ವಿಜಯಪುರ: ಕೋಡಿ ಮಠದ ಶ್ರೀಗಳ ಬೆನ್ನಲ್ಲೇ ಸಿದ್ದರಾಮಯ್ಯ ಹೊಳಿಮಠ ಅವರು ರಾಜ್ಯ ರಾಜಕಾರಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುವುದಾಗಿ ಕಾಲಜ್ಞಾನ ಭವಿಷ್ಯವಾಣಿ ನುಡಿದ್ದಾರೆ.
ಇದಷ್ಟೇ ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲೂ ಹೊಸ ತಿರುಪು ಪಡೆದುಕೊಂಡು ಬದಲಾವಣೆಯಾಗಲಿವೆ. ದೇಶದಲ್ಲಿ ಬರಗಾಲದ ಮುನ್ಸೂಚನೆ ಇದೆ. ಅಲ್ಲದೇ ಕಲಿಯುಗದ ಆಟ ಸರ್ವನಾಶ ಆಗುವ ಸಮಯ ಬಂದಿರುವುದಾಗಿ ಬೆಚ್ಚಿ ಬೀಳಿಸುವಂತ ಭವಿಷ್ಯವನ್ನು ನುಡಿದ್ದಾರೆ.
ಅಂದಹಾಗೇ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಹೊಳಿಮಠದ ಕಾಲಜ್ಞಾನ ಭವಿಷ್ಯವಾಣಿ ತುಂಬಾನೇ ಹೆಸರುವಾಸಿ. ಈ ಮಠದ ಸದಾಶಿವ ಮುತ್ಯಾರ ಭವಿಷ್ಯವಾಣಿ ಬಹುತೇಕ ನಿಜವಾಗುತ್ತದೆ ಎಂಬುದಾಗಿ ಭಕ್ತರ ನಂಬಿಕೆಯಾಗಿದೆ.
ರಾಜ್ಯ ಸರ್ಕಾರದಿಂದ ‘ಖಾಸಗಿ ಅನುದಾನಿತ ಶಾಲಾ ಶಿಕ್ಷಕರ ಹುದ್ದೆ’ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿ