Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಲ್ ಕ್ಲಿಂಟನ್ ದಂಪತಿಗೆ ಹೌಸ್ ಕಮಿಟಿ ವಿಚಾರಣೆ: ಎಪ್ಸ್ಟೀನ್, ಪಿಜ್ಜಾಗೇಟ್ ಮತ್ತು UFO ರಹಸ್ಯಗಳ ಬಗ್ಗೆ ತೀವ್ರ ಪ್ರಶ್ನೆ!

03/03/2026 11:32 AM

BREAKING : ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟಿಸುವುದಾಗಿ ಪೋಸ್ಟ್ : ಕಿಡಿಗೇಡಿ ವಿರುದ್ಧ `FIR’ ದಾಖಲು!

03/03/2026 11:22 AM

Watch video:ಮೈದಾನದಲ್ಲಿ ಮೌನದ ಕ್ರಾಂತಿ! ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ಮಹಿಳಾ ಫುಟ್ಬಾಲಿಗರು!

03/03/2026 11:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಇನ್ಮುಂದೆ ಇಷ್ಟು ‘ಹಣ ದಾನ’ ಕೊಟ್ರೆ ಅವರ ಹೆಸರನ್ನೇ ‘ಸರ್ಕಾರಿ ಆಸ್ಪತ್ರೆ’ಗೆ ಇಡಲು ಸರ್ಕಾರ ನಿರ್ಧಾರ, ಅಧಿಕೃತ ಆದೇಶ
KARNATAKA

BIG NEWS: ಇನ್ಮುಂದೆ ಇಷ್ಟು ‘ಹಣ ದಾನ’ ಕೊಟ್ರೆ ಅವರ ಹೆಸರನ್ನೇ ‘ಸರ್ಕಾರಿ ಆಸ್ಪತ್ರೆ’ಗೆ ಇಡಲು ಸರ್ಕಾರ ನಿರ್ಧಾರ, ಅಧಿಕೃತ ಆದೇಶ

By kannadanewsnow0907/12/2025 6:50 AM

ಬೆಂಗಳೂರು: ರಾಜ್ಯದ ಸರ್ಕಾರಿ ಆಯುಷ್ ಆಸ್ಪತ್ರೆಗಳಿಗೆ ದಾನಿಗಳು ಅಥವಾ ದಾನಿಗಳು ಸೂಚಿಸಿರುವ ಹೆಸರನ್ನು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೇ ಸರ್ಕಾರ ನಿಗದಿ ಪಡಿಸಿದಂತ ಹಣವನ್ನು ದಾನವಾಗಿ ನೀಡಿದರೇ ಅವರು ಸೂಚಿಸಿದ ಹೆಸರು ಇಡೋಲಾಗುತ್ತದೆ ಅಂತ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಆಸ್ಪತ್ರೆಗಳ/ ಕೇಂದ್ರಗಳಿಗೆ ಸಾರ್ವಜನಿಕರಿಂದ ನಿವೇಶನ, ಕಟ್ಟಡ ಮತ್ತು ಹಣವನ್ನು ದಾನ ರೂಪದಲ್ಲಿ ಸ್ವೀಕರಿಸಲು ಹಾಗೂ ದಾನಿಗಳ ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡಲು ಷರತ್ತುಗಳೊಂದಿಗೆ ಅನುಮತಿ ನೀಡಿ ಆದೇಶಿಸಲಾಗಿರುತ್ತದೆ ಎಂದಿದ್ದಾರೆ.

ಆಯುಕ್ತರು, ಆಯುಷ್ ಇಲಾಖೆ ಇವರು ರಾಷ್ಟ್ರೀಯ ಆಯುಷ್‌ ಅಭಿಯಾನದಡಿಯಲ್ಲಿ 2018-19ನೇ ಸಾಲಿಗೆ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಇಲಾಖೆಗೆ 15 ಆಯುಷ್ ಆಸ್ಪತ್ರೆಗಳನ್ನು ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿ ಮೇಲ್ದರ್ಜೆಗೇರಿಸಲು ಭಾರತ ಸರ್ಕಾರವು ಅನುಮೋದನೆ ನೀಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರತಿ ಆಸ್ಪತ್ರೆಗೆ ಕಟ್ಟಡ ಉನ್ನತೀಕರಣ ಕಾಮಗಾರಿಗಳಿಗಾಗಿ ರೂ.56.25 ಲಕ್ಷಗಳನ್ನು ನಿಗದಿಪಡಿಸಿರುತ್ತದೆ.

ಈ ಯೋಜನೆಯಡಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ನರಗುಂದ, ಗದಗ ಜಿಲ್ಲೆ ಇಲ್ಲಿಗೆ ಒಂದು ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿರುತ್ತದೆ. ಸದರಿ ಕಟ್ಟಡದ ನಿವೇಶನ ಪಡೆಯಲು ಅವಶ್ಯಕ ಅನುದಾನ ರೂ.5,26,943/- ಗಳನ್ನು ದಾನವಾಗಿ ನೀಡಿರುವ ಸಿ ಸಿ ಪಾಟೀಲ್, ಮಾಜಿ ಲೋಕೋಪಯೋಗಿ ಸಚಿವರು, ನರಗುಂದ ರವರು ಸದರಿ ಆಸ್ಪತ್ರೆಗೆ ಅವರ ಅಣ್ಣನವರಾದ ದಿವಂಗತ  ಶೇಖರಗೌಡ ಚಿನಪ್ಪಗೌಡ ಪಾಟೀಲ್, ಸಾ|| ಆಚಮಟ್ಟಿ ತಾ ನರಗುಂದ ಇವರ ಹೆಸರನ್ನು ಇಡುವಂತೆ ಮನವಿ ಮಾಡಿರುತ್ತಾರೆ. ಆಸ್ಪತ್ರೆಗೆ ದಿವಂಗತ ಶೇಖರಗೌಡ ಚನ್ನಪ್ಪಗೌಡ ಪಾಟೀಲ್, ಸಾ|| ಆಚಮಟ್ಟಿ, ತಾ-ನರಗುಂದ ಇವರ ಹೆಸರನ್ನು ಇಡಲು ಸರ್ಕಾರದ ಸೂಕ್ತ ಮಂಜೂರಾತಿ ನೀಡಬೇಕೆಂದು ಆಯುಕ್ತರು, ಆಯುಷ್ ಇಲಾಖೆ ಇವರು ಕೋರಿರುತ್ತಾರೆ.

ಆಯುಕ್ತರು, ಆಯುಷ್‌ ಇಲಾಖೆ ಇವರ ಪುಸ್ತಾವನೆ ಹಾಗೂ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದ ಸರ್ಕಾರವು ಆಯುಷ್ ಆಸ್ಪತ್ರೆಗಳಿಗೆ ಭೂಮಿ, ಉಪಕರಣಗಳು ಅಥವಾ ಹಣವನ್ನು ದಾನ ಮಾಡಲು ಮುಂದೆ ಬರುವ ಅನೇಕ ಆಸಕ್ತ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡಲು ಅನುವಾಗುವಂತೆ ನಿಬಂಧನೆಗಳು ಮತ್ತು ಷರತ್ತುಗಳನ್ನು ಆಯುಷ್ ಇಲಾಖೆಗೆ ವಿಸ್ತರಿಸಲು ತೀರ್ಮಾನಿಸಿ ಕೆಳಕಂಡಂತೆ ಆದೇಶಿಸಿದ್ದಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆಯುಷ್ ಇಲಾಖೆಯ ಎಲ್ಲಾ ಆಸ್ಪತ್ರೆಗಳು/ ಚಿಕಿತ್ಸಾಲಯಗಳಿಗೆ ಸಾರ್ವಜನಿಕರಿಂದ ನಿವೇಶನ, ಕಟ್ಟಡ ಮತ್ತು ಹಣವನ್ನು ದಾನ ರೂಪದಲ್ಲಿ ಸ್ವೀಕರಿಸಲು ಹಾಗೂ ದಾನಿಗಳ ಅಥವಾ ದಾನಿಗಳು ಸೂಚಿಸಿರುವ ಹೆಸರುಗಳನ್ನು ನಾಮಕರಣ ಮಾಡುವ ಬಗ್ಗೆ ಆಯುಕ್ತರು, ಆಯುಷ್ ಇಲಾಖೆ, ಬೆಂಗಳೂರು ಇವರಿಗೆ ಕೆಳಕಂಡ ಷರತ್ತುಗಳನ್ನು ವಿಧಿಸಿ, ಆದೇಶಿಸಲಾಗಿದೆ.

ಷರತ್ತುಗಳು:-

1. ಚಿಕಿತ್ಸಾಲಯ/ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) 100:100 ಚದುರ ಅಡಿ ನಿವೇಶನ, ತಾಲ್ಲೂಕು ಆಯುಷ್ ಆಸ್ಪತ್ರೆ 2 ಎಕರೆ ಹಾಗೂ ಜಿಲ್ಲಾ ಆಯುಷ್‌ ಆಸ್ಪತ್ರೆ 4 ಎಕರೆ ಜಮೀನನ್ನು ದಾನ ನೀಡಿದ್ದಲ್ಲಿ, ದಾನಿಗಳು ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ಆಸ್ಪತ್ರೆಗಳಿಗೆ/ಕೇಂದ್ರಗಳಿಗೆ ನಾಮಕರಣ ಮಾಡುವುದು.

2. ಪಟ್ಟಣ ಪ್ರದೇಶಗಳಲ್ಲಿ/ನಗರ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆ/ಕೇಂದ್ರಗಳಿಗೆ ದಾನಿಗಳ ಹೆಸರನ್ನು ನಾಮಕರಣ ಮಾಡಲು ಕಟ್ಟಡದ ಅಂದಾಜು ಮೌಲ್ಯದ ಅರ್ಧ ಭಾಗ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕನೇ ಒಂದು ಭಾಗದಷ್ಟು ಕಟ್ಟಡದ ಅಂದಾಜು ಮೌಲ್ಯದ ಮೊತ್ತವನ್ನು ದಾನವಾಗಿ ನೀಡಿರಬೇಕು.

3. ಆಸ್ಪತ್ರೆ/ಧರ್ಮ ಶಾಲೆ ನಿರ್ಮಿಸಲು ಪೂರ್ಣ ಮೊತ್ತ ನೀಡಿದ್ದಲ್ಲಿ ಧರ್ಮ ಶಾಲೆಗೆ ದಾನಿಗಳು ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡುವುದು. 4. ಆಸ್ಪತ್ರೆಯ ಒಂದು ವಾರ್ಡ್/ರೂಮ್ ನಿರ್ಮಿಸಲು ಪೂರ್ಣ ಮೊತ್ತವನ್ನು ದಾನವಾಗಿ ನೀಡಿದ್ದಲ್ಲಿ ವಾರ್ಡ್/ರೂಮ್‌ಗೆ ದಾನಿಗಳ ಅಥವಾ ದಾನಿಗಳು ಸೂಚಿಸುವ ಹೆಸರುಗಳನ್ನು ನಾಮಕರಣ ಮಾಡುವುದು.

5. ಉಪಕರಣಗಳನ್ನು ನೀಡಿದ್ದಲ್ಲಿ ಸೂಚನಾ ನಮೂದಿಸುವುದು. ಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸುವುದು

6. ದಾನಿಗಳು ರೂ.1.00 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನವಾಗಿ ನೀಡಿದಲ್ಲಿ ಆಸ್ಪತ್ರೆಯ ನಾಮ ಫಲಕದಲ್ಲಿ ದಾನಿಗಳ ಹೆಸರನ್ನು ನಮೂದಿಸುವುದು.

7. ದಾನಿಗಳ ನೀಡುವ ದಾನ ಅಸ್ತಿ ರೂಪದಲ್ಲಿದ್ದರೆ ದಾನ ಸ್ವೀಕರಿಸುವ ಹಕ್ಕು ಪತ್ರದ ದಾಖಲೆಗಳು ನ್ಯಾಯ ಬದ್ಧವಾಗಿರುವುದನ್ನು ಪರಿಶೀಲಿಸಿ, ಸದರಿ ಆಸ್ತಿಯನ್ನು ಕಾನೂನು ತೊಡಕುಗಳು ಬಾರದಂತೆ ಇಲಾಖೆಗೆ ವರ್ಗಾಯಿಸಿಕೊಂಡು ಮೇಲೆ ತಿಳಿಸಿರುವ ನಿಬಂಧನೆಗಳನ್ನು ಪೂರೈಸಿದ ನಂತರ ಆಸ್ಪತ್ರೆಗೆ ದಾನಿಗಳು ಸೂಚಿಸಿರುವ ಹೆಸರನ್ನು ನಾಮಕರಣ ಮಾಡುವುದು.

8. ಸ್ವೀಕರಿಸಿದ ದಾನ, ಆಸ್ಪತ್ರೆಗಳಿಗೆ ದಾನಿಗಳು ಸೂಚಿಸುವ ಹೆಸರನ್ನು ನಾಮಕರಣ ಮಾಡಲು ಮಾತ್ರ ಅನ್ವಯವಾಗುತ್ತದೆ. ಸ್ವೀಕರಿಸಿದ ದಾನವನ್ನು ಯಾವುದೇ ಕಾರಣಕ್ಕಾಗಿ ಹಿಂದಿರುಗಿಸಲಾಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ವಸಂತ ಬಿ ಈಶ್ವರಗೆರೆ…, ಸಂಪಾದಕರು

Share. Facebook Twitter LinkedIn WhatsApp Email

Related Posts

BREAKING : ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟಿಸುವುದಾಗಿ ಪೋಸ್ಟ್ : ಕಿಡಿಗೇಡಿ ವಿರುದ್ಧ `FIR’ ದಾಖಲು!

03/03/2026 11:22 AM1 Min Read

ಬಾಡಿಗೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು `ಲೀಸ್ ಅಗ್ರಿಮೆಂಟ್ ಡಿಜಿಟಲ್ ಇ-ಸ್ಟಾಂಪ್’ ಪಡೆಯಬಹುದು !

03/03/2026 11:17 AM2 Mins Read

‘ಕೇತುಗ್ರಸ್ಥ ಚಂದ್ರಗ್ರಹಣ’ ಹಿನ್ನೆಲೆ, ದೇವಸ್ಥಾನ ಬಂದ್ ಮಾಡುವ ಹಿಂದಿನ ಕಾರಣವೇನು? ಇಲ್ಲಿದೆ ಸಂಪೂರ್ಣ ಇತಿಹಾಸ & ಮಾಹಿತಿ

03/03/2026 11:11 AM2 Mins Read
Recent News

ಬಿಲ್ ಕ್ಲಿಂಟನ್ ದಂಪತಿಗೆ ಹೌಸ್ ಕಮಿಟಿ ವಿಚಾರಣೆ: ಎಪ್ಸ್ಟೀನ್, ಪಿಜ್ಜಾಗೇಟ್ ಮತ್ತು UFO ರಹಸ್ಯಗಳ ಬಗ್ಗೆ ತೀವ್ರ ಪ್ರಶ್ನೆ!

03/03/2026 11:32 AM

BREAKING : ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟಿಸುವುದಾಗಿ ಪೋಸ್ಟ್ : ಕಿಡಿಗೇಡಿ ವಿರುದ್ಧ `FIR’ ದಾಖಲು!

03/03/2026 11:22 AM

Watch video:ಮೈದಾನದಲ್ಲಿ ಮೌನದ ಕ್ರಾಂತಿ! ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ಮಹಿಳಾ ಫುಟ್ಬಾಲಿಗರು!

03/03/2026 11:17 AM

ಬಾಡಿಗೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು `ಲೀಸ್ ಅಗ್ರಿಮೆಂಟ್ ಡಿಜಿಟಲ್ ಇ-ಸ್ಟಾಂಪ್’ ಪಡೆಯಬಹುದು !

03/03/2026 11:17 AM
State News
KARNATAKA

BREAKING : ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟಿಸುವುದಾಗಿ ಪೋಸ್ಟ್ : ಕಿಡಿಗೇಡಿ ವಿರುದ್ಧ `FIR’ ದಾಖಲು!

By kannadanewsnow5703/03/2026 11:22 AM KARNATAKA 1 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮಸೀದಿಯೊಂದರ ಬಳಿ ಬಾಂಬ್ ಸ್ಫೋಟಿಸುವುದಾಗಿ ಇನ್ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ವಿರುದ್ಧ…

ಬಾಡಿಗೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಮನೆಯಲ್ಲೇ ಕುಳಿತು `ಲೀಸ್ ಅಗ್ರಿಮೆಂಟ್ ಡಿಜಿಟಲ್ ಇ-ಸ್ಟಾಂಪ್’ ಪಡೆಯಬಹುದು !

03/03/2026 11:17 AM

‘ಕೇತುಗ್ರಸ್ಥ ಚಂದ್ರಗ್ರಹಣ’ ಹಿನ್ನೆಲೆ, ದೇವಸ್ಥಾನ ಬಂದ್ ಮಾಡುವ ಹಿಂದಿನ ಕಾರಣವೇನು? ಇಲ್ಲಿದೆ ಸಂಪೂರ್ಣ ಇತಿಹಾಸ & ಮಾಹಿತಿ

03/03/2026 11:11 AM

BIG UPDATE : ರಾಜ್ಯಾದ್ಯಂತ ಮಾ. 11 ರಿಂದ ಸರ್ಕಾರಿ ವೈದ್ಯರು, ಸಿಬ್ಬಂದಿ, ನೌಕರರ ಮುಷ್ಕರ ಫಿಕ್ಸ್ , ಆರೋಗ್ಯ ಸೇವೆಯಲ್ಲಿ ವ್ಯತ್ಯಯ.!

03/03/2026 11:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.