ಚಿಕ್ಕಮಗಳೂರು: ತಿರುಪತಿ-ಚಿಕ್ಕಮಗಳೂರು ನಡುವೆ ವಾರದ ಹೊಸ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.ರೈಲು ಸಂಖ್ಯೆ 17423 ಪ್ರತಿ ಗುರುವಾರ ರಾತ್ರಿ 9 ಗಂಟೆಗೆ ತಿರುಪತಿಯಿಂದ ಹೊರಟು ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಚಿಕ್ಕಮಗಳೂರು ತಲುಪಲಿದೆ.
ರೈಲು ಸಂಖ್ಯೆ 17424 ಪ್ರತಿ ಶುಕ್ರವಾರ ಸಂಜೆ 5.30ಕ್ಕೆ ಚಿಕ್ಕಮಗಳೂರಿನಿಂದ ಹೊರಟು ಶನಿವಾರ ಬೆಳಗ್ಗೆ 7.40ಕ್ಕೆ ತಿರುಪತಿ ತಲುಪಲಿದೆ. ರೈಲು ಸೇವೆಯ ಪ್ರಾರಂಭವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಈ ರೈಲು ಸಖರಾಯಪಟ್ಟಣ, ಬಿಸಲೆಹಳ್ಳಿ, ಕಡೂರು, ಬೀರೂರು, ದೇವನೂರು, ಅರಸೀಕೆರೆ, ತಿಪಟೂರು, ತುಮಕೂರು, ಚಿಕ್ಕಬಾಣಾವರ, ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ಬೆಂಗಳೂರು, ಕೆ.ಆರ್.ಪುರ, ವೈಟ್ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಜೋಲಾರ್ಪೇಟೆ, ಕಟಪಾಡಿ, ಚಿತ್ತೂರು, ಪಾಕಳದಲ್ಲಿ ನಿಲುಗಡೆಗೊಳ್ಳಲಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ತಿರುಪತಿ-ಚಿಕ್ಕಮಗಳೂರು ನಡುವೆ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಿದ್ದರು