ಬೆಂಗಳೂರು : ಉತ್ತರಾಖಂಡದ ಶಹಸ್ತ್ರತಾಳ್ ಪ್ರದೇಶದಲ್ಲಿ ಚಾರಣದ ವೇಳೆ ಮೃತಪಟ್ಟಿದ್ದ ಎಲ್ಲಾ 9 ಕನ್ನಡಿಗರ ಶವ ಪತ್ತೆಯಾಗಿದ್ದು, ಇನ್ನೂ ಹಿಮಗಾಳಿಯಲ್ಲಿ ಸಿಲುಕಿ ಬದುಕುಳಿದ 13 ಚಾರಣಿಗರು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿದು, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಉತ್ತರಾಖಂಡ್ ಶಹಸ್ತ್ರತಾಳ್ ಪ್ರದೇಶದಲ್ಲಿ ಚಾರಣದ ವೇಳೆ ಹಿಮಪಾತಕ್ಕೆ ಸಿಲುಕಿ ಜೀವನ್ಮರಣದ ಹೋರಾಟದಲ್ಲಿದ್ದ ಕರ್ನಾಟಕದ ಚಾರಣಿಗರ ತಂಡವನ್ನು ರಕ್ಷಿಸಿ ಇಂದು ಬೆಂಗಳೂರಿಗೆ ಕರೆತರಲಾಯಿತು.
ಈ ವೇಳೆ ಚಾರಣಿಗರ ಪೋಷಕರು ತಮ್ಮ ಮಕ್ಕಳು ಬಂಧುಮಿತ್ರರನ್ನು ಕಂಡು ನಿಟ್ಟುಸಿರು ಬಿಟ್ಟು ರಾಜ್ಯ ಸರ್ಕಾರದ ಶ್ರಮಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಅಲ್ಲದೆ, ಸ್ವತಃ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದ ಉತ್ಸುವಾರಿ ವಹಿಸಿದ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಕರ್ನಾಟಕ ಪರ್ವತಾರೋಹಣ ಸಂಘದ (Karnataka Mountaineering Association) ಸದಸ್ಯರು ಧನ್ಯವಾದಗಳನ್ನು ಅರ್ಪಿಸಿದರು.