್ಲಿ ಶ್ರೀನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ನಡುವಿನ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಇತ್ತೀಚೆಗೆ ಜಗತ್ತು ಭಾರತದ ಸಾಮರ್ಥ್ಯವನ್ನ ಕಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಆಪರೇಷನ್ ಸಿಂಧೂರ್ ಭಯೋತ್ಪಾದನೆಯ ವಿರುದ್ಧ ಭಾರತದ ಸ್ಪಷ್ಟ ನೀತಿಯನ್ನ ಇಡೀ ಪ್ರಪಂಚದ ಮುಂದೆ ಇಟ್ಟಿತು. ಭಾರತೀಯರ ರಕ್ತ ಚೆಲ್ಲುವವರಿಗೆ ಜಗತ್ತಿನಲ್ಲಿ ಎಲ್ಲಿಯೂ ಸುರಕ್ಷಿತ ಸ್ಥಳವಿಲ್ಲ ಎಂದು ನಾವು ತೋರಿಸಿದ್ದೇವೆ. ಇಂದಿನ ಭಾರತವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸಾಧ್ಯವಿರುವ ಮತ್ತು ಸರಿಯಾದ ಕ್ರಮಗಳನ್ನ ಮಾತ್ರ ತೆಗೆದುಕೊಳ್ಳುತ್ತದೆ ಎಂದರು.
‘ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ’!
ರಕ್ಷಣಾ ಅಗತ್ಯಗಳಿಗಾಗಿ ಭಾರತವು ವಿದೇಶಗಳ ಮೇಲಿನ ಅವಲಂಬನೆ ನಿರಂತರವಾಗಿ ಕಡಿಮೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ರಕ್ಷಣಾ ವಲಯದಲ್ಲಿ ನಾವು ‘ಸ್ವಾವಲಂಬಿ’ಯಾಗುತ್ತಿದ್ದೇವೆ. ಆಪರೇಷನ್ ಸಿಂಧೂರ್’ನಲ್ಲಿಯೂ ಅದರ ಪರಿಣಾಮವನ್ನು ನಾವು ಕಂಡಿದ್ದೇವೆ. ‘ಭಾರತದಲ್ಲಿ ತಯಾರಿಸಿದ’ ಶಸ್ತ್ರಾಸ್ತ್ರಗಳ ಸಹಾಯದಿಂದ, ನಮ್ಮ ಪಡೆಗಳು ಕೇವಲ 22 ನಿಮಿಷಗಳಲ್ಲಿ ಶತ್ರುಗಳನ್ನು ಅವರ ಮೊಣಕಾಲು ಮೇಲೆ ಕೂರಿಸಿದವು. ಮುಂಬರುವ ದಿನಗಳಲ್ಲಿ, ‘ಭಾರತದಲ್ಲಿ ತಯಾರಿಸಿದ’ ಶಸ್ತ್ರಾಸ್ತ್ರಗಳು ಪ್ರಪಂಚದಾದ್ಯಂತ ಗುರುತಿಸಲ್ಪಡುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದರು.
BREAKING: ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್: ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಕರೆ ನೀಡಿದ ‘ಮಹಾನಗರ ಪಾಲಿಕೆ ನೌಕರ’ರು
ಮಾಟ, ಮಂತ್ರ, ವಶೀಕರಣ ಅಂದ್ರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರೋದು ಹೇಗೆ? ಇಲ್ಲಿದೆ ಮಾಹಿತಿ