Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

18/05/2025 9:32 AM

ನವೆಂಬರ್ ನಲ್ಲಿ IPL ಮಾದರಿಯ ಇಂಡಿಯನ್ ಶೂಟಿಂಗ್ ಲೀಗ್: NRAI

18/05/2025 9:29 AM

BIG NEWS : ಮೆಕ್ಸಿಕನ್ ನೌಕಾಪಡೆಯ ಹಡಗು ನ್ಯೂಯಾರ್ಕ್‌ನ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

18/05/2025 9:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇನ್ಮುಂದೆ ‘ಸಾರ್ವಜನಿಕ ವಾಹನ’ಗಳಿಗೆ ಟ್ರ್ಯಾಕಿಂಗ್ ಸಾಧನ ಮತ್ತು ತುರ್ತು ಬಟನ್ ‘ಕಡ್ಡಾಯ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ…!
KARNATAKA

ಇನ್ಮುಂದೆ ‘ಸಾರ್ವಜನಿಕ ವಾಹನ’ಗಳಿಗೆ ಟ್ರ್ಯಾಕಿಂಗ್ ಸಾಧನ ಮತ್ತು ತುರ್ತು ಬಟನ್ ‘ಕಡ್ಡಾಯ’: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ…!

By kannadanewsnow0708/08/2024 6:27 PM
vidhana soudha
vidhana soudha

ಬೆಂಗಳೂರು: ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 125(ಹೆಚ್) ರಲ್ಲಿನ ಅವಕಾಶಗಳನ್ನು ಬಳಸಿಕೊಂಡು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯ, ನವದೆಹಲಿ ರವರು ಹೊರಡಿಸಿರುವ ಅಧಿಸೂಚನೆ ಹಾಗೂ ಮಾರ್ಗಸೂಚಿಗಳ ಮೇರೆಗೆ, ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳು ಅಂದರೆ ಮಜಲು ವಾಹನ, ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮಾಕ್ಸಿ ಕ್ಯಾಬ್, ಒಪ್ಪಂದ ವಾಹನ, ಮೋಟಾರ್ ಕ್ಯಾಬ್ ಹಾಗೂ ರಾಷ್ಟ್ರೀಯ ರಹದಾರಿ ಹೊಂದಿದ ಸರಕು Vehicle Location Tracking Device & Emergency Panic Button ಆಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.

ವಾಹನವು ಹಾದುಹೋಗುವ ಮಾರ್ಗವನ್ನು ಪರಿಶೀಲಿಸಿ ನಕ್ಷೆಯಲ್ಲಿ ವಾಹನದ ಸ್ಥಳವನ್ನು ಗುರುತಿಸಲು ಸಹಾಯಕವಾಗುತ್ತದೆ. ವರ್ಚುವಲ್ ಜಿಯೋ-ಫೆನ್ಸಿಂಗ್ ಮೂಲಕ ಮಜಲು ವಾಹನಗಳು ಹಾದು ಹೋಗುವ ಅನಧಿಕೃತ ಮಾರ್ಗವನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಪಘಾತ ಸ್ಥಳ ಪತ್ತೆ ಮಾಡಲು ಸಹಾಯಕವಾಗುತ್ತದೆ.

ನಿಖರವಾದ ಸ್ಥಳ ಮತ್ತು ವೇಗದ ವಿವರಗಳನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ. ಮಹಿಳೆಯರು ಮತ್ತು ಮಕ್ಕಳು ಅಥವಾ ಇತರೆ ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ಪ್ಯಾನಿಕ್ ಬಟನ್ ಅನ್ನು ಉಪಯೋಗಿಸಿದಲ್ಲಿ ಅದರ ಸಂಕೇತವು ನಿಯಂತ್ರಣ ಕೊಠಡಿಗೆ ರವಾನೆಯಾಗುತ್ತದೆ. ಸದರಿ ಸಂಕೇತವನ್ನು ಪೆÇಲೀಸ್ ಇಲಾಖೆಯ ನಿಯಂತ್ರಣ ಕೊಠಡಿಗೆ ಕೂಡಲೇ ರವಾನಿಸಲಾಗುತ್ತದೆ. ಈ ಮೂಲಕ ಸಂಭವನೀಯ ಅವಘಡಗಳನ್ನು ತಪ್ಪಿಸಲು ಸಹಾಯಕ ವಾಗುತ್ತದೆ. ವಾಹನದ ವಿವರಗಳನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ವಾಹನ ಮಾಲೀಕರಿಗೆ ಅನುಕೂಲ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ರೂ.2035.90 ಲಕ್ಷಗಳ ವೆಚ್ಚದಲ್ಲಿ ಕೈಗೊಳ್ಳಲು ಮತ್ತು ಅದರಲ್ಲಿ ಅನುಕ್ರಮವಾಗಿ 60:40ರ ಅನುಪಾತದಲ್ಲಿ ರಾಜ್ಯ ಸರ್ಕಾರದ ಪಾಲು ರೂ.814.36 ಲಕ್ಷಗಳೆಂದು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ರಾಜ್ಯ ಸರ್ಕಾರಕ್ಕೆ, ಮೊದಲ ಹಂತದಲ್ಲಿ ಒಟ್ಟು ರೂ.5.792 ಕೋಟಿಗಳನ್ನು ಒದಗಿಸಲಾಗಿರುತ್ತದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಾಹನ ಪ್ರಮಾಣೀಕರಣ ಕೇಂದ್ರಗಳಾದ CIRT, ARAI ಹಾಗೂ 1-CAT ಸಂಸ್ಥೆಗಳಿಂದ ಅಂಗೀಕೃತಗೊಂಡ Vehicle Location Tracking (VIT) Device ತಯಾರಕರುಗಳನ್ನು ಇ-ಪೆÇ್ರಕ್ಯೂಮೆಂಟ್ ಮೂಲಕ ಟೆಂಡರ್ ಕರೆದು ಆಯ್ಕೆ ಮಾಡಲಾಗಿದೆ.

Vehicle Location Tracking (VLT) Devices with Emergency Panic Buttons :
12 ಕಂಪನಿಗಳನ್ನು ಅರ್ಹ ಎಂದು ನಿರ್ಣಯಿಸಿ ಕಾರ್ಯಾದೇಶ ನೀಡಲಾಗಿದೆ. ವಾಹನ ಮಾಲೀಕರುಗಳಿಗೆ ಅರ್ಹತಾ ಪತ್ರ ನವೀಕರಣ ಸಮಯದಲ್ಲಿ ವಾಹನಗಳಿಗೆ ವಿಎಲ್‍ಟಿ.ಡಿ ಸಾಧನ ಗಳನ್ನು ಅಳವಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ. ದಿನಾಂಕ: 10-09-2024 ರವರೆಗೆ ಸದರಿ ಸಾಧನಗಳನ್ನು ಅಳವಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದ್ದು, ತದನಂತರ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸಾರ್ವಜನಿಕ ಸೇವಾ ವಾಹನಗಳ ಮಾಲೀಕರು ಕ್ರಮ ಕೈಗೊಳ್ಳತಕ್ಕದ್ದು.

ರಾಜ್ಯ ಸರ್ಕಾರವು ವಿಎಲ್‍ಟಿ.ಡಿ ಸಾಧನಗಳ ದರಗಳನ್ನು ನಿಗದಿಪಡಿಸುವುದಿಲ್ಲ. ಬದಲಾಗಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಆಯ್ಕೆಯಾದ ಸಂಸ್ಥೆಗಳು ಸ್ಪರ್ಧಾತ್ಮಕ ದರ ನಿಗಧಿಗೊಳಿಸುತ್ತವೆ. ಹಾಗಾಗಿ, ವಾಹನ ಮಾಲೀಕರು ಅವರು ಇಚ್ಛಿಸುವ ಸಂಸ್ಥೆಯ ಮೂಲಕ ಕನಿಷ್ಠ ದರವನ್ನು ಗಮನಿಸಿಕೊಂಡು ಸಾಧನ ಖರೀದಿಸಿ ಅಳವಡಿಸಿಕೊಳ್ಳಬಹುದಾಗಿದೆ.

ಯೋಜನೆಯಿಂದ ಕರ್ನಾಟಕ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಬೃಹತ್ ಮಟ್ಟದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಸಾರ್ವಜನಿಕ ಪ್ರಯಾಣಿಕರು ಅದರಲ್ಲಿಯೂ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಸದರಿ ಯೋಜನೆಯ ಭಾಗವಾಗಿ ಇಲಾಖೆಯು Command and Control Centre ಅನ್ನು ಸಾರಿಗೆ ಆಯುಕ್ತರ ಕಛೇರಿಯಲ್ಲಿ ಸ್ಥಾಪಿಸಿದ್ದು, ಈ ಕೇಂದ್ರವು ದಿನಾಂಕ: 19-06-2024 ರಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರಿಂದ ಉದ್ಘಾಟನೆಗೊಂಡು, ಲೋಕಾರ್ಪಣೆಯಾಗಿ 24×7 ನಿರಂತರವಾಗಿ ಕಾರ್ಯ ನಿರ್ವಹಿಸುತ್ತಲಿದೆ

ಸಾರ್ವಜನಿಕರು ಅದರಲ್ಲೂ ಮಹಿಳಾ ಮತ್ತು ಮಕ್ಕಳ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಯ ವತಿಯಿಂದ ನೀಡಲಾಗಿದೆ ಎಂದು ಬೆಂಗಳೂರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tracking device and emergency button mandatory for public vehicles from now on: State government ಇನ್ಮುಂದೆ ಸಾರ್ವಜನಿಕ ವಾಹನಗಳಿಗೆ ಟ್ರ್ಯಾಕಿಂಗ್ ಸಾಧನ ಮತ್ತು ತುರ್ತು ಬಟನ್ ಕಡ್ಡಾಯ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ...!
Share. Facebook Twitter LinkedIn WhatsApp Email

Related Posts

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

18/05/2025 9:32 AM3 Mins Read

BIG NEWS : ರಾಜ್ಯಾದ್ಯಂತ ಮೇ.29 ರಿಂದ ಶಾಲೆಗಳು ಪುನರಾರಂಭ : ಮೊದಲ ದಿನವೇ ಪುಸ್ತಕ, ಸಮವಸ್ತ್ರ ವಿತರಣೆ.!

18/05/2025 9:18 AM1 Min Read

ALERT : `ಹೃದಯಾಘಾತ’ಕ್ಕೆ ಮುನ್ನ ದೇಹದ ಈ ಭಾಗಗಳಲ್ಲಿ ನೋವು ಕಾಣಿಸಲಿದೆ : ಇದನ್ನು ನಿರ್ಲಕ್ಷಿಸಬೇಡಿ.!

18/05/2025 8:15 AM2 Mins Read
Recent News

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

18/05/2025 9:32 AM

ನವೆಂಬರ್ ನಲ್ಲಿ IPL ಮಾದರಿಯ ಇಂಡಿಯನ್ ಶೂಟಿಂಗ್ ಲೀಗ್: NRAI

18/05/2025 9:29 AM

BIG NEWS : ಮೆಕ್ಸಿಕನ್ ನೌಕಾಪಡೆಯ ಹಡಗು ನ್ಯೂಯಾರ್ಕ್‌ನ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

18/05/2025 9:27 AM

BIG NEWS : ರಾಜ್ಯಾದ್ಯಂತ ಮೇ.29 ರಿಂದ ಶಾಲೆಗಳು ಪುನರಾರಂಭ : ಮೊದಲ ದಿನವೇ ಪುಸ್ತಕ, ಸಮವಸ್ತ್ರ ವಿತರಣೆ.!

18/05/2025 9:18 AM
State News
KARNATAKA

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ

By kannadanewsnow8918/05/2025 9:32 AM KARNATAKA 3 Mins Read

ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಹೀಗೆ ಭೂ ವರಾಹ ಸ್ವಾಮಿ ಪೂಜಿಸಿ, ಮುಕ್ತಾಯ ಗ್ಯಾರಂಟಿ ಆಧ್ಯಾತ್ಮಿಕ ಚಿಂತಕರು…

BIG NEWS : ರಾಜ್ಯಾದ್ಯಂತ ಮೇ.29 ರಿಂದ ಶಾಲೆಗಳು ಪುನರಾರಂಭ : ಮೊದಲ ದಿನವೇ ಪುಸ್ತಕ, ಸಮವಸ್ತ್ರ ವಿತರಣೆ.!

18/05/2025 9:18 AM

ALERT : `ಹೃದಯಾಘಾತ’ಕ್ಕೆ ಮುನ್ನ ದೇಹದ ಈ ಭಾಗಗಳಲ್ಲಿ ನೋವು ಕಾಣಿಸಲಿದೆ : ಇದನ್ನು ನಿರ್ಲಕ್ಷಿಸಬೇಡಿ.!

18/05/2025 8:15 AM

ALERT : `ಇನ್ವರ್ಟರ್’ಗೆ ನೀರು ಹಾಕುವಾಗ ಈ ತಪ್ಪು ಮಾಡಿದ್ರೆ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

18/05/2025 8:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.