ಬೆಂಗಳೂರು: ಉಜ್ಜಿವಾನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ “ಉಜ್ಜೀವನ್ ರಿವಾರ್ಡ್” ನೀಡುವುದಾಗಿ ಸಂಸ್ಥೆ ಘೊಷಣೆ ಮಾಡಿದೆ.
ಈ ಕುರಿತು ಮಾತನಾಡಿದ ಉಜ್ಜೀವನ್ ಚಿಲ್ಲರೆ ಹೊಣೆಗಾರಿಕೆ ಮುಖ್ಯಸ್ಥ, ಉಜ್ಜೀವನ್ ಬೆಳವಣಿಗೆಗೆ ಗ್ರಾಹಕರ ಪಾತ್ರ ದೊಡ್ಡದು. ಹೀಗಾಗಿ ಗ್ರಾಹಕರಿಗೂ ಸಹ ಉಜ್ಜೀವನ್ ರಿವಾರ್ಡ್ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಇದು ಯಾವ ಗ್ರಾಹಕರು ಯಾವ ರೀತಿ ವವಹಿವಾಟು ನಡೆಸಲಿದ್ದಾರೆ ಎಂಬುದರ ಮೇಲೆ ಬಹುಮಾನ ನಿಗಧಿಯಾಗಲಿದೆ. ರಿವಾರ್ಡ್ಗಾಗಿಯೇ ಉಜ್ಜೀವನ್ ಅಡ್ವಾಂಟೇಜ್ಕ್ಲಬ್.ಎಐನೊಂದಿಗೆ ಸಹಭಾಗಿತ್ವ ಹೊಂದಿದ್ದು,ಇದರ ಜವಾಬ್ದಾರಿಯನ್ನು ಈ ಸಂಸ್ಥೆ ನಿಭಾಯಿಸಲಿದೆ ಎಂದರು.
ಗ್ರಾಹಕರು ಉಜ್ಜೀವನ್ ಬ್ಯಾಂಕ್ನಲ್ಲಿ ಖಾತೆ ತೆರೆಯುವಿಕೆ, ಠೇವಣಿ, ಬಿಲ್ ಪಾವತಿ, ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ನೋಂದಣಿ, ಇ-ಕಾಮರ್ಸ್, ಯುಪಿಐ, ನೆಫ್ಟ್ ಸೇರಿದಂತೆ ಇತರೆ ಸೇವೆಗಳನ್ನು ಬಳಸುತ್ತಿದ್ದರೆ ಅವರ ಬಳಕೆಯ ಆಧಾರದ ಮೇಲೆ ಪಾಯಿಂಟ್ನನ್ನು ನೀಡಲಿದೆ. ಈ ಪಾಯಿಂಟ್ಸ್ಗಳ ಮೂಲಕ ಶಾಪಿಂಗ್, ಟ್ರಾವೆಲ್, ಸಿನಿಮಾ ಬುಕ್ಕಿಂಗ್ ಸೇರಿದಂತೆ ಹಲವು ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು, ತಾವು ಗಳಿಸಿದ ಪಾಯಿಂಟ್ಸ್ಗಳು ಎರಡು ವರ್ಷಗಳ ವರೆಗೆ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದರು.
ಗ್ರಾಹಕರು ಸಜವಾಗಿಯೇ ವಹಿವಾಟು ನಡೆಸುತ್ತಾರೆ, ಅದರಿಂದ ಅವರಿಗೂ ಉಯೋಗವಾಗಲಿದೆ ಎಂದರೆ ಖಂಡಿತ ಗ್ರಾಹಕರಿಗೆ ಇನ್ನಷ್ಟು ಹೆಚ್ಚೇ ಸಂತೋಷವಾಗಲಿದೆ, ಹೀಗಾಗಿ ಈ ನೂತನ ಪ್ರಯೋಗವನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಅಹಮದಾಬಾದ್ ನಲ್ಲಿ ವಿಮಾನ ಪತನದ ನಂತ್ರ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಪುನರಾರಂಭ
BREAKING : ರಾಜ್ಯದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ಸಚಿವ ಸಂಪುಟ ಅಸ್ತು