ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಭೂಕಂಪ ಸಂಭವಿಸಿದ್ದು, ಇದು ರಾಜ್ಯದ ಮಾನ್ಸೂನ್ ಸಂಕಟಗಳನ್ನು ಹೆಚ್ಚಿಸಿದೆ.ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ, 3.3 ತೀವ್ರತೆಯ ಮೊದಲ ಭೂಕಂಪವು ಭಾರತೀಯ ಕಾಲಮಾನ 03:27:09 ಕ್ಕೆ 20 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ಇದರ ಕೇಂದ್ರಬಿಂದುವು ಚಂಬಾದಲ್ಲಿ 32.87 ಉತ್ತರ ಅಕ್ಷಾಂಶ ಮತ್ತು 76.09 ಪೂರ್ವ ರೇಖಾಂಶದಲ್ಲಿತ್ತು.ಸುಮಾರು ಒಂದು ಗಂಟೆಯ ನಂತರ, ಬೆಳಿಗ್ಗೆ 4:39 ಕ್ಕೆ 10 ಕಿಲೋಮೀಟರ್ ಆಳದಲ್ಲಿ 4.0 ತೀವ್ರತೆಯ ಎರಡನೇ ಭೂಕಂಪ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದುವು ಚಂಬಾದಲ್ಲಿ 32.71 ಉತ್ತರ ಅಕ್ಷಾಂಶ ಮತ್ತು 76.11 ಪೂರ್ವ ರೇಖಾಂಶದಲ್ಲಿತ್ತು.
ಏತನ್ಮಧ್ಯೆ, ಮಾನ್ಸೂನ್ ಸಂಬಂಧಿತ ಘಟನೆಗಳಿಂದಾಗಿ ರಾಜ್ಯವು ತೀವ್ರ ಹಾನಿಯನ್ನು ಅನುಭವಿಸುತ್ತಿದೆ. ಕುಲ್ಲು ಜಿಲ್ಲೆಯಲ್ಲಿ, ಲಘಾಟಿ ಪ್ರದೇಶದಲ್ಲಿ ಮೇಘಸ್ಫೋಟವು ಗಮನಾರ್ಹ ಹಾನಿಯನ್ನುಂಟು ಮಾಡಿದೆ. ಜಿಲ್ಲಾಧಿಕಾರಿ ಟೋರುಲ್ ಎಸ್.ರವೀಶ್ ಮಾತನಾಡಿ, ಭೂತನಾಥ ಸೇತುವೆ ಬಳಿಯ ರಸ್ತೆ ಹಾಳಾಗಿದೆ. ಹನುಮಾನಿ ಬಾಗ್ ನಲ್ಲಿರುವ ಸೇತುವೆ ಕೊಚ್ಚಿ ಹೋಗಿದೆ. ಒಂದು ಸ್ಮಶಾನಕ್ಕೆ ಹಾನಿಯಾಗಿದೆ.ಎರಡು ಅಂಗಡಿಗಳು ನಷ್ಟವನ್ನು ಅನುಭವಿಸಿವೆ ಮತ್ತು ಎರಡು ತರಕಾರಿ ಅಂಗಡಿಗಳು ಸಹ ಹಾನಿಗೊಳಗಾಗಿವೆ. ಒಂದು ಮನೆಗೂ ಹಾನಿಯಾಗಿದೆ. ರೊಪ್ಡಿ ಭುಟ್ಟಿ ಸೇತುವೆಗೂ ಹಾನಿಯಾಗಿದೆ. ಎಲ್ಲಾ ಇಲಾಖೆಗಳು ಹಾನಿಯನ್ನು ಅಂದಾಜು ಮಾಡುತ್ತಿವೆ” ಎಂದರು