Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿದಿನ ಬೆಳಗ್ಗೆ ‘ಜೀರಿಗೆ ನೀರು’ ಹೀಗೆ ಕುಡಿಯಿರಿ, ಇದು ನಿಮ್ಮ ದೇಹಕ್ಕೆ ಆರೋಗ್ಯ ಮಂತ್ರದಂತೆ ಕೆಲಸ ಮಾಡುತ್ತೆ!

31/07/2025 10:06 PM

ಈ ತರಕಾರಿಯಿಂದ ಆ ಎಲ್ಲಾ ಸಮಸ್ಯೆಗಳು ದೂರ, ವಾರಕ್ಕೊಮ್ಮೆ ತಿಂದ್ರು ಮಾಂತ್ರಿಕ ಪ್ರಯೋಜನ

31/07/2025 9:46 PM

ಮದ್ದೂರು ತಾಲ್ಲೂಕಲ್ಲಿ ‘ಅಕ್ರಮ ಮರಳು ಗಣಿಗಾರಿಕೆ’ಗೆ ಕೆಲ ಅಧಿಕಾರಿಗಳೇ ಸಾಥ್: ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ

31/07/2025 9:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಬಿಜೆಪಿ ಟ್ವಿಟ್ ಪ್ರಶ್ನೆ’ಗೆ ಅಂಕಿಅಂಶ ಸಹಿತ ಈ ಉತ್ತರ ಕೊಟ್ಟ ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’
KARNATAKA

‘ಬಿಜೆಪಿ ಟ್ವಿಟ್ ಪ್ರಶ್ನೆ’ಗೆ ಅಂಕಿಅಂಶ ಸಹಿತ ಈ ಉತ್ತರ ಕೊಟ್ಟ ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’

By kannadanewsnow0922/08/2024 7:20 PM

ಬೆಂಗಳೂರು: ಸಾಮಾನ್ಯ ಜ್ಞಾನವೇ ಇಲ್ಲದವರೊಂದಿಗೆ‌ ಪ್ರತಿದಿನ ಅವರು ಮಾಡುವ ಟ್ಟೀಟ್ ಗಳಿಗೆ ಉತ್ತರ ಕೊಡಬೇಕಾಗಿದೆಯಲ್ಲ ಎಂಬುದು ದುರಂತವೆನಿಸಿದರೂ, ನಮ್ಮ‌ ಜವಾಬ್ದಾರಿಯಿಂದ ನಾವು ನುಳುಚಿಕೊಳ್ಳುವುದಿಲ್ಲ ಎಂಬುದಕ್ಕಾಗಿ ಈ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂಬುದಾಗಿ ಸಚಿವ ರಾಮಲಿಂಗಾರೆಡ್ಡಿ ಅಂಕಿ ಅಂಶ ಸಹಿತ ಈ ಕೆಳಕಂಡ ಉತ್ತರ ನೀಡಿದ್ದಾರೆ.

ಕರ್ನಾಟಕ ಸರ್ಕಾರವು ದಿನಾಂಕ 30.09.2000ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಟಿಡಿ/85/ಟಿಆ‌ರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಅರಿವು ಕೂಡ ಇವರಿಗೆ ಇಲ್ಲವಲ್ಲ ???

ಸಾರಿಗೆ ಸಂಸ್ಥೆಗಳ‌ ಅಭಿವೃದ್ಧಿಯ ಎರಡು ಪ್ರಮುಖ ಅಂಗಗಳು ಕಾರ್ಮಿಕರು ಹಾಗೂ ಬಸ್ಸುಗಳು.

# ದುರಾದೃಷ್ಟವೆಂದರೆ, ಕಳೆದ 5 ವರ್ಷಗಳಲ್ಲಿ ಬಿ.ಜೆ.ಪಿ ಸರ್ಕಾರದ‌ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ ( ನಿವೃತ್ತಿ ಇನ್ನಿತರೆ ಕಾರಣಗಳಿಂದ ) ಒಂದೇ ಒಂದು ನೇಮಕಾತಿ ಆಗಿಲ್ಲ. ನಮ್ಮ ಸರ್ಕಾರ ಸಾರಿಗೆ ಸಂಸ್ಥೆಗಳಲ್ಲಿ 8900 ಖಾಯಂ ನೇಮಕಾತಿಗೆ ಚಾಲನೆ ನೀಡಿ,‌ಈಗಾಗಲೇ 1883 ಚಾಲಕ/ ನಿರ್ವಾಹಕ/ತಾಂತ್ರಿಕ ಸಿಬ್ಬಂದಿಗಳ‌ ಹುದ್ದೆ ಭರ್ತಿ ಮಾಡಿದೆ.

# ಸಂಸ್ಥೆಗಳಿಗೆ ಡಕೋಟಾ ಬಸ್ಸುಗಳನ್ನು ಕಲ್ಪಿಸಿದ ಕೀರ್ತಿ ಬಿ.ಜೆ.ಪಿ ಅವರಿಗೆ ಸಲ್ಲಬೇಕು‌. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆಲ್ಲೂ ಬಸ್‌ಗಳ ಸೇರ್ಪಡೆ ಆಗಿಲ್ಲ, ಕಳಪೆ ಸ್ಥಿತಿಯ ಬಸ್ಸುಗಳನ್ನು ಕಾರ್ಯಾಚರಣೆ‌ ಮಾಡುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಸಾಧುವಲ್ಲದ ಕಾರಣ, ನಿಷ್ಕ್ರಿಯಗೊಳಿಸುವ ಕಾರ್ಯ ಒಂದೆಡೆಯಾದರೆ, 1300 ಬಸ್ಸುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಕೂಡ ನಡೆದಿದೆ.

# ಸಾರಿಗೆ ಸಂಸ್ಥೆಗಳಲ್ಲಿ 5900 ಹೊಸ ಬಸ್ಸುಗಳ ಸೇರ್ಪಡೆಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ . ಕಳೆದ 1 ವರ್ಷದಲ್ಲಿ ನಾಲ್ಕು‌ ನಿಗಮಗಳಲ್ಲಿ 3000 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ.

# ಡೀಸೆಲ್ ತೈಲದ ಬೆಲೆ ಹೆಚ್ಚಳದಿಂದ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ ರೂ. 473.28 ಕೋಟಿ ಮತ್ತು ಸಿಬ್ಬಂದಿ ವೆಚ್ಚದಲ್ಲಿ ಹೆಚ್ಚಳ ರೂ.556.59 ಕೋಟಿ ಸೇರಿ ಒಟ್ಟಾರೆ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ ಹೆಚ್ಚಳವಾಗಿರುವ ಅಂದಾಜು ಮೊತ್ತ ರೂ.1029.87 ಕೋಟಿಗಳಾಗುತ್ತದೆ.

# ತೈಲದ ಪ್ರತಿ ಲೀಟರ್‌ಗೆ ಸರಾಸರಿ ರೂ 62.44 ರಷ್ಟು ಇದ್ದಾಗ 2020 ರಲ್ಲಿ ಬಸ್ ದರ ಏರಿಕೆಯಾಗಿತ್ತು. ಹಾಲಿ ಕರಾರಸಾ ನಿಗಮಕ್ಕೆ ರೂ 85.80 ಡೀಸೆಲ್ ದರವಿದೆ. ಬಿ.ಎಂ.ಟಿ.ಸಿಯಲ್ಲಿ 2015 ರಲ್ಲಿ ಬಸ್ ದರ ಏರಿಕೆಯಾಗಿದ್ದಾಗ ಡೀಸೆಲ್ ದರ ರೂ.53.35 ಆಗಿತ್ತು. ಡೀಸೆಲ್ ದರ ಏರಿಸಿದ ಕೀರ್ತಿ‌ ಕೂಡ ಬಿ.ಜೆ.ಪಿ ಅವರಿಗೆ ಸಲ್ಲಬೇಕು.

# 2023 ರಲ್ಲಿ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಿದ ಬಿ.ಜೆ.ಪಿ ಸರ್ಕಾರ ವೇತನ ಹೆಚ್ಚಳ ಪಾವತಿಗಾಗಿ ಅಥವಾ ಬಾಕಿ ವೇತನ ಪಾವತಿಸಲು ಯಾವುದೇ ಅನುದಾನವನ್ನು ನೀಡದೆ ಸಿಬ್ಬಂದಿಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿ ಹೋಗಿದ್ದಾರೆ. ವೇತನ ಪಾವತಿಗೂ ಹಣವಿಲ್ಲದೆ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ.

# ನಾವು ಎಂದು ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಹೇಳಿಲ್ಲ, ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದಷ್ಟೇ ಹೇಳಿರುವುದು.

ಕೆ‌ ಎಸ್ ಆರ್ ಟಿ ಸಿ ಆದಾಯ:
2020 Rs.1569 Cr.
2021 Rs.2037 Cr
2022 Rs 3349 Cr.
2023 Rs 3930 Cr.

ಲಾಭಕ್ಕೂ ಆದಾಯ ಗಳಿಕೆಗೂ ವ್ಯತ್ಯಾಸವೇ ತಿಳಿಯದ ಅಧಮರು ಬಿ.ಜೆ.ಪಿ ಅವರು.

ಸಾರಿಗೆ ಸಂಸ್ಥೆಗಳನ್ನು ರು.5900 ಕೋಟಿ ನಷ್ಟದಲ್ಲಿಟ್ಟು ಹೋಗಿರುವ ಬಿ.ಜೆ ಪಿ ಯವರಿಗೆ , ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂಬುದೇ ತಿಳಿಯದಾಗಿದೆ. ಇವರಿಗೆ ಆತ್ಮ ಸಾಕ್ಷಿಯೇ ಇಲ್ಲವೇ ??? ಎಂದು ಪ್ರಶ್ನಿಸಿದ್ದಾರೆ.

ಸಾಮಾನ್ಯ ಜ್ಞಾನವೇ ಇಲ್ಲದವರೊಂದಿಗೆ‌ ಪ್ರತಿದಿನ ಅವರು ಮಾಡುವ ಟ್ಟೀಟ್ ಗಳಿಗೆ ಉತ್ತರ ಕೊಡಬೇಕಾಗಿದೆಯಲ್ಲ ಎಂಬುದು ದುರಂತವೆನಿಸಿದರೂ, ನಮ್ಮ‌ ಜವಾಬ್ದಾರಿಯಿಂದ ನಾವು ನುಳುಚಿಕೊಳ್ಳುವುದಿಲ್ಲ ಎಂಬುದಕ್ಕಾಗಿ ಈ ಪ್ರತಿಕ್ರಿಯೆ ನೀಡುತ್ತಿದ್ದೇವೆ.

ಕರ್ನಾಟಕ ಸರ್ಕಾರವು ದಿನಾಂಕ 30.09.2000ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್… https://t.co/ODPVKgHZcy

— Ramalinga Reddy (@RLR_BTM) August 21, 2024

ಬಿಜೆಪಿಯಿಂದ ಕೇಳಿದ ಪ್ರಶ್ನೆ ಏನು.?

ಲಾಭದಲ್ಲಿ ಇದೆಯಂತೆ ಬಿಎಂಟಿಸಿ, ಆದರು ದರ ಏರಿಕೆ ಏಕೆ? ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುತ್ತಿದೆ ಕಾಂಗ್ರೆಸ್ ಎಂಬುದಾಗಿ ತಲೆ ಬರಹದೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಪೋಸ್ಟ್ ಮಾಡಲಾಗಿತ್ತು.

ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಪತನಗೊಳ್ಳಲು ಸಿದ್ಧವಾಗಿರುವ ಕಾಂಗ್ರೆಸ್ ಬಿಎಂಟಿಸಿ ಲಾಭದಲ್ಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತೇಪೆ ಹಚ್ಚಿಕೊಳ್ಳಲು ಯತ್ನಿಸುತ್ತಿದೆ.

ಕಾಂಗ್ರೆಸ್‌ ಸುಳ್ಳು ಸುದ್ದಿಯ ಕೀಳುಮಟ್ಟದ ರಾಜಕೀಯ ಪ್ರಚಾರ ನೋಡಿ ಜನರು ಸಾಮಾಜಿಕ ಜಾಲತಾಣದಲ್ಲಿ ನಗಾಡುತ್ತಿದ್ದಾರೆ. ಸಾರಿಗೆ ಇಲಾಖೆಗಳು ನಿಜಕ್ಕೂ ಲಾಭದಲ್ಲೇ ಇದ್ದರೆ, ಮಿನಿಸ್ಟರ್‌ ರಾಮಲಿಂಗ ರೆಡ್ಡಿ ಅವರೇ, ಜನ ಸಾಮಾನ್ಯರ ಮೇಲೆ ಬಸ್‌ ಪ್ರಯಾಣ ದರ ಏರಿಕೆ ಏಕೆ? ಸಾಮಾನ್ಯ ಬಸ್‌ಗಳಿಂದಲೇ ಇಷ್ಟೊಂದು ಲಾಭ ಬರುತ್ತಿದೆ ಎಂದಾದರೆ, ಎಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಸೌಲಭ್ಯ ಕೊಡುಬಹುದು ಅಲ್ಲವೇ?

ರಾಜ್ಯದಲ್ಲಿರುವ ಪುರಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ. ಸಾರಿಗೆ ನಿಗಮಗಳೆಲ್ಲವೂ ಭರಪೂರ ಲಾಭ ಗಳಿಸಲಿ. ಶಾಲಾ ಕಾಲೇಜು ಮಕ್ಕಳು ಓಡಾಡುವುದಕ್ಕೆ ಸರಿಯಾದ ಬಸ್‌ ಬಿಡುವ ಯೋಗ್ಯತೆ ಇಲ್ಲದ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಗುಳ್ಳೆ ನರಿ ಬುದ್ಧಿ ತೋರಿಸುತ್ತಿದೆ ಎಂದಿತ್ತು. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸಿದ್ದಾರೆ.

ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಪತನಗೊಳ್ಳಲು ಸಿದ್ಧವಾಗಿರುವ @INCKarnataka ಬಿಎಂಟಿಸಿ ಲಾಭದಲ್ಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತೇಪೆ ಹಚ್ಚಿಕೊಳ್ಳಲು ಯತ್ನಿಸುತ್ತಿದೆ.

ಕಾಂಗ್ರೆಸ್‌ ಸುಳ್ಳು ಸುದ್ದಿಯ ಕೀಳುಮಟ್ಟದ ರಾಜಕೀಯ ಪ್ರಚಾರ ನೋಡಿ ಜನರು ಸಾಮಾಜಿಕ ಜಾಲತಾಣದಲ್ಲಿ ನಗಾಡುತ್ತಿದ್ದಾರೆ.

ಸಾರಿಗೆ ಇಲಾಖೆಗಳು ನಿಜಕ್ಕೂ… pic.twitter.com/o41oyHZKPT

— BJP Karnataka (@BJP4Karnataka) August 21, 2024

Share. Facebook Twitter LinkedIn WhatsApp Email

Related Posts

ಮದ್ದೂರು ತಾಲ್ಲೂಕಲ್ಲಿ ‘ಅಕ್ರಮ ಮರಳು ಗಣಿಗಾರಿಕೆ’ಗೆ ಕೆಲ ಅಧಿಕಾರಿಗಳೇ ಸಾಥ್: ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ

31/07/2025 9:31 PM2 Mins Read

ಬೆಂಗಳೂರು ಏರ್ಪೋರ್ಟ್ ಮೆಟ್ರೋ ಮಾರ್ಗದ ಪ್ರಗತಿಯನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪರಿಶೀಲನೆ

31/07/2025 9:21 PM1 Min Read

ಮಂಡ್ಯದ ಮದ್ದೂರಲ್ಲಿ 12ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ, ಗಾಯ

31/07/2025 9:09 PM1 Min Read
Recent News

ಪ್ರತಿದಿನ ಬೆಳಗ್ಗೆ ‘ಜೀರಿಗೆ ನೀರು’ ಹೀಗೆ ಕುಡಿಯಿರಿ, ಇದು ನಿಮ್ಮ ದೇಹಕ್ಕೆ ಆರೋಗ್ಯ ಮಂತ್ರದಂತೆ ಕೆಲಸ ಮಾಡುತ್ತೆ!

31/07/2025 10:06 PM

ಈ ತರಕಾರಿಯಿಂದ ಆ ಎಲ್ಲಾ ಸಮಸ್ಯೆಗಳು ದೂರ, ವಾರಕ್ಕೊಮ್ಮೆ ತಿಂದ್ರು ಮಾಂತ್ರಿಕ ಪ್ರಯೋಜನ

31/07/2025 9:46 PM

ಮದ್ದೂರು ತಾಲ್ಲೂಕಲ್ಲಿ ‘ಅಕ್ರಮ ಮರಳು ಗಣಿಗಾರಿಕೆ’ಗೆ ಕೆಲ ಅಧಿಕಾರಿಗಳೇ ಸಾಥ್: ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ

31/07/2025 9:31 PM

ಕಪ್ಪು ಕಲೆಗಳಿರುವ ಈರುಳ್ಳಿ ತಿಂದ್ರೆ ಹೀಗಾಗುತ್ತೆ.! ನೀವು ಇದನ್ನ ತಿಳಿದುಕೊಳ್ಳಲೇಬೇಕು

31/07/2025 9:22 PM
State News
KARNATAKA

ಮದ್ದೂರು ತಾಲ್ಲೂಕಲ್ಲಿ ‘ಅಕ್ರಮ ಮರಳು ಗಣಿಗಾರಿಕೆ’ಗೆ ಕೆಲ ಅಧಿಕಾರಿಗಳೇ ಸಾಥ್: ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ

By kannadanewsnow0931/07/2025 9:31 PM KARNATAKA 2 Mins Read

ಮಂಡ್ಯ : ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶಿಂಷಾ ನದಿ ಪಾತ್ರದಲ್ಲಿ ದಿನನಿತ್ಯ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ…

ಬೆಂಗಳೂರು ಏರ್ಪೋರ್ಟ್ ಮೆಟ್ರೋ ಮಾರ್ಗದ ಪ್ರಗತಿಯನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪರಿಶೀಲನೆ

31/07/2025 9:21 PM

ಮಂಡ್ಯದ ಮದ್ದೂರಲ್ಲಿ 12ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ, ಗಾಯ

31/07/2025 9:09 PM

BIG NEWS: ‘ಧರ್ಮಸ್ಥಳ ಕೇಸ್’ಗೆ ಸ್ಪೋಟಕ ಟ್ವಿಸ್ಟ್: ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ರಹಸ್ಯ ಬಯಲು ಮಾಡಿದ ‘SIT’

31/07/2025 9:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.