ಹಾಸನ: ಜಿಲ್ಲೆಯ ಅರಕಲಗೂಡು ಬಳಿಯಲ್ಲಿ ಟಾಟಾ ಏಸ್ ಗೆ ರೋಡ್ ಹಂಪ್ ಕಾಣದೇ ಹಿಂಪದಿಯಾಗಿ ಬೈಕ್ ಡಿಕ್ಕಿಯಾಗಿದೆ. ಈ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿರೋ ಘಟನೆ ಇಂದು ನಡೆದಿದೆ.

BIG NEWS: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ – ಮಾಜಿ ಸಚಿವ ಜನಾರ್ಧನ ರೆಡ್ಡಿ ಸ್ಪಷ್ಟನೆ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಾದೀಹಳ್ಳಿಯ ಬಳಿಯಲ್ಲಿ ಟಾಟಾ ಏಸ್ ವಾಹನಕ್ಕೆ ಬೈಕ್ ಒಂದು ಹಂಪ್ ಕಾಣದೇ ಹಿಂಬದಿಯಾಗಿ ಡಿಕ್ಕಿಯಾಗಿದೆ. ಇದರಿಂದಾಗಿ ಬೈಕ್ ನಲ್ಲಿದ್ದಂತ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Congress Twitter War: ‘ಸಿದ್ರಾಮುಲ್ಲಾ ಖಾನ್’ ಎಂದ ಬಿಜೆಪಿಗರಿಗೆ ‘ಟ್ವಿಟ್’ನಲ್ಲಿ ಕಾಂಗ್ರೆಸ್ ಸಖತ್ ಢಿಚ್ಚಿ: ಇವರನ್ನೆಲ್ಲಾ ಏನೆಂದು ಕರೆಯಲೆಂದು ಪ್ರಶ್ನೆ.!

ಮೃತರನ್ನು ಪರಶುರಾಮ್(45) ಹಾಗೂ ಕುಮಾರ್ (45) ಎಂಬುದಾಗಿ ತಿಳಿದು ಬಂದಿದೆ. ಈ ಇಬ್ಬರು ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸಿದ್ಧಾಪುರದವರು ಎಂದು ತಿಳಿದು ಬಂದಿದೆ. ಅರಕಲಗೂಡಿಗೆ ತೆರಳಿ, ವಾಪಾಸ್ ಆಗುತ್ತಿದ್ದಾಗ ಮಾದೀಹಳ್ಳಿ ಗ್ರಾಮದ ಬಳಿಯಲ್ಲಿ ಅಪಘಾತ ಸಂಭವಿಸಿ, ಸಾವನ್ನಪ್ಪಿದ್ದಾರೆ.

ಶಿವಮೊಗ್ಗ: ನಾಳೆ, ನಾಡಿದ್ದು ‘ಸೊರಬ ತಾಲೂಕಿನ’ ಈ ಗ್ರಾಮಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share.
Exit mobile version