Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘BSNL’ ಬೊಂಬಾಟ್ ಫ್ರೀಡಂ ಪ್ಲಾನ್ ; ಕೇವಲ 1 ರೂ.ಗೆ 30 ದಿನಗಳ ವ್ಯಾಲಿಡಿಟಿ, ದಿನಕ್ಕೆ 2GB ಡೇಟಾ ಲಭ್ಯ

03/08/2025 4:15 PM

ಸಾಂಗ್ಲಿ, ಕೊಲ್ಲಾಪುರ ಪ್ರವಾಹಕ್ಕೆ ಮಹಾರಾಷ್ಟ್ರವೇ ಕಾರಣ, ನಾವಲ್ಲ: ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ

03/08/2025 4:10 PM

BREAKING : ರಾಜ್ಯಾದ್ಯಂತ ಆ.5ರಿಂದ ಸಾರಿಗೆ ನೌಕರರ ಮುಷ್ಕರ : ಶಾಲಾ ವಾಹನ ಸೇರಿ ಖಾಸಗಿ ಬಸ್ ಬಳಕೆಗೆ ಚಿಂತನೆ

03/08/2025 4:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜನಸ್ನೇಹಿಯತ್ತ ‘KEA’: ನೈಜ ಮಾಹಿತಿಗೆ ʼವಿಕಸನ’ ಯೂಟ್ಯೂಬ್, ಎಕ್ಸ್‌ ಅಕೌಂಟ್‌ ನೋಡಿ
KARNATAKA

ಜನಸ್ನೇಹಿಯತ್ತ ‘KEA’: ನೈಜ ಮಾಹಿತಿಗೆ ʼವಿಕಸನ’ ಯೂಟ್ಯೂಬ್, ಎಕ್ಸ್‌ ಅಕೌಂಟ್‌ ನೋಡಿ

By kannadanewsnow0917/06/2025 6:04 PM

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿರುವ ಕೆಇಎ ಬಾಟ್‌ (KEA BOT) ಕೇವಲ ನೂರು ದಿನಗಳಲ್ಲಿ 5.15 ಲಕ್ಷ ಪ್ರಶ್ನೆಗಳನ್ನು ಎದುರಿಸಿ, ಅಷ್ಟಕ್ಕೂ ಉತ್ತರ ಕೊಟ್ಟು ದಾಖಲೆ ಬರೆದಿದೆ!

ವಿವಿಧ ನೇಮಕಾತಿ, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಲಿಖಿತ ಪರೀಕ್ಷೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಸುವ ಕೆಇಎ, ಅಭ್ಯರ್ಥಿಗಳು ಮತ್ತು ಪೋಷಕರಿಗೆ ಅಗತ್ಯವಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುವುದರ ಮೂಲಕ ಜನಸ್ನೇಹಿಯಾಗುತ್ತಿದೆ.

ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳು/ಪೋಷಕರ ಪ್ರಶ್ನೆಗಳಿಗೆ ಯಾರ ಮಧ್ಯಸ್ಥಿಕೆ ಇಲ್ಲದೆ ಉತ್ತರ ಪಡೆಯುವ ಈ ವ್ಯವಸ್ಥೆಯನ್ನು ಮಾರ್ಚ್‌ ತಿಂಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಅದಕ್ಕೆ ಸಮಗ್ರವಾಗಿ ಮೇಲಿಂದ ಮೇಲೆ ಮಾಹಿತಿ ಕೊಟ್ಟು, ಅದನ್ನು ತಿದ್ದಿ-ತೀಡಿ ತನ್ನಿಂತಾನೆ ಸರಿಯಾಗಿ ಉತ್ತರಿಸುವ ಹಾಗೆ ಮಾಡಲಾಯಿತು. ಬಳಿಕ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರು ಮೇ 24ರಂದು ಅದನ್ನು ಅಧಿಕೃತವಾಗಿ ಉದ್ಘಾಟಿಸಿದ್ದು, ಆ ನಂತರ ನಿತ್ಯ ಪ್ರಶ್ನೆ ಕೇಳುವವರ ಸಂಖ್ಯೆ ಏರುತ್ತಲೇ ಇದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ವಿವರಿಸುತ್ತಾರೆ.

ಆರಂಭದಲ್ಲಿ ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಿದ್ದ ಬಾಟ್‌ ಈಗ ಕನ್ನಡದಲ್ಲಿ ಕೇಳುವ ಪ್ರಶ್ನೆಗೂ ಉತ್ತರಿಸುತ್ತಿದೆ. ನಿತ್ಯವೂ ಅದಕ್ಕೆ ಮಾಹಿತಿ ನೀಡುವ ಕೆಲಸವನ್ನು ಕೆಇಎ ತಂಡ ಮಾಡುತ್ತಿದ್ದು, ಯಾರು ಏನೇ ಕೇಳಿದರೂ ಅದಕ್ಕೆ ಉತ್ತರಿಸುವ ಕೆಲಸ ಮಾಡುತ್ತಿದೆ. ಅಸಂಬಂಧ ಪ್ರಶ್ನೆ ಕೇಳಿದರೆ ಅದು ತನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದೂ ಪ್ರತಿಯುತ್ತರ ನೀಡುತ್ತದೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಈ ಸೇವೆ ಆರಂಭಿಸಿದ ಮೊದಲ ದಿನ ಕೇವಲ 102 ಆಸಕ್ತರು ಕೆಇಎ ಚಾಟ್ ಬಾಟ್ ಗೆ ಪ್ರಶ್ನೆ ಕೇಳಿ ಉತ್ತರ ಪಡೆದಿದ್ದರು. ನಂತರ ಇದು ಒಂದೇ ಸಮನೆ ಏರುತ್ತಲೇ ಇದೆ. ಜೂನ್ 11ರಂದು ಇದುವರೆಗಿನ ಅತಿ ಹೆಚ್ಚು ಅಂದರೆ 35,369 ಮಂದಿ ಪ್ರಶ್ನೆ ಕೇಳಿ ಮಾಹಿತಿ ಪಡೆದಿದ್ದಾರೆ. ಜೂನ್ 12ರಂದು 34,414, ಜೂನ್ 13ರಂದು 23,122, ಜೂನ್ 14ರಂದು 28,082 ಮಂದಿ, ಜೂನ್ 15ರಂದು 18,294 ಮತ್ತು ಜೂನ್ 16ರಂದು 16,287 ಮಂದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ ಎಂದು ಪ್ರಸನ್ನ ವಿವರಿಸಿದರು.

ಕೇಳಿರುವ ಪ್ರಶ್ನೆಗಳ ಪೈಕಿ ಕಳೆದ ವರ್ಷದ ಕಟ್‌ ಆಫ್‌ ರಾಂಕ್‌ ಕುರಿತ ಪ್ರಶ್ನೆಗಳೇ ಅಧಿಕ. ಇದುವರೆಗೂ 2.7 ಲಕ್ಷ ಮಂದಿ ಕಟ್‌ ಆಫ್‌ ರಾಂಕ್‌ ಕುರಿತು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಪ್ರವೇಶಾತಿ, ಅರ್ಹತೆ, ಪರೀಕ್ಷಾ ವೇಳಾಪಟ್ಟಿ, ಮುಖ್ಯವಾದ ದಿನಾಂಕಗಳು, ಪ್ರವೇಶಪತ್ರ ಇತ್ಯಾದಿಗಳ ಡೌನ್‌ ಲೋಡ್, ಹೊಸ ಪ್ರಕಟಣೆಗಳು, ನೇಮಕಾತಿ ಮುಂತಾದವುಗಳನ್ನು ತಿಳಿದುಕೊಳ್ಳಲು ಚಾಟ್-ಬಾಟ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಸರಿಯಾಗಿ ಉತ್ತರ ನೀಡದಿದ್ದಾಗ ಅದನ್ನು ಗಮನಿಸಿ, ಸರಿ ಮಾಡುವ ಕೆಲಸವೂ ನಮ್ಮಿಂದ ಆಗುತ್ತಿದೆ ಎಂದು ಅವರು ತಿಳಿಸಿದರು.

ಸದ್ಯ ಸಿಇಟಿ, ನೀಟ್‌ ರಾಂಕ್‌ ಪ್ರಕಟವಾಗಿದ್ದು, ಅದನ್ನು ಆಧಾರವಾಗಿ ಇಟ್ಟುಕೊಂಡು ಕಳೆದ ವರ್ಷ ಯಾವ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು ಎನ್ನುವುದನ್ನೂ ಬಾಟ್‌ ಮೂಲಕ ಸುಲಭವಾಗಿ ಪಡೆಯಬಹುದು. ಇದು ನೈಜ ಮಾಹಿತಿ ಆಗಿದ್ದು, ಅಲ್ಲಿ-ಇಲ್ಲಿ ಮಾಹಿತಿ ಪಡೆಯುವುದರ ಬದಲು, ಬಾಟ್‌ ಮೂಲಕವೇ ಅಧಿಕೃವಾಗಿ ಪಡೆಯಬಹುದು. ತಮಗೆ ಯಾವ ಕಾಲೇಜಿನಲ್ಲಿ ಸೀಟು ಸಿಗಬಹುದು ಎಂಬುದರ ಅಂದಾಜು ಇದರಿಂದ ಮಾಡಬಹುದು ಎಂದು ಪ್ರಸನ್ನ ಸಲಹೆ ನೀಡುತ್ತಾರೆ.

ಕೆಇಎ ವಿಕಸನ ಯೂಟೂಬ್‌ ಚಾನಲ್‌

ಅಭ್ಯರ್ಥಿಗಳಿಗೆ ಬೇಕಾದ ಮಾಹಿತಿ ಒದಗಿಸಲು ಚಾಟ್-ಬಾಟ್ ಜೊತೆಗೆ `ಕೆಇಎ ವಿಕಸನ’ (kea vikasana) ಎನ್ನುವ ಯೂಟ್ಯೂಬ್ ಚಾನಲ್ ಕೂಡ ಆರಂಭಿಸಲಾಗಿದೆ. ಇದರಲ್ಲಿ ಅಪ್‌ ಲೋಡ್‌ ಮಾಡುವ ವಿಡಿಯೊಗಳನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸುತ್ತಿದ್ದಾರೆ. 48 ಸಾವಿರ ಮಂದಿ ಚಂದಾದಾರರಾಗಿದ್ದಾರೆ ಎಂದು ಪ್ರಸನ್ನ ತಿಳಿಸಿದ್ದಾರೆ.

ಕೆಇಎ ಎಕ್ಸ್‌ (ಟ್ವೀಟರ್‌)

ಕ್ಷಣ ಕ್ಷಣದ ಅಪ್‌ಡೇಟ್‌ ಗಾಗಿ ಕೆಇಎ ಎಕ್ಸ್‌ (@KEA_karnataka) ಸಾಮಾಜಿಕ ಜಾಲತಾಣವೂ ಜನಪ್ರಿಯವಾಗಿದ್ದು, 35,700 ಮಂದಿ ಚಂದಾದಾರರಾಗಿದ್ದಾರೆ. ಒಟ್ಟಿನಲ್ಲಿ ತಂತ್ರಜ್ಞಾನದ ನೆರವಿನ ಮೂಲಕ ಪೋಷಕರು/ಅಭ್ಯರ್ಥಿಗಳನ್ನು ಕ್ಷಣಾರ್ಧದಲ್ಲಿ ತಲುಪುವ ಕೆಲಸವನ್ನು ಪ್ರಾಧಿಕಾರ ಅಚ್ಚುಕಟ್ಟಾಗಿ ಮಾಡುತ್ತಿದೆ. ಬೇರೆ ಯಾರೋ ಮಾತು ಕೇಳಿ ಮೋಸ ಹೋಗುವುದರ ಬದಲು, ಪ್ರಾಧಿಕಾರದ ಅಧಿಕೃತ ಸಾಮಾಜಿಕ ಜಾಲ ತಾಣಗಳನ್ನು ಫಾಲೊ ಮಾಡಿ, ತಾಜಾ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ಪ್ರಸನ್ನ ಸಲಹೆ ನೀಡಿದ್ದಾರೆ.

ಇಂದು ಒಂದೇ ದಿನ ‘7 ಏರ್ ಇಂಡಿಯಾ ವಿಮಾನ’ಗಳ ಹಾರಾಟ ರದ್ದು | Air India flights cancelled

ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?

BIG NEWS : 56 ಇಂಚಿನ ಎದೆಯಲ್ಲಿ ಮನುಷ್ಯತ್ವ, ಕರುಣೆ ಇರಬೇಕು : ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Share. Facebook Twitter LinkedIn WhatsApp Email

Related Posts

ಸಾಂಗ್ಲಿ, ಕೊಲ್ಲಾಪುರ ಪ್ರವಾಹಕ್ಕೆ ಮಹಾರಾಷ್ಟ್ರವೇ ಕಾರಣ, ನಾವಲ್ಲ: ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ

03/08/2025 4:10 PM2 Mins Read

BREAKING : ರಾಜ್ಯಾದ್ಯಂತ ಆ.5ರಿಂದ ಸಾರಿಗೆ ನೌಕರರ ಮುಷ್ಕರ : ಶಾಲಾ ವಾಹನ ಸೇರಿ ಖಾಸಗಿ ಬಸ್ ಬಳಕೆಗೆ ಚಿಂತನೆ

03/08/2025 4:00 PM1 Min Read

ರಾಹುಲ್ ಗಾಂಧಿಗೆ MLC ಛಲವಾದಿ ನಾರಾಯಣಸ್ವಾಮಿ ಪತ್ರ: ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿಯೆಂದು ಆಗ್ರಹ

03/08/2025 3:36 PM3 Mins Read
Recent News

‘BSNL’ ಬೊಂಬಾಟ್ ಫ್ರೀಡಂ ಪ್ಲಾನ್ ; ಕೇವಲ 1 ರೂ.ಗೆ 30 ದಿನಗಳ ವ್ಯಾಲಿಡಿಟಿ, ದಿನಕ್ಕೆ 2GB ಡೇಟಾ ಲಭ್ಯ

03/08/2025 4:15 PM

ಸಾಂಗ್ಲಿ, ಕೊಲ್ಲಾಪುರ ಪ್ರವಾಹಕ್ಕೆ ಮಹಾರಾಷ್ಟ್ರವೇ ಕಾರಣ, ನಾವಲ್ಲ: ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ

03/08/2025 4:10 PM

BREAKING : ರಾಜ್ಯಾದ್ಯಂತ ಆ.5ರಿಂದ ಸಾರಿಗೆ ನೌಕರರ ಮುಷ್ಕರ : ಶಾಲಾ ವಾಹನ ಸೇರಿ ಖಾಸಗಿ ಬಸ್ ಬಳಕೆಗೆ ಚಿಂತನೆ

03/08/2025 4:00 PM

‘ಪೋಸ್ಟ್ ಆಫೀಸ್’ ಸೇವೆಗಳಲ್ಲಿ ಮಹತ್ವದ ಬದಲಾವಣೆ ; ‘ಅಂಚೆ ಸೇವೆ’ ರದ್ದು, ಈಗ ‘ಸ್ಪೀಡ್ ಪೋಸ್ಟ್’ ಮಾತ್ರ ಮಾಡ್ಬೋದು!

03/08/2025 3:47 PM
State News
KARNATAKA

ಸಾಂಗ್ಲಿ, ಕೊಲ್ಲಾಪುರ ಪ್ರವಾಹಕ್ಕೆ ಮಹಾರಾಷ್ಟ್ರವೇ ಕಾರಣ, ನಾವಲ್ಲ: ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ

By kannadanewsnow0903/08/2025 4:10 PM KARNATAKA 2 Mins Read

ಬೆಂಗಳೂರು: ಮಹಾರಾಷ್ಟ್ರದ ಭಾಗದಲ್ಲಿ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಬರುವ ಸಾಂಗ್ಲಿ, ಸತಾರಾ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ…

BREAKING : ರಾಜ್ಯಾದ್ಯಂತ ಆ.5ರಿಂದ ಸಾರಿಗೆ ನೌಕರರ ಮುಷ್ಕರ : ಶಾಲಾ ವಾಹನ ಸೇರಿ ಖಾಸಗಿ ಬಸ್ ಬಳಕೆಗೆ ಚಿಂತನೆ

03/08/2025 4:00 PM

ರಾಹುಲ್ ಗಾಂಧಿಗೆ MLC ಛಲವಾದಿ ನಾರಾಯಣಸ್ವಾಮಿ ಪತ್ರ: ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿಯೆಂದು ಆಗ್ರಹ

03/08/2025 3:36 PM

WATCH VIDEO: ‘KRS ಡ್ಯಾಂ’ಗೆ ಮೊದಲು ಅಡಿಗಲ್ಲು ಹಾಕಿದ್ದೇ ‘ಟಿಪ್ಪು ಸುಲ್ತಾನ್’: ಸಚಿವ ಮಹಾದೇವಪ್ಪ ವಿವಾದಾತ್ಮಕ ಹೇಳಿಕೆ

03/08/2025 3:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.