ಬೆಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಹೇಳಿದಂತೆ ಬಿಜೆಪಿಗೆ, ಇದೀಗ ಟ್ವಿಟ್ ನಲ್ಲಿ ಕಾಂಗ್ರೆಸ್ ಸಖತ್ ಡಿಚ್ಚಿ ಕೊಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ ಮುಸ್ಲೀಂ ಟೋಪಿ ಧರಿಸಿರುವಂತ ಪೋಟೋ ಶೇರ್ ಮಾಡಿ ಇವರನ್ನು “ಬೊಮ್ಮಾಯುಲ್ಲಾ ಖಾನ್” ಎಂದು ಕರೆಯಬಹುದೇ ಬಿಜೆಪಿ ಎಂಬುದಾಗಿ ಪ್ರಶ್ನಿಸಿದೆ.

ಇವರಿಗೆ “ಜಬ್ಬಾರ್ ಖಾನ್” “ಅಶ್ವಾಖ್ ಇನಾಯತ್ ಖಾನ್” ಎಂದು ಹೆಸರಿಡುತ್ತೀರಾ ಸಿಟಿ ರವಿ ಅವರೇ ಎಂಬುದಾಗಿ ಕೇಳಿದೆ.

ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ ಬಿಜೆಪಿ ಎಂದು ಕರ್ನಾಟಕ ಕಾಂಗ್ರೆಸ್ ಸರಣಿ ಟ್ವಿಟ್ ನಲ್ಲಿ ಬಿಜೆಪಿಗರನ್ನು ಕೆಣಕಿದೆ.

ಬಿಜೆಪಿ ಆಡಳಿತಕ್ಕೆ ಬಂದಮೇಲೆ ರಾಜ್ಯದಲ್ಲಿ ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ ಗಣನೀಯವಾಗಿ ಹೆಚ್ಚಿದೆ ಎಂದು ಹೇಳಿದ್ದೆವು, ಈಗ ಕೇಂದ್ರ ಸರ್ಕಾರದ ವರದಿಯೇ ಹೇಳುತ್ತಿದೆ. ಇದು #ದಲಿತವಿರೋಧಿಬಿಜೆಪಿ ಉದ್ದೇಶಪೂರ್ವಕವಾಗಿ ನಿರ್ಮಿಸಿದ ವಾತಾವರಣ. ಇದೇನಾ ಬಿಜೆಪಿ ಹೇಳಿದ ರಾಮರಾಜ್ಯ? ಬಿಜೆಪಿಯ ರಾಮರಾಜ್ಯದಲ್ಲಿ ದಲಿತರಿಗೆ ಬದುಕು ಇಲ್ಲವೇ? ಎಂದು ಪ್ರಶ್ನಿಸಿದೆ.

Share.
Exit mobile version