ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಭಯಂದರ್ ನಿಲ್ದಾಣದ ಬಳಿ ಘೋರ ದುರಂತವೊಂದು ಸಂಭವಿಸಿದ್ದು, 60 ವರ್ಷದ ತಂದೆ ಮತ್ತು ಮಗ ಬರುತ್ತಿರುವ ಸ್ಥಳೀಯ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರನ್ನು ಹರೀಶ್ ಮೆಹ್ತಾ (60) ಮತ್ತು ಮಗ ಜೈ (35) ಎಂದು ಗುರುತಿಸಲಾಗಿದೆ. ಅವರು ವಸಾಯಿ ನಿವಾಸಿಗಳಾಗಿದ್ದರು. ರೈಲು ಬರುತ್ತಿರುವುದನ್ನು ನೋಡಿದ ಇಬ್ಬರೂ ಪರಸ್ಪರರ ಕೈಗಳನ್ನು ಹಿಡಿದುಕೊಂಡು ಹಳಿಯ ಮೇಲೆ ಮಲಗಿದ್ದರು ಎಂದು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ.
महाराष्ट्र के पालघर मे पिता-पुत्र ने एक साथ अपनी जान ले ली!
ट्रेन को आता देख पिता-पुत्र ने एक दूसरे का हाथ पकड़े हुए पटरी पर लेट कर सुसाइड कर लिया!
दोनो पिता-पुत्र रेलवे ट्रैक के पास से बाते करते हुए गुज़र रहे थे!
फिर ट्रेन को आता……… #MaharashtraNews pic.twitter.com/cJZHODVcY3— Shatrughan Kumar (@Shatrug96788610) July 10, 2024
ರೈಲ್ವೆ ಪೊಲೀಸರು ಸ್ಥಳಕ್ಕೆ ತಲುಪಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.