Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಚರಂಡಿಯಲ್ಲಿ ನವಜಾತ ಹೆಣ್ಣು ಶಿಶು ಬೀಸಾಡಿ ಹೋದ ಪಾಪಿಗಳು!

22/06/2025 2:22 PM

ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಸಚಿವ ಈಶ್ವರ್ ಖಂಡ್ರೆ

22/06/2025 2:18 PM

BIG NEWS : ಬಾಗಲಕೋಟೆಯಲ್ಲಿ ಘೋರ ದುರಂತ : ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ, ಬಾಲಕ ಸೇರಿ ಇಬ್ಬರು ಸಾವು!

22/06/2025 2:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಸಚಿವ ಈಶ್ವರ್ ಖಂಡ್ರೆ
KARNATAKA

ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಸಚಿವ ಈಶ್ವರ್ ಖಂಡ್ರೆ

By kannadanewsnow0922/06/2025 2:18 PM

ಬೆಂಗಳೂರು: ಆಧುನಿಕ ಕರ್ನಾಟಕ, ಆ ಮೂಲಕ ಆಧುನಿಕ ಭಾರತ ನಿರ್ಮಾಣಕ್ಕೆ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಅಪಾರವಾದ್ದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿಂದು ಕರ್ನಾಟಕ ವೀರಶೈವ ಲಿಂಗಾಯಿತ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮದವರಿಗೂ ಆಶ್ರಯ, ಅನ್ನ, ಅಕ್ಷರದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ವೀರಶೈವ ಲಿಂಗಾಯತ ಮಠ ಮಾನ್ಯಗಳಿಗೆ ಸಲ್ಲುತ್ತದೆ ಎಂದರು.

ವಿದ್ಯಾವಂತ ಮತ್ತು ಗುಣವಂತ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ನಮ್ಮ ಸಮಾಜದ ಮಠಮಾನ್ಯಗಳ ಕೊಡುಗೆಯಿಂದ ಇಂದು ಕೋಟ್ಯಂತರ ಜನರು ವಿದ್ಯಾವಂತರಾಗಿದ್ದಾರೆ, ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನಮ್ಮ ಪೂರ್ವಜರು ಪ್ರತಿಪಾದಿಸಿದರು. 12ನೇ ಶತಮಾನದಲ್ಲಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಸಂದೇಶವನ್ನು ಬಸವಾದಿ ಶರಣರು ಸಾರಿದರು. ಇಡೀ ವಿಶ್ವಕಕ್ಕೆ ಸಾಮಾಜಿಕ ನ್ಯಾಯದ, ಸಮ ಸಮಾಜದ ಪರಿಕಲ್ಪನೆ ಕೊಟ್ಟಿದ್ದೇ ನಮ್ಮ ಸಮಾಜ. ಇಂತಹ ಅಸ್ಮಿತೆ ಕೊಟ್ಟ ಸಮಾಜಕ್ಕೆ ನಾನು ಋಣಿಯಾಗಿರಬೇಕು ಎಂದರು.

ಬೆಂಗಳೂರಲ್ಲಿ ಜಮೀನಿಗೆ ಬಂಗಾರದ ಬೆಲೆ ಇದೆ. ಸಮಾಜದ ಸರ್ಕಾರಿ ನೌಕರರಿಗಾಗಿಯೇ ಒಂದು ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚುವ ಮಹತ್ಕಾರ್ಯವನ್ನು ಈ ಸಂಘ ಮಾಡುತ್ತಿದೆ. ಯಾವ ಸಂಸ್ಥೆ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತದೆಯೋ ಅದು ಯಶಸ್ಸು ಸಾಧಿಸುತ್ತದೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮುದಾಯ ಮೇವರ್ಗದ ಸಮುದಾಯವಾದರೂ ನಮ್ಮಲ್ಲಿಯೂ ಕಡು ಬಡವರಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅವರೆಲ್ಲರೂ ಸಬಲರಾಗಬೇಕು, ಬಡತನದಿಂದ ಹೊರ ಬರಬೇಕು ಇದಕ್ಕಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶ್ರಮಿಸುತ್ತಿದೆ ಎಂದರು.

ನಮ್ಮ ರಾಜ್ಯದಲ್ಲಿ 7 ಕೋಟಿಗೂ ಅಧಿಕ ಜನರಿದ್ದಾರೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಇಡೀ ರಾಜ್ಯದಲ್ಲಿ 6.5 ಲಕ್ಷ ಸರ್ಕಾರಿ ಅರೆ ಸರ್ಕಾರಿ ಸಿಬ್ಬಂದಿ ಇರಬಹುದು. ನೀವು ಅದೃಷ್ಟವಂತರು. ನೀವೆಲ್ಲರೂ ಸಮಾಜದ ಪ್ರತಿಭಾವಂತರ ಉನ್ನತ ವ್ಯಾಸಂಗಕ್ಕೆ ಶೇ. 1ರಷ್ಟು ನಿಮ್ಮ ಆದಾಯ ವಿನಿಯೋಗಿಸಿ ಎಂದು ಕಿವಿ ಮಾತು ಹೇಳಿದರು.

ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ದೇಶ ನಿನಗೇನು ಕೊಟ್ಟಿದೆ ಎಂದು ಕೇಳಬೇಡ. ದೇಶಕ್ಕೆ ನೀನು ಏನು ಕೊಟ್ಟಿದ್ದೀಯಾ ಎಂದು ನಿನ್ನನ್ನೇ ಕೇಳಿಕೋ ಎಂದು ಹೇಳುತ್ತಿದ್ದರು, ಅದೇ ರೀತಿ ಸಮಾಜ ನಿಮಗೆ ಎಲ್ಲ ನೀಡಿದೆ. ನೀವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಘದ ರವಿ ತಿರ್ಲಾಪುರ ಮತ್ತಿತರರು ಪಾಲ್ಗೊಂಡಿದ್ದರು.

Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಚರಂಡಿಯಲ್ಲಿ ನವಜಾತ ಹೆಣ್ಣು ಶಿಶು ಬೀಸಾಡಿ ಹೋದ ಪಾಪಿಗಳು!

22/06/2025 2:22 PM1 Min Read

BIG NEWS : ಬಾಗಲಕೋಟೆಯಲ್ಲಿ ಘೋರ ದುರಂತ : ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ, ಬಾಲಕ ಸೇರಿ ಇಬ್ಬರು ಸಾವು!

22/06/2025 2:14 PM1 Min Read

BREAKING : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಖಾಲಿ ಇರುವ 1 ಸಾವಿರ ‘PSI’ ಹುದ್ದೆ ಶೀಘ್ರ ಭರ್ತಿ : ಜಿ.ಪರಮೇಶ್ವರ್

22/06/2025 2:08 PM1 Min Read
Recent News

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಚರಂಡಿಯಲ್ಲಿ ನವಜಾತ ಹೆಣ್ಣು ಶಿಶು ಬೀಸಾಡಿ ಹೋದ ಪಾಪಿಗಳು!

22/06/2025 2:22 PM

ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಸಚಿವ ಈಶ್ವರ್ ಖಂಡ್ರೆ

22/06/2025 2:18 PM

BIG NEWS : ಬಾಗಲಕೋಟೆಯಲ್ಲಿ ಘೋರ ದುರಂತ : ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ, ಬಾಲಕ ಸೇರಿ ಇಬ್ಬರು ಸಾವು!

22/06/2025 2:14 PM

BREAKING : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಖಾಲಿ ಇರುವ 1 ಸಾವಿರ ‘PSI’ ಹುದ್ದೆ ಶೀಘ್ರ ಭರ್ತಿ : ಜಿ.ಪರಮೇಶ್ವರ್

22/06/2025 2:08 PM
State News
KARNATAKA

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಚರಂಡಿಯಲ್ಲಿ ನವಜಾತ ಹೆಣ್ಣು ಶಿಶು ಬೀಸಾಡಿ ಹೋದ ಪಾಪಿಗಳು!

By kannadanewsnow0522/06/2025 2:22 PM KARNATAKA 1 Min Read

ವಿಜಯನಗರ : ರಾಜ್ಯದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಪಾಪಿಗಳು ನವಜಾತ ಹೆಣ್ಣು ಶಿಶುವನ್ನು ಚರಂಡಿಯಲ್ಲಿ ಬಿಸಾಡಿ ಹೋಗಿರುವ ಘಟನೆ…

ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರ: ಸಚಿವ ಈಶ್ವರ್ ಖಂಡ್ರೆ

22/06/2025 2:18 PM

BIG NEWS : ಬಾಗಲಕೋಟೆಯಲ್ಲಿ ಘೋರ ದುರಂತ : ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ, ಬಾಲಕ ಸೇರಿ ಇಬ್ಬರು ಸಾವು!

22/06/2025 2:14 PM

BREAKING : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಖಾಲಿ ಇರುವ 1 ಸಾವಿರ ‘PSI’ ಹುದ್ದೆ ಶೀಘ್ರ ಭರ್ತಿ : ಜಿ.ಪರಮೇಶ್ವರ್

22/06/2025 2:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.