ರಾಮನಗರ: ಇಲ್ಲಿನ ಬಿಡದಿಯ ಟೊಯೋಟೋ ಕಾರ್ಖಾನೆಯಲ್ಲಿನ ಶೌಚಾಲಯದಲ್ಲಿ ಪಾಕ್ ಪರ ಬರಹ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ಪದ ಬಳಸಿ ಗೋಡೆ ಬರಹ ಬರೆದಿದ್ದಂತ ಇಬ್ಬರನ್ನು ಬಂಧಿಸಲಾಗಿದೆ.
ಬಿಡದಿಯ ಟೊಯೋಟೋ ಕಾರ್ಖಾನೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಪಾಕ್ ಪರ ಬರಹ ಹಾಗೂ ಕನ್ನಡಿಗರಿಗೆ ಅವಹೇಳನಕಾರಿ ಪದ ಬಳಸಿ ಗೋಡೆ ಬರಹ ಬರೆಯಲಾಗಿತ್ತು. ಅಂದೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಕನ್ನಡಪರ ಸಂಘಟನೆಯ ಮುಖಂಡರು ಕಾರ್ಖಾನೆಯ ಬಳಿಯಲ್ಲಿ ಪ್ರತಿಭಟನೆ ನಡೆಸಿದ್ದರು.
ಇಂದು ಬಿಡದಿ ಠಾಣೆಯ ಪೊಲೀಸರು ಪಾಕ್ ಪರ ಗೋಡೆ ಬರಹ ಬರೆದಿದ್ದಂತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರ ಕರ್ನಾಟಕ ಮೂಲದ ಹೈಮದ್ ಹುಸೇನ್(24) ಹಾಗೂ ಸಾದಿಕ್(20) ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.
BIG NEWS: 2028ರಲ್ಲಿ ನಮ್ಮ ಸರ್ಕಾರ ಬಂದ್ರೆ ‘ಗೃಹಲಕ್ಷ್ಮಿ ಹಣ’ವನ್ನು 4,000 ರೂ.ಗೆ ಏರಿಕೆ: ಕಾಂಗ್ರೆಸ್ ಶಾಸಕ
BREAKING NEWS: ಯುಪಿಐಗೆ 1,500 ಕೋಟಿ ರೂ.ಗಳ ಪ್ರೋತ್ಸಾಹಧನಕ್ಕೆ ‘ಕೇಂದ್ರ ಸಂಪುಟ’ದ ಅನುಮೋದನೆ