Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಜ್ಯದ ಸರ್ಕಾರಿ ಜಾಗದಲ್ಲಿ RSS ಚಟುವಟಿಕೆ ನಿಷೇಧ ಬಹುತೇಕ ಖಚಿತ: ಸಿಎಂ ಸಿದ್ಧರಾಮಯ್ಯ ಸುಳಿವು

15/10/2025 4:20 PM

ಶಿವಮೊಗ್ಗದ ‘ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ’ ವಿರುದ್ಧ ಸಿಡಿದೆದ್ದ ‘ಕರವೇ’: ಅಹೋರಾತ್ರಿ ‘ಧರಣಿ ಸತ್ಯಾಗ್ರಹ’

15/10/2025 4:14 PM

BREAKING : ಗಾಜಾ ಒಪ್ಪಂದದಲ್ಲಿ ಹಮಾಸ್ ಹಿಂದಿರುಗಿಸಿದ ಶವಗಳು ‘ಯಾವುದೇ ಒತ್ತೆಯಾಳುಗಳಿಗೆ ಹೊಂದಿಕೆಯಾಗುತ್ತಿಲ್ಲ’ ; ಇಸ್ರೇಲ್

15/10/2025 4:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗದ ‘ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ’ ವಿರುದ್ಧ ಸಿಡಿದೆದ್ದ ‘ಕರವೇ’: ಅಹೋರಾತ್ರಿ ‘ಧರಣಿ ಸತ್ಯಾಗ್ರಹ’
KARNATAKA

ಶಿವಮೊಗ್ಗದ ‘ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ’ ವಿರುದ್ಧ ಸಿಡಿದೆದ್ದ ‘ಕರವೇ’: ಅಹೋರಾತ್ರಿ ‘ಧರಣಿ ಸತ್ಯಾಗ್ರಹ’

By kannadanewsnow0915/10/2025 4:14 PM

ಶಿವಮೊಗ್ಗ: ಜಿಲ್ಲೆಯಲ್ಲಿನ ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ ಸರಿ ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ಬಡ ರೋಗಿಗಳ ಪಾಲಿಗೆ ದೇವರಾಗಿ ವೈದ್ಯರು ಕಾರ್ಯನಿರ್ವಹಿಸಿ, ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದಂತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ಆಗರವೇ ತುಂಬಿದೆ. ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಆಸ್ಪತ್ರೆಗೆ ಬರುವಂತ ರೋಗಿಗಳಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡದೇ ವೈದ್ಯರು ನಿರ್ಲಕ್ಷ್ಯ ವಹಿಸುವುದು ಸೇರಿದಂತೆ ಬಹುದೊಡ್ಡ ಅವ್ಯವಸ್ಥೆಯೇ ನಡೆಯುತ್ತಿದೆ ಎಂಬುದಾಗಿ ಶಿವಮೊಗ್ಗ ಹಾಗೂ ತಾಲ್ಲೂಕು ಕರವೇ ಘಟಕದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ.

ಇಂದಿನ ಕರವೇ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಸಾಗರದ ಕರವೇ ಟಿ.ಎ ನಾರಾಯಣಗೌಡ ಬಣದ ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ಮಾತನಾಡಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳು, ರೋಗಿಗಳ ಸಂಬಂಧಿಕರಿಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಖಾಯಂ ವೈದ್ಯರ ಬದಲಾಗಿ ಟ್ರೈನಿ ಡಾಕ್ಟರ್ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ರೋಗಿಗಳು ಗುಣಮುಖರಾಗೋ ಬದಲಾಗಿ, ಮತ್ತಷ್ಟು ಆರೋಗ್ಯ ಕ್ಷೀಣಿಸುವಂತಾಗಿದೆ ಎಂಬುದಾಗಿ ಕಿಡಿಕಾರಿದರು.

ಮೆಗ್ಗಾನ್ ಆಸ್ಪತ್ರೆಯ ವೈದ್ಯರು ತಮ್ಮ ಕರ್ತವ್ಯದ ಅವಧಿಯಲ್ಲೇ ಖಾಸಗಿ ಕ್ಲಿನಿಕ್ ನಲ್ಲಿ ರೋಗಿಗಳನ್ನು ನೋಡುತ್ತಿದ್ದಾರೆ. ರೋಗಿಗಳಿಗೆ ಆಸ್ಪತ್ರೆಯಲ್ಲೇ ರಕ್ತ ಪರೀಕ್ಷೆ ಸೇರಿದಂತೆ ಇತರೆ ಪರೀಕ್ಷೆಗೆ ಸೂಚಿಸುವ ಬದಲಾಗಿ ಹೊರಗಡೆ ಬರೆದುಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಗರ, ಸೊರಬ, ಸಿದ್ದಾಪುರದಂತ ದೂರ ತಾಲ್ಲೂಕಿನಿಂದ ತುರ್ತು ಚಿಕಿತ್ಸೆಗಾಗಿ ರೋಗಿಗಳು ಬಂದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ. ಮೆಗ್ಗಾನ್ ಆಸ್ಪತ್ರೆಯ ನರ್ಸ್ ಗಳೇ ಚಿಕಿತ್ಸೆ ನೀಡುತ್ತಿದ್ದಾರೆ. ಖಾಯಂ ವೈದ್ಯರ ಬದಲಾಗಿ ಟ್ರೈನಿ ಡಾಕ್ಟರ್ ಚಿಕಿತ್ಸೆ ನೀಡುತ್ತಿರುವ ಪರಿಣಾಮ ಈವರೆಗೆ ಅನೇಕ ರೋಗಿಗಳು ಮೆಗ್ಗಾನ್ ಆಸ್ಪತ್ರೆಗೆ ಬಂದು ಜೀವ ಕಳೆದುಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಬೆಡ್ ವ್ಯವಸ್ಥೆ ಇಲ್ಲ. ಶಿವಮೊಗ್ಗ ಜಿಲ್ಲಾಸ್ಪತ್ರೆ ಎಂಬುದು ರೋಗಿಗಳ ಪಾಲಿಗೆ ನರಕ ಅನುಭವಿಸುವಂತ ಆಸ್ಪತ್ರೆಯಾಗಿದೆ. ಕೂಡಲೇ ಇದನ್ನು ಸರಿಪಡಿಸುವಂತೆ ಸಾಗರ ಕರವೇ ನಾರಾಯಣಗೌಡ ಬಣದ ತಾಲ್ಲೂಕು ಅಧ್ಯಕ್ಷ ಮನೋಜ್ ಕುಗ್ವೆ ಒತ್ತಾಯಿಸಿದರು.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇರುವಂತ ಬಾತ್ ರೂಂಗಳಿಗೆ ಹೋಗೋದಕ್ಕೆ ಸಾಧ್ಯವಿಲ್ಲದಷ್ಟು ಗಬ್ಬು ನಾರುತ್ತಿವೆ. ನಡೆದಾಡಲು ಕಷ್ಟವಾಗುವಂತ ರೋಗಿಗಳಿಗೆ ಸರಿಯಾದ ವೀಲ್ಹ್ ಚೇತ್ ವ್ಯವಸ್ಥೆ ಕೂಡ ಇಲ್ಲದೇ ಪರದಾಡುವಂತೆ ಆಗಿದೆ. ಈ ಅವ್ಯವಸ್ಥೆ ಸರಿಪಡಿಸುವಂತೆ ಕರವೇ ನಾರಾಯಣಗೌಡ ಬಣದಿಂದ ಶಿವಮೊಗ್ಗ ಹಾಗೂ ತಾಲ್ಲೂಕು ಘಟಕದಿಂದ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಅ.18, 19ರಂದು ಸಾಗರದಲ್ಲಿ ‘ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ’ ಆಯೋಜನೆ

ಸಾಗರದ ‘ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಹಾಲಿ ಸಮಿತಿ ವಿರುದ್ಧ ‘ನ್ಯಾಯಾಂಗ ನಿಂದನೆ’ ಅರ್ಜಿ

Share. Facebook Twitter LinkedIn WhatsApp Email

Related Posts

BREAKING: ರಾಜ್ಯದ ಸರ್ಕಾರಿ ಜಾಗದಲ್ಲಿ RSS ಚಟುವಟಿಕೆ ನಿಷೇಧ ಬಹುತೇಕ ಖಚಿತ: ಸಿಎಂ ಸಿದ್ಧರಾಮಯ್ಯ ಸುಳಿವು

15/10/2025 4:20 PM1 Min Read

ರಾಜ್ಯದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ಅ.30ರೊಳಗೆ ಪರಿಹಾರ ಪಾವತಿ

15/10/2025 3:41 PM2 Mins Read

SHOCKING: ಬೆಂಗಳೂರಲ್ಲಿ ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನೇ ಕೊಂದ ಡಾಕ್ಟರ್: FSL ವರದಿಯಲ್ಲಿ ಸತ್ಯ ಬಯಲು, ಅರೆಸ್ಟ್

15/10/2025 3:38 PM1 Min Read
Recent News

BREAKING: ರಾಜ್ಯದ ಸರ್ಕಾರಿ ಜಾಗದಲ್ಲಿ RSS ಚಟುವಟಿಕೆ ನಿಷೇಧ ಬಹುತೇಕ ಖಚಿತ: ಸಿಎಂ ಸಿದ್ಧರಾಮಯ್ಯ ಸುಳಿವು

15/10/2025 4:20 PM

ಶಿವಮೊಗ್ಗದ ‘ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ’ ವಿರುದ್ಧ ಸಿಡಿದೆದ್ದ ‘ಕರವೇ’: ಅಹೋರಾತ್ರಿ ‘ಧರಣಿ ಸತ್ಯಾಗ್ರಹ’

15/10/2025 4:14 PM

BREAKING : ಗಾಜಾ ಒಪ್ಪಂದದಲ್ಲಿ ಹಮಾಸ್ ಹಿಂದಿರುಗಿಸಿದ ಶವಗಳು ‘ಯಾವುದೇ ಒತ್ತೆಯಾಳುಗಳಿಗೆ ಹೊಂದಿಕೆಯಾಗುತ್ತಿಲ್ಲ’ ; ಇಸ್ರೇಲ್

15/10/2025 4:00 PM

ರಾಜ್ಯದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ಅ.30ರೊಳಗೆ ಪರಿಹಾರ ಪಾವತಿ

15/10/2025 3:41 PM
State News
KARNATAKA

BREAKING: ರಾಜ್ಯದ ಸರ್ಕಾರಿ ಜಾಗದಲ್ಲಿ RSS ಚಟುವಟಿಕೆ ನಿಷೇಧ ಬಹುತೇಕ ಖಚಿತ: ಸಿಎಂ ಸಿದ್ಧರಾಮಯ್ಯ ಸುಳಿವು

By kannadanewsnow0915/10/2025 4:20 PM KARNATAKA 1 Min Read

ಮೈಸೂರು: ರಾಜ್ಯದ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘಟನೆಯ ಚಟುವಟಿಕೆ ನಿಷೇಧ ಬಹುತೇಕ ಖಚಿತವಾಗಿದೆ. ಈ ಸುಳಿವನ್ನು ಸ್ವತಹ ಮುಖ್ಯಮಂತ್ರಿ…

ಶಿವಮೊಗ್ಗದ ‘ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ’ ವಿರುದ್ಧ ಸಿಡಿದೆದ್ದ ‘ಕರವೇ’: ಅಹೋರಾತ್ರಿ ‘ಧರಣಿ ಸತ್ಯಾಗ್ರಹ’

15/10/2025 4:14 PM

ರಾಜ್ಯದ ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ಅ.30ರೊಳಗೆ ಪರಿಹಾರ ಪಾವತಿ

15/10/2025 3:41 PM

SHOCKING: ಬೆಂಗಳೂರಲ್ಲಿ ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನೇ ಕೊಂದ ಡಾಕ್ಟರ್: FSL ವರದಿಯಲ್ಲಿ ಸತ್ಯ ಬಯಲು, ಅರೆಸ್ಟ್

15/10/2025 3:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.