Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫೇಕ್ ವೆಡ್ಡಿಂಗ್ ಎಂದರೇನು? ವೈರಲ್ ಆಗುತ್ತಿರುವ `ಪಾರ್ಟಿ ಟ್ರೆಂಡ್’ ಬಗ್ಗೆ ಇಲ್ಲಿದೆ ಮಾಹಿತಿ

15/07/2025 8:25 AM

ದಾನ-ಧರ್ಮದ ನೆಲೆ, ಶ್ರೀ ಕ್ಷೇತ್ರ ಧರ್ಮಸ್ಥಳ – ಹಿನ್ನಲೆ

15/07/2025 8:13 AM

SHOCKING : ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ಮಲಗಿದ್ದ `ನಾಯಿ’ ಮೇಲೆ ಕಾರು ಹತ್ತಿಸಿದ ಚಾಲಕನ ವಿಡಿಯೋ ವೈರಲ್ | WATCH VIDEO

15/07/2025 8:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಾನ-ಧರ್ಮದ ನೆಲೆ, ಶ್ರೀ ಕ್ಷೇತ್ರ ಧರ್ಮಸ್ಥಳ – ಹಿನ್ನಲೆ
KARNATAKA

ದಾನ-ಧರ್ಮದ ನೆಲೆ, ಶ್ರೀ ಕ್ಷೇತ್ರ ಧರ್ಮಸ್ಥಳ – ಹಿನ್ನಲೆ

By kannadanewsnow5715/07/2025 8:13 AM

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಕ್ಷೇತ್ರವು ಅತೀ ಪುರಾತನ ಧಾರ್ಮಿಕ ಕ್ಷೇತ್ರಗಳಲೊಂದು.ಈಗಿನ ಧರ್ಮಸ್ಥಳಕ್ಕೆ ನೂರಾರು ವರ್ಷಗಳ ಹಿಂದೆ “ಕೊಡುಮ” ಎಂಬ ಹೆಸರಿತ್ತು. “ಕೊಡುಮ” ಎಂದರೆ ದಾನ ಕೊಡುವ ಜಾಗ ಎಂದರ್ಥ.

ನೂರಾರು ವರ್ಷಗಳ ಹಿಂದೆ ಇಲ್ಲಿ ಭೀರ್ಮಣ್ಣ ಪರ್ಗಡೆ ಎಂಬ ಜೈನ ಮುಖ್ಯಸ್ಥ ತನ್ನ ಪತ್ನಿ ಆದ ಅಮ್ಮು ಬಲ್ಲಳ್ತಿ ಜೊತೆಯಲ್ಲಿ ವಾಸವಿರುತ್ತಾರೆ. ಅವರಿದ್ದ ಮನೆಯ ಹೆಸರು “ನೆಲ್ಯಾಡಿ ಬೀಡು” ಎಂದಿತ್ತು. ಅವರ ಮನೆಯ ಸಮೀಪದಲ್ಲಿ ಚಂದ್ರನಾತ ಸ್ವಾಮಿ ದೇವಾಲಯವಿತ್ತು. ಭೀರ್ಮಣ್ಣ ಹಾಗು ಅಮ್ಮು ಮಹಾನ್ ದೈವ ಭಕ್ತರಾಗಿದ್ದರು. ಅವರು ಅತ್ಯಂತ ಸರಳ ಹಾಗು ಧಾರ್ಮಿಕ ಜೀವನ ಶೈಲಿ ಹೊಂದಿದ್ದರು. ಎಲ್ಲರನ್ನು ಸದಾ ಪ್ರೀತಿಯಿಂದ ನೋಡಿಕೊಳ್ಳುತಿದ್ದರು.

ಹೀಗಿರುವಾಗ ಒಂದು ದಿನ ಧರ್ಮ ದೇವತೆಗಳು ಮಾರು ವೇಷದಲ್ಲಿ, ಧರ್ಮ ಪಾಲಿಸುವ ಜಾಗಗಳನ್ನ ಹುಡುಕುತ್ತ ಬರುತ್ತಾರೆ. ಅವರ ಸಂಚಾರದ ಭಾಗವಾಗಿ ಕೊಡುಮಗೆ ಬರುತ್ತಾರೆ. ಅವರನ್ನು ನೋಡಿದ ಭೀರ್ಮಣ್ಣ ದಂಪತಿಗಳು ವಿನಯಪೂರ್ವಕ ಅತಿಥಿಸತ್ಕಾರಗಳನ್ನು ನೀಡುತಾರೆ. ಹಾಗು ಇವತ್ತು ಇಲ್ಲೇ ಉಳಿಯಲು ವಿನಂತಿಸಿಕೊಳ್ಳುತ್ತಾರೆ. ಭೀರ್ಮಣ್ಣ ದಂಪತಿಗಳ ಆತಿಥ್ಯದಿಂದ ಬಹಳ ಸಂತುಷ್ಟರಾದ ಧರ್ಮ ದೇವತೆಗಳು ಅಂದು ಉಳಿದುಕೊಳಲು ಒಪ್ಪುತ್ತಾರೆ. ಅಂದು ರಾತ್ರಿ ಭೀರ್ಮಣ್ಣನ ಕನಸಿನಲ್ಲಿ, ಮನೆಯಲಿದ್ದ ಅತಿಥಿಗಳು ಕಾಣಿಸಿಕೊಳ್ಳುತ್ತಾರೆ. ಆ ಅದ್ಭುತವಾದ ಕನಸಿನಲ್ಲಿ ಅವರು ಭೀರ್ಮಣ್ಣರಿಗೆ “ನಾವು ಸಾಮಾನ್ಯ ಮನುಷ್ಯರಲ್ಲ, ನಾವು ಧರ್ಮ ದೇವತೆಗಳು, ನಿಮ್ಮ ಸತ್ಕಾರಗಳಿಂದ ನಾವು ತುಂಬ ಸಂತೊಷವಾಗಿದ್ದೇವೆ. ಆದ ಕಾರಣ ನಾವು ಇಲ್ಲೇ ನೆಲಸಬೇಕೆಂದು ಇಚಿಸುತ್ತಿದ್ದೇವೆ. ನಮಗೆ ನಿನ್ನ ಮನೆ ” ನೆಲ್ಯಾಡಿ ಬೀಡು” ಬಿಟ್ಟುಕೊಡು. ನಿನ್ನ ವಾಸಕ್ಕೆ ಬೇರೆ ಮನೆ ಕಟ್ಟಿಕೊ” ಎಂದು ಹೇಳಿ ಮಾಯವಾದರು.

ಮಾರನೇ ದಿನ ಬೆಳಗ್ಗೆ ಎದ್ದು ನೋಡಿದಾಗ ಅವರಿಗೆ ಆಶ್ಚರ್ಯವಾಗುತ್ತದೆ. ಅತಿಥಿಗಳು ಇದ್ದ ಕೋಣೆಯಲ್ಲಿ ಖಡ್ಗ ಮತ್ತು ಆಯುಧಗಳು ಮಾತ್ರ ಇದ್ದವು.ತಮ್ಮ ಮನೆಗೆ ಬಂದಿದ್ದು ಸಾಮಾನ್ಯ ಮನುಷ್ಯರು ಅಲ್ಲದೆ ದೇವತೆಗಳು ಎಂದು ತಿಳಿದು ಪುಳಕಿತರಾಗುತ್ತಾರೆ. ದೇವತೆಗಳ ಆದೇಶದಂತೆ ಭೀರ್ಮಣ್ಣ ದಂಪತಿಗಳು ಬೇರೆ ಮನೆ ಕಟ್ಟಿಕೊಳ್ಳುತ್ತಾರೆ. “ನೆಲ್ಯಾಡಿ ಬೀಡು” ನಲ್ಲಿ ದೇವತೆಗಳ ಖಡ್ಗ ಮತ್ತು ಆಯುಧಗಳನ್ನು ಇಟ್ಟು ಪೂಜಿಸತೊಡಗುತ್ತಾರೆ.

ನಂತರ ಭೀರ್ಮಣ್ಣನ ಕನಸಿನಲ್ಲಿ ಧರ್ಮ ದೇವತೆಗಳು ಬಂದು ” ನಾವು ಶಕ್ತಿಶಾಲಿ ಧರ್ಮದೇವತೆಗಳಾಗಿದ್ದು, ನಮ್ಮ ನಾಮೋದಯಗಳು ಕಲಾರಕೈ, ಕಲರಾಹು, ಕುಮಾರಸ್ವಾಮಿ ಹಾಗು ಕನ್ಯಾಕುಮಾರಿ ಆಗಿರುತ್ತದೆ. ನೀನು ನಮಗೆ ಪ್ರತ್ಯೇಕ ಗುಡಿಗಳನ್ನು ಕಟ್ಟಿ “ಪರ್ವ-ನಡವಳಿ” ಪೂಜೆಯನ್ನು ಕಾಲ ಕಾಲಕ್ಕೆ ನೆರವೇರಿಸಬೇಕು. ಇದಕ್ಕಾಗಿ ನೀನು ಇಬ್ಬರು ಮಹಾನುಭಾವರನ್ನು ನೇಮಿಸಬೇಕು. ಅವರು ನಮ್ಮೋಡನೆ ಸಂದರ್ಶಿಸಿ ನಿನಗೆ ಆದೇಶಗಳನ್ನು ನೀಡುತ್ತಾರೆ. ನಿನ್ನ ಕಾರ್ಯಗಳಲ್ಲಿ ನೆರವಾಗಲು ನಾವು “ಅಣ್ಣಪ್ಪ ದೈವ” ರಿಗೆ ಆದೇಶಿಸುತ್ತೇವೆ. ಕಾಲ ಕಾಲಕ್ಕೆ ಪೂಜೆ ಪುರಸ್ಕಾರಗಳನ್ನು ತಪ್ಪದೇ ಪಾಲಿಸಬೇಕು. ನಿನ್ನ ದೈವ ಭಕ್ತಿ ಮೆಚ್ಚಿ ಈ ಮಹತ್ತರ ಕಾರ್ಯವನ್ನು ನಿನಗೆ ನೀಡುತಿದ್ದೇವೆ. ಇದರ ಫಲವಾಗಿ ನಾವು ನಿನ್ನ ಹಾಗು ನಿನ್ನ ಕುಟುಂಬವನ್ನು ಕಾಪಾಡುತ್ತೇವೆ. ಈ ಕ್ಷೇತ್ರ ಪ್ರಖ್ಯಾತವಾಗಿ ಧಾನ ಧರ್ಮಗಳು ಆಗುವಂತೆ ನೋಡಿಕೊಳ್ಳುತ್ತೇವೆ. ನೀನು ಯಾವುದೇ ಕಾರಣಕ್ಕೂ ಇಲ್ಲಿಗೆ ಬರುವ ಅತಿಥಿಗಳು ಹಾಗು ಭಕ್ತರಿಗೆ ಊಟ-ವಸತಿಗಳನ್ನು ಮರೆಯುವಂತಿಲ್ಲ. ಇದು ನಿನ್ನ ತಲ ತಲಾಂತರಗಳಿಗೂ ಅನ್ವಯಿಸುತ್ತದೆ. ನಿಮಗೆ ಶುಭವಾಗಲಿ” ಎಂದು ಮಾಯವಾಗುತ್ತಾರೆ.

ಧರ್ಮ ದೇವತೆಗಳು ಅಣ್ಣಪ್ಪ ದೈವರಿಗೆ, ಮಂಗಳೂರಿನ ಕದ್ರಿಗೆ ಹೋಗಿ ಕಾಶಿ ಇಂದ ತಂದಿರುವ ಶಿವ ಲಿಂಗವನ್ನು ತಂದು ಪ್ರತಿಷ್ಟಾಪನೆ ಮಾಡುವಂತೆ ಆದೇಶಿಸುತ್ತಾರೆ.

ಇದರಿಂದ ಭೀರ್ಮಣ್ಣ ದಂಪತಿಗಳು ಸಂತೋಷಗೊಂಡು ಶಿವಲಿಂಗಕ್ಕೂ ಗುಡಿಯನ್ನು ಕಟ್ಟುತ್ತಾರೆ. ಹೀಗೆ ಕೊಡುಮದಲ್ಲಿ ಶ್ರೀ ಚಂದ್ರನಾಥ, ಶ್ರೀ ಮಂಜುನಾಥ, ನಾಲ್ಕು ಧರ್ಮ ದೈವಗಳು ಹಾಗು ಅಣ್ಣಪ್ಪ ದೈವರಿಗೆ ಪೂಜೆಗಳು ಸಲಿಸಲಾಗುತ್ತಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಹೆಗ್ಗಡೆ ಕುಟುಂಬವು ಅಚುಕಟ್ಟಾಗಿ ನಿಭಾಯಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಧರ್ಮಾಧಿಕಾರಿಗಳು ಶ್ರೀ ಮಂಜುನಾಥನ ಅವತಾರವೆಂದೇ ಹೇಳಲಾಗುತ್ತದೆ.

ಧರ್ಮಾಧಿಕಾರಿ ಹೆಗ್ಗಡೆ ಕುಟುಂಬವು ಗೃಹಸ್ಥರಾಗಿದ್ದು, ಬಹು ಧರ್ಮ ಪಾಲನೆ ಮಾಡುವುದು ಒಂದು ವಿಶೇಷತೆ. ಬೇರೆ ಯಾವ ಧಾರ್ಮಿಕ ಕೇಂದ್ರಗಳಲೂ ಇದು ಕಾಣಸಿಗುವುದಿಲ್ಲ.

ಓಂ ನಮೋ ಮಂಜುನಾಥ !

Sri Kshetra Dharmasthala - Background The seat of charity and religion
Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ಮಲಗಿದ್ದ `ನಾಯಿ’ ಮೇಲೆ ಕಾರು ಹತ್ತಿಸಿದ ಚಾಲಕನ ವಿಡಿಯೋ ವೈರಲ್ | WATCH VIDEO

15/07/2025 8:09 AM1 Min Read

BREAKING : ಇಂದು ಮಧ್ಯಾಹ್ನ 3 ಗಂಟೆಗೆ ಹುಟ್ಟೂರು ದಶವಾರ ಗ್ರಾಮದಲ್ಲಿ ನಟಿ `ಬಿ. ಸರೋಜಾದೇವಿ’ ಅಂತ್ಯಕ್ರಿಯೆ

15/07/2025 8:03 AM1 Min Read

BREAKING: ರಾಜ್ಯ ಸರ್ಕಾರದಿಂದ `ಪೊಲೀಸ್ ಇಲಾಖೆಗೆ’ ಮೇಜರ್ ಸರ್ಜರಿ : 34 `IPS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ | IPS Officer Transfer

15/07/2025 7:58 AM1 Min Read
Recent News

ಫೇಕ್ ವೆಡ್ಡಿಂಗ್ ಎಂದರೇನು? ವೈರಲ್ ಆಗುತ್ತಿರುವ `ಪಾರ್ಟಿ ಟ್ರೆಂಡ್’ ಬಗ್ಗೆ ಇಲ್ಲಿದೆ ಮಾಹಿತಿ

15/07/2025 8:25 AM

ದಾನ-ಧರ್ಮದ ನೆಲೆ, ಶ್ರೀ ಕ್ಷೇತ್ರ ಧರ್ಮಸ್ಥಳ – ಹಿನ್ನಲೆ

15/07/2025 8:13 AM

SHOCKING : ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ಮಲಗಿದ್ದ `ನಾಯಿ’ ಮೇಲೆ ಕಾರು ಹತ್ತಿಸಿದ ಚಾಲಕನ ವಿಡಿಯೋ ವೈರಲ್ | WATCH VIDEO

15/07/2025 8:09 AM

BREAKING : ಇಂದು ಮಧ್ಯಾಹ್ನ 3 ಗಂಟೆಗೆ ಹುಟ್ಟೂರು ದಶವಾರ ಗ್ರಾಮದಲ್ಲಿ ನಟಿ `ಬಿ. ಸರೋಜಾದೇವಿ’ ಅಂತ್ಯಕ್ರಿಯೆ

15/07/2025 8:03 AM
State News
KARNATAKA

ದಾನ-ಧರ್ಮದ ನೆಲೆ, ಶ್ರೀ ಕ್ಷೇತ್ರ ಧರ್ಮಸ್ಥಳ – ಹಿನ್ನಲೆ

By kannadanewsnow5715/07/2025 8:13 AM KARNATAKA 3 Mins Read

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಕ್ಷೇತ್ರವು ಅತೀ ಪುರಾತನ ಧಾರ್ಮಿಕ ಕ್ಷೇತ್ರಗಳಲೊಂದು.ಈಗಿನ ಧರ್ಮಸ್ಥಳಕ್ಕೆ ನೂರಾರು ವರ್ಷಗಳ…

SHOCKING : ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ಮಲಗಿದ್ದ `ನಾಯಿ’ ಮೇಲೆ ಕಾರು ಹತ್ತಿಸಿದ ಚಾಲಕನ ವಿಡಿಯೋ ವೈರಲ್ | WATCH VIDEO

15/07/2025 8:09 AM

BREAKING : ಇಂದು ಮಧ್ಯಾಹ್ನ 3 ಗಂಟೆಗೆ ಹುಟ್ಟೂರು ದಶವಾರ ಗ್ರಾಮದಲ್ಲಿ ನಟಿ `ಬಿ. ಸರೋಜಾದೇವಿ’ ಅಂತ್ಯಕ್ರಿಯೆ

15/07/2025 8:03 AM

BREAKING: ರಾಜ್ಯ ಸರ್ಕಾರದಿಂದ `ಪೊಲೀಸ್ ಇಲಾಖೆಗೆ’ ಮೇಜರ್ ಸರ್ಜರಿ : 34 `IPS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ | IPS Officer Transfer

15/07/2025 7:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.