Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `ERO,BLO’ ಸೇರಿ ವಿವಿಧ ಚುನಾವಣಾ ಅಧಿಕಾರಿಗಳ ಗೌರವಧನ ಹೆಚ್ಚಳ : ಚುನಾವಣಾ ಆಯೋಗದಿಂದ ಮಹತ್ವದ ಆದೇಶ.!

02/08/2025 11:54 AM

ಲೋಕಸಭಾ ಚುನಾವಣೆಯಲ್ಲಿ ಅಕ್ರಮ ,ಭಾರತದ ಚುನಾವಣಾ ವ್ಯವಸ್ಥೆ ಸತ್ತಿದೆ: ರಾಹುಲ್ ಗಾಂಧಿ

02/08/2025 11:47 AM

BREAKING : ‘PM KISAN’ 20 ನೇ ಕಂತಿನ ಹಣ ಬಿಡುಗಡೆ : ಹಣ ಜಮಾ ಆಗಿದೆಯಾ ಅಂತ ಈ ರೀತಿ ಚೆಕ್‌ ಮಾಡಿಕೊಳ್ಳಿ| PM Kisan Yojana

02/08/2025 11:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಿನ ‘ಕನ್ನಡ ಸಾಹಿತ್ಯ ಪರಿಷತ್’ ಅವ್ಯವಹಾರದ ಬಗ್ಗೆ ವಿಚಾಣಾಧಿಕಾರಿ ನೇಮಿಸಿ ತನಿಖೆಗೆ ರಾಜ್ಯ ಸರ್ಕಾರ ಆದೇಶ
KARNATAKA

BREAKING: ಬೆಂಗಳೂರಿನ ‘ಕನ್ನಡ ಸಾಹಿತ್ಯ ಪರಿಷತ್’ ಅವ್ಯವಹಾರದ ಬಗ್ಗೆ ವಿಚಾಣಾಧಿಕಾರಿ ನೇಮಿಸಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

By kannadanewsnow0902/07/2025 8:36 PM

ಬೆಂಗಳೂರು: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾಗಿರುವಂತ ಅವ್ಯವಹಾರದ ಬಗ್ಗೆ ವಿಚಾರಣಾಧಿಕಾರಿಯನ್ನು ನೇಮಿಸಿ ತನಿಖೆಗೆ ಸಹಕಾರ ಇಲಾಖೆ ಆದೇಶಿಸಿದೆ.

ಈ ಕುರಿತಂತೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಈ ಸಂಸ್ಥೆಯು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರಡಿ ನೋಂದಣಿಗೊಂಡು ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ವಿರುದ್ದ ಈ ಕಛೇರಿಗೆ ವಿವಿಧ ದಿನಾಂಕಗಳಂದು ದೂರು ಅರ್ಜಿಗಳು ಸಲ್ಲಿಕೆಯಾಗಿರುತ್ತವೆ. ಸದರಿ ದೂರು ಅರ್ಜಿಗಳ ಕುರಿತು ಸತ್ಯಾಸತ್ಯತೆಯನ್ನು ಅರಿಯಲು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ರ ಪ್ರಕರಣ 25ರಡಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು ಸ್ವಪ್ರೇರಣೆಯಿಂದ ವಿಚಾರಣೆ ನಡೆಸಲು ನಿರ್ಧರಿಸಿ ಕೆಳಕಂಡ ಆದೇಶ ಹೊರಡಿಸಿರುವುದಾಗಿ ತಿಳಿದ್ದಾರೆ.

ಪ್ರಸ್ತಾವನೆಯಲ್ಲಿ ತಿಳಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 25 ರಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಆದ ನಾನು ಕನ್ನಡ ಸಾಹಿತ್ಯ ಪರಿಷತ್ ಇದರ ಕಾರ್ಯಚಟುವಟಿಕೆಗಳ ಬಗ್ಗೆ ಮುಂದೆ ನಮೂದಿಸಿರುವ ಅಂಶಗಳ ಕುರಿತು ವಿಚಾರಣೆ ನಡೆಸಲು ಶ್ರೀ ಪಿ.ಶಶಿಧರ್, ಸಹಕಾರ ಸಂಘಗಳ ಉಪ ನಿಬಂಧಕರು, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದ್ದಾರೆ.

ವಿಚಾರಣಾಂಶ:-

1. ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 9 ಮತ್ತು 10 ರನ್ವಯ 2022-23 ರಿಂದ ಇದುವರೆವಿಗೂ ಅನುಮೋದಿಸಿರುವ ತಿದ್ದುಪಡಿಯ ಬಗ್ಗೆ ಪರಿಶೀಲಿಸುವುದು.

2. ಸಂಘದ ನಿಯಮ-ನಿಬಂಧನೆಯ ಪ್ರಕಾರ ಆಯ್ಕೆಗೊಂಡಿರುವ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ನಿಯಮ ಬಾಹಿರವಾಗಿ ಹಾಲಿ ಅಧ್ಯಕ್ಷರು ನೋಟೀಸ್ ಜಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸುವುದು.

3. 2022-23ನೇ ಸಾಲಿನಿಂದ ಇದುವರೆವಿಗೂ ಸಂಘಕ್ಕೆ ಸರ್ಕಾರ ಮತ್ತು ಇತರೆ ಮೂಲಗಳಿಂದ ಸಂಗ್ರಹವಾಗಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಹಣ ದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸುವುದು.

4. 2022-23ನೇ ಸಾಲಿನಿಂದ ಇದುವರೆವಿಗೂ ವಿವಿಧ ಕಾರ್ಯಕ್ರಮಗಳಿಗಾಗಿ ಸಂಘವು ಜಿಲ್ಲಾ ಸಂಘಗಳಿಗೆ, ತಾಲ್ಲೂಕು ಸಂಘಗಳಿಗೆ ಮತ್ತು ಇತರೆ ಸಂಘ ಸಂಸ್ಥೆಗಳಿಗೆ ನೀಡಿರುವ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಹಣದುರುಪಯೋಗ ಮಾಡಿರವ ಬಗ್ಗೆ ಪರಿಶೀಲಿಸುವುದು.

5. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದವರು ವಾಹನಗಳನ್ನು ಖರೀದಿಸಿರುವ ಮತ್ತು ಮಾರಾಟ ಮಾಡಿವಲ್ಲಿ ಮಾಡಿರುವ ಹಣದುರುಪಯೋಗದ ಬಗ್ಗೆ ಪರಿಶೀಲಿಸುವುದು.

6. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದ ಕಟ್ಟಡ ನಿರ್ಮಾಣ ಮತ್ತು ನವೀಕರಣದಲ್ಲಿನ ಹಣ ದುರುಪಯೋಗ ಮಾಡಿರವ ಬಗ್ಗೆ ಪರಿಶೀಲಿಸುವುದು.

7. ಸಂಘದ ಕಂಪ್ಯೂಟರ್ ಖರೀದಿ, ಸಿಸಿ ಕ್ಯಾಮೆರಾ ಅಳವಡಿಕೆ, ಅಗ್ನಿಶಾಮಕ ಉಪಕರಣದ ಅಳವಡಿಕೆ, ಪುಸ್ತಕಗಳ ಮುದ್ರಣಗಳಿಗೆ ಸಂಬಂಧಿಸಿದ ಹಣದುರುಪಯೋಗದ ಬಗ್ಗೆ ಪರಿಶೀಲಿಸುವುದು.

8. ಸಂಘದ ಹಾವೇರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರಗಳನ್ನು ಸಲ್ಲಿಸದೆ ಹಣದುರುಪಯೋಗ ಮಾಡಿರುವ ಬಗ್ಗೆ ಪರಿಶೀಲಿಸುವುದು.

9. ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಇಲಾಖೆ ರವರು ಆಡಿಟ್ ವರದಿಯಲ್ಲಿ ಆಕ್ಷೇಪಿಸಿರುವ ಅಂಶಗಳಿಗೆ ಅನುಪಾಲನಾ ವರದಿ ಸಲ್ಲಿಸದೆ ಇರುವ ಬಗ್ಗೆ ಪರಿಶೀಲಿಸುವುದು.

10. ಸಂಘದ ಆಡಳಿತ ಮಂಡಳಿ ನಿರ್ಣಯಗಳನ್ನು ಸಂಘದ ನಿಯಮ ನಿಬಂಧನೆಗೆ ವಿರುದ್ಧವಾಗಿ ತಮ್ಮ ಇಚ್ಛಾನುಸಾರ ದಾಖಲಿಸಿರುವ ಬಗ್ಗೆ ಪರಿಶೀಲಿಸುವುದು.

11. ಸಂಘದ ಹಣವನ್ನು ಅಧ್ಯಕ್ಷರ ಕುಟುಂಬ ಸದಸ್ಯರ ಕಾರ್ಯಕ್ರಮಗಳಿಗೆ ನಿಯಮಬಾಹಿರವಾಗಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸುವುದು.

12. ಸಂಘದ ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್ನ್ನು ನೀಡುವಲ್ಲಿ ಆಗಿರುವ ಹಣದುರುಪಯೋಗದ ಬಗ್ಗೆ ಪರಿಶೀಲಿಸುವುದು.

13. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದಲ್ಲಿನ ಸಿಬ್ಬಂದಿ ನೇಮಕಾತಿ ನಿಯಮಬದ್ದವಾಗಿ ನಡೆದಿರುವ ಬಗ್ಗೆ ಪರಿಶೀಲಿಸುವುದು.

14. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದವರು ನಿಯಮ ಬಾಹಿರವಾಗಿ ವಿದೇಶ ಪ್ರವಾಸ ಕೈಗೊಂಡು ಹಣದುರುಪಯೋಗ ಮತ್ತು ನಷ್ಟಮಾಡಿರುವ ಬಗ್ಗೆ ಪರಿಶೀಲಿಸುವುದು.

15. 2022-23ನೇ ಸಾಲಿನಿಂದ ಇದುವರೆವಿಗೂ ಸಂಘದಲ್ಲಿ ಸಂಗ್ರವವಾಗಿರುವ ಸಿ.ಎಸ್.ಆರ್ ಫಂಡ್ ಹಣ ದುರುಪಯೋಗದ ಬಗ್ಗೆ ಪರಿಶೀಲಿಸುವುದು.

16. ಸಂಘವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 11ರಡಿ ಪ್ರತಿ ವರ್ಷ ನಡೆಸಿರುವ ವಾರ್ಷಿಕ ಸರ್ವಸದಸ್ಯರ ಬಗ್ಗೆ ಪರಿಶೀಲಿಸುವುದು.

17. ಸಂಘವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕರಣ 13ರಡಿ ಪ್ರತಿ ವರ್ಷ ವಾರ್ಷಿಕ ಸರ್ವಸದಸ್ಯರ ಸಭೆಯ ನಂತರ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿ ಸ್ವೀಕೃತಿ ಪಡೆದಿರುವ ಬಗ್ಗೆ ಪರಿಶೀಲಿಸುವುದು.

ಮೇಲೆ ತಿಳಿಸಿರುವ ವಿಚಾರಣಾ ಅಂಶಗಳ ಬಗ್ಗೆ ವಿಚಾರಣಾಧಿಕಾರಿಗಳು ಈ ಆದೇಶ ಹೊರಡಿಸಿದ 45 ದಿನಗಳೊಳಗಾಗಿ ವಿಚಾರಣೆಯನ್ನು ನಡೆಸಿ ವಿಚಾರಣಾ ವರದಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಲು ಸೂಚಿಸಿದೆ. ಈ ಆದೇಶವನ್ನು ನನ್ನ ಸಹಿ ಮತ್ತು ಕಛೇರಿಯ ಮುದ್ರೆಯೊಂದಿಗೆ ದಿನಾಂಕ: 30-06-2025 ರಂದು
ಹೊರಡಿಸಿದೆ ಎಂದಿದ್ದಾರೆ.

BIG NEWS: ‘KPTCL’ಗೆ ಷರತ್ತು, ಸೂಚನೆಯಲ್ಲಿ ಇರುವ ಸ್ಪಷ್ಟತೆ ಆದೇಶದಲ್ಲಿಲ್ಲ: ಈ ವರ್ಷವೂ ‘JE ವರ್ಗಾವಣೆ’ ಗೊಂದಲ | JE Transfer

BREAKING : ತೆಲಂಗಾಣ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ : ಮೃತಪಟ್ಟವರ ಸಂಖ್ಯೆ 40 ಕ್ಕೆ ಏರಿಕೆ | Telangana factory blast

Share. Facebook Twitter LinkedIn WhatsApp Email

Related Posts

BREAKING: ಕರ್ನಾಟಕದ ಪೊಲೀಸ್‌ ಅಧಿಕಾರಿಗಳಿಗೆ `ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ : ಸರ್ಕಾರದಿಂದ ಮಹತ್ವದ ಆದೇಶ

02/08/2025 11:35 AM1 Min Read

BREAKING : ನಟಿ ರಮ್ಯಾಗೆ `ಅಶ್ಲೀಲ ಕಮೆಂಟ್ ‘ ಕೇಸ್ : `CCB’ಯಿಂದ ಇಬ್ಬರು ಅರೆಸ್ಟ್, ಓರ್ವ ವಶಕ್ಕೆ.!

02/08/2025 11:27 AM1 Min Read

BIG NEWS : ಹಬ್ಬಕ್ಕೆಂದು ಊರಿಗೆ ಹೋಗುವವರೆಗೆ ಇತ್ತ ಗಮನಿಸಿ : ಆ.5 ರಿಂದ ರಸ್ತೆಗೆ ಇಳಿಯಲ್ಲ ಸಾರಿಗೆ ಬಸ್!

02/08/2025 11:25 AM1 Min Read
Recent News

BREAKING : `ERO,BLO’ ಸೇರಿ ವಿವಿಧ ಚುನಾವಣಾ ಅಧಿಕಾರಿಗಳ ಗೌರವಧನ ಹೆಚ್ಚಳ : ಚುನಾವಣಾ ಆಯೋಗದಿಂದ ಮಹತ್ವದ ಆದೇಶ.!

02/08/2025 11:54 AM

ಲೋಕಸಭಾ ಚುನಾವಣೆಯಲ್ಲಿ ಅಕ್ರಮ ,ಭಾರತದ ಚುನಾವಣಾ ವ್ಯವಸ್ಥೆ ಸತ್ತಿದೆ: ರಾಹುಲ್ ಗಾಂಧಿ

02/08/2025 11:47 AM

BREAKING : ‘PM KISAN’ 20 ನೇ ಕಂತಿನ ಹಣ ಬಿಡುಗಡೆ : ಹಣ ಜಮಾ ಆಗಿದೆಯಾ ಅಂತ ಈ ರೀತಿ ಚೆಕ್‌ ಮಾಡಿಕೊಳ್ಳಿ| PM Kisan Yojana

02/08/2025 11:44 AM

BREAKING : ಪ್ರಧಾನಿ ಮೋದಿಯಿಂದ ‘PM KISAN’ 20 ನೇ ಕಂತಿನ ಹಣ ಬಿಡುಗಡೆ : ರೈತರ ಬ್ಯಾಂಕ್ ಖಾತೆಗೆ ಜಮಾ.!

02/08/2025 11:41 AM
State News
KARNATAKA

BREAKING: ಕರ್ನಾಟಕದ ಪೊಲೀಸ್‌ ಅಧಿಕಾರಿಗಳಿಗೆ `ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5702/08/2025 11:35 AM KARNATAKA 1 Min Read

ಬೆಂಗಳೂರು :2022, 2023 ಮತ್ತು 2024ನೇ ಸಾಲಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂಧರ್ಭದಲ್ಲಿ ಘೋಷಿಸಲಾದ ಮಾನ್ಯ ರಾಷ್ಟ್ರಪತಿಗಳ ಪೊಲೀಸ್…

BREAKING : ನಟಿ ರಮ್ಯಾಗೆ `ಅಶ್ಲೀಲ ಕಮೆಂಟ್ ‘ ಕೇಸ್ : `CCB’ಯಿಂದ ಇಬ್ಬರು ಅರೆಸ್ಟ್, ಓರ್ವ ವಶಕ್ಕೆ.!

02/08/2025 11:27 AM

BIG NEWS : ಹಬ್ಬಕ್ಕೆಂದು ಊರಿಗೆ ಹೋಗುವವರೆಗೆ ಇತ್ತ ಗಮನಿಸಿ : ಆ.5 ರಿಂದ ರಸ್ತೆಗೆ ಇಳಿಯಲ್ಲ ಸಾರಿಗೆ ಬಸ್!

02/08/2025 11:25 AM

ALERT : ಈ 2 `ಬ್ಲಡ್ ಗ್ರೂಪ್’ನವರಿಗೆ `ಹೃದಯಾಘಾತ’ದ ಅಪಾಯ ಹೆಚ್ಚು.!

02/08/2025 11:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.