Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕರ್ನಾಟಕ ಲೋಕಾಯುಕ್ತಕ್ಕೆ 6 ಸಚಿವರು, 66 ಶಾಸಕರು, 28 MLCಗಳು ‘ಆಸ್ತಿ ವಿವರ’ ಸಲ್ಲಿಕೆ

06/11/2025 6:32 PM

ಕಬ್ಬು ಬೆಳೆಗಾರರ ಬಗ್ಗೆ ಕಾಳಜಿಯಿದ್ದರೇ ಪ್ರತಿ ಟನ್ ಗೆ 500 ರೂ ಸಹಾಯಧನ ನೀಡಿ: ಆರ್.ಅಶೋಕ್ ಆಗ್ರಹ

06/11/2025 6:17 PM

ಮಂಡ್ಯ ಮೈಷುಗರ್ ಶಾಲೆ ಶಿಕ್ಷಕರ ನೆರವಿಗೆ ಧಾವಿಸಿದ HDK: ತಮ್ಮ ವೇತನ ಮೊತ್ತವನ್ನೇ ಕೊಡುವುದಾಗಿ ಘೋಷಣೆ

06/11/2025 6:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಭಿಮಾನ್ ಸ್ಟುಡಿಯೋದಿಂದ ಷರತ್ತು ಉಲ್ಲಂಘನೆ: ಸಚಿವ ಈಶ್ವರ ಖಂಡ್ರೆ
KARNATAKA

ಅಭಿಮಾನ್ ಸ್ಟುಡಿಯೋದಿಂದ ಷರತ್ತು ಉಲ್ಲಂಘನೆ: ಸಚಿವ ಈಶ್ವರ ಖಂಡ್ರೆ

By kannadanewsnow0930/08/2025 6:07 PM

ಬೆಂಗಳೂರು: ಖ್ಯಾತ ಚಿತ್ರನಟ ದಿವಂಗತ ಟಿ.ಎನ್. ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ ಮಂಜೂರು ಮಾಡುವಾಗ ವಿಧಿಸಿದ್ದ ಷರತ್ತುಗಳ ಉಲ್ಲಂಘನೆಯಾಗಿದ್ದು, ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸಲು ಪತ್ರ ಬರೆಯಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ವಿಕಾಸೌಧದಲ್ಲಿಂದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರಿಂದ ವಿಷ್ಣುವರ್ಧನ್ ಸ್ಮಾರಕ ಕುರಿತಂತೆ ಮನವಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಲಸಂದ್ರ ಗ್ರಾಮದ ಸರ್ವೆ ನಂ.26 ರಲ್ಲಿ 62 ಎಕರೆ20 ಗುಂಟೆ ಪ್ರದೇಶವನ್ನು “ತುರಹಳ್ಳಿ ರಾಜ್ಯ ಅರಣ್ಯ” ಎಂದು ಘೋಷಸಿ ಮೈಸೂರು ಸರ್ಕಾರ 1935ರಲ್ಲಿ ಅಧಿಸೂಚನೆ ಹೊರಡಿಸಿತ್ತು. 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವ ಮೊದಲು ಈ ಅರಣ್ಯ ಭೂಮಿಯ ಪೈಕಿ 20 ಎಕರೆ ಪ್ರದೇಶವನ್ನು ಖ್ಯಾತ ಚಿತ್ರನಟ ಟಿ.ಎನ್.ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಿಸುವ ಸಲುವಾಗಿ 1969 ಒಂದು ಎಕರೆಗೆ ರೂ.300/- ರಂತೆ ಒಟ್ಟು 6,000/- ರೂಗಳಿಗೆ 20 ಎಕರೆ ಪ್ರದೇಶವನ್ನು ಷರತ್ತುಬದ್ಧವಾಗಿ ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದರು.

2003ರಲ್ಲಿ 10 ಎಕರೆ ಪ್ರದೇಶವನ್ನು ದಿವಂಗತ ಬಾಲಕೃಷ್ಣ ಅವರ ಮಕ್ಕಳು ಸರ್ಕಾರದಿಂದ ಪೂರ್ವಾನುಮತಿ ಪಡೆದು ಮಾರಾಟ ಮಾಡಿರುತ್ತಾರೆ. ಮಾರಾಟಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿಯೂ ಮಾರಾಟದಿಂದ ಬಂದ ಹಣದಿಂದ ಸ್ಟುಡಿಯೋ ಅಭಿವೃದ್ಧಿ ಪಡಿಸುವಂತೆ ಮತ್ತೆ ಷರತ್ತು ಹಾಕಲಾಗಿರುತ್ತದೆ. ಆದರೆ ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಬದಲಾಗಿ ಈಗ ಉಳಿದ 10 ಎಕರೆ ಜಮೀನ್ನೂ ಮಾರಾಟ ಮಾಡಲು ಮುಂದಾಗಿರುವುದು ಷರತ್ತಿನ ಉಲ್ಲಂಘನೆಯಾಗಿದ್ದು, ಸದರಿ ಅರಣ್ಯ ಭೂಮಿಯನ್ನು ಇಲಾಖೆಗೆ ಮರಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ಸಸ್ಯೋದ್ಯಾನ ನಿರ್ಮಾಣ:

ಬೆಂಗಳೂರು ವ್ಯಾಪಕವಾಗಿ ಬೆಳೆದಿದ್ದು, ಶ್ವಾಸತಾಣಗಳ ಅಗತ್ಯವಿದೆ. ಈ ಜಮೀನು ಇಲಾಖೆಗೆ ಮರಳಿ ಬಂದರೆ ಅಲ್ಲಿ ಒಂದು ಸಸ್ಯೋದ್ಯಾನ ನಿರ್ಮಿಸಲಾಗುವುದು ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಕಳೆದ ಮೇ 15ರಂದು ಕಂದಾಯ ಇಲಾಖೆ ವಶದಲ್ಲಿರುವ ಅರಣ್ಯ ಭೂಮಿಯನ್ನು ಯಾವುದೇ ಸಂಸ್ಥೆ, ವ್ಯಕ್ತಿಗಳಿಗೆ ಮಂಜೂರು ಮತ್ತು ಗುತ್ತಿಗೆ ನೀಡಿದ್ದರೆ, ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ, ಅದರ ಪರಿಶೀಲನೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಸೂಚಿಸಿದೆ ಎಂದೂ ತಿಳಿಸಿದರು.

ಡಾ. ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಜಮೀನು ನೀಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರು ಮತ್ತು ಸರ್ಕಾರ ನಿಯಮಾನುಸಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ಪೋಲೆಂಡ್ ಉಪ ಪ್ರಧಾನಿ ಕ್ರಿಸ್ಟಾಫ್ ಗಾವ್ಕಾವ್ಸ್ಕಿ ಭೇಟಿಯಾದ ಸಚಿವ ಪ್ರಿಯಾಂಕ್ ಖರ್ಗೆ: ಕೌಶಲ್ಯ, ಎಐ ತಂತ್ರಜ್ಞಾನ ಸಹಯೋಗ ಕುರಿತು ಚರ್ಚೆ

‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ

Share. Facebook Twitter LinkedIn WhatsApp Email

Related Posts

BREAKING: ಕರ್ನಾಟಕ ಲೋಕಾಯುಕ್ತಕ್ಕೆ 6 ಸಚಿವರು, 66 ಶಾಸಕರು, 28 MLCಗಳು ‘ಆಸ್ತಿ ವಿವರ’ ಸಲ್ಲಿಕೆ

06/11/2025 6:32 PM2 Mins Read

ಕಬ್ಬು ಬೆಳೆಗಾರರ ಬಗ್ಗೆ ಕಾಳಜಿಯಿದ್ದರೇ ಪ್ರತಿ ಟನ್ ಗೆ 500 ರೂ ಸಹಾಯಧನ ನೀಡಿ: ಆರ್.ಅಶೋಕ್ ಆಗ್ರಹ

06/11/2025 6:17 PM3 Mins Read

ಮಂಡ್ಯ ಮೈಷುಗರ್ ಶಾಲೆ ಶಿಕ್ಷಕರ ನೆರವಿಗೆ ಧಾವಿಸಿದ HDK: ತಮ್ಮ ವೇತನ ಮೊತ್ತವನ್ನೇ ಕೊಡುವುದಾಗಿ ಘೋಷಣೆ

06/11/2025 6:12 PM3 Mins Read
Recent News

BREAKING: ಕರ್ನಾಟಕ ಲೋಕಾಯುಕ್ತಕ್ಕೆ 6 ಸಚಿವರು, 66 ಶಾಸಕರು, 28 MLCಗಳು ‘ಆಸ್ತಿ ವಿವರ’ ಸಲ್ಲಿಕೆ

06/11/2025 6:32 PM

ಕಬ್ಬು ಬೆಳೆಗಾರರ ಬಗ್ಗೆ ಕಾಳಜಿಯಿದ್ದರೇ ಪ್ರತಿ ಟನ್ ಗೆ 500 ರೂ ಸಹಾಯಧನ ನೀಡಿ: ಆರ್.ಅಶೋಕ್ ಆಗ್ರಹ

06/11/2025 6:17 PM

ಮಂಡ್ಯ ಮೈಷುಗರ್ ಶಾಲೆ ಶಿಕ್ಷಕರ ನೆರವಿಗೆ ಧಾವಿಸಿದ HDK: ತಮ್ಮ ವೇತನ ಮೊತ್ತವನ್ನೇ ಕೊಡುವುದಾಗಿ ಘೋಷಣೆ

06/11/2025 6:12 PM

ಕರ್ನಾಟಕ ಸೇರಿ ನ.8 ಕ್ಕೆ 4 ಹೊಸ ವಂದೇ ಭಾರತ್‌ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ, ಎಲ್ಲಿಂದ ಎಲ್ಲಿಗೆ?

06/11/2025 6:10 PM
State News
KARNATAKA

BREAKING: ಕರ್ನಾಟಕ ಲೋಕಾಯುಕ್ತಕ್ಕೆ 6 ಸಚಿವರು, 66 ಶಾಸಕರು, 28 MLCಗಳು ‘ಆಸ್ತಿ ವಿವರ’ ಸಲ್ಲಿಕೆ

By kannadanewsnow0906/11/2025 6:32 PM KARNATAKA 2 Mins Read

ಬೆಂಗಳೂರು: ರಾಜ್ಯದ 6 ಸಚಿವರು 66 ವಿಧಾನಸಭಾ ಸದಸ್ಯರು ಹಾಗೂ 28 ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿಯ ವಿವರಗಳನ್ನು…

ಕಬ್ಬು ಬೆಳೆಗಾರರ ಬಗ್ಗೆ ಕಾಳಜಿಯಿದ್ದರೇ ಪ್ರತಿ ಟನ್ ಗೆ 500 ರೂ ಸಹಾಯಧನ ನೀಡಿ: ಆರ್.ಅಶೋಕ್ ಆಗ್ರಹ

06/11/2025 6:17 PM

ಮಂಡ್ಯ ಮೈಷುಗರ್ ಶಾಲೆ ಶಿಕ್ಷಕರ ನೆರವಿಗೆ ಧಾವಿಸಿದ HDK: ತಮ್ಮ ವೇತನ ಮೊತ್ತವನ್ನೇ ಕೊಡುವುದಾಗಿ ಘೋಷಣೆ

06/11/2025 6:12 PM

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸ್ಥಳ ಕೇಳಿ ಮುಖ್ಯಮಂತ್ರಿಗೆ ಪತ್ರ ಬರೆದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

06/11/2025 6:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.