ಶಿವಮೊಗ್ಗ : ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆಯನ್ನು ಮನೆಮನೆಗೆ ತಲುಪಿಸಬೇಕು. ನಾವು ಮಾಡಿದ್ದನ್ನು ಹೇಳಲು ವಿಫಲವಾದರೇ, ಬಿಜೆಪಿಯವರು ಮಾಡದೆ ಇರುವುದನ್ನು ಹೇಳಿ ಯಶಸ್ವಿಯಾಗುತ್ತಿದ್ದಾರೆ. ಆದ್ದರಿಂದ ಕಾರ್ಯಕರ್ತರು ಸರ್ಕಾರದ ಸಾಧನೆಯನ್ನು ಕರಪತ್ರ, ಧ್ವನಿವರ್ಧಕ ಸೇರಿದಂತೆ ಬೇರೆಬೇರೆ ಮಾಧ್ಯಮಗಳ ಮೂಲಕ ಊರೂರಿನಲ್ಲಿ ಪ್ರಚುರಪಡಿಸಬೇಕು ಎಂದು ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಗಾಂಧಿಮಂದಿರದದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೇಸ್ನಿಂದ ಏರ್ಪಡಿಸಿದ್ದ ಎರಡು ವರ್ಷಗಳ ಸಾಧನಾ ಸಮಾವೇಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಸಮಾಜವನ್ನು ಧರ್ಮದ ಹೆಸರು ಹೇಳಿ ಒಡೆಯುತ್ತಾರೆ. ಮಾಡದೆ ಇರುವುದನ್ನು ಮಾಡಿದ್ದಾಗಿ ಬಿಂಬಿಸಿ ಗೆಲ್ಲುತ್ತಾರೆ. ಹಿಂದೂ ಧರ್ಮಕ್ಕೆ ಕಳಂಕ ತಂದವರು ಯಾರಾದರೂ ಇದ್ದರೆ ಅದು ಬಿಜೆಪಿಯವರು. ಸಮಾಜದಲ್ಲಿ ಒಡಕನ್ನು ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಎಲ್ಲ ಧರ್ಮಜಾತಿಯವರನ್ನು ಒಟ್ಟಾಗಿ ಕರೆದೊಯ್ಯುವ ಕೆಲಸ ಕಾಂಗ್ರೇಸ್ ಮಾಡುತ್ತಿದೆ. ಕಾಂಗ್ರೇಸ್ ಸರ್ಕಾರದ ಎರಡು ವರ್ಷದ ಅದ್ವಿತೀಯವಾಗಿದೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಐದು ಗ್ಯಾರಂಟಿಗಳ ಪೈಕಿ ಒಂದಿಲ್ಲೊಂದು ತಲುಪಿದೆ. ರಾಜ್ಯದ ಜನರ ಆರ್ಥಿಕ ಶಕ್ತಿಯನ್ನು ನಮ್ಮ ಸರ್ಕಾರ ಹೆಚ್ಚಿಸಿದೆ. ಬಿಜೆಪಿಯವರು ಸಹ ಸರ್ಕಾರದ ಉಚಿತ ಯೋಜನೆ ಪಡೆಯುತ್ತಿದ್ದಾರೆ. ಆದರೂ ಕಾಂಗ್ರೇಸ್ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ದೇಶಕ್ಕೆ ಕಾಂಗ್ರೇಸ್ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಹೊಸಪೇಟೆಯಲ್ಲಿ ಅದ್ದೂರಿಯ ಎರಡು ವರ್ಷದ ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿದೆ. ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಜೊತೆಗೆ ಅಭಿವೃದ್ದಿ ಕರ್ಯವನ್ನು ಮಾಡಿಕೊಂಡು ಬರುತ್ತಿದೆ. ಕ್ಷೇತ್ರವ್ಯಾಪ್ತಿಯ 32 ಗ್ರಾಮ ಪಂಚಾಯ್ತಿಗೆ ತಲಾ ಒಂದರಿಂದ ಒಂದೂವರೆ ಕೋಟಿ, ನಗರಸಭೆಯ 31 ವಾರ್ಡ್ ಪೈಕಿ ಪ್ರತಿ ವಾರ್ಡ್ಗೆ ತಲಾ 2 ಕೋಟಿಯಂತೆ ಅನುದಾನ ನೀಡಿ ಅಭಿವೃದ್ದಿ ಕೆಲಸ ನಡೆಯುತ್ತಿದೆ. ತಾಲ್ಲೂಕಿನಾದ್ಯಂತ ಬೇರೆಬೇರೆ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಬೇಳೂರು ಅಭಿವೃದ್ದಿಯ ಸಂಕೇತವಾಗಿದ್ದಾರೆ. ಜನರೊಂದಿಗೆ ಸ್ಪಂದಿಸುವ ಉತ್ತಮ ಶಾಸಕರು ನಮಗೆ ಇದ್ದಾರೆ. ಸರ್ಕಾರದ ಸಾಧನೆ ಪ್ರತಿಮನೆಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ನಗರ ಕಾಂಗ್ರೇಸ್ ಅಧ್ಯಕ್ಷ ಐ.ಎನ್.ಸುರೇಶಬಾಬ ಮಾತನಾಡಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಈಗಾಗಲೇ ಜನರಿಗೆ ತಲುಪಿದ್ದಾವೆ. ಬಡವರು, ಮಧ್ಯಮ ವರ್ಗದವರಿಗೆ ಗ್ಯಾರಂಟಿ ಯೋಜನೆಗಳು ಅನುಕೂಲ ಕಲ್ಪಿಸಿದ್ದಾವೆ. ಗೃಹಲಕ್ಷ್ಮೀ ಯಜಮಾನಿಯರಿಗೆ ವಿವಿಧ ರೀತಿಯಲ್ಲಿ ನೆರವಾಗಿದ್ದು, ಜೀವನ ನಿರ್ವಹಣೆಗೆ ಸರ್ಕಾರದ ಗ್ಯಾರಂಟಿಗಳು ಸಾಥ್ ನೀಡಿದ್ದಾವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಜಾಕೀರ್, ಎಲ್.ಚಂದ್ರಪ್ಪ, ಹಮೀದ್, ರವಿಕುಮಾರ್, ಪ್ರಮುಖರಾದ ಕೆ.ಸಿದ್ದಪ್ಪ, ಸೋಮಶೇಖರ ಲ್ಯಾವಿಗೆರೆ, ವೀಣಾ ನಾಯ್ಡು, ವಿಲ್ಸನ್ ಗೋನ್ಸಾಲ್ವಿಸ್, ಪ್ರೇಮ್ ಸಿಂಗ್, ಗಣಾಧೀಶ್, ನಾರಾಯಣ ಅರಮನೆಕೇರಿ, ಅನ್ವರ್ ಭಾಷಾ, ಯಶವಂತ ಪಣಿ, ಸಂತೋಷ್ ಸದ್ಗುರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ನಾಳೆ ಮದ್ದೂರಿನಲ್ಲಿ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ