ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ನಲ್ಲಿ ಗುರುವಾರ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಎರಡು ಭಾರತಗಳಿವೆ” ಎಂದು ಹೇಳಿದರು. ಒಂದು ಭಾರತವು “ಶತಕೋಟ್ಯಾಧಿಪತಿಗಳಿಗೆ ಸೇರಿದ್ದು, ಅಲ್ಲಿ ಅವರು ತಮ್ಮ ಎಲ್ಲಾ ಕನಸುಗಳನ್ನು ಈಡೇರಿಸಬಹುದು, ಮತ್ತು ಇನ್ನೊಂದು ದೊಡ್ಡ ಸಂಖ್ಯೆಯ ಭಾರತೀಯ ಜನರು ವಾಸಿಸುವ ಸ್ಥಳ” ಎಂದು ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆ 2024 ಕ್ಕೆ ಮುನ್ನ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. “ನಮ್ಮ ದೇಶದಲ್ಲಿ ಗಮನಾರ್ಹ ಅಸಮಾನತೆಯನ್ನು ಸೃಷ್ಟಿಸಲಾಗಿದೆ” ಎಂದು ಅವರು ಹೇಳಿದರು.
“ನಮ್ಮ ದೇಶದಲ್ಲಿ 70 ಕೋಟಿ ಜನರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿರುವ 22 ಜನರಿದ್ದಾರೆ. ಮತ್ತು ಭಾರತದಲ್ಲಿ ದಿನಕ್ಕೆ 100 ರೂ.ಗಿಂತ ಕಡಿಮೆ ಸಂಪಾದಿಸುವ 70 ಕೋಟಿ ಜನರಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದರು. ತಮ್ಮ ಭಾಷಣದಲ್ಲಿ ಅವರು ಬಡವರು ಮತ್ತು ಮಧ್ಯಮ ವರ್ಗದ ಜನರು ಪಾವತಿಸುವ ತೆರಿಗೆಗಳಿಗೆ ಒತ್ತು ನೀಡಿದರು. ಬಡವರು ಮತ್ತು ಮಧ್ಯಮ ವರ್ಗದವರು ತೆರಿಗೆ ಪಾವತಿಸುತ್ತಾರೆ. ಭಾರತದ ಅತ್ಯಂತ ಬಡ ವ್ಯಕ್ತಿಯು ಅದೇ ಜಿಎಸ್ಟಿಯನ್ನು ಪಾವತಿಸುತ್ತಾನೆಅಂತ ಹೇಳಿದರು . 25 ಶ್ರೀಮಂತ ಭಾರತೀಯರ 16 ಲಕ್ಷ ಕೋಟಿ ರೂ.ಗಳ ಬ್ಯಾಂಕ್ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಮನ್ನಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
The central issues in our country are unemployment and high prices, but you will never see this in the national media. Because the national media is fully controlled by Narendra Modi.
So the question arises: What are we going to do about the huge amount of inequality that has… pic.twitter.com/A6P9K08kvw
— Congress (@INCIndia) April 18, 2024