Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Morning habits to avoid

ಬೆಳಗೆದ್ದು ಈ ಕೆಲಸ ಮಾಡಿ ದಿನವಿಡೀ ಉತ್ಸಾಹಭರಿತರಾಗಿ ಇರ್ತೀರಾ.! ಈ ಸ್ಮಾರ್ಟ್ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತೆ

22/08/2025 9:58 PM

BREAKING : ವಾಹನ ಸವಾರರಿಗೆ ಬಿಗ್ ಶಾಕ್ ; 20 ವರ್ಷಕ್ಕಿಂತ ಹಳೆ ವಾಹನಗಳ ‘ನೋಂದಣಿ ಶುಲ್ಕ’ ಹೆಚ್ಚಳ

22/08/2025 9:49 PM

BREAKING : ಸೆಪ್ಟೆಂಬರ್ 3,4ರಂದು ನವದೆಹಲಿಯಲ್ಲಿ ‘GST ಮಂಡಳಿಯ 56ನೇ ಸಭೆ’ ನಿಗದಿ |GST Council Meeting

22/08/2025 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ 110 ಹಳ್ಳಿಗಳ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಿ: ತುಷಾರ್ ಗಿರಿ ನಾಥ್ ಸೂಚನೆ
KARNATAKA

ಬೆಂಗಳೂರಿನ 110 ಹಳ್ಳಿಗಳ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಿ: ತುಷಾರ್ ಗಿರಿ ನಾಥ್ ಸೂಚನೆ

By kannadanewsnow0928/01/2025 8:14 PM

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗಳಲ್ಲಿ ಬರುವ ಕೊಳವೆ ಬಾವಿಗಳನ್ನು ಪಾಲಿಕೆಯಿಂದ ಜಲಮಂಡಳಿಗೆ ಹಸ್ತಾಂತರಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಲಹಂಕ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ”ಯಲ್ಲಿ ಇಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ವೇಳೆ, ಸಾರ್ವಜನಿಕರೊಬ್ಬರು ಮಾತನಾಡಿ 110 ಹಳ್ಳಿಗಳ ಪೈಕಿ ಥಣಿಸಂದ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿದರು.

ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ನಗರದಲ್ಲಿ ಜಲಮಂಡಳಿ ವತಿಯಿಂದ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಬಹುತೇಕ ಕಡೆ ಕಾವೇರಿ ನೀರಿನ ಸಂಪರ್ಕವನ್ನು ನೀಡಲಾಗಿದೆ. ಈ ಸಂಬಂಧ ಪಾಲಿಕೆ ಸುಪರ್ದಿಯಲ್ಲಿರುವ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಫೆಬ್ರವರಿ ಅಂತ್ಯದೊಳಗಾಗಿ ನೀರು ಒದಗಿಸಿ:

ಥಣಿಸಂದ್ರ ಹಾಗೂ ಹೆಗ್ಡೆ ನಗರಕ್ಕೆ ಕಾವೇರಿ ನೀರು ಸಂಪರ್ಕ ಕಲ್ಪಿಸಲು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಕಾವೇರಿ ನೀರು ಎಲ್ಲಾ ಕಡೆ ಸಿಗುವಂತೆ ಮಾಡಬೇಕು. ಈ ಸಂಬಂಧ ಕಮಿಷನ್ ಮಾಡಿ ಟೆಸ್ಟಿಂಗ್ ಮಾಡಬೇಕು. ನೀರು ಸೋರಿಕೆಯಾಗುವುದನ್ನು ಗುರುತಿಸಿ ಫೆಬ್ರವರಿ ಅಂತ್ಯದೊಳಗಾಗಿ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಸೂಚನೆ ನೀಡಲಾಯಿತು. ಅಲ್ಲದೇ ಸದರಿ ಪ್ರದೇಶಗಳಿಗೆ ವೇಳಾ ಪಟ್ಟಿ ಸಿದ್ದಪಡಿಸಿ ನಿಗದಿತ ಸಮಯದಲ್ಲಿ ನೀರು ಸರಬರಾಜು ಮಾಡಲು ಸೂಚಿಸಿದರು.

ಖಾಲಿ ನಿವೇಶನಗಳಿಗೆ ನೋಟೀಸ್ ನೀಡಿ:

ಟೆಲಿಕಾಂ ಲೇಔಟ್ ಬಳಿ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುವುದನ್ನು ನಿಯಂತ್ರಿಸಲು ಕೇಳಿದ್ದಕ್ಕೆ, ಖಾಲಿ ಜಾಗಗಳಿಗೆ ನೋಟೀಸ್ ನೀಡಿ ಸ್ವಚ್ಛ ಮಾಡಬೇಕು. ನಂತರ ಸಂಬಂಧಪಟ್ಟ ಮಾಲೀಕರಿಂದ ಹಣ ವಸೂಲಿ ಮಾಡಲು ಸೂಚಿಸಿದರು. ಅದಲ್ಲದೆ ರಾಜಕಾಲುವೆಯ ಸೈಡ್ ಡ್ರೈನ್ಸ್ ಗಳಲ್ಲಿ ಹೂಳೆತ್ತುವ ಹಾಗೂ ಜಲಮಂಡಳಿಯ ಒಳ ಚರಂಡಿಗಳಲ್ಲಿ ಕಾಲಕಾಲಕ್ಕೆ ಸಕ್ಕಿಂಗ್ ಮಾಡುತ್ತಿರಲು ಸೂಚಿಸಿದರು.

ಒಂದು ಬಾರಿ ಸ್ವಚ್ಛತೆಗೆ ಪ್ರಸ್ತಾವನೆ ಸಲ್ಲಿಸಿ:

ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಸುಮಾರು 13 ಕಿ.ಮೀ ಕಚ್ಚಾ ಡ್ರೈನ್ ಬರಲಿದ್ದು, ಅದರಲ್ಲಿ ಒಂದು ಬಾರಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಲು ಪ್ರಸ್ತಾವನೆ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಕ್ಕುಪತ್ರ ನೀಡಲು ಕ್ರಮವಹಿಸಲು ಸೂಚನೆ:

ದೊಡ್ಡಬೆಟ್ಟಹಳ್ಳಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಯೋಜನೆಯಡಿ 30 ಮಂದಿಗೆ ಹಕ್ಕುಪತ್ರ ನೀಡಬೇಕಿದೆ. ಆದರೆ ಈವರೆಗೆ 17 ಮಂದಿಗೆ ನೀಡಿದ್ದು, ಇನ್ನೂ 13 ಮಂದಿಗೆ ಹಕ್ಕುಪತ್ರ ನೀಡಬೇಕಿದೆ. ಈ ಪೈಕಿ ಹಕ್ಕು ಪತ್ರ ನೀಡಲು ಕೂಡಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

17 ದೂರುಗಳ ಸ್ವೀಕಾರ:

ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಳೆದ ಬಾರಿ ನಡೆದ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದಂತಹ ಬಹುತೇಕ ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ. ಇಂದು 17 ದೂರುಗಳನ್ನು ಸ್ವೀಕರಿಸಲಾಗಿದ್ದು, ಕಾಲಮಿತಿಯೊಳಗಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಂದ ಸ್ವೀಕರಿಸಿದ ಪ್ರಮುಖ ಅಹವಾಲುಗಳು:

1. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಮನವಿ.
2. ಸರ್ಕಾರಿ ಶಾಲೆಯ ಬಳಿ ಸ್ವಚ್ಛತೆ ಕಾಪಾಡಲು ಮನವಿ.
3. ರಾಮಕೃಷ್ಣ ಹೆಗ್ಡೆ ನಗರದಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಮನವಿ.
4. ರಾಜಕಾಲುವೆ ಬಫರ್ ವಲಯದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಅದನ್ನು ತಡೆಯಲು ಮನವಿ.
5. ರಾಜಕಾಲುವೆಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಲು ಮನವಿ

ಈ ವೇಳೆ ವಲಯ ಆಯುಕ್ತರಾದ ಕರೀಗೌಡ, ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಮಮತಾ, ಮುಖ್ಯ ಅಭಿಯಂತರರಾದ ರಂಗನಾಥ್, ಕಾರ್ಯಪಾಲಕ ಅಭಿಯಂತರರು, ಪಾಲಿಕೆ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

BIG NEWS: ಫೆ.13, 14ರಂದು ಏರ್ ಶೋ ಹಿನ್ನಲೆ: ಬೆಂಗಳೂರಿನ ಈ ಏರಿಯಾದ ಕಾಲೇಜುಗಳಿಗೆ ರಜೆ ಘೋಷಣೆ

ನಿಮ್ಮ ಮನೆಯಲ್ಲಿ ಜಿರಳೆ, ಹಲ್ಲಿ, ಇರುವೆಗಳ ಕಾಟವೇ? ಜಸ್ಟ್ ಹೀಗೆ ಮಾಡಿ, ನಿರ್ಮೂಲನೆ ಗ್ಯಾರಂಟಿ!

Share. Facebook Twitter LinkedIn WhatsApp Email

Related Posts

BREAKING NEWS: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ತಪ್ಪು ಒಪ್ಪಿಕೊಂಡ – ಸುಜಾತ ಭಟ್

22/08/2025 9:30 PM1 Min Read

ಮದ್ದೂರು ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎ.ಮುರಳೀಧರ

22/08/2025 8:49 PM2 Mins Read

recruitment of Agniveer : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ

22/08/2025 8:13 PM1 Min Read
Recent News
Morning habits to avoid

ಬೆಳಗೆದ್ದು ಈ ಕೆಲಸ ಮಾಡಿ ದಿನವಿಡೀ ಉತ್ಸಾಹಭರಿತರಾಗಿ ಇರ್ತೀರಾ.! ಈ ಸ್ಮಾರ್ಟ್ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತೆ

22/08/2025 9:58 PM

BREAKING : ವಾಹನ ಸವಾರರಿಗೆ ಬಿಗ್ ಶಾಕ್ ; 20 ವರ್ಷಕ್ಕಿಂತ ಹಳೆ ವಾಹನಗಳ ‘ನೋಂದಣಿ ಶುಲ್ಕ’ ಹೆಚ್ಚಳ

22/08/2025 9:49 PM

BREAKING : ಸೆಪ್ಟೆಂಬರ್ 3,4ರಂದು ನವದೆಹಲಿಯಲ್ಲಿ ‘GST ಮಂಡಳಿಯ 56ನೇ ಸಭೆ’ ನಿಗದಿ |GST Council Meeting

22/08/2025 9:36 PM

BREAKING NEWS: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ತಪ್ಪು ಒಪ್ಪಿಕೊಂಡ – ಸುಜಾತ ಭಟ್

22/08/2025 9:30 PM
State News
KARNATAKA

BREAKING NEWS: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ತಪ್ಪು ಒಪ್ಪಿಕೊಂಡ – ಸುಜಾತ ಭಟ್

By kannadanewsnow0722/08/2025 9:30 PM KARNATAKA 1 Min Read

ಬೆಂಗಳೂರು: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ಅಂತ ಕಳೆದ ಒಂದು ತಿಂಗಳಿನಿಂದ ಸುದ್ದಿಯಲ್ಲಿದ್ದ ಸುಜಾತ ಭಟ್…

ಮದ್ದೂರು ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎ.ಮುರಳೀಧರ

22/08/2025 8:49 PM

recruitment of Agniveer : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ

22/08/2025 8:13 PM

ಬೀದಿ ನಾಯಿ ಪ್ರಕರಣ: ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನ 10 ಪ್ರಮುಖ ಅಂಶಗಳು ಇಲ್ಲಿವೆ

22/08/2025 8:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.