ನವದೆಹಲಿ : ನಿತಿನ್ ಗಡ್ಕರಿ ಅವರು ತಮ್ಮ ನಿಷ್ಠುರ ಹೇಳಿಕೆಗಳಿಗೆ ಪ್ರಸಿದ್ಧರಾಗಿದ್ದಾರೆ. ಅದೇ ರೀತಿ ಭಾನುವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವರು ಆಡಿದ ಮಾತುಗಳು ಅಲ್ಲಿದ್ದವರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದೆ. ವಾಸ್ತವವಾಗಿ, ಕೇಂದ್ರ ಸಚಿವ ರಾಮದಾಸ್ ಅಠವಳೆ ಕೂಡ ಅವರೊಂದಿಗೆ ವೇದಿಕೆಯಲ್ಲಿದ್ದರು. ಬೇರೆ ಬೇರೆ ಸರ್ಕಾರಗಳಲ್ಲಿ ಸಚಿವರಾಗಿದ್ದ ಅಠಾವಳೆ ಬಗ್ಗೆ ನಿತಿನ್ ಗಡ್ಕರಿ ತಮಾಷೆಯಾಗಿ ಹೇಳಿದ್ದು, ನಾಲ್ಕನೇ ಬಾರಿಗೆ ನಮ್ಮ ಸರ್ಕಾರ ಬರುವುದು ಗ್ಯಾರಂಟಿ ಇಲ್ಲ, ಆದರೆ ರಾಮದಾಸ್ ಅಠಾವಳೆ ಸಚಿವರಾಗುವುದು ಖಂಡಿತಾ ಗ್ಯಾರಂಟಿ ಎಂದಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಮುಖಂಡ ರಾಮದಾಸ್ ಅಠವಳೆ ಅವರು ಮೂರು ಬಾರಿ ಕೇಂದ್ರ ಸಚಿವರಾಗಿದ್ದರು ಮತ್ತು ಬಿಜೆಪಿ ಗೆದ್ದರೆ ಮುಂದಿನ ಬಾರಿಯೂ ಸಚಿವರಾಗುವ ವಿಶ್ವಾಸವನ್ನ ಅವರು ವ್ಯಕ್ತಪಡಿಸಿದ್ದಾರೆ ಎಂಬುದು ಗಮನಾರ್ಹ. ಇದೇ ಹಿನ್ನಲೆಯಲ್ಲಿ ಗಡ್ಕರಿ ಕೇವಲ ತಮಾಷೆಗಾಗಿ ಈ ರೀತಿ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಮಗೆ 10ರಿಂದ 12 ಸ್ಥಾನಗಳು ಬರಬೇಕು : ಅಠವಳೆ
ಇದೇ ವೇಳೆ, ನವೆಂಬರ್ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಮೈತ್ರಿಕೂಟದ ಭಾಗವಾಗಿರುವ ತಮ್ಮ ಪಕ್ಷ ಆರ್ಪಿಐ (ಎ) ಕನಿಷ್ಠ 10ರಿಂದ 12 ಸ್ಥಾನಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ. ನಾಗಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್ಪಿಐ(ಎ) ತನ್ನ ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಮತ್ತು ವಿದರ್ಭದಲ್ಲಿ ಉತ್ತರ ನಾಗ್ಪುರ, ಉಮ್ರೆಡ್ (ನಾಗ್ಪುರ), ಯವತ್ಮಾಲ್ನ ಉಮರ್ಖೇಡ್ ಮತ್ತು ವಾಶಿಮ್ ಸೇರಿದಂತೆ ಮೂರರಿಂದ ನಾಲ್ಕು ಸ್ಥಾನಗಳನ್ನ ಬಯಸಲಿದೆ ಎಂದು ಹೇಳಿದರು.
ಅಂದ್ಹಾಗೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಾಲೆ) ಮಹಾಯುತಿ ಮೈತ್ರಿಕೂಟದ ಭಾಗವಾಗಿದೆ, ಇದರಲ್ಲಿ ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್ಸಿಪಿ ಸೇರಿವೆ.
ಸಾಮಾಜಿಕ ಮಾಧ್ಯಮಗಳು ‘ಮಕ್ಕಳ ಅಶ್ಲೀಲ ವಿಷಯ’ ತೆಗೆದು ಹಾಕಿ, ತಕ್ಷಣ ಪೊಲೀಸರಿಗೆ ವರದಿ ಮಾಡಬೇಕು : ಸುಪ್ರೀಂ ಕೋರ್ಟ್
ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು : 17 ಕಳ್ಳತನ ಕೇಸ್ ನಲ್ಲಿ ಬೇಕಿದ್ದ ಆರೋಪಿಯ ಮೇಲೆ ಪೊಲೀಸರಿಂದ ಫೈರಿಂಗ್!
BREAKING : ಅತ್ಯಾಚಾರ ಪ್ರಕರಣ : ಬಿಜೆಪಿ ಶಾಸಕ ಮುನಿರತ್ನಗೆ ‘ಕೈದಿ ನಂಬರ್’ ನೀಡಿದ ಅಧಿಕಾರಿಗಳು