Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಭರ್ತಿ | Bengaluru Rain

22/05/2025 6:54 PM

ಪ್ಲಾಸ್ಟಿಕ್ ಮಾಲಿನ್ಯ ಅಂತ್ಯಗೊಳಿಸೋಣ: ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಿಂದ ಹಸಿರು ಅಭಿಯಾನ

22/05/2025 6:50 PM

BIG NEWS : ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಘೇರಾವ್ ಹಾಕಿದ ವಿಚಾರ : ಸಿಎಂಗೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ

22/05/2025 6:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ಸರ್ಕಾರದಿಂದ ‘ಆಸ್ಪತ್ರೆ ಒಳ ಹಾಗೂ ಹೊರ ಆವರಣ’ದಲ್ಲಿ ‘ಬೀದಿ ನಾಯಿ’ಗಳ ನಿಯಂತ್ರಣಕ್ಕೆ ಈ ಮಹತ್ವದ ಆದೇಶ
KARNATAKA

BIG NEWS: ರಾಜ್ಯ ಸರ್ಕಾರದಿಂದ ‘ಆಸ್ಪತ್ರೆ ಒಳ ಹಾಗೂ ಹೊರ ಆವರಣ’ದಲ್ಲಿ ‘ಬೀದಿ ನಾಯಿ’ಗಳ ನಿಯಂತ್ರಣಕ್ಕೆ ಈ ಮಹತ್ವದ ಆದೇಶ

By kannadanewsnow0931/12/2024 2:59 PM

ಬೆಂಗಳೂರು: ರಾಜ್ಯಾಧ್ಯಂತ ಆಸ್ಪತ್ರೆ ಒಳ ಹಾಗೂ ಹೊರ ಆವರಣದಲ್ಲಿ ಬೀದಿ ನಾಯಿಗಳು ಓಡಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಲ್ಲದೇ ಇವುಗಳ ನಿಯಂತ್ರಣಕ್ಕೆ ಮಹತ್ವದ ಆದೇಶವನ್ನು ಹೊರಡಿಸಿದೆ. ಜೊತೆಗೆ ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶದಲ್ಲಿ ಖಡಕ್ ಸೂಚನೆ ನೀಡಲಾಗಿದೆ.

ಇಂದು ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಎಲ್ಲಾ ಜಿಲ್ಲೆಯ ಡಿಹೆಚ್ಓ ಹಾಗು ಟಿಹೆಚ್ಓ ಹಾಗೂ ವೈದ್ಯಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ದಿನಪತ್ರಿಕೆಗಳಲ್ಲಿ ನಾಯಿಗಳು ಆಸ್ಪತ್ರೆಯ ಒಳ ಹಾಗೂ ಹೊರ ಆವರಣಗಳಲ್ಲಿ ಬೀದಿ ನಾಯಿಗಳು ಪುವೇಶ ಮಾಡಿ ಒಳರೋಗಿ, ಹೊರರೋಗಿ, ಗರ್ಭಿಣಿಯರು, ಹಾಗೂ ತಾಯಿ-ಮಕ್ಕಳಿಗೆ ಅಪಾಯ ಉಂಟುಮಾಡುವ ಸಂಭವದ ಬಗ್ಗೆ, ದಿನಪತ್ರಿಕೆಗಳು, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ವರದಿಗಳು ಪಕಟವಾಗುತ್ತಿರುವುದನ್ನು ಗಮನಿಸಲಾಗಿದೆ ಎಂದಿದ್ದಾರೆ.

ಆರೋಗ್ಯ ಸಂಸ್ಕೃಗಳಿಗೆ ಭೇಟಿ ನೀಡಿದ ಸಾರ್ವಜನಿಕರಿಗೆ ದಿನನಿತ್ಯ ತುರ್ತು ವಿಭಾಗ, ಹೊರ ಹಾಗೂ ಒಳರೋಗಿಗಳ ವಿಭಾಗ, ಗರ್ಭಿಣಿಯರು, ತಾಯಂದಿರು, ಹಾಗೂ ಮಕ್ಕಳಿಗೆ ಪ್ರಸೂತಿ ವಿಭಾಗದಲ್ಲಿ ಅವಶ್ಯ ವೈದ್ಯಕೀಯ ಸೇವೆಯನ್ನು ನಿರಂತರ ಒದಗಿಸಲಾಗುತ್ತಿರುತ್ತದೆ. ಆದುದರಿಂದ ಆರೋಗ್ಯ ಸಂಸ್ಥೆಗಳು ಅತ್ಯಂತ ಪುದೇಶವಾಗಿದ್ದು, ಆಸ್ಪತ್ರೆಯಲ್ಲಿ ಸೋಂಕು ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಉಂಟಾಗಬಹುದಾದ ಸಂಭವನೀಯ ಅಪಾಯಗಳನ್ನು ತಡೆಗಟ್ಟಲು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಸಂಸ್ಥೆಗಳಿಗೆ ಯಾವುದೇ ತರಹದ ಜಾನುವಾರು ಹಾಗೂ ಸಾಕು ಪ್ರಾಣಿಗಳ ಪುವೇಶವನ್ನು ನಿರ್ಬಂದಿಸುವುದು ಅತ್ಯವಶ್ಯವಾಗಿರುತ್ತದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಜಾನುವಾರು ಹಾಗೂ ಬೀದಿ ನಾಯಿಗಳು ಪುವೇಶಿಸಿ, ಆಸ್ಪತ್ರೆಯ ಒಳ ಹಾಗೂ ಹೊರರೋಗಿಗಳಿಗೆ ಆತಂಕ ಉಂಟುಮಾಡುತ್ತಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಆಗಿಂದಾಗ ವರದಿಗಳು ಆಗುತ್ತಿದ್ದು, ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯ ಹಾಗೂ ಆಹಾರ ಪದಾರ್ಥಗಳ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸದೇ ಇರುವುದು ಬೀದಿ ನಾಯಿಗಳು ಆಸ್ಪತ್ರೆಯ ಆವರಣವನ್ನು ಪ್ರವೇಶಿಸುತ್ತಿರುವುದಕ್ಕ ಪುಮುಖ ಕಾರಣವಾಗಿರುತ್ತದೆ. ಈ ಬಗ್ಗೆ ಆರೋಗ್ಯ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಅಗತ್ಯ ಕ್ರಮವಹಿಸದೇ ನಿರ್ಲಕ್ಷ್ಯವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

ಸದರಿ ಮಾಧ್ಯಮ ವರದಿಗಳಿಂದ ಸಾರ್ವಜನಿಕರಲ್ಲಿ ಇಲಾಖೆಯ ಆರೋಗ್ಯ ಸಂಸ್ಥೆಗಳ ಬಗ್ಗೆ ಋಣಾತ್ಮಕ ಅಭಿಪ್ರಾಯ ಮೂಡಲು ಕಾರಣವಾಗಿರುತ್ತದೆ. ಆದುದರಿಂದ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಆರೋಗ್ಯ ಸಂಸ್ಥೆಗಳ ಒಳ ಹಾಗೂ ಹೊರ ಆವರಣದಲ್ಲಿ ಯಾವುದೇ ಜಾನುವಾರು ಹಾಗೂ ಸಾಕು ಪ್ರಾಣಿಗಳು ಪುವೇಶಿಸದಂತೆ ಅಗತ್ಯ ಕ್ರಮಗಳನ್ನು ವಹಿಸಲು ಈ ಮೂಲಕ ತಿಳಿಸಿದ್ದಾರೆ.

ಈ ಸಂಬಂಧ ಆಗುವ ನಿರ್ಲಕ್ಷ್ಯತೆಯನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಸಂಸ್ಥೆಯ ಮುಖ್ಯಸ್ಮರ ಮೇಲೆ ಶಿಸ್ತು ಕ್ರಮವನ್ನು ಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸಿದೆ. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಯ ಮುಖ್ಯಸ್ಥರು ಈ ಸಂಬಂಧ ತೆಗೆದುಕೊಂಡಿರುವ ಮುಂಜಾಗೃತ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮೂಲಕ ಒಂದು ವಾರದೊಳಗಾಗಿ ವರದಿಯನ್ನು ಸಲ್ಲಿಸಲು ಸಹ ಸೂಚಿಸಿದ್ದಾರೆ.

BREAKING: ಹೊಟ್ಟೆಯಲ್ಲೇ 8 ತಿಂಗಳ ಮಗು ಮೃತಪಟ್ಟು ಬಾಣಂತಿಯೂ ಸಾವು: ಪತ್ನಿ ಸಾವಿನ ಸುದ್ಧಿ ಕೇಳಿ ಪತಿಯೂ ಆತ್ಮಹತ್ಯೆ ಯತ್ನ

ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಬಂದೋಬಸ್ತ್, ಎಲ್ಲೆಲ್ಲೂ ಕಟ್ಟೆಚ್ಚರ: ಎಸ್ಪಿ ಮಿಥುನ್ ಕುಮಾರ್

Share. Facebook Twitter LinkedIn WhatsApp Email

Related Posts

BIG NEWS: ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಭರ್ತಿ | Bengaluru Rain

22/05/2025 6:54 PM1 Min Read

ಪ್ಲಾಸ್ಟಿಕ್ ಮಾಲಿನ್ಯ ಅಂತ್ಯಗೊಳಿಸೋಣ: ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಿಂದ ಹಸಿರು ಅಭಿಯಾನ

22/05/2025 6:50 PM1 Min Read

BIG NEWS : ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಘೇರಾವ್ ಹಾಕಿದ ವಿಚಾರ : ಸಿಎಂಗೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ

22/05/2025 6:45 PM2 Mins Read
Recent News

BIG NEWS: ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಭರ್ತಿ | Bengaluru Rain

22/05/2025 6:54 PM

ಪ್ಲಾಸ್ಟಿಕ್ ಮಾಲಿನ್ಯ ಅಂತ್ಯಗೊಳಿಸೋಣ: ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಿಂದ ಹಸಿರು ಅಭಿಯಾನ

22/05/2025 6:50 PM

BIG NEWS : ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಘೇರಾವ್ ಹಾಕಿದ ವಿಚಾರ : ಸಿಎಂಗೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ

22/05/2025 6:45 PM

GOOD NEWS: ರಾಜ್ಯದ ಯಜಮಾನಿ ಮಹಿಳೆಯರಿಗೆ ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ ಮತ್ತೊಂದು ಗುಡ್ ನ್ಯೂಸ್

22/05/2025 6:44 PM
State News
KARNATAKA

BIG NEWS: ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 63 ಕೆರೆಗಳು ಭರ್ತಿ | Bengaluru Rain

By kannadanewsnow0922/05/2025 6:54 PM KARNATAKA 1 Min Read

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ನೀರಿನ ಮಟ್ಟವು ಗಣನೀಯವಾಗಿ…

ಪ್ಲಾಸ್ಟಿಕ್ ಮಾಲಿನ್ಯ ಅಂತ್ಯಗೊಳಿಸೋಣ: ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಿಂದ ಹಸಿರು ಅಭಿಯಾನ

22/05/2025 6:50 PM

BIG NEWS : ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಘೇರಾವ್ ಹಾಕಿದ ವಿಚಾರ : ಸಿಎಂಗೆ ದೂರು ನೀಡಿದ ಛಲವಾದಿ ನಾರಾಯಣಸ್ವಾಮಿ

22/05/2025 6:45 PM

GOOD NEWS: ರಾಜ್ಯದ ಯಜಮಾನಿ ಮಹಿಳೆಯರಿಗೆ ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ ಮತ್ತೊಂದು ಗುಡ್ ನ್ಯೂಸ್

22/05/2025 6:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.