Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನೆಯ ವಾಸ್ತು ದೋಷ ನಿವಾರಿಸಲು ಜಸ್ಟ್ ಹೀಗೆ ಮಾಡಿ ಸಾಕು

31/07/2025 7:18 PM

ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’: ಬಿಜೆಪಿ ಪ್ರತಿಭಟನೆ, ತನಿಖೆಗೆ ಒತ್ತಾಯ

31/07/2025 7:15 PM

ರಾಜ್ಯದ `ಮಹಿಳೆಯರಿಗೆ ಗುಡ್ ನ್ಯೂಸ್’ : ಗೃಹಲಕ್ಷ್ಮಿಯರಿಗೆ ಶಕ್ತಿ ತುಂಬಲು ಜಂಟಿ ಹೊಣೆಗಾರಿಕೆ ಗುಂಪು ರಚನೆ.!

31/07/2025 7:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’: ಬಿಜೆಪಿ ಪ್ರತಿಭಟನೆ, ತನಿಖೆಗೆ ಒತ್ತಾಯ
KARNATAKA

ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’: ಬಿಜೆಪಿ ಪ್ರತಿಭಟನೆ, ತನಿಖೆಗೆ ಒತ್ತಾಯ

By kannadanewsnow0931/07/2025 7:15 PM

ಶಿವಮೊಗ್ಗ : ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ 65 ಕೆವಿ ಜನರೇಟರ್ ಕಳ್ಳತನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಗರ ಮಂಡಲದಿಂದ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ ಜನರೇಟರ್ ಕಳ್ಳತನದ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಲಾಯಿತು. 

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಎಸಿ ಕಚೇರಿ ಮುಂದೆ ಸಾಗರ ಬಿಜೆಪಿ ನಗರ ಮಂಡಲದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜನರೇಟರ್ ಕದ್ದವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದಂತ ಸಾಗ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬೆಲೆಬಾಳುವ ಜನರೇಟರ್ ಕಳ್ಳತನವಾಗಿದೆ. ಸದಾ ಜನಜಂಗುಳಿಯಿಂದ ಕೂಡಿರುವ ಆಸ್ಪತ್ರೆ ಆವರಣದಿಂದ ಜನರೇಟರ್ ಕಳ್ಳತನ ಮಾಡಿದ್ದಾರೆ ಎಂದರೆ ಯಾವುದೋ ಕಾಣದ ಶಕ್ತಿ ಇದರ ಹಿಂದೆ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಕಳೆದ ಎರಡೂವರೆ ವರ್ಷದಿಂದ ಕ್ಷೇತ್ರವ್ಯಾಪ್ತಿಯಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಆಸ್ಪತ್ರೆಯ ಅಗತ್ಯಕ್ಕೆ ಬೇಕು ಎಂದು ಒಟ್ಟು ಆರು ಜನರೇಟರ್ ಹಾಲಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ಮಂಜೂರು ಮಾಡಲಾಗಿತ್ತು. ಈ ಪೈಕಿ ಮೂರು ಜನರೇಟರ್ ಕಳೆದು ಹೋಗಿದೆ ಎಂದು ದೂರಿದರು.

ಸಾಗರದಲ್ಲಿ ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಹಳಿ ತಪ್ಪಿದೆ. 31 ವೈದ್ಯರು ಇದ್ದ ಕಡೆ ಈಗ 16 ವೈದ್ಯರು ಇದ್ದಾರೆ. ಉತ್ತಮ ಕೆಲಸ ಮಾಡುವ ವೈದ್ಯರನ್ನು ವರ್ಗಾವಣೆ ಮಾಡಲಾಗುತ್ತಿದೆ. ಸೂಕ್ತ ಆರೋಗ್ಯ ಸೌಲಭ್ಯ ಸಿಗದೆ ರೋಗಿಗಳು ಫಜೀತಿ ಪಡುತ್ತಿದ್ದಾರೆ. ಆಸ್ಪತ್ರೆಯ ಜನರೇಟರ್ ಕಳ್ಳತನವಾಗಿರುವುದು ಆರೋಗ್ಯ ರಕ್ಷಾ ಸಮಿತಿಗೆ ಶಾಸಕರಿಗೆ ಇಷ್ಟು ದಿನಗಳವರೆಗೆ ಏಕೆ ಗೊತ್ತಾಗಿಲ್ಲ. ತಕ್ಷಣ ಜನರೇಟರ್ ಕಳವು ಆಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ದ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಜನರೇಟರ್ ಕಳ್ಳತನ ಆಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾಲ್ಕಾರು ಕ್ವಿಂಟಾಲ್ ಭಾರದ ಜನರೇಟರ್ ಕಳ್ಳತನವಾಗಿದ್ದು ಹೇಗೆ? ಇದರ ಹಿಂದೆ ಇರುವವರು ಯಾರು ಎನ್ನುವುದು ತನಿಖೆ ನಡೆಸಬೇಕು. ಆಡಳಿತ ವೈಫಲ್ಯವೇ ಇದಕ್ಕೆ ಕಾರಣ. ಕಳ್ಳರನ್ನು ವಶಕ್ಕೆ ಪಡೆಯುವವರೆಗೂ ಬಿಜೆಪಿ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಮುಖಂಡರಾದಂತ ಪ್ರೇಮ ಸಿಂಗ್, ಪರಶುರಾಮ್, ಶ್ರೀನಿವಾಸ್ ಮೇಸ್ತ್ರಿ, ಸುಧಾ, ಶ್ವೇತಾ, ರಾಯಲ್ ಸಂತೋಷ್, ಕೃಷ್ಣ ಶೇಟ್, ಅರುಣ ಕುಗ್ವೆ, ಬಿ.ಟಿ.ರವೀಂದ್ರ, ಪ್ರದೀಪ್ ಆಚಾರಿ ಸೇರಿದಂತೆ ಇತರರು ಹಾಜರಿದ್ದರು.

BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು

BREAKING: ಬೆಂಗಳೂರು ಕಾಲ್ತುಳಿತ ದುರಂತ: IPS ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದು

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯ ವಾಸ್ತು ದೋಷ ನಿವಾರಿಸಲು ಜಸ್ಟ್ ಹೀಗೆ ಮಾಡಿ ಸಾಕು

31/07/2025 7:18 PM3 Mins Read

ರಾಜ್ಯದ `ಮಹಿಳೆಯರಿಗೆ ಗುಡ್ ನ್ಯೂಸ್’ : ಗೃಹಲಕ್ಷ್ಮಿಯರಿಗೆ ಶಕ್ತಿ ತುಂಬಲು ಜಂಟಿ ಹೊಣೆಗಾರಿಕೆ ಗುಂಪು ರಚನೆ.!

31/07/2025 7:14 PM1 Min Read

BREAKING: ಬೆಂಗಳೂರು ಕಾಲ್ತುಳಿತ ದುರಂತ: IPS ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದು

31/07/2025 7:04 PM1 Min Read
Recent News

ನಿಮ್ಮ ಮನೆಯ ವಾಸ್ತು ದೋಷ ನಿವಾರಿಸಲು ಜಸ್ಟ್ ಹೀಗೆ ಮಾಡಿ ಸಾಕು

31/07/2025 7:18 PM

ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’: ಬಿಜೆಪಿ ಪ್ರತಿಭಟನೆ, ತನಿಖೆಗೆ ಒತ್ತಾಯ

31/07/2025 7:15 PM

ರಾಜ್ಯದ `ಮಹಿಳೆಯರಿಗೆ ಗುಡ್ ನ್ಯೂಸ್’ : ಗೃಹಲಕ್ಷ್ಮಿಯರಿಗೆ ಶಕ್ತಿ ತುಂಬಲು ಜಂಟಿ ಹೊಣೆಗಾರಿಕೆ ಗುಂಪು ರಚನೆ.!

31/07/2025 7:14 PM

SHOCKING : ದೇಶದಲ್ಲಿ `ರಾಕ್ಷಸಿ’ ಕೃತ್ಯ : ಮಹಿಳೆಯನ್ನು ಕೊಂದು ಖಾಸಗಿ ಭಾಗದಲ್ಲಿ ಕೈ ಹಾಕಿ ಕರುಳು ಹೊರತೆಗೆದ ಕ್ರೂರಿ.!

31/07/2025 7:10 PM
State News
KARNATAKA

ನಿಮ್ಮ ಮನೆಯ ವಾಸ್ತು ದೋಷ ನಿವಾರಿಸಲು ಜಸ್ಟ್ ಹೀಗೆ ಮಾಡಿ ಸಾಕು

By kannadanewsnow0931/07/2025 7:18 PM KARNATAKA 3 Mins Read

ವಾಸ್ತು, ಇತ್ತೀಚೆಗೆ ನಾವು ಈ ವಾಸ್ತು ಬಗ್ಗೆ ಹೆಚ್ಚು ಮಾತನಾಡುತ್ತಿದ್ದೇವೆ. ಆದರೆ ವಾಸ್ತು ಇಂದು ನಿನ್ನೆಯದಲ್ಲ. ವಾಸ್ತು ರಾಜರ ಕಾಲದಿಂದಲೂ…

ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’: ಬಿಜೆಪಿ ಪ್ರತಿಭಟನೆ, ತನಿಖೆಗೆ ಒತ್ತಾಯ

31/07/2025 7:15 PM

ರಾಜ್ಯದ `ಮಹಿಳೆಯರಿಗೆ ಗುಡ್ ನ್ಯೂಸ್’ : ಗೃಹಲಕ್ಷ್ಮಿಯರಿಗೆ ಶಕ್ತಿ ತುಂಬಲು ಜಂಟಿ ಹೊಣೆಗಾರಿಕೆ ಗುಂಪು ರಚನೆ.!

31/07/2025 7:14 PM

BREAKING: ಬೆಂಗಳೂರು ಕಾಲ್ತುಳಿತ ದುರಂತ: IPS ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದು

31/07/2025 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.