ತಿರುಮಲ: ತಿರುಮಲ ಗಿರಿ ನಿವಾಸಿ, ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಂತಸದ ಸುದ್ದಿ ಎನ್ನುವಂತೆ ಅನ್ನ ಪ್ರಸಾದಕ್ಕೆ ಮತ್ತೊಂದು ಹೊಸ ಖಾದ್ಯ ಸೇರ್ಪಡೆಗೊಳಿಸಲಾಗಿದೆ. ಈಗ ಅನ್ನ ಪ್ರಸಾದದ ಮೆನುವಿನಲ್ಲಿ ಮಸಾಲೆ ವಡೆ ಕೂಡ ಸೇರ್ಪಡೆಯಾಗಿದೆ.
ಈ ಬಗ್ಗೆ ಗುರುವಾರದಂದು ಟಿಟಿಡಿಯಿಂದ ಅನ್ನ ಪ್ರಸಾದ ಭವನದಲ್ಲಿ ಮೆನು ರಿಲೀಸ್ ಮಾಡಲಾಗಿದೆ. ತಿರುಮಲ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಭವನದಲ್ಲಿ ಭಕ್ತರಿಗೆ ಅನ್ನ ಪ್ರಸಾದದಲ್ಲಿ ಮಸಾಲೆ ವಡೆಯನ್ನು ಬಡಿಸುವುದಕ್ಕೆ ಅಧ್ಯಕ್ಷ ಬಿ ಆರ್ ನಾಯ್ಡು ಚಾಲನೆ ನೀಡಿದರು.
ಒಟ್ಟಾರೆ ತಿರುಮಲ ತಿರುಪತಿ ಅನ್ನ ಪ್ರಸಾದದಲ್ಲಿ ದಕ್ಷಿಣ ಭಾರತದ ಖಾತ್ಯವನ್ನು ಸೇರಿಸಲಾಗಿದೆ. ಈ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು ಜೊತೆಗೆ ಚರ್ಚಿಸಿ ಕ್ರಮ ವಹಿಸಲಾಗಿದ್ದು, ಅವರು ಅನುಮೋದಿಸಿದ ನಂತ್ರ, ಭಕ್ತರಿಗೆ ಅನ್ನ ಪ್ರಸಾದದ ಮೆನುವಿನಲ್ಲಿ ವಡೆಯನ್ನು ಸೇರಿಸಲಾಗಿದೆ.
ರಾಜ್ಯದಲ್ಲಿ ಗಲಭೆ ಸೃಷ್ಟಿಸಿದರೇ ಸ್ವಯಂಪ್ರೇರಿತ ಕೇಸ್ ದಾಖಲು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ