Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಮಾರಿಕಾಂಬ ಜಾತ್ರೆಯಲ್ಲಿ ‘ಅಮ್ಯೂಸ್ ಮೆಂಟ್ ಪಾರ್ಕ್ ದರ’ ದುಬಾರಿ ಇರಲ್ಲ: ಟೆಂಡರ್ ದಾರ ಲಿಂಗರಾಜು ಸ್ಪಷ್ಟನೆ

13/01/2026 10:52 PM

‘ಅರಮನೆ ವೃದ್ಧಾಶ್ರಮ’ದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’

13/01/2026 10:29 PM

ನಾಳೆಯಿಂದ ‘ಸಿಗಂದೂರು ಜಾತ್ರಾ’ ಮಹೋತ್ಸವ: ‘ಭಕ್ತರ ಸ್ವಾಗತ’ಕ್ಕೆ ಸಕಲ ಸಿದ್ಧತೆ

13/01/2026 9:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಹೇಳಿಲ್ಲ, CLPಯಲ್ಲೂ ಚರ್ಚೆಯಾಗಿಲ್ಲ: ಗೃಹ ಸಚಿವ ಪರಮೇಶ್ವರ್
KARNATAKA

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಹೇಳಿಲ್ಲ, CLPಯಲ್ಲೂ ಚರ್ಚೆಯಾಗಿಲ್ಲ: ಗೃಹ ಸಚಿವ ಪರಮೇಶ್ವರ್

By kannadanewsnow0920/11/2025 3:18 PM

ಬೆಂಗಳೂರು : ನಮ್ಮ ಸರ್ಕಾರವು ಎರಡೂವರೆ ವರ್ಷದ ಅವಧಿಯಲ್ಲಿ ಜನಸಮುದಾಯಕ್ಕೆ ನಾವು ನೀಡಿದ್ದ ಭರವಸೆಗಳನ್ನು ಆದ್ಯತೆಯ ಮೇಲೆ ಈಡೇರಿಸಿದ್ದೇವೆ ಎಂಬ ಸಮಾದಾನವಿದೆ‌ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದ್ಯತೆಯ ಮೇಲೆ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಮುಂದೆ ಹೆಚ್ಚಿನ ರೀತಿಯಲ್ಲಿ ಹಣಕಾಸಿನ ವಿಚಾರದಲ್ಲಿ ಅನವಶ್ಯಕ ಖರ್ಚುಗಳನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು ಎಂದರು.

ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಹಣ ಕಡಿಮೆ ಕೊಟ್ಟಿದೆ. ಜಿಎಸ್‌ಟಿ ಪಾಲಿನಲ್ಲಿ ಕಡಿಮೆ ನೀಡಿದೆ‌. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆಗುವ ಯೋಜನೆಗಳಲ್ಲಿ ಸರಿಯಾದ ಸಮಯದಲ್ಲಿ ಅನುದಾನ ಬಿಡುಗಡೆ ಮಾಡುವುದಿಲ್ಲ. ಜಲ ಜೀವನ್ ಮಿಷನ್ ಯೋಜನೆಯ ಸಾಕಷ್ಟು ಅನುದಾನ ಬಾಕಿ ಇದೆ. ಇಡೀ ದೇಶದಲ್ಲಿ ಮನೆಮನೆಗೆ ಗಂಗೆ, ನೀರು ತಲುಪಿಸುತ್ತೇವೆ ಎಂದು ಹೇಳುತ್ತಾರೆ. ಅದರ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಮುಖ್ಯಮಂತ್ರಿಗಳು ಅನುಭವಿ ಹಣಕಾಸು ಸಚಿವರು. 17ನೇ ಬಾರಿ ಬಜೆಟ್ ಮಂಡಿಸುವವರಿದ್ದಾರೆ. ಇದನ್ನೆಲ್ಲ ಚರ್ಚೆ ಮಾಡಿ, ಹಣಕಾಸಿನ ವಿಚಾರದಲ್ಲಿ ಒಂದಷ್ಟು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಸಂಪುಟ್ ಪುನರ್ ರಚನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ತೀರ್ಮಾನವನ್ನು ಹೈಕಮಾಂಡ್‌ನವರು ಮಾಡಬೇಕು. ಸಂಪುಟ ಪುನರ್ ರಚನೆ ಸೇರಿದಂತೆ ಬೇರೆಬೇರೆ ವಿಚಾರಗಳ ತೀರ್ಮಾನವನ್ನು ಅವರೇ ಮಾಡಬೇಕು. ಎರಡೂವರೆ ವರ್ಷ ಆಗಿರುವುದು ಅವರಿಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದ ಅವರು, ಎರಡೂವರೆ ವರ್ಷಕ್ಕೆ ಮಹತ್ವ ಕೊಡುವಂತ ಅಗತ್ಯ ಇಲ್ಲ. ನಮ್ಮ ಹೈಕಮಾಂಡ್‌ನಿಂದ ನಾಯಕತ್ವ ಬದಲಾವಣೆಯ ಬಗ್ಗೆ ಯಾರು, ಏನೂ ಹೇಳಿಲ್ಲ.

ನಾವುನಾವೇ ಏನೇನೋ ಹೇಳಿಕೊಂಡು ಹೋದರೆ ಅದಕ್ಕೆ ಮಹತ್ವ ಬರುತ್ತದೆಯೇ? ಈ ಬಗ್ಗೆ ಹೈಕಮಾಂಡ್‌ನವರು ಸ್ಪಷ್ಟವಾಗಿ ಹೇಳಿದಾಗ ಮಹತ್ವ ಬರುತ್ತದೆ‌. ಸಂಪುಟ ಪುನರ್ ರಚನೆ ವಿಚಾರ, ಮುಖ್ಯಮಂತ್ರಿ ಬದಲಾವಣೆ ವಿಚಾರ ಸೇರಿದಂತೆ ಯಾವುದನ್ನು ಸಹ ಹೈಕಮಾಂಡ್‌ನವರು ಎಲ್ಲೂ ಉಚ್ಛರಿಸಿಲ್ಲ. ಹೈಕಮಾಂಡ್‌ನವರು ಹೇಳಿದರೆ ಕೇಳುತ್ತೇವೆ. ಅವರು ಹೇಳದಿರುವ ಕಾರಣಕ್ಕಾಗಿ ಯಾವುದಕ್ಕು ಮಹತ್ವ ಕೊಡುವ ಅಗತ್ಯವಿಲ್ಲ‌. ಹೈಕಮಾಂಡ್‌ನವರು ಹೇಳಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲೂ ಚರ್ಚೆಯಾಗಿಲ್ಲ ಎಂದು ಹೇಳಿದರು.

ಧರ್ಮಸ್ಥಳ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಎಸ್‌ಐಟಿಯವರಿಗೆ ಸರ್ಕಾರದಿಂದ ಸ್ಪಷ್ಟವಾಗಿ ಹೇಳಿದ್ದೇವೆ. ವರದಿ ನೀಡುವುದು ಎಸ್‌ಐಟಿಯವರಿಗೆ ಬಿಟ್ಟದ್ದು. ವರದಿ ಬಂದ ನಂತರ ಗೊತ್ತಾಗುತ್ತದೆ. ಎಸ್‌ಐಟಿಯವರು ಸರ್ಕಾರಕ್ಕೆ ವರದಿ ಕೊಡಲೇಬೇಕಾಗುತ್ತದೆ. ಪ್ರಕರಣದ ವಾಸ್ತವಾಂಶ ಏನಿದೆ ಎಂಬುದನ್ನು ಸದನಕ್ಕೆ ಮಾಹಿತಿ ನೀಡಲೇಬೇಕು‌ ಎಂದು ಹೇಳಿದರು.

ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಅನ್ನೋದು ಮೂಢನಂಬಿಕೆ, ನನ್ನ ಅಧಿಕಾರ ಈಗಲೂ, ಭವಿಷ್ಯದಲ್ಲೂ ಭದ್ರ: ಸಿಎಂ

BREAKING : ರಾಜ್ಯ ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ಸಾಗರದ ಮಾರಿಕಾಂಬ ಜಾತ್ರೆಯಲ್ಲಿ ‘ಅಮ್ಯೂಸ್ ಮೆಂಟ್ ಪಾರ್ಕ್ ದರ’ ದುಬಾರಿ ಇರಲ್ಲ: ಟೆಂಡರ್ ದಾರ ಲಿಂಗರಾಜು ಸ್ಪಷ್ಟನೆ

13/01/2026 10:52 PM2 Mins Read

ನಾಳೆಯಿಂದ ‘ಸಿಗಂದೂರು ಜಾತ್ರಾ’ ಮಹೋತ್ಸವ: ‘ಭಕ್ತರ ಸ್ವಾಗತ’ಕ್ಕೆ ಸಕಲ ಸಿದ್ಧತೆ

13/01/2026 9:21 PM2 Mins Read

ಕೋಲಾರದಲ್ಲಿ ಭೀಕರ ಅಪಘಾತ : ಬೈಕ್ ಗೆ ‘KSRTC’ ಬಸ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲಿ ಸಾವು!

13/01/2026 8:59 PM1 Min Read
Recent News

ಸಾಗರದ ಮಾರಿಕಾಂಬ ಜಾತ್ರೆಯಲ್ಲಿ ‘ಅಮ್ಯೂಸ್ ಮೆಂಟ್ ಪಾರ್ಕ್ ದರ’ ದುಬಾರಿ ಇರಲ್ಲ: ಟೆಂಡರ್ ದಾರ ಲಿಂಗರಾಜು ಸ್ಪಷ್ಟನೆ

13/01/2026 10:52 PM

‘ಅರಮನೆ ವೃದ್ಧಾಶ್ರಮ’ದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’

13/01/2026 10:29 PM

ನಾಳೆಯಿಂದ ‘ಸಿಗಂದೂರು ಜಾತ್ರಾ’ ಮಹೋತ್ಸವ: ‘ಭಕ್ತರ ಸ್ವಾಗತ’ಕ್ಕೆ ಸಕಲ ಸಿದ್ಧತೆ

13/01/2026 9:21 PM

ಕೋಲಾರದಲ್ಲಿ ಭೀಕರ ಅಪಘಾತ : ಬೈಕ್ ಗೆ ‘KSRTC’ ಬಸ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲಿ ಸಾವು!

13/01/2026 8:59 PM
State News
KARNATAKA

ಸಾಗರದ ಮಾರಿಕಾಂಬ ಜಾತ್ರೆಯಲ್ಲಿ ‘ಅಮ್ಯೂಸ್ ಮೆಂಟ್ ಪಾರ್ಕ್ ದರ’ ದುಬಾರಿ ಇರಲ್ಲ: ಟೆಂಡರ್ ದಾರ ಲಿಂಗರಾಜು ಸ್ಪಷ್ಟನೆ

By kannadanewsnow0913/01/2026 10:52 PM KARNATAKA 2 Mins Read

ಶಿವಮೊಗ್ಗ: ಮಾರಿಕಾಂಬ ಜಾತ್ರೆಯ ಪ್ರಯುಕ್ತ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಕಾರ್ಯವು ನೆಹರು ಮೈದಾನದಲ್ಲಿ ನಡೆಯುತ್ತಿದೆ. ಟೆಂಡರ್ ಪಡೆದಿರೋದು ದುಬಾರಿ…

ನಾಳೆಯಿಂದ ‘ಸಿಗಂದೂರು ಜಾತ್ರಾ’ ಮಹೋತ್ಸವ: ‘ಭಕ್ತರ ಸ್ವಾಗತ’ಕ್ಕೆ ಸಕಲ ಸಿದ್ಧತೆ

13/01/2026 9:21 PM

ಕೋಲಾರದಲ್ಲಿ ಭೀಕರ ಅಪಘಾತ : ಬೈಕ್ ಗೆ ‘KSRTC’ ಬಸ್ ಡಿಕ್ಕಿ, ಇಬ್ಬರು ಯುವಕರು ಸ್ಥಳದಲ್ಲಿ ಸಾವು!

13/01/2026 8:59 PM

ಕಾಲೇಜುಗಳು ಹಾಗೂ ವಿವಿಯಲ್ಲಿ ವಿದ್ಯಾರ್ಥಿಗಳ ಚುನಾವಣೆ: ಮೊದಲ ಸಭೆ ನಡೆಸಿದ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್

13/01/2026 8:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.