ನವದೆಹಲಿ : ಪೂರ್ವ ಆಫ್ರಿಕಾದ ದೇಶವಾದ ಕೀನ್ಯಾದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ತೆರಿಗೆ ಹೆಚ್ಚಳದ ವಿರುದ್ಧದ ಗಲಾಟೆ ಹಿಂಸಾತ್ಮಕವಾಗಿದೆ. ಉದ್ರಿಕ್ತ ಗುಂಪು ಸಂಸತ್ತಿಗೆ ಬೆಂಕಿ ಹಚ್ಚಿತು. ಇಂತಹ ಉದ್ವಿಗ್ನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತವು ತನ್ನ ನಾಗರಿಕರಿಗೆ ಅತ್ಯಂತ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.
ಕೀನ್ಯಾದಲ್ಲಿ ಹಿಂಸಾಚಾರದ ಮಧ್ಯೆ, ಭಾರತವು ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಪ್ರತಿಭಟನೆಗಳು ಮತ್ತು ಹಿಂಸಾಚಾರದಿಂದ ಬಾಧಿತವಾದ ಪ್ರದೇಶಗಳಿಂದ ದೂರವಿರಲು ಮತ್ತು “ಅತ್ಯಂತ ಜಾಗರೂಕರಾಗಿರಿ” ಎಂದು ಕೀನ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮಂಗಳವಾರ ಅಲ್ಲಿನ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ.
The High Commission of India in Kenya issues advisory for Indian Nationals in the country in view of the prevailing tense situation. pic.twitter.com/GZNd5ngw5f
— ANI (@ANI) June 25, 2024
“ಚಾಲ್ತಿಯಲ್ಲಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೀನ್ಯಾದಲ್ಲಿರುವ ಎಲ್ಲಾ ಭಾರತೀಯರಿಗೆ ತೀವ್ರ ಎಚ್ಚರಿಕೆ ವಹಿಸಲು, ಅನಗತ್ಯ ಚಲನೆಯನ್ನು ನಿರ್ಬಂಧಿಸಲು ಮತ್ತು ಪರಿಸ್ಥಿತಿ ಸುಧಾರಿಸುವವರೆಗೆ ಪ್ರತಿಭಟನೆ ಮತ್ತು ಹಿಂಸಾಚಾರದಿಂದ ಪೀಡಿತ ಪ್ರದೇಶಗಳನ್ನು ತಪ್ಪಿಸಲು ಸೂಚಿಸಲಾಗಿದೆ” ಎಂದು ಕೀನ್ಯಾದಲ್ಲಿನ ಭಾರತೀಯ ಹೈಕಮಿಷನ್ ಮಂಗಳವಾರ ಪೋಸ್ಟ್ ಮಾಡಿದೆ. “