Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ‘EPFO’ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಾಂತರ ವಂಚನೆ : ಆರೋಪಿಗಳಿಗೆ ಪೊಲೀಸರು ಶಾಕ್!

05/11/2025 12:00 PM

ಇದುವರೆಗಿನ ಅತ್ಯಂತ ದೊಡ್ಡ, ಅತ್ಯಂತ ದೂರದ ಕಪ್ಪು ಕುಳಿ ಜ್ವಾಲೆಯನ್ನು ಪತ್ತೆ ಮಾಡಿದ ಖಗೋಳಶಾಸ್ತ್ರಜ್ಞರು

05/11/2025 11:55 AM

SHOCKING : ನಡು ರಸ್ತೆಯಲ್ಲೇ ಬೈಕ್ ನಲ್ಲಿ ಜೋಡಿಯಿಂದ ರೋಮ್ಯಾನ್ಸ್ : ವಿಡಿಯೋ ವೈರಲ್ | WATCH VIDEO

05/11/2025 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!
KARNATAKA

ಇದು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ಶಾಲಾ ಮಕ್ಕಳು ಕೆಸರಲ್ಲಿ ನಡೆಯುವ ಮನಕಲಕುವ ಕಥೆ!

By kannadanewsnow0915/06/2025 5:08 PM

ಉತ್ತರ ಕನ್ನಡ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಶಿಕ್ಷಣಕ್ಕಾಗಿ ಕೆಸರಲ್ಲಿ ನಡಿಗೆಯ ಮನಕಲಕುವಂತ ಮಕ್ಕಳ ಕತೆಯೊಂದಿದೆ. ದಿನಂಪ್ರತಿ ಆ ಶಾಲಾ ಮಕ್ಕಳು ತೆರಳೋದಕನ್ನು ಕಂಡರೇ ಎಂತವರಿಗೂ ಇದೇನಪ್ಪ ಈ ಕಾಲದಲ್ಲೂ ಹೀಗೊಂದು ರಸ್ತೆ ಇದ್ಯಾ ಅನ್ನಿಸುತ್ತದೆ. ಅದು ಎಲ್ಲಿ? ಏನು ಎನ್ನುವ ಬಗ್ಗೆ ಕೇಬಲ್ ನಾಗೇಶ್ ಎನ್ನುವವರ ವರದಿಯನ್ನು ಒಳಗೊಂಡ ಪತ್ರಿಕೆಯ ಸುದ್ದಿಯನ್ನು ಈ ಕೆಳಗೆ ಯಥಾವತ್ತಾಗಿ ಪ್ರಕಟಿಸಲಾಗಿದೆ ಓದಿ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡ ಯಲವಳ್ಳಿ ಶಾಲೆಗೆ ಸಣ್ಣ ಯಲವಳ್ಳಿ ಗ್ರಾಮದ ಮಕ್ಕಳು ವಿದ್ಯೆ ಕಲಿಯಲು ಹೋಗಬೇಕೆಂದರೆ ಕೆಸರಿನಲ್ಲಿ ಹೆಜ್ಜೆ ಹಾಕಲೇಬೇಕು, ಸಮವಸ್ತ್ರ ರಾಡಿಯಾಗಲೇಬೇಕು ಎಂಬ ನಿಯಮ ಇನ್ನೂ ಮುಂದುವರೆದಿದೆ.

ಈ ಶೋಷಣೆಗೆ ಸಮಾದ ಮತ್ತು ಸರ್ಕಾರ ತಲೆ ತಗ್ಗಿಸಬೇಕು

ಸಣ್ಣ ಯಲವಳ್ಳಿಯಲ್ಲಿ ಸುಮಾರು 35 ಕುಟುಂಬಗಳು ವಾಸಿಸುತ್ತಿದ್ದು ಕೃಷಿ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಪಾಡು ಹೀಗಾಗಿದೆ ಮಕ್ಕಳಾದರು ವಿದ್ಯೆ ಕಲಿಯಲಿ ಎಂಬ ಮಹದಾಸೆಯಿಂದ ಕೂಲಿನಾಲಿ ಮಾಡಿ ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿದೆ. ಸಣ್ಣ ಯಲವಳ್ಳಿಯಲ್ಲಿ 5 ನೇ ತರಗತಿ ವರೆಗೆ ಶಾಲೆ ಇದ್ದು ಮುಂದಿನ ವಿದ್ಯಾಭ್ಯಾಸಕ್ಕೆ ದೊಡ್ಡ ಯಲವಳ್ಳಿಗೆ ಹೋಗಬೇಕಿದೆ. ಆದರೆ ಹೋಗುವ ಮಾರ್ಗದಲ್ಲಿ ಹಳ್ಳ ಹರಿಯುತ್ತಿದ್ದು ಮಳೆಗಾಲದಲ್ಲಿ ಸಂಚರಿಸುವುದು ಯಮಲೋಕದ ಪಯಣದಂತಿದೆ.

ಶಾಲೆಗೆ ಚಕ್ಕರ್ ಮನೆಯಲ್ಲಿ ಹಾಜರ್’

ಮಳೆಗಾಲದಲ್ಲಿ ಹಳ್ಳ ತುಂಬಿದರೆ ಶಾಲೆಗೆ ಹೊರಟ ಮಕ್ಕಳು ಮನೆಗೆ ವಾಪಸ್ ಹೋಗಬೇಕು ಅಥವಾ ಶಾಲೆ ಬಿಟ್ಟಾಗ ಮನೆಗೆ ತೆರಳಲು ಹಳ್ಳ ತುಂಬಿದ್ದರೆ ದಡದಲ್ಲಿ ನಿಂತು ನೀರು ತಗ್ಗುವುದನ್ನು ಕಾಯಬೇಕು ಇಲ್ಲ ರಾತ್ರಿ ದಡದಲ್ಲೇ ವಾಸ್ತವ್ಯ ಮಾಡಬೇಕು ಎಂತಾ ದುರಂತ.

ಸಾರ್ವಜನಿಕ ಸಂಚಾರಕ್ಕೂ ಸಂಚಕಾರ

ಸಣ್ಣ ಯಲವಳ್ಳಿಯಲ್ಲಿ ಸುಮಾರು 35 ಕುಟುಂಬಗಳಿದ್ದು ದೊಡ್ಡ ಯಲವಳ್ಳಿಯಲ್ಲಿ ಸುಮಾರು 85 ಕುಟುಂಬಗಳಿವೆ.  ಸಣ್ಣ ಯಲವಳ್ಳಿಯಲ್ಲಿ ಸುಮಾರು 35 ಕುಟುಂಬಗಳಿದ್ದು, ದೊಡ್ಡ ಯಲವಳ್ಳಿಯಲ್ಲಿ ಸುಮಾರು 85 ಕುಟುಂಬಗಳಿವೆ. ಈ ಕುಟುಂಬಗಳು ಕೃಷಿ ಚಟುವಟಿಕೆ ಸೇರಿ ಇನ್ನಿತರ ಕಾರಣಗಳಿಗೆ ಎರಡು ಊರಿನವರ ಸಂಚಾರಕ್ಕೆ ಈ ಹಳ್ಳ ಸಂಚಕಾರವಾಗಿದೆ. ದುರಂತವೆಂದರೆ ಅತ್ಯಂತ ಸಂಕಷ್ಟ ಸಮಯದಲ್ಲಿ ಅಂಬ್ಯುಲೆನ್ಸ್ ತಲುಪಲು ಸಾಧ್ಯವಿಲ್ಲ. ಭಾರತ ಚಂದ್ರಯಾನ ಮಂಗಳಯಾನ ಎನ್ನುತ್ತ ಮುಂದುವರೆಯುತ್ತಿದ್ದರೆ ಯಲ್ಲಾಪುರ ತಾಲೂಕಿನಲ್ಲಿನ ಇಂತಹ ಗ್ರಾಮಗಳ ಬದುಕು ಶಿಲಾಯುಗದಲ್ಲಿನ ಚಿತ್ರಣದಂತಿದೆ.

ಸಮಸ್ಯೆ ಆಲಿಸಿದ ನಾಯಕರು

ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ಹಿರಿಯ ರಾಜಕಾರಣಿ ಹಳಿಯಾಳ, ಶಾಸಕ ಆರ್.ವಿ. ದೇಶಪಾಂಡೆ, ಎಂ.ಎಲ್.ಸಿ. ಶಾಂತಾರಾಮ್ ಸಿದ್ದಿ, ಹಲವು ಜಿಲ್ಲಾಧಿಕಾರಿಗಳು, ತಹಶೀಲ್ದಾರರು ವಿವಿಧ ಸ್ತರದ ರಾಜಕೀಯ ನಾಯಕರು, ಸ್ಥಳೀಯ ಜನಪ್ರತಿನಿಧಿಗಳು ಇವರೆಲ್ಲರಿಗೂ ಈ ಹಳ್ಳಕ್ಕೊಂದು ಈ ಪರಿಸ್ಥಿತಿಗೆ ಯಾರೆಲ್ಲಾ ಹೊಣೆಗಾರರು ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸುತ್ತಲ್ಲೇ ಬಂದಿರುವ ಗ್ರಾಮಸ್ಥರು ನಿರಾಶವಾದಿಗಳಂತೆ ಬೇಸರದ ನುಡಿಗಳನ್ನಾಡುತ್ತಿದ್ದಾರೆ ವ್ಯವಸ್ಥೆ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.

ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತನ್ನಿ ಎನ್ನುವುದು ಹಾಸ್ಯಾಸ್ಪದ

ಸರ್ಕಾರ ಪ್ರತಿವರ್ಷ ಶಿಕ್ಷಕರನ್ನು ಬಳಸಿಕೊಂಡು ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅವರ ಮನೆಗೆ ತೆರಳಿ ಪೋಷಕರೊಡನೆ ಚರ್ಚಿಸಿ ಪುನಃ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ಮಾಡಲಾಗುತ್ತದೆ. ಆದರಿಲ್ಲಿ ವ್ಯತಿರಿಕ್ತವಾಗಿದೆ. 37 ಮಕ್ಕಳು ವಿದ್ಯೆಗಾಗಿ ಶಾಲೆಗೆ ತಾವಾಗಿಯೆ ನಡೆದು ಬರುತ್ತಿದ್ದರೆ ಕನಿಷ್ಪ ಹಳ್ಳಕ್ಕೊಂದು ಸೇತುವೆ ನಿರ್ಮಿಸಿ ಕೊಡದ ಪರಿಸ್ಥಿತಿಯಲ್ಲಿ ಸರ್ಕಾರವಿದೆ. ಇರುವ ಮಕ್ಕಳಿಗೆ ಮೂಲಭೂತ ಸೌಕರ್ಯಗಳಿಲ್ಲ ಅಂತಹದರಲ್ಲಿ ಶಾಲೆ ಬಿಟ್ಟ ಮಕ್ಕಳ…ಕಥೆ.

ನಮ್ಮ ತಂದೆಯವರ ಕಾಲದಿಂದಲೂ ಈ ಸಮಸ್ಯೆ ಹೀಗೆ ಜೀವಂತವಾಗಿದೆ. ಆಗಿನ ಸಂದರ್ಭದಲ್ಲಿ ವಿದ್ಯೆ ಅಷ್ಟೊಂದು ಪ್ರಾಮುಖ್ಯತೆ ಪಡೆದಿರಲಿಲ್ಲ. ಆದರೇ ಈಗ ಪರಿಸ್ಥಿತಿ ಹಾಗಿಲ್ಲ. ನಮ್ಮಲ್ಲಿ ಶಿಕ್ಷಣದ ಪೀಳಿಗೆಗೆ ವಿದ್ಯೆಯಾದರು ಸಿಗಲಿ ಎಂದರೇ ಕನಿಷ್ಟ ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಆಗುತ್ತಿಲ್ಲ ಎಂಬುದಾಗಿ ಪಟಕಾರೆ ಗ್ರಾಮಸ್ಥ ವಿಠ್ಠು ದೋಂಡು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯ ಸರ್ಕಾರ ಇತ್ತ ಗಮನ ಹರಿಸಬೇಕು. ಸಾರ್ವಜನಿಕರು, ಶಾಲಾ ಮಕ್ಕಳ ಜೀವಕ್ಕೆ ಸಂಚಕಾರ ಉಂಟು ಮಾಡಲು ಕಾದು ಕುಳಿತಂತಿರುವಂತ ಹಳ್ಳಕ್ಕೆ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

DCET-2025ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ

BREAKING : ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಗೆ-ಸಿಬ್ಬಂದಿಗಳಿಗೆ ಮೊಬೈಲ್ ಹಾಜರಾತಿ ಕಡ್ಡಾಯ : ದಿನೇಶ್ ಗುಂಡೂರಾವ್

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ‘EPFO’ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಾಂತರ ವಂಚನೆ : ಆರೋಪಿಗಳಿಗೆ ಪೊಲೀಸರು ಶಾಕ್!

05/11/2025 12:00 PM1 Min Read

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು

05/11/2025 11:48 AM1 Min Read

BIG NEWS : ನಾಯಿ ಕೊಂದಿದ್ದು ಅಲ್ಲದೇ ಚಿನ್ನಾಭರಣ ಕಳ್ಳತನ : ಆರೋಪಿ ಪುಷ್ಪಲತಾ ವಿರುದ್ಧ ಮತ್ತೊಂದು ‘FIR’ ದಾಖಲು

05/11/2025 11:36 AM1 Min Read
Recent News

ಬೆಂಗಳೂರಲ್ಲಿ ‘EPFO’ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಾಂತರ ವಂಚನೆ : ಆರೋಪಿಗಳಿಗೆ ಪೊಲೀಸರು ಶಾಕ್!

05/11/2025 12:00 PM

ಇದುವರೆಗಿನ ಅತ್ಯಂತ ದೊಡ್ಡ, ಅತ್ಯಂತ ದೂರದ ಕಪ್ಪು ಕುಳಿ ಜ್ವಾಲೆಯನ್ನು ಪತ್ತೆ ಮಾಡಿದ ಖಗೋಳಶಾಸ್ತ್ರಜ್ಞರು

05/11/2025 11:55 AM

SHOCKING : ನಡು ರಸ್ತೆಯಲ್ಲೇ ಬೈಕ್ ನಲ್ಲಿ ಜೋಡಿಯಿಂದ ರೋಮ್ಯಾನ್ಸ್ : ವಿಡಿಯೋ ವೈರಲ್ | WATCH VIDEO

05/11/2025 11:48 AM

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು

05/11/2025 11:48 AM
State News
KARNATAKA

ಬೆಂಗಳೂರಲ್ಲಿ ‘EPFO’ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕೋಟ್ಯಾಂತರ ವಂಚನೆ : ಆರೋಪಿಗಳಿಗೆ ಪೊಲೀಸರು ಶಾಕ್!

By kannadanewsnow0505/11/2025 12:00 PM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ರಾಜಾರಾಮ್‌ ಮೋಹನರಾಯ್‌ ರಸ್ತೆಯಲ್ಲಿರುವ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ವಂಚನೆ…

BIG NEWS: ರಾಜ್ಯದಲ್ಲಿ ‘ಸರ್ಕಾರಿ ವೈದ್ಯೆ’ಯಿಂದಲೇ ‘ಭ್ರೂಣಹತ್ಯೆ’: ಪ್ರಸೂತಿ ತಜ್ಞೆ ಸೇರಿ 9 ಮಂದಿ ವಿರುದ್ಧ ‘ಪೋಕ್ಸೋ ಕೇಸ್’ ದಾಖಲು

05/11/2025 11:48 AM

BIG NEWS : ನಾಯಿ ಕೊಂದಿದ್ದು ಅಲ್ಲದೇ ಚಿನ್ನಾಭರಣ ಕಳ್ಳತನ : ಆರೋಪಿ ಪುಷ್ಪಲತಾ ವಿರುದ್ಧ ಮತ್ತೊಂದು ‘FIR’ ದಾಖಲು

05/11/2025 11:36 AM

SHOCKING : ಚಿಕ್ಕಬಳ್ಳಾಪುರದಲ್ಲಿ ಘೋರ ಘಟನೆ : ಮಹಿಳೆಯ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ.!

05/11/2025 11:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.