Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಾರ್ದಿಯಾ ನವರಾತ್ರಿ 2025: ಪೂಜಾ ವಿಧಿ, ಮುಹೂರ್ತ ಮತ್ತು ಕಾಳರಾತ್ರಿ ದೇವಿಯನ್ನು ಪೂಜಿಸುವ ಬಗೆ ತಿಳಿಯಿರಿ | Navratri

29/09/2025 12:32 PM

BREAKING : ‘ಹೃದಯಾಘಾತದಿಂದ’ ನಟ, ಖ್ಯಾತ ರಂಗ ನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ನಿಧನ

29/09/2025 12:32 PM

BREAKING: ಕನ್ನಡ ಹಿರಿಯ ನಟ, ರಂಗಕರ್ಮಿ ಯಶವಂತ್ ಸರ್‌ದೇಶಪಾಂಡೆ ಇನ್ನಿಲ್ಲ…!

29/09/2025 12:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕನ್ನಡ ಹಿರಿಯ ನಟ, ರಂಗಕರ್ಮಿ ಯಶವಂತ್ ಸರ್‌ದೇಶಪಾಂಡೆ ಇನ್ನಿಲ್ಲ…!
KARNATAKA

BREAKING: ಕನ್ನಡ ಹಿರಿಯ ನಟ, ರಂಗಕರ್ಮಿ ಯಶವಂತ್ ಸರ್‌ದೇಶಪಾಂಡೆ ಇನ್ನಿಲ್ಲ…!

By kannadanewsnow0729/09/2025 12:30 PM

ಬೆಂಗಳೂರು: ಕನ್ನಡ ಹಿರಿಯ ನಟ ಯಶವಂತ್ ಸರ್‌ದೇಶಪಾಂಡೆ ಅವರು ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಅಂತ ತಿಳಿದು ಬಂದಿದೆ.

ಅವರಿಗೆ ಹೃದಯಘಾತವಾಗಿದ್ದು, ಹೀಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ ಎನ್ನಲಾಗಿದೆ.

ಯಶವಂತ್‌ ದೇಶಪಾಂಡೆ ಹಿನ್ನಲೆ : ಯಶವಂತ ಸರದೇಶಪಾಂಡೆ ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯವಾದವರು. ರಾಜ್ಯಾದಂತ್ಯ ಇವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಈಗ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಪಾತ್ರವಹಿಸುತ್ತಿದ್ದಾರೆ. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆಯಾಗಿದ್ದಾರೆ. ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮುಖಾಂತರ ಕರ್ನಾಟಕದಾದ್ಯಂತ ಮನೆಮಾತಾಗಿರುವ ಯಶವಂತ ಸರದೇಶಪಾಂಡೆಯವರು

ಯಶವಂತ ಸರದೇಶಪಾಂಡೆಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬ ಹಳ್ಳಿಯಲ್ಲಿ ೧೩.೦೬.೧೯೬೫ರಲ್ಲಿ. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ.

ಚಿಕ್ಕಂದಿನಿಂದಲೂ ನಾಟಕದಲ್ಲಿ ಬೆಳೆದ ಆಸಕ್ತಿ. ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಪಡೆದ ಡಿಪ್ಲೊಮ. ನ್ಯೂಯಾರ್ಕ್‌ ವಿಶ್ವವಿದ್ಯಾಯದಿಂದ ಪಡೆದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ.

ರಾಜ್ಯಾದ್ಯಂತ ಹಲವಾರು ನಾಟಕಗಳ ನಿರ್ದೇಶನ. ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ಸಮರ್‌ ನೈಟ್ಸ್‌ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ. ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ.

ರೇಡಿಯೋ, ದೂರದರ್ಶನಗಳಿಗಾಗಿ ಹಲವಾರು ಕಾರ್ಯಕ್ರಮಗಳು. ಗುರು ಸಂಸ್ಥೆಯ ಮುಖಾಂತರ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ನಾಟಕಗಳ ನಿರ್ದೇಶಕ, ನಟ, ಆಲ್‌ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್‌ ನಗೆ ನಾಟಕಗಳನ್ನು ತಿಳಿ ಹಾಸ್ಯದ ಜೊತೆಗೆ ರುಚಿಕರವಾದ ಸವಿಯಾದ ಊಟವನ್ನೂ ಎಂ.ಟಿ.ಆರ್‌. ಸಹ ಯೋಗದೊಡನೆ ಯೋಚಿಸಿ ರಂಗ ಸಂಭ್ರಮದಡಿ ನೀಡಿದ ಕಾರ್ಯಕ್ರಮಗಳು, ರಾಜ್ಯದೆಲ್ಲೆಡೆ ಪಡೆದ ಪ್ರಶಂಸೆ. ’ರಾಶಿ ಚಕ್ರ’ ನಗೆ ನಾಟಕದಲ್ಲಿ ಸುಮಾರು 1 ಗಂಟೆಗಳ ಕಾಲ ಪ್ರೇಕ್ಷಕರನ್ನು ನಕ್ಕು ನಗಿಸುವ ಏಕವ್ಯಕ್ತಿ ಅಭಿನಯ. ದೃಶ್ಯರೂಪದಲ್ಲಿ ವಿಡಿಯೋ ಪ್ರದರ್ಶನಗಳ ಮೂಲಕ ಮಾಡಿದ ರಂಗ ಕ್ರಾಂತಿ.

ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಕೆಲವು ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯ.

Veteran Kannada actor and theatre personality Yashwant Deshpande is no more. ಕನ್ನಡ ಹಿರಿಯ ನಟ ರಂಗಕರ್ಮಿ ಯಶವಂತ್‌ ದೇಶಪಾಂಡೆ ಇನ್ನಿಲ್ಲ...!
Share. Facebook Twitter LinkedIn WhatsApp Email

Related Posts

BREAKING : ‘ಹೃದಯಾಘಾತದಿಂದ’ ನಟ, ಖ್ಯಾತ ರಂಗ ನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ನಿಧನ

29/09/2025 12:32 PM1 Min Read

BREAKING:  ಹೃದಯಾಘಾತದಿಂದ  ಸ್ಯಾಂಡಲ್ ವುಡ್ ನಟ `ಯಶವಂತ ಸರದೇಶಪಾಂಡೆ’ ನಿಧನ | Yashwant Sir Deshpande

29/09/2025 12:27 PM2 Mins Read

BREAKING : ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ, ಮೂವರು ಶ್ರೀಲಂಕಾ ಪ್ರಜೆಗಳ ವಿರುದ್ಧ ಪ್ರಕರಣದ ದಾಖಲು

29/09/2025 12:15 PM1 Min Read
Recent News

ಶಾರ್ದಿಯಾ ನವರಾತ್ರಿ 2025: ಪೂಜಾ ವಿಧಿ, ಮುಹೂರ್ತ ಮತ್ತು ಕಾಳರಾತ್ರಿ ದೇವಿಯನ್ನು ಪೂಜಿಸುವ ಬಗೆ ತಿಳಿಯಿರಿ | Navratri

29/09/2025 12:32 PM

BREAKING : ‘ಹೃದಯಾಘಾತದಿಂದ’ ನಟ, ಖ್ಯಾತ ರಂಗ ನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ನಿಧನ

29/09/2025 12:32 PM

BREAKING: ಕನ್ನಡ ಹಿರಿಯ ನಟ, ರಂಗಕರ್ಮಿ ಯಶವಂತ್ ಸರ್‌ದೇಶಪಾಂಡೆ ಇನ್ನಿಲ್ಲ…!

29/09/2025 12:30 PM

BREAKING:  ಹೃದಯಾಘಾತದಿಂದ  ಸ್ಯಾಂಡಲ್ ವುಡ್ ನಟ `ಯಶವಂತ ಸರದೇಶಪಾಂಡೆ’ ನಿಧನ | Yashwant Sir Deshpande

29/09/2025 12:27 PM
State News
KARNATAKA

BREAKING : ‘ಹೃದಯಾಘಾತದಿಂದ’ ನಟ, ಖ್ಯಾತ ರಂಗ ನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ನಿಧನ

By kannadanewsnow0529/09/2025 12:32 PM KARNATAKA 1 Min Read

ಬೆಂಗಳೂರು : ಖ್ಯಾತ ನಟ, ಹಾಸ್ಯ ರಂಗಕರ್ಮಿ ಯಶವಂತ ಸರ್ ದೇಶಪಾಂಡೆ (55) ಹೃದಯಾಘಾತದಿಂದ ನಿಧನನಾಗಿದ್ದಾರೆ. ಇಂದು ಬೆಂಗಳೂರಿನ ಖಾಸಗಿ…

BREAKING: ಕನ್ನಡ ಹಿರಿಯ ನಟ, ರಂಗಕರ್ಮಿ ಯಶವಂತ್ ಸರ್‌ದೇಶಪಾಂಡೆ ಇನ್ನಿಲ್ಲ…!

29/09/2025 12:30 PM

BREAKING:  ಹೃದಯಾಘಾತದಿಂದ  ಸ್ಯಾಂಡಲ್ ವುಡ್ ನಟ `ಯಶವಂತ ಸರದೇಶಪಾಂಡೆ’ ನಿಧನ | Yashwant Sir Deshpande

29/09/2025 12:27 PM

BREAKING : ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ, ಮೂವರು ಶ್ರೀಲಂಕಾ ಪ್ರಜೆಗಳ ವಿರುದ್ಧ ಪ್ರಕರಣದ ದಾಖಲು

29/09/2025 12:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.