ಬೆಂಗಳೂರು: ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರ ಮನವಿ ಮೇರೆಗೆ ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ರೈಲುಗಳ ಸಂಚಾರಕ್ಕೆ ರೈಲ್ವೇ ಇಲಾಖೆಯು ಸ್ಪಂದನೆ ನೀಡಿ, ನಿಗದಿತ ದಿನಗಳಂದು ರೈಲ್ವೇ ವ್ಯವಸ್ಥೆಯನ್ನು ಕಲ್ಪಿಸಿದೆ.
ಕೊಪ್ಪಳದಿಂದ ಅಯೋಧ್ಯಾ ಧಾಮಕ್ಕೆ ಮತ್ತು ಅಯೋಧ್ಯಾ ಧಾಮದಿಂದ ಕೊಪ್ಪಳಕ್ಕೆ ಸಂಚಾರಕ್ಕಾಗಿ ಮನವಿ ಮೇರೆಗೆ ರೈಲ್ವೆ ಇಲಾಖೆಯು ಸಾರ್ವಜನಿಕರಿಗೆ ಮತ್ತು ಭಕ್ತಾಧಿಗಳಿಗೆ ಶ್ರೀರಾಮ ದರ್ಶನ ಪಡೆಯಲು ಕೊಪ್ಪಳ ಮಾರ್ಗವಾಗಿ ರೈಲುಗಳ ಸಂಚಾರಗಳನ್ನು ಪ್ರಾರಂಭಿಸಿದ್ದು, ಈ ಸೇವೆಯ ಸದುಪಯೋಗವನ್ನು ಪ್ರಯಾಣಿಕರು, ಸಾರ್ವಜನಿಕರು, ಭಕ್ತಾಧಿಗಳು ಪಡೆದುಕೊಳ್ಳಬೇಕು ಎಂದು ಸಂಸದರು ತಿಳಿಸಿದ್ದಾರೆ.
*ರೈಲುಗಳ ವಿವರ:* ಜನವರಿ 31, ಫೆಬ್ರವರಿ 14 ಮತ್ತು 28ರ ಬುಧವಾರ ಬೆಂಗಳೂರು-ಅಯೋಧ್ಯ ರೈಲು, ಫೆ.3, 17 ಮತ್ತು ಮಾರ್ಚ್ 2ರ ಶನಿವಾರ ಅಯೋಧ್ಯಾ ಧಾಮ-ಬೆಂಗಳೂರು, ಫೆ.4 ಮತ್ತು 18ರ ಭಾನುವಾರ ಮೈಸೂರು- ಅಯೋಧ್ಯಾ ಧಾಮ, ಫೆ.7 ಮತ್ತು 21ರ ಬುಧವಾರ ಅಯೋಧ್ಯಾ ಧಾಮ-ಮೈಸೂರು, ಫೆ.7 ಮತ್ತು 21ರ ಬುಧವಾರ ತುಮಕೂರು-ಅಯೋಧ್ಯಾ ಧಾಮ, ಫೆ.10 ಮತ್ತು 24ರ ಶನಿವಾರ ಅಯೋಧ್ಯಾ ಧಾಮ-ತುಮಕೂರು, ಫೆ.11 ಮತ್ತು 25ರ ಭಾನುವಾರ ಚಿತ್ರದುರ್ಗ-ಅಯೋಧ್ಯಾ ಧಾಮ, ಫೆ.14 ಮತ್ತು 28ರ ಬುಧವಾರ ಅಯೋಧ್ಯಾ ಧಾಮ-ಚಿತ್ರದುರ್ಗ, ಫೆ.17ರ ಶನಿವಾರ ಮೈಸೂರು-ಅಯೋಧ್ಯಾ ಧಾಮ, ಫೆ.20ರ ಮಂಗಳವಾರ ಅಯೋಧ್ಯಾ ಧಾಮ-ಮೈಸೂರು, ಫೆ.17ರ ಶನಿವಾರ ಬೆಳಗಾವಿ-ಅಯೋಧ್ಯಾ ಧಾಮ, ಫೆ.20ರ ಮಂಗಳವಾರ ಅಯೋಧ್ಯಾ ಧಾಮ-ಬೆಳಗಾವಿ ರೈಲುಗಳು ಕೊಪ್ಪಳ ಮಾರ್ಗವಾಗಿ ಸಂಚರಿಸಲಿವೆ ಎಂದು ಕೊಪ್ಪಳ ಲೋಕಸಭಾ ಸದಸ್ಯರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಇತರ ರೈಲ್ವೆಗಳ ವಿವರ ಹೀಗಿದೆ:
ನೈಋತ್ಯ ರೈಲ್ವೆಯು ಕರ್ನಾಟಕ ಮತ್ತು ಗೋವಾವನ್ನು ಅಯೋಧ್ಯೆ ಧಾಮದೊಂದಿಗೆ ಸಂಪರ್ಕಿಸಲು ಆಸ್ಥಾ ಸ್ಪೆಷಲ್ ಎಕ್ಸ್ಪ್ರೆಸ್ ಎಂಬ ಏಳು ಜೋಡಿ ವಿಶೇಷ ರೈಲುಗಳನ್ನು ಓಡಿಸಲಿದೆ.
ಮೈಸೂರಿನಿಂದ (ಎಸ್ಎಂವಿಟಿ ಬೆಂಗಳೂರು ಮೂಲಕ) ಎರಡು ರೈಲುಗಳು, ಎಸ್ಎಂವಿಟಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ಬೆಳಗಾವಿ (ಧಾರವಾಡ ಮತ್ತು ಹುಬ್ಬಳ್ಳಿ ಮೂಲಕ) ಮತ್ತು ವಾಸ್ಕೋ ಡ ಗಾಮಾ (ರತ್ನಗಿರಿ ಮತ್ತು ಪನ್ವೇಲ್ ಮೂಲಕ) ನಿಂದ ತಲಾ ಒಂದು ರೈಲುಗಳು ಹೊರಡಲಿವೆ. ಅಂದ ಹಾಗೇ ಪ್ರಯಾಣಿಕರು ಭಾರತೀಯ ರೈಲು ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಅಪ್ಲಿಕೇಶನ್ ಅಥವಾ ವೆಬ್ಸೈಟ್) ಮೂಲಕ ಟಿಕೆಟ್ ಕಾಯ್ದಿರಿಸಬೇಕು. ಕೌಂಟರ್ ನಲ್ಲಿ ಟಿಕೆಟ್ ನೀಡುವುದಿಲ್ಲ
ರೈಲು ಸಂಖ್ಯೆ 06201 : ಇದು ಬುಧವಾರ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಶುಕ್ರವಾರ ಅಯೋಧ್ಯೆ ಧಾಮವನ್ನು ತಲುಪಲಿದೆ. ಪ್ರತಿ ಶನಿವಾರ ಅಯೋಧ್ಯೆ ಧಾಮದಿಂದ ಹೊರಟು ಮಂಗಳವಾರ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಇದು ಜನವರಿ 31, ಫೆಬ್ರವರಿ 14 ಮತ್ತು 28 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಚಲಿಸಲಿದೆ. ಫೆಬ್ರವರಿ 3, 17 ಮತ್ತು ಮಾರ್ಚ್ 2 ರಂದು ಅಯೋಧ್ಯೆಯಿಂದ ಹೊರಡಲಿದೆ. ಈ ರೈಲು 22 ಬೋಗಿಗಳನ್ನು ಹೊಂದಿದ್ದು, 2,802 ಕಿ.ಮೀ ದೂರವನ್ನು ಏಕಮುಖವಾಗಿ ಕ್ರಮಿಸಲಿದೆ.
ಕರ್ನಾಟಕದಲ್ಲಿ ತುಮಕೂರು, ಅರಸೀಕೆರೆ, ಕಡೂರು, ಬೀರೂರು, ಚಿತ್ರದುರ್ಗ, ತೋರಣಗಲ್, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ರೈಲು ನಿಲುಗಡೆಗೊಳ್ಳಲಿದೆ.
ರೈಲು ಸಂಖ್ಯೆ 06202 : ಇದು ಭಾನುವಾರ ಮೈಸೂರಿನಿಂದ ಹೊರಟು ಮಂಗಳವಾರ ಅಯೋಧ್ಯೆ ಧಾಮವನ್ನು ತಲುಪಲಿದೆ. ಪ್ರತಿ ಬುಧವಾರ ಅಯೋಧ್ಯೆ ಧಾಮದಿಂದ ಹೊರಟು ಶನಿವಾರ ಮೈಸೂರು ತಲುಪಲಿದೆ.
ಫೆಬ್ರವರಿ 2 ಮತ್ತು 18 ರಂದು ಮೈಸೂರಿನಿಂದ ಮತ್ತು ಫೆಬ್ರವರಿ 7 ಮತ್ತು 21 ರಂದು ಅಯೋಧ್ಯೆ ಧಾಮದಿಂದ ರಥಯಾತ್ರೆ ನಡೆಯಲಿದೆ. ಈ ರೈಲು 22 ಬೋಗಿಗಳನ್ನು ಹೊಂದಿದ್ದು, 2,952 ಕಿ.ಮೀ ದೂರವನ್ನು ಏಕಮುಖವಾಗಿ ಕ್ರಮಿಸಲಿದೆ. ಕರ್ನಾಟಕದಲ್ಲಿ ಎಸ್ ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಬೀರೂರು,