Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಮತ್ತೆ ಶೆಲ್ ದಾಳಿ ನಡೆಸಿದ ಪಾಕಿಸ್ತಾನ್!

09/05/2025 7:42 AM

ಚೀನಾಕ್ಕೆ ಬಿಗ್ ರಿಲೀಫ್: ಶೇ.145ರ ತೆರಿಗೆ ಇಳಿಸಲು ಡೊನಾಲ್ಡ್ ಟ್ರಂಪ್ ಚಿಂತನೆ | Trump Tariff

09/05/2025 7:36 AM

BREAKING : ಡ್ರೋನ್, ಕ್ಷಿಪಣಿಗಳ ಮೂಲಕ ದಾಳಿ ಮಾಡಿದ ಪಾಕಿಸ್ತಾನಕ್ಕೆ 6 ಮರ್ಮಾಘತ ನೀಡಿದ ಭಾರತ

09/05/2025 7:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಯಾದಗಿರಿಯಲ್ಲಿ ನಿಲುಗಡೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ
KARNATAKA

ನಾಳೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಯಾದಗಿರಿಯಲ್ಲಿ ನಿಲುಗಡೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ

By kannadanewsnow0927/01/2025 7:38 PM
V Somanna

ಬೆಂಗಳೂರು: ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್ – ಕೆ.ಎಸ್. ಆರ್ ಬೆಂಗಳೂರು ರಾಜಧಾನಿ ಎಕ್ಸ್ ಪ್ರೆಸ್ ರೈಲಿಗೆ ಯಾದಗಿರಿ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ.

ಜನವರಿ 28 ರಂದು ರಾತ್ರಿ 07.30 ಗಂಟೆಗೆ ಗಣ್ಯರು ಮತ್ತು ರೈಲ್ವೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ  ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್ – ಕೆಎಸ್ಆರ್ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಪ್ರಾಯೋಗಿಕ ಹೆಚ್ಚುವರಿ ನಿಲುಗಡೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.

ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಲ್ಲಿರುವ ಯಾದಗಿರಿ ನಿಲ್ದಾಣವು ಉಪನಗರವಲ್ಲದ ಗ್ರೇಡ್-3 (ಎನ್ಎಸ್ ಜಿ-3) ನಿಲ್ದಾಣದ ವರ್ಗಕ್ಕೆ ಸೇರುತ್ತದೆ. ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದು, ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಿಗೆ ಪ್ರಯಾಣಿಸಲು ಮುಖ್ಯವಾಗಿ ರೈಲು ಸಾರಿಗೆಯನ್ನು ಅವಲಂಬಿಸಿರುವ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಈ ನಿಲ್ದಾಣವು ಸೇವೆ ಸಲ್ಲಿಸುತ್ತದೆ. ನಿಲ್ದಾಣಕ್ಕೆ ಪ್ರತಿದಿನ ಸರಾಸರಿ 10,000 ಜನರು ಭೇಟಿ ನೀಡುತ್ತಿದ್ದು, ಸರಾಸರಿ ಆದಾಯ ರೂ. 8 ಲಕ್ಷವಾಗಿದೆ. ನವದೆಹಲಿ ಮತ್ತು ಬೆಂಗಳೂರು ನಗರಕ್ಕೆ ಪ್ರಯಾಣಿಸಲು ಈ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ನಿಲ್ಲಿಸಬೇಕೆಂದು ನಿರಂತರವಾಗಿ ಬೇಡಿಕೆ ಇದೆ.

ಅದರಂತೆ, ರೈಲ್ವೆ ಸಚಿವಾಲಯವು ಯಾದಗಿರಿ ನಿಲ್ದಾಣದಲ್ಲಿ ರೈಲು ಸಂಖ್ಯೆ 22691ಕೆಎಸ್ಆರ್ ಬೆಂಗಳೂರು-ಎಚ್. ನಿಜಾಮುದ್ದೀನ್ ರಾಜಧಾನಿ ಎಕ್ಸ್ ಪ್ರೆಸ್ ರೈಲು ಜನವರಿ 27, 2025 ರಿಂದ ಜಾರಿಗೆ ಬರುವಂತೆ (ಪ್ರಯಾಣದ ದಿನಾಂಕದಿಂದ) ಮತ್ತು ರೈಲು ಸಂಖ್ಯೆ 22692 ಎಚ್. ನಿಜಾಮುದ್ದೀನ್ -ಕೆಎಸ್ಆರ್ ಬೆಂಗಳೂರು ರಾಜಧಾನಿ ಎಕ್ಸ್ ಪ್ರೆಸ್ ರೈಲಿಗೆ ಜನವರಿ 28, 2025 ರಿಂದ ಜಾರಿಗೆ ಬರುವಂತೆ (ಪ್ರಯಾಣದ ದಿನಾಂಕದಿಂದ) ಹೆಚ್ಚುವರಿ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ.

ಯಾದಗಿರಿಯಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿಗೆ ನಿಲುಗಡೆ ಒದಗಿಸುವ ವೈಶಿಷ್ಟ್ಯ ಮತ್ತು ಪ್ರಯೋಜನಗಳು:

  • ರಾಜಧಾನಿ ಎಕ್ಸ್ ಪ್ರೆಸ್ ರೈಲು ಈ ಪ್ರದೇಶದ ಜನರಿಗೆ ದೆಹಲಿ ಮತ್ತು ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲಕರವಾದ ಪ್ರಯಾಣದ ಆಯ್ಕೆಯನ್ನು ನೀಡುತ್ತದೆ
  • ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಸಂಜೆ 7.50 ಗಂಟೆಗೆ ಹೊರಟು, ಮರುದಿನ ರಾತ್ರಿ 8.38 ಗಂಟೆಗೆ ಯಾದಗಿರಿ ನಿಲ್ದಾಣಕ್ಕೆ ಆಗಮಿಸಲಿದೆ. ಬೆಂಗಳೂರಿಗೆ ಬೆಳಿಗ್ಗೆ20 ಗಂಟೆಗೆ ತಲುಪುತ್ತದೆ (ಎರಡನೇ ದಿನ).
  • ರೈಲು ಸಂಖ್ಯೆ 22691 ಕೆಎಸ್ಆರ್ ಬೆಂಗಳೂರಿನಿಂದ ರಾತ್ರಿ ೮.00 ಗಂಟೆಗೆ ಹೊರಟು, ಮರುದಿನ ನಸುಕಿನ ಜಾವ 03.05 ಗಂಟೆಗೆ ಯಾದಗಿರಿ ನಿಲ್ದಾಣಕ್ಕೆ ಆಗಮಿಸಲಿದೆ, ಎಚ್.ನಿಜಾಮುದ್ದೀನ್ ನಿಲ್ದಾಣಕ್ಕೆ ಎರಡನೇ ದಿನ ಬೆಳಿಗ್ಗೆ 05.30 ಗಂಟೆಗೆ ತಲುಪುತ್ತದೆ.
  • ಈ ರೈಲು ಸೇವೆ ರಾಷ್ಟ್ರದ ರಾಜಧಾನಿಗೆ ಮತ್ತು ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲಿದೆ.
  • ಈ ರೈಲು ವಾರದ ಎಲ್ಲಾ ದಿನಗಳಲ್ಲೂ ಚಲಿಸುತ್ತದೆ ಮತ್ತು ಸಂಪೂರ್ಣ ಎಸಿ ಸ್ಲೀಪಿಂಗ್ ಸೌಕರ್ಯದೊಂದಿಗೆ (1 ನೇ ಎಸಿ, 2 ಎಸಿ, 3 ಎಸಿ) ಅನುಕೂಲಕರ ರಾತ್ರಿ ಪ್ರಯಾಣದ ಆಯ್ಕೆಯನ್ನು ನೀಡುತ್ತದೆ.
  • ಈ ರೈಲಿನೊಳಗೆ ಕ್ಯಾಟರಿಂಗ್ ಸೇವೆಗಳನ್ನು ಒದಗಿಸುತ್ತದೆ, ಇದು ಐಚ್ಛಿಕವಾಗಿದೆ ಮತ್ತು ಟಿಕೆಟ್ ಕಾಯ್ದಿರಿಸುವಾಗ ಆಯ್ಕೆ ಮಾಡಬಹುದು.
  • ಈ ರೈಲು ಯಾದಗಿರಿನಿಂದ ಬೆಂಗಳೂರು ಕಡೆಗೆ ಹೋಗುವಾಗ ಸುಮಾರು 483 ಕಿ. ಮೀ. ದೂರವನ್ನು ಎಂಟೂವರೆ ಗಂಟೆಗಳಲ್ಲಿ ಕ್ರಮಿಸುತ್ತದೆ ಮತ್ತು ದೆಹಲಿಗೆ ಹೋಗುವಾಗ 1882 ಕಿ. ಮೀ. ದೂರವನ್ನು ಇಪ್ಪತ್ತಾರುವರೆ ಗಂಟೆಗಳಲ್ಲಿ ಕ್ರಮಿಸುತ್ತದೆ.
  • ಇದಲ್ಲದೆ, ಈ ರೈಲು ಯಾದಗಿರಿಯ ಜನರಿಗೆ ಆಗ್ರಾ, ಗ್ವಾಲಿಯರ್, ಝಾನ್ಸಿ, ಭೋಪಾಲ್, ಇಟಾರ್ಸಿ, ನಾಗ್ಪುರದಂತಹ ದೂರದ ಸ್ಥಳಗಳಿಗೆ ಮತ್ತು ಕಾಜಿಪೇಟ್ ಮತ್ತು ಸಿಕಂದರಾಬಾದ್ ನಂತಹ ಇತರ ಸ್ಥಳಗಳಿಗೆ ಪ್ರಯಾಣಿಸಲು ಅನುಕೂಲಕರ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ.
  • ಈ ರೈಲು ಗುಂತಕಲ್, ಸತ್ಯ ಸಾಯಿ ಪ್ರಶಾಂತಿ ನಿಲಯಂ ಮುಂತಾದ ನಿಲ್ದಾಣಗಳಿಗೆ ಹೆಚ್ಚುವರಿ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ.

ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲುಗಡೆ ಜಾರಿಗೆ ಬರುವ ದಿನಾಂಕ:

  1. ಜನವರಿ 27, 2025 ರಂದು ಪ್ರಾರಂಭವಾಗುವ ಪ್ರಯಾಣದಿಂದ ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್-ಕೆಎಸ್ಆರ್ ಬೆಂಗಳೂರು ರಾಜಧಾನಿ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ಮರುದಿನ ಆಗಮಿಸಿ/ನಿರ್ಗಮಿಸಲಿದೆ.
  2. ಜನವರಿ 28, 2025 ರಂದು ಪ್ರಾರಂಭವಾಗುವ ಪ್ರಯಾಣದಿಂದ ರೈಲು ಸಂಖ್ಯೆ 22691 ಕೆಎಸ್ಆರ್ ಬೆಂಗಳೂರು-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ಮರುದಿನ ಆಗಮಿಸಿ/ನಿರ್ಗಮಿಸಲಿದೆ.

ವೇಳಾಪಟ್ಟಿ

ರೈ. ಸಂ. 22692 ಕೆಎಸ್ಆರ್ ಬೆಂಗಳೂರು-ಹಜರತ್ ನಿಜಾಮುದ್ದೀನ್ ರಾಜಧಾನಿ ಡೈಲಿ ಎಕ್ಸ್ ಪ್ರೆಸ್ ನಿಲ್ದಾಣ ರೈ. ಸಂ. 22692 ಹಜರತ್ ನಿಜಾಮುದ್ದೀನ್ – ಕೆಎಸ್ಆರ್ ಬೆಂಗಳೂರು ರಾಜಧಾನಿ ಡೈಲಿ ಎಕ್ಸ್ ಪ್ರೆಸ್
ಆಗಮನ ನಿರ್ಗಮನ ಆಗಮನ ನಿರ್ಗಮನ
02.23 02.25 ರಾಯಚೂರು 21.38 21.40
03.03 03.05 ಯಾದಗಿರ 20.38 20.40
03.59 04.00 ಸೇಡಂ 19.29 19.30

BREAKING: ಅಮೇರಿಕಾ ನೂತನ ಅಧ್ಯಕ್ಷ ಟ್ರಂಪ್ ಗೆ ಪ್ರಧಾನಿ ಮೋದಿ ದೂರವಾಣಿ ಕರೆ: ಉಭಯ ದೇಶಗಳ ಸಂಬಂಧದ ಬಗ್ಗೆ ಚರ್ಚೆ

SHOCKING : ಹಾಸ್ಟೆಲ್ ನಲ್ಲಿ `ಲೋ ಬಿಪಿ’ಯಿಂದ ಕುಸಿದು ಬಿದ್ದು 8 ನೇ ತರಗತಿ ವಿದ್ಯಾರ್ಥಿ ಸಾವು.!

Share. Facebook Twitter LinkedIn WhatsApp Email

Related Posts

high court

BIG NEWS : ದೇಶ ತೊರೆಯುವ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲ್ಲ : ಪಾಕಿಸ್ತಾನ ಮಕ್ಕಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್

09/05/2025 7:25 AM1 Min Read

BREAKING : ‘ಆಪರೇಷನ್ ಸಿಂಧೂರ್’ : ಸೈನಿಕರಿಗೆ ಬೆಂಬಲ ಸೂಚಿಸಲು ಇಂದು ಕಾಂಗ್ರೆಸ್‌ ನಿಂದ ‘ತಿರಂಗಾ ಯಾತ್ರೆ’

09/05/2025 6:47 AM1 Min Read

BREAKING : ಬೆಂಗಳೂರಿನ ‘HAL’ ನಲ್ಲಿ ಹೈಅಲರ್ಟ್ : ಓವರ್ ಟೈಮ್ ಕೆಲಸಕ್ಕೆ ಸಿದ್ಧರಾಗಿರಿ ಎಂದು ಸಿಬ್ಬಂದಿಗಳಿಗೆ ಸೂಚನೆ

09/05/2025 6:13 AM1 Min Read
Recent News

BREAKING : ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಮತ್ತೆ ಶೆಲ್ ದಾಳಿ ನಡೆಸಿದ ಪಾಕಿಸ್ತಾನ್!

09/05/2025 7:42 AM

ಚೀನಾಕ್ಕೆ ಬಿಗ್ ರಿಲೀಫ್: ಶೇ.145ರ ತೆರಿಗೆ ಇಳಿಸಲು ಡೊನಾಲ್ಡ್ ಟ್ರಂಪ್ ಚಿಂತನೆ | Trump Tariff

09/05/2025 7:36 AM

BREAKING : ಡ್ರೋನ್, ಕ್ಷಿಪಣಿಗಳ ಮೂಲಕ ದಾಳಿ ಮಾಡಿದ ಪಾಕಿಸ್ತಾನಕ್ಕೆ 6 ಮರ್ಮಾಘತ ನೀಡಿದ ಭಾರತ

09/05/2025 7:34 AM
high court

BIG NEWS : ದೇಶ ತೊರೆಯುವ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲ್ಲ : ಪಾಕಿಸ್ತಾನ ಮಕ್ಕಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್

09/05/2025 7:25 AM
State News
high court KARNATAKA

BIG NEWS : ದೇಶ ತೊರೆಯುವ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲ್ಲ : ಪಾಕಿಸ್ತಾನ ಮಕ್ಕಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್

By kannadanewsnow0509/05/2025 7:25 AM KARNATAKA 1 Min Read

ಬೆಂಗಳೂರು : ಪಹಲ್ಗಾಮ್ ಉಗ್ರ ದಾಳಿಯಿಂದ ದೇಶ ತೊರೆಯುವಂತೆ ಕೇಂದ್ರ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ ಗಡುವು ನೀಡಿತ್ತು. ಈ ವಿಚಾರವಾಗಿ…

BREAKING : ‘ಆಪರೇಷನ್ ಸಿಂಧೂರ್’ : ಸೈನಿಕರಿಗೆ ಬೆಂಬಲ ಸೂಚಿಸಲು ಇಂದು ಕಾಂಗ್ರೆಸ್‌ ನಿಂದ ‘ತಿರಂಗಾ ಯಾತ್ರೆ’

09/05/2025 6:47 AM

BREAKING : ಬೆಂಗಳೂರಿನ ‘HAL’ ನಲ್ಲಿ ಹೈಅಲರ್ಟ್ : ಓವರ್ ಟೈಮ್ ಕೆಲಸಕ್ಕೆ ಸಿದ್ಧರಾಗಿರಿ ಎಂದು ಸಿಬ್ಬಂದಿಗಳಿಗೆ ಸೂಚನೆ

09/05/2025 6:13 AM

BREAKING : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ : ಸಿಎಂ ಸಿದ್ದರಾಮಯ್ಯ

09/05/2025 6:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.