Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫ್ಲೋರಿಡಾದಲ್ಲಿ ಕಾರು ಬಾರ್ ಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಸಾವು, 11 ಮಂದಿಗೆ ಗಾಯ | Accident

09/11/2025 9:41 AM

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಸಲಿಂಗ ವಿವಾಹವಾದ ಯುವತಿಯರು.!

09/11/2025 9:41 AM

1 ಲಕ್ಷದ ಬೈಕಿಗೆ 21 ಲಕ್ಷ ದಂಡ ಹಾಕಿದ ಪೊಲೀಸರು: ಹೆಲ್ಮೆಟ್ ಧರಿಸದ ಬೈಕ್ ಸವಾರ ಶಾಕ್

09/11/2025 9:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: 2019ರಿಂದ 2023ನೇ ಸಾಲಿನ TSR, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ
KARNATAKA

BREAKING: 2019ರಿಂದ 2023ನೇ ಸಾಲಿನ TSR, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

By kannadanewsnow0921/09/2024 6:49 PM

ಬೆಂಗಳೂರು: ರಾಜ್ಯ ಸರ್ಕಾರದಿಂದ 2019ರಿಂದ 2023ನೇ ಸಾಲಿನವರೆಗಿನ ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಮಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಇಂದು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ನಡವಳಿಯನ್ನು ಹೊರಡಿಸಿದ್ದು, 2019 ರಿಂದ 2023ನೇ ಕ್ಯಾಲೆಂಡರ್ ವರ್ಷಗಳ ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡುವ ಸಲುವಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಗೌರವಾನ್ವಿತ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಶ್ರೀ ಪಿ.ಎನ್.ದೇಸಾಯಿ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ.

ಆಯ್ಕೆ ಸಮಿತಿಯು ಈ ಸಂಬಂಧ ಸ್ವೀಕೃತವಾಗಿದ್ದ ಅರ್ಜಿಗಳು ಮತ್ತು ನಾಮನಿರ್ದೇಶನಗಳ ಸಮಗ್ರ ಪರಿಶೀಲನ ಮತ್ತು ಸುದೀರ್ಘ ಪರಾಮರ್ಶೆಯ ತರುವಾಯ ದಿನಾಂಕ:04/09/2024ರ ಸಭೆಯಲ್ಲಿ ಈ ಎರಡೂ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಿ ವರದಿ ನೀಡಿರುವ ಹಿನ್ನೆಲೆಯಲ್ಲಿ, 2019 ರಿಂದ 2023ನೇ ಸಾಲಿನವರೆಗೆ ಟಿಯಸ್ಕಾ‌ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಾಗಿ ಆಯ್ಕೆ ಮಾಡಿರುವ ಪತ್ರಕರ್ತರ ಹೆಸರುಗಳನ್ನು ಅನುಮೋದಿಸಿ, ಪ್ರಶಸ್ತಿ ಮೊತ್ತವಾದ ತಲಾ ರೂ.2.00 ಲಕ್ಷಗಳ ನಗದು ಬಹುಮಾನವನ್ನು ಘೋಷಿಸಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲು ಸರ್ಕಾರದ ಸೂಕ್ತ ಆದೇಶ ಹೊರಡಿಸುವಂತೆ ಮೇಲೆ ಕ್ರಮಸಂಖ್ಯೆ (3)ರಲ್ಲಿ ಓದಲಾದ ಪತ್ರದಲ್ಲಿ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರು ಸರ್ಕಾರವನ್ನು ಕೋರಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಈ ಕೆಳಕಂಡ ಹಿರಿಯ ಪತ್ರಕರ್ತರುಗಳನ್ನು 2019 ರಿಂದ 2023ನೇ ಸಾಲಿನವರೆಗಿನ ಟಿಯಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಮತ್ತು 2019 ರಿಂದ 2023ನೇ ಅಲ್ಲಿನವರೆಗಿನ ಮೊಹರ ಹಣಮಂತರಾಯ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಘೋಷಿಸಲು ಸರ್ಕಾರವು ‘ಹರ್ಷಿಸುತ್ತದೆ ಎಂದು ಹೇಳಿದ್ದಾರೆ.

ಇಲ್ಲಿದೆ ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರ ಪಟ್ಟಿ

  • 2019ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಶಿವಾಜಿ ಎಸ್ ಗಣೇಶನ್ ಗೆ ನೀಡಲಾಗಿದೆ.
  • 2020ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಎಸ್ ಆರ್ ಮಣೂರ ಅವರಿಗೆ ನೀಡಲಾಗಿದೆ
  • 2021ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಡಾ.ಆರ್.ಪೂರ್ಣಿಮಾಗೆ ನೀಡಲಾಗಿದೆ
  • 2022ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಗೆ ನೀಡಲಾಗಿದೆ.
  • 2023ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಗೆ ನೀಡಲಾಗಿದೆ.

ಹೀಗಿದೆ ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತರ ಪಟ್ಟಿ

  • 2019ನೇ ಸಾಲಿನ ಪ್ರಶಸ್ತಿಯನ್ನು ನವೋದಯ ದಿನಪತ್ರಿಕೆಯ ಪ್ರಕಾಶಕರು ಹಾಗೂ ಸಂಪಾದಕರಾದಂತ ರಾಜೀವ್ ಕಿದಿಯೂರಗೆ ನೀಡಲಾಗಿದೆ.
  • 2020ನೇ ಸಾಲಿನ ಪ್ರಶಸ್ತಿಯನ್ನು ಸಂವಾದ ಮಾಸಪತ್ರಿಕೆಯ ಸಂಪಾಕ ಇಂಧೂಧರ ಹೊನ್ನಾಪುರಗೆ ನೀಡಲಾಗಿದೆ.
  • 2021ನೇ ಸಾಲಿನ ಪ್ರಶಸ್ತಿಯನ್ನು ಕ್ರಾಂತಿ ದೀಪ ಪತ್ರಿಕೆಯ ಪ್ರಕಾಶಕರು ಹಾಗೂ ಸಂಪಾದಕರಾದಂತ ಎನ್ ಮಂಜುನಾಥ್ ಅವರಿಗೆ ನೀಡಲಾಗಿದೆ.
  • 2022ನೇ ಸಾಲಿನ ಪ್ರಶಸ್ತಿಯನ್ನು ಕರ್ನಾಟಕ ಮಲ್ಲ ಪತ್ರಿಕೆಯ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ನೀಡಲಾಗಿದೆ.
  • 2023ನೇ ಸಾಲಿನ ಪ್ರಶಸ್ತಿಯನ್ನು ಕರ್ನಾಟಕ ಸಂಧ್ಯಾಕಾಲ ದಿನಪತ್ರಿಕೆಯ ಶಿವಲಿಂಗಪ್ಪ ದೊಡ್ಡಮನಿಗೆ ನೀಡಲಾಗಿದೆ.

4 ಭಾರತೀಯ ಉದ್ಯೋಗಿಗಳಲ್ಲಿ ಒಬ್ಬರು ಕೆಲಸ ಸಂಬಂಧಿತ ಒತ್ತಡದಿಂದ ಬಳಲುತ್ತಿದ್ದಾರೆ: ಅಧ್ಯಯನ | Work-Related Stress

ಬೆಂಗಳೂರಲ್ಲಿ ಹೆಚ್ಚಿದ ‘ನಿಫಾ’ ಭೀತಿ : ಓರ್ವ ವ್ಯಕ್ತಿಗೆ ಸೊಂಕಿನ ಗುಣಲಕ್ಷಣ ಪತ್ತೆ, 41 ಜನರಿಗೆ ‘ಹೋಮ್ ಕ್ವಾರಂಟೈನ್’!

BREAKING : ವಾಯುಪಡೆ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ‘ಎ.ಪಿ ಸಿಂಗ್’ ನೇಮಕ |Air Marshal A.P. Singh

Share. Facebook Twitter LinkedIn WhatsApp Email

Related Posts

ತಾರಾಬಲ ಏಕೆ ನೋಡಬೇಕು? ಹೀಗಿದೆ ತಾರಾಬಲ ನೋಡುವ ಕ್ರಮ

09/11/2025 8:39 AM3 Mins Read

ಶಿವಮೊಗ್ಗ ‘KUWJ ಸಂಘ’ದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ಬಾಮಿ, ರಾಜ್ಯ ಸಮಿತಿಗೆ ಶಿವಕುಮಾರ್ ಅವಿರೋಧವಾಗಿ ಆಯ್ಕೆ

09/11/2025 8:30 AM1 Min Read

Fact Check : ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ? ಹೀಗಿದೆ ರಾಜ್ಯ ಸರ್ಕಾರದ ಸ್ಪಷ್ಟನೆ

09/11/2025 8:17 AM1 Min Read
Recent News

ಫ್ಲೋರಿಡಾದಲ್ಲಿ ಕಾರು ಬಾರ್ ಗೆ ಡಿಕ್ಕಿ ಹೊಡೆದು ಕನಿಷ್ಠ ನಾಲ್ವರು ಸಾವು, 11 ಮಂದಿಗೆ ಗಾಯ | Accident

09/11/2025 9:41 AM

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಸಲಿಂಗ ವಿವಾಹವಾದ ಯುವತಿಯರು.!

09/11/2025 9:41 AM

1 ಲಕ್ಷದ ಬೈಕಿಗೆ 21 ಲಕ್ಷ ದಂಡ ಹಾಕಿದ ಪೊಲೀಸರು: ಹೆಲ್ಮೆಟ್ ಧರಿಸದ ಬೈಕ್ ಸವಾರ ಶಾಕ್

09/11/2025 9:29 AM

ಫಿಲಿಪೈನ್ಸ್ ನಲ್ಲಿ ಕಲ್ಮೇಗಿ ಚಂಡಮಾರುತದ ಅಬ್ಬರ: 1 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ | Typhoon Kalmaegi

09/11/2025 9:19 AM
State News
KARNATAKA

ತಾರಾಬಲ ಏಕೆ ನೋಡಬೇಕು? ಹೀಗಿದೆ ತಾರಾಬಲ ನೋಡುವ ಕ್ರಮ

By kannadanewsnow5709/11/2025 8:39 AM KARNATAKA 3 Mins Read

ಪ್ರಪಂಚ ನಿಂತಿರುವುದು ನಂಬಿಕೆಯ ಮೇಲೆ ಹಾಗೆ ಭಾರತೀಯರ ನಂಬಿಕೆಗೆ ಪಾತ್ರವಾಗಿರುವ ಶಾಸ್ತ್ರವೇ ಜ್ಯೋತಿಷ್ಯ ಶಾಸ್ತ್ರ. ಪುರಾತನ ಕಾಲದಿಂದಲೂ ಭವಿಷ್ಯವನ್ನು ತಿಳಿಯಲು…

ಶಿವಮೊಗ್ಗ ‘KUWJ ಸಂಘ’ದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ಬಾಮಿ, ರಾಜ್ಯ ಸಮಿತಿಗೆ ಶಿವಕುಮಾರ್ ಅವಿರೋಧವಾಗಿ ಆಯ್ಕೆ

09/11/2025 8:30 AM

Fact Check : ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ? ಹೀಗಿದೆ ರಾಜ್ಯ ಸರ್ಕಾರದ ಸ್ಪಷ್ಟನೆ

09/11/2025 8:17 AM

ರಾಜ್ಯದ `ರೈತರಿಗೆ ಗುಡ್ ನ್ಯೂಸ್’ : ಎಲ್ಲಾ ಕಬ್ಬಿಗೂ ಟನ್ ಗೆ ಹೆಚ್ಚುವರಿ 100 ರೂ. ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ

09/11/2025 8:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.