ಮೈಸೂರು : ಕೆಎಸ್ಆಕರ್ ಟಿಸಿ ಬಸ್ ನಲ್ಲಿ ಬೆಕ್ಕಿನ ಮರಿಗೂ ನಿರ್ವಾಹಕ ಟಿಕೆಟ್ ನೀಡಿರುವ ಘಟನೆ ನಡೆದಿದೆ.
ಹೌದು, ಮೈಸೂರು – ಮಡಿಕೇರಿಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಕ ತನ್ನ ಜೊತೆ ಬೆಕ್ಕಿನ ಮರಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ನಿರ್ವಾಹಕ ಬೆಕ್ಕಿನ ಮರಿಗೂ ಆಫ್ ಟಿಕೆಟ್ ನೀಡಿದ್ದಾರೆ.
ಮೈಸೂರು – ಮಡಿಕೇರಿ KSRTC ಬಸ್ಸಿನಲ್ಲಿ ಬರುವಾಗ ಬೆಕ್ಕಿನ ಮರಿಗೆ ಟಿಕೇಟ್ ಕೇಳಿ, ಕಂಡೆಕ್ಟರ್ “ಅದು ಬೆಕ್ಕಿನ ಮರಿನೆ ಆಗಲಿ ಮಕ್ಕಳೆ ಆಗಲಿ ಆಫ್ ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಈಗ ಬೆಕ್ಕಿಗೆ ಕ್ಯಾಟ್ ಪಾಸ್ ಮಾಡಬೇಕಾ. ಅದು ಅಲ್ಲದೆ ದುಡ್ಡು ತೆಗೆದು ಸೀಟು ಕೂಡಾ ಕೊಟ್ಟಿಲ್ಲ. ಇದು ನ್ಯಾಯನಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೂ ಟ್ಯಾಗ್ ಮಾಡಿದ್ದಾರೆ.









