ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲು ಸೇವೆಗಳನ್ನು ಸುಧಾರಿಸಲು ಪ್ರಮುಖ ಹೆಜ್ಜೆ ಇಡಲಾಗಿದೆ. ಮಾರ್ಚ್ 1 ರಿಂದ ಜಮ್ಮು ತಾವಿ ಮತ್ತು ಶ್ರೀನಗರ ನಡುವೆ 20 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚರಿಸಲಿದೆ.
ಪ್ರಸ್ತುತ ರೈಲು ಸೇವೆಯು ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ಶ್ರೀನಗರ ನಡುವೆ ಚಲಿಸುತ್ತಿದೆ. ಇದು ಈಗ ಜಮ್ಮು ತಾವಿಗೆ ವಿಸ್ತರಿಸಲಿದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಉಚಿತ್ ಸಿಂಘಾಲ್ ತಿಳಿಸಿದ್ದಾರೆ.
ವೇಳಾಪಟ್ಟಿ ಮತ್ತು ವೇಗದ ವಿವರಗಳು
26401 ಜಾಟ್ ಸಿನಾ ವಂದೇ ಭಾರತ್ ಎಕ್ಸ್ಪ್ರೆಸ್ ಬೆಳಿಗ್ಗೆ 6:15 ಕ್ಕೆ ಜಮ್ಮು ತಾವಿಯಿಂದ ಹೊರಟು ಬೆಳಿಗ್ಗೆ 11:10 ಕ್ಕೆ ಶ್ರೀನಗರ ತಲುಪಲಿದೆ. ಶ್ರೀನಗರದಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ಸಂಜೆ 6.50ಕ್ಕೆ ಜಮ್ಮು ತಾವಿ ತಲುಪಲಿದೆ. ಈ ರೈಲು ಸರಾಸರಿ ೫೪ ರಿಂದ ೫೫ ಕಿ.ಮೀ ವೇಗದಲ್ಲಿ ಚಲಿಸಲಿದೆ.
ಪ್ರಸ್ತುತ ರೈಲು ಶ್ರೀನಗರ ಮತ್ತು ಕತ್ರಾ ನಡುವೆ ಎಂಟು ಬೋಗಿಗಳ ರೇಕ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಸಿಂಘಾಲ್ ಹೇಳಿದರು. ಇದು ಈಗ ಜಮ್ಮು ಮತ್ತು ಶ್ರೀನಗರ ನಡುವೆ ನವೀಕರಿಸಿದ ೨೦ ಬೋಗಿಗಳೊಂದಿಗೆ ಚಲಿಸುತ್ತದೆ.
ಯುಎಸ್ಬಿಆರ್ಎಲ್ ಯೋಜನೆಯ ನಂತರ ಹಸಿರು ನಿಶಾನೆ
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 6 ರಂದು ಉಧಂಪುರ್ ಶ್ರೀನಗರ ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯನ್ನು ಉದ್ಘಾಟಿಸಿದ ನಂತರ ವಂದೇ ಭಾರತ್ ಸೇವೆಗೆ ಹಸಿರು ನಿಶಾನೆ ತೋರಿದರು. ಈ ಯೋಜನೆಯು ಕಣಿವೆಗೆ ಸರ್ವಋತು ರೈಲು ಸಂಪರ್ಕವನ್ನು ನೀಡಿತು.








