car loans – #1 Latest News Updates Portal – 24×7 | Kannada News Now
Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಸದಾ ಜನಮನಾಸದಲ್ಲಿ ಉಳಿಯೋದು, ಅವರು ಮಾಡೋ ಸಾಮಾಜಿಕ ಕಳಕಳಿಯ ಕೆಲಸದಿಂದಾಗಿದೆ. ಮೊನ್ನೆಯಷ್ಟೇ ನಿಮ್ಮ ಮಗಳನ್ನು ಕಳಿಸಿ, ಕೆಲಸ ಕೊಡಿಸುತ್ತೇನೆ ಎಂದು ದಾರಿಯಲ್ಲಿ ಸಿಕ್ಕ ಪತಿಯಿಲ್ಲದ ಮಹಿಳೆಗೆ ಭರವಸೆ ನೀಡಿದ್ದಂತೇ, ಅವರ ಮಗಳಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಕೊಡಿಸಿದ್ದಾರೆ. ಈ ಮೂಲಕ ಮತ್ತೆ ಜನಮಾನಸದಲ್ಲಿ ನೆಲೆಯಾಗುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಕೆಲಸ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಲ್ಲುದೇವರಹಳ್ಳಿಯ ನಿವಾಸಿ ವಿಜಯಮ್ಮ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಕಾರಿಗೆ ಕೈ ಮಾಡಿದ್ದರು. ಇದನ್ನು ಕಂಡ ಕುಮಾರಸ್ವಾಮಿ ಕಾರು ನಿಲ್ಲಿಸಿ, ವಿಜಯಮ್ಮ ಕಷ್ಟ ಕೇಳಿದ್ದರು. ಇಂತಹ ಸಂದರ್ಭದಲ್ಲಿ ವಿಜಯಮ್ಮ ತನಗೆ ಪತಿ ಇಲ್ಲ. ಮೂವರು ಹೆಣ್ಣು ಮಕ್ಕಳು. ಹಿರಿಯ ಮಗಳಿಗೆ ಮದುವೆ ಮಾಡಿದ್ದೇನೆ. ಮತ್ತಿಬ್ಬರು ಹೆಣ್ಣುಮಕ್ಕಳು ಬೆಂಗಳೂರಿನಲ್ಲಿ ಇದ್ದಾರೆ. ಅವರಿಗೆ ಏನಾದ್ರೂ ಕೆಲಸ ಕೊಡಿಸುವಂತೆ ಮನವಿ ಮಾಡಿದ್ದರು.
ವಿಜಯಮ್ಮ ಮನವಿಗೆ ಸ್ಪಂದಿಸಿದ್ದಂತ ಕುಮಾರಸ್ವಾಮಿ, ನಿಮ್ಮ ಮಕ್ಕಳನ್ನು ನಮ್ಮ ಮನೆಗೆ ಬಂದು ಭೇಟಿಯಾಗೋದಕ್ಕೆ ಹೇಳಿ. ಮೊದಲು ಒಬ್ಬಾಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ಅಲ್ಲಿಂದ ತೆರಳಿದ್ದರು. ಇಂದು ಅಂತಹ ವಿಜಯಮ್ಮ ಪುತ್ರಿ ನಾಗರತ್ನ, ಮಾಜಿ ಸಿಎಂ ಕುಮಾರಸ್ವಾಮಿಯವರ ಮನೆಗೆ ತೆರಳಿ, ಅವರನ್ನು ಭೇಟಿಯಾದರು.
ವಿಜಯಮ್ಮ ಪುತ್ರಿ ನಾಗರತ್ನ ಜೊತೆಗೆ ಕೆಲಕಾಲ ಮಾತನಾಡಿದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸ್ಥಳದಲ್ಲಿಯೇ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸಿ ನೆರವಾಗಿದ್ದಾರೆ. ಈ ಮೂಲಕ ನೊಂದವರು, ಕಷ್ಟದಿಂದ ಇದ್ದವರಿಗೆ ಹೆಗಲಾಗಿದ್ದಾರೆ.
ಡಿಜಿಟಲ್ ಡೆಸ್ಕ್: ಕೋವ್ಯಾಕ್ಸಿನ್ ಲಸಿಕೆ ಕೇವಲ ಕೊರೊನಾ ವೈರಸ್ ಮಾತ್ರ ಕೊರೊನಾದ ಹೊಸ ತಳಿ ಯುಕೆ ಕೊರೊನಾದಿಂದಲೂ ರಕ್ಷಿಸುತ್ತೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಯುಎಸ್ ಔಷಧಿ ದೈತ್ಯ ಮಾಡರ್ನಾ ಈ ಹೇಳಿಕೆ ನೀಡಿದ ಕೆಲವು ದಿನಗಳ ನಂತರ, ಭಾರತ್ ಬಯೋಟೆಕ್ ಸಹ ಕೋವ್ಯಾಕ್ಸಿನ್ ಯುಕೆ ರೂಪಾಂತರ ಕೊರೊನಾ ವಿರುದ್ಧವೂ ಪರಿಣಾಮಕಾರಿ ಎಂದು ಹೇಳಿದೆ. ಅಂದ್ಹಾಗೆ, ಈ ವುಹಾನ್ ಕೊರೊನಾ ತಳಿಗಿಂತ ಯುಕೆ ಕೊರೊನಾಗೆ ಶೇ. 70 ಪ್ರತಿಶತ ಹೆಚ್ಚು ಸೋಂಕು ಹರಡುವ ಶಕ್ತಿಯಿದ್ದು, ಮಾರಣಾಂತಿಕವಾಗಿದೆ ಎಂದು ಹೇಳಿದೆ.
“ಕೊವಾಕ್ಸಿನ್ ಸಾರ್ಸ್-ಕೊವಿ-2 ನ ಯುಕೆ ರೂಪಾಂತರಗಳನ್ನ ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ವೆ. ಇದು ಮ್ಯುಟೆಂಟ್ ವೈರಸ್ ತಪ್ಪಿಸಿಕೊಳ್ಳುವ ಸಾಧ್ಯತೆಯನ್ನ ಕಡಿಮೆ ಮಾಡುತ್ತದೆ” ಎಂದು ಮಂಗಳವಾರ ತನ್ನ ಸಂಶೋಧನಾ ಲೇಖನದ ಲಿಂಕ್ʼನೊಂದಿಗೆ ಭಾರತ್ ಬಯೋಟೆಕ್ ಟ್ವೀಟ್ ಮಾಡಿದೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈ ತಿಂಗಳ ಆರಂಭದಲ್ಲಿ ಭಾರತದ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಆಕ್ಸ್ ಫರ್ಡ್ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಮತ್ತು ದೇಶದಲ್ಲಿ ನಿರ್ಬಂಧಿತ ತುರ್ತು ಬಳಕೆಗೆ ಭಾರತ ಬಯೋಟೆಕ್ʼನ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಅನ್ನು ಅನುಮೋದಿಸಿತ್ತು.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3qPyUfO
ಡಿಜಿಟಲ್ ಡೆಸ್ಕ್: ಫೆಬ್ರವರಿ 1, 2021 ರಿಂದ ನಿಮ್ಮ ಜೀವನದಲ್ಲಿ ಹಲವಾರು ಪ್ರಮುಖ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ನಿಮ್ಮ ಆರೋಗ್ಯ ಮತ್ತು ನಿಮ್ಮ ಜೇಬಿನ ಸಂಬಂಧಿಸಿದ್ವು. ಅದಕ್ಕಾಗಿ ಮೊದಲೇ ತಯಾರಿ ನಡೆಸುವುದು ಒಳ್ಳೆಯದು ಅಲ್ವಾ. ಹಾಗಾದ್ರೆ, ಯಾವೆಲ್ಲಾ ಬದಲಾವಣೆಗಳಾಗುತ್ವೆ ಅನ್ನೋದನ್ನ ಒಂದೊಂದಾಗಿ ನೋಡೋಣಾ ಬನ್ನಿ.
ಫೆಬ್ರವರಿ 1ರಂದು ಬಜೆಟ್ʼನಲ್ಲಿ ದೊಡ್ಡ ಬದಲಾವಣೆಗಳನ್ನ ಘೋಷಿಸಲಾಗುತ್ತೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಇದು ಸಾಮಾನ್ಯರಿಂದ ಹಿಡಿದು ವಿಶೇಷಗಳವರೆಗೆ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುವ ನಿರ್ಧಾರವಾಗಿರಬಹುದು. ವೇತನ ವರ್ಗವು ತೆರಿಗೆ ವಿನಾಯಿತಿಗಳನ್ನ ಪಡೆಯಬಹುದು, ಉದ್ಯಮಗಳು ಪರಿಹಾರಗಳನ್ನ ಘೋಷಿಸಬಹುದು. ಕೆಲವು ವಸ್ತುಗಳು ದುಬಾರಿಯಾಗಲಿದ್ದು, ಕೆಲವು ಸರಕುಗಳಿಗೆ ತೆರಿಗೆ ವಿಧಿಸಬಹುದಾಗಿದೆ. ಪೀಠೋಪಕರಣಗಳ ಕಚ್ಚಾ ವಸ್ತುಗಳು, ಕೆಲವು ರಾಸಾಯನಿಕಗಳು, ದೂರಸಂಪರ್ಕ ಉಪಕರಣಗಳು ಮತ್ತು ರಬ್ಬರ್ ಉತ್ಪನ್ನಗಳು ಸೇರಿದಂತೆ ಅನೇಕ ವಸ್ತುಗಳ ಮೇಲಿನ ಸುಂಕಗಳನ್ನ ಕಡಿತಗೊಳಿಸ್ಬೋದು.
ಫೆಬ್ರವರಿ 1ರಿಂದ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಆದ್ರೆ, ಕಳೆದ ವರ್ಷ ಡಿಸೆಂಬರ್ʼನಲ್ಲಿ ಎಲ್ ಪಿಜಿ ಬೆಲೆ 2 ಬಾರಿ ಏರಿಕೆಯಾಗಿದೆ. ಈ ವರ್ಷದ ಜನವರಿಯಲ್ಲಿ ಕಂಪನಿಗಳು ಬೆಲೆ ಏರಿಕೆ ಮಾಡಿರಲಿಲ್ಲ. ಈಗ ಫೆಬ್ರವರಿಯಲ್ಲಿ ತೈಲ ಕಂಪನಿಗಳು ಸಿಲಿಂಡರ್ʼಗಳ ಬೆಲೆಯನ್ನು ಏರಿಸಲು ಹೊರಟಿವೆ. ಪ್ರತಿ ತಿಂಗಳ ಮೊದಲನೇ ದಿನ ತೈಲ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಮತ್ತು ವಾಣಿಜ್ಯ ಸಿಲಿಂಡರ್ʼಗಳ ಬೆಲೆಯನ್ನ ನಿಗದಿ ಪಡಿಸುತ್ತವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಗ್ರಾಹಕರಾದರೆ, ಫೆಬ್ರವರಿ 1ರಿಂದ ಎಟಿಎಂಗಳಿಂದ ಹಣ ಡ್ರಾ ಮಾಡಲು ಪಿಎನ್ ಬಿ ನಿಯಮಗಳನ್ನ ಬದಲಾಯಿಸಲಿದೆ. ದೇಶಾದ್ಯಂತ ಹೆಚ್ಚುತ್ತಿರುವ ಎಟಿಎಂ ವಂಚನೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಪಿಎನ್ ಬಿ ಒಂದು ಶ್ಲಾಘನೀಯ ಹೆಜ್ಜೆಯನ್ನ ಇಟ್ಟಿದೆ. ಪಿಎನ್ ಬಿಯಲ್ಲಿ ಬ್ಯಾಂಕ್ ಖಾತೆಯೂ ಇದ್ದರೆ, ಅದು ನಿಮಗೆ ಕೆಲಸದ ಸುದ್ದಿ. ಫೆಬ್ರವರಿ 1ರಿಂದ ಪಿಎನ್ ಬಿ ಗ್ರಾಹಕರು ಇಎಂವಿಯೇತರ ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.
ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ʼನ 6 ಮುಚ್ಚಿದ ಯೋಜನೆಗಳಲ್ಲಿ ಹಣ ಹಂಚಿಕೆಯ ಪ್ರಕ್ರಿಯೆಯನ್ನು ಫೆಬ್ರವರಿ 1ರಂದು ಸುಪ್ರೀಂ ಕೋರ್ಟ್ ನಿಗದಿ ಮಾಡಲಿದೆ. ಈ ಯೋಜನೆಗಳನ್ನು ನಿಲ್ಲಿಸಬೇಕೇ ಬೇಡವೇ ಎಂಬ ಬಗ್ಗೆ ಏಕಗವಟಿಗಳು ಮತ ಚಲಾಯಿಸಬೇಕು. ಈ ಹಿಂದೆ ಸುಪ್ರೀಂ ಕೋರ್ಟ್ ಫ್ರಾಂಕ್ಲಿನ್ ಟೆಂಪಲ್ ಟನ್ ಮ್ಯೂಚುವಲ್ ಫಂಡ್ʼನ ಆರು ಯೋಜನೆಗಳಿಗೆ ಹಣ ತಡೆ ನೀಡಿತ್ತು. ಈ ಮ್ಯೂಚುವಲ್ ಫಂಡ್ ಸ್ಕೀಮ್ ಮುಚ್ಚುವುದರಿಂದ ಸುಮಾರು 3 ಲಕ್ಷ ಹೂಡಿಕೆದಾರರ ಮೇಲೆ ಪರಿಣಾಮ ಬೀರಲಿದೆ.
ಏರ್ ಇಂಡಿಯಾ ಮತ್ತು ಅದರ ಕಡಿಮೆ ವೆಚ್ಚದ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೊಸ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನ ಘೋಷಿಸಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ 2021ರ ಫೆಬ್ರವರಿಯಿಂದ ಮಾರ್ಚ್ 27ರವರೆಗೆ ತಿರುಚ್ಚಿ ಮತ್ತು ಸಿಂಗಪುರ ನಡುವೆ ಪ್ರತಿದಿನ ದೈನಂದಿನ ವಿಮಾನ ಹಾರಾಟ ಆರಂಭಿಸಲಿದೆ. ಕುವೈತ್ ನಿಂದ ವಿಜಯವಾಡ, ಹೈದರಾಬಾದ್, ಮಂಗಳೂರು, ತಿರುಚ್ಚಿ, ಕೋಝಿಕೋಡ್, ಕೂನನೂರ್ ಮತ್ತು ಕೊಚ್ಚಿಗೆ ಸಂಪರ್ಕ ಹೆಚ್ಚು ಇರಲಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಈಗಾಗಲೇ ಹಲವು ವಿಮಾನಗಳನ್ನ ಘೋಷಿಸಿದ್ದು, ಜನವರಿಯಲ್ಲಿ ಈ ವಿಮಾನ ಹಾರಾಟ ಆರಂಭಿಸಿದೆ.
ಪಂಜಾಬ್, ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕಿನ ಆಡಳಿತಗಾರನು ತನ್ನ ಬ್ಯಾಂಕ್ ಮರುಸ್ಥಾಪನೆಗಾಗಿ ಹೂಡಿಕೆದಾರರಿಗೆ ತನ್ನ ಆಫರ್ʼಗಳನ್ನು ನೀಡಲು ಫೆಬ್ರವರಿ 1ರ ಗಡುವನ್ನ ನಿಗದಿಪಡಿಸಿದ್ದಾರೆ. ಸೆಂಟ್ರಮ್ ಗ್ರೂಪ್-ಭಾರತ್ ಪೇ ಯಂತಹ ಕೆಲವು ಹೂಡಿಕೆದಾರರು ಈ ಆಫರ್ ನೀಡಲು ಮುಂದೆ ಬಂದಿವೆ. ಇಂಗ್ಲೆಂಡ್ ಕಂಪನಿ ಲಿಬರ್ಟಿ ಗ್ರೂಪ್ ಕೂಡ ತನ್ನ ಆಫರ್ ಅನ್ನು ಸಲ್ಲಿಸಿದೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3qPyUfO
ಬೆಂಗಳೂರು : ಸಂಪುಟ ವಿಸ್ತರಣೆ, ಖಾತೆಗಳ ಮರು ಹಂಚಿಕೆ ಕಸರತ್ತು ಮುಗಿದ ಬೆನ್ನಲ್ಲೇ, ನಾಳೆಯಿಂದ ರಾಜ್ಯ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ನಾಳೆಯಿಂದ ಆರಂಭಗೊಂಡು, ಫೆಬ್ರವರಿ 5ರವರೆಗೆ ಅಧಿವೇಶನ ನಡೆಯಲಿದೆ. ಇಂತಹ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ನಾಳೆಯಿಂದಿ ಆರಂಭಗೊಳ್ಳಲಿರುವಂತ ವಿಧಾನಮಂಡಲದ ಅಧಿವೇಶನದ ಮೊದಲ ದಿನ, ಜಂಟಿ ಸದನಗಳನ್ನು ಉದ್ದೇಶಿಸಿ, ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಲಿದ್ದಾರೆ. ಕೋವಿಡ್ ನಿರ್ವಹಣೆಯ ಜೊತೆಗೆ, ರಾಜ್ಯ ಸರ್ಕಾರದ ಅಭಿವೃದ್ಧಿಯ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಆಡಳಿತ-ವಿರೋಧ ಪಕ್ಷದ ನಡುವೆ ವಾಕ್ಸಮರ ನಡೆಯೋದು ಖಚಿತವಾಗಿದೆ. ಅದರಲ್ಲೂ ಸಂಪುಟದಲ್ಲಿ ಅವಕಾಶ ಸಿಗದ ಸಚಿವರ ಅಸಮಾಧಾನ, ಅನುದಾನ ವಿಳಂಬದ ಬಗ್ಗೆ ಶಾಸಕರ ಅಪಸ್ವರದ ಜೊತೆಗೆ, ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡು ಸದನಗಳಲ್ಲಿ ಪ್ರತಿಧ್ವನಿಸಲಿದೆ.
ಇದರ ಮಧ್ಯೆ ಗೋಹತ್ಯೆ ನಿಷೇಧ ಕಾಯ್ದೆಯ ಮಸೂದೆಯನ್ನು ಪ್ರಸಕ್ತ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇಂತಹ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಈಗಾಗಲೇ ವಿರೋಧ ವ್ಯಕ್ತ ಪಡಿಸಿದ್ದರೇ, ಜೆಡಿಎಸ್ ನಡೆ ಕುತೂಹಲ ಮೂಡಿಸಿದೆ. ಆದ್ರೇ ಗೋಹತ್ಯೆ ನಿಷೇಧವನ್ನು ರಾಜ್ಯ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ.
ವಿಧಾನ ಮಂಡಲದ ಅಧಿಶೇಶನದ ಹಿನ್ನಲೆಯಲ್ಲಿ ವಿಧಾನಸೌಧದದ ಸುತ್ತ-ಮುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ವಿಧಾನಸೌಧದ ಸುತ್ತ ಫೆಬ್ರವರಿ 5ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂಬುದಾಗಿ ತಿಳಿಸಿದ್ದಾರೆ.
ಡಿಜಿಟಲ್ ಡೆಸ್ಕ್: ಆಧಾರ್ ಕೇಂದ್ರಕ್ಕೆ ಹೋಗದೆನೇ ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ʼನಲ್ಲಿ ಕೆಲವೊಂದು ಬದಲಾವಣೆಗಳನ್ನ ಮಾಡ್ಬೋದು. ಆದ್ರೆ, ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನ ಆಧಾರ್ʼಗೆ ಲಿಂಕ್ ಮಾಡುವುದು ಕಡ್ಡಾಯ. ಒಂದ್ವೇಳೆ ನೀವು ಇನ್ನೂ ಮೊಬೈಲ್ ನಂಬರ್ ಲಿಂಕ್ ಮಾಡಿಲ್ಲ ಎಂದಾದಲ್ಲಿ, ನೀವು ಆಧಾರ್ʼಗೆ ಮೊಬೈಲ್ ಸಂಖ್ಯೆಯನ್ನ ಹೇಗೆ ಲಿಂಕ್ ಮಾಡ್ಬೇಕು ಅನ್ನೋದನ್ನ ನಾವು ನಿಮಗೆ ತಿಳಿಸುತ್ತಿದ್ದೇವೆ.
ಸರ್ಕಾರಿ, ಸರ್ಕಾರೇತರ, ಬಹುತೇಕ ಎಲ್ಲೆಡೆ ಆಧಾರ್ ಕಾರ್ಡ್ ಕೇಳಲಾಗುತ್ತಿದೆ. ಇದರಿಂದ ಆಧಾರ್ ಕಾರ್ಡ್ ಎಷ್ಟು ಮುಖ್ಯ ಅನ್ನೋದು ಸ್ಪಷ್ಟವಾಗುತ್ತೆ. ನಿಮ್ಮ ಮೊಬೈಲ್ ಸಂಖ್ಯೆ (ಮೊಬೈಲ್ ನಂಬರ್) ನಿಮ್ಮ ಆಧಾರ್ ಕಾರ್ಡ್ʼಗೆ ಲಿಂಕ್ ಆಗದಿದ್ದರೆ ಅಥವಾ ಲಿಂಕ್ ಆಗಿರುವ ನಂಬರ್ ಕ್ಲೋಸ್ ಆಗಿದ್ದರೆ, ಆಧಾರ್ ಕಾರ್ಡ್ʼನಲ್ಲಿರುವ ಮೊಬೈಲ್ ಸಂಖ್ಯೆಯನ್ನ ಹೇಗೆ ಅಪ್ ಡೇಟ್ ಮಾಡಬಹುದು ಅನ್ನೋದನ್ನ ನೀವು ತಿಳಿದುಕೊಳ್ಳುವುದು ಕೂಡ ಮುಖ್ಯ.
ಮೊಬೈಲ್ ಸಂಖ್ಯೆ ಲಿಂಕ್ ಮಾಡುವ ಪ್ರಕ್ರಿಯೆ..!
ಯುಐಡಿಎಐ ನೀಡಿರುವ ಮಾಹಿತಿ ಪ್ರಕಾರ, ಆಧಾರ್ʼನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನ ಅಪ್ ಡೇಟ್ ಮಾಡಲು ನೀವು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ನೀವು ಆನ್ಲೈನ್ʼನಲ್ಲಿ ಈ ಕೆಲಸವನ್ನ ಮಾಡಲು ಸಾಧ್ಯವಿಲ್ಲ. ಆದ್ರೆ, ನೀವು ಖಂಡಿತವಾಗಿಯೂ ಹತ್ತಿರದ ಬೇಸ್ ಸೆಂಟರ್ʼಗೆ ಅಪಾಯಿಂಟ್ಮೆಂಟ್ ಬುಕ್ ಮಾಡಬಹುದು.
ಹೌದು, ನೀವು ಕೇಂದ್ರದಲ್ಲಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನ ಲಿಂಕ್ ಮಾಡಬಹುದು ಅಥವಾ ಬದಲಾಯಿಸಬಹುದು. ಇದಕ್ಕಾಗಿ ನೀವು ಯಾವುದೇ ದಾಖಲೆಗಳನ್ನ ಒದಗಿಸುವ ಅಗತ್ಯವಿಲ್ಲ.
ಮೊಬೈಲ್ ಲಿಂಕ್ ಶುಲ್ಕ 50 ರೂ..!
ಆಧಾರ್ʼಗೆ ನಿಮ್ಮ ಮೊಬೈಲ್ ನಂಬರ್ ಅಪ್ ಡೇಟ್ ಮಾಡಲು, ನೀವು 50 ರೂಪಾಯಿಗಳನ್ನ ಆಧಾರ್ ಕೇಂದ್ರದಲ್ಲಿ ನೀಡಬೇಕಾಗುತ್ತೆ. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನ ನಿಮ್ಮ ಆಧಾರ್ʼಗೆ ಲಿಂಕ್ ಮಾಡಲಾಗುತ್ತೆ. ಇದಾದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೂ ಎಸ್ ಎಂಎಸ್ ಕಳುಹಿಸಲಾಗುತ್ತದೆ. ಈ ಮೆಸೇಜ್ʼನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನ ಆಧಾರ್ʼಗೆ ಲಿಂಕ್ ಮಾಡಲಾಗಿದೆ ಎಂದು ದೃಢೀಕರಿಸಲಾಗುತ್ತೆ.
ಮೊಬೈಲ್ ನಂಬರ್ ಲಿಂಕ್ ಮಾಡುವುದು ಏಕೆ ಮುಖ್ಯ?
ನಿಮ್ಮ ಮೊಬೈಲ್ ನಂಬರ್ ಆಧಾರ್ ಗೆ ಲಿಂಕ್ ಆಗದಿದ್ದರೆ, ಆಗ ನಿಮಗೆ ಹಲವಾರು ಸಮಸ್ಯೆಗಳು ಎದುರಾಗಬಹುದು. ಅನೇಕ ಕಡೆ, ನೀವು ಆನ್ಲೈನ್ ಆಧಾರ್ ವೆರಿಫಿಕೇಶನ್ ಮಾಡಲು ಬಯಸಿದರೆ, ಅಂತಹ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನಂಬರ್ʼಗೆ ಒಟಿಪಿ ಬರುತ್ತದೆ. ಒಟಿಪಿ ಪಡೆದ ನಂತರ ಮನೆಯಲ್ಲಿ ಕುಳಿತು, ವಿಳಾಸ, ವಯಸ್ಸು, ಲಿಂಗ ಇನ್ನಿತರ ಬದಲಾವಣೆಗಳನ್ನ ಮಾಡಿಕೊಳ್ಳಬಹುದು.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3qPyUfO
ರಾಮನಗರ : ಈಗಾಗಲೇ ಹಲವು ವಿನೂತನ ಕಾರ್ಯಕ್ರಮಗಳ ಮೂಲಕ, ಸಾಮಾಜಿಕ ಕಾರ್ಯಗಳಿಂದ ನಾಡಿನ ಗಮನ ಸೆಳೆದಿರುವಂತ ಹೂವಿನಹೊಳೆ ಪ್ರತಿಷ್ಠಾನ(ರಿ), ಇದೀಗ ಮತ್ತೊಂದು ಹೊಸ ಭಾಷ್ಯ ಬರೆದಿದೆ. ಅದೇ ಈಗಾಗಲೇ ಹೂವಿನಹೊಳೆಯ ಗ್ರಾಮ ಪಂಚಾಯ್ತಿಯ ನೂತನ ಸದಸ್ಯರಿಗೆ ಗೌರವ ಸದಸ್ಯತ್ವ ನೀಡಿದ್ದಂತ ಪ್ರತಿಷ್ಠಾನ, ಈಗ ಹಂಚಗುಳಿ ಗ್ರಾಮ ಪಂಚಾಯ್ತಿ ಸದಸ್ಯರಿಗೂ ಗೌರವ ಸದಸ್ಯತ್ವ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಹೂವಿನಹೊಳೆ ಪ್ರತಿಷ್ಠಾನ ಹೊಸ ಭಾಷ್ಯ ಬರೆದಿದೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿಗೆ ಹಂಚಗುಳಿ ಗ್ರಾಮದಿಂದ ಆಯ್ಕೆಯಾದ ಸದಸ್ಯರಾದ ಮಲ್ಲೇಶ್ ಹಾಗೂ ಶಾಂತಮ್ಮ ಅವರಿಗೆ ”ಹೂವಿನಹೊಳೆ ಪ್ರತಿಷ್ಠಾನದ ಐದು ವರ್ಷಗಳ ಗೌರವ ಸದಸ್ಯತ್ವ’ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಹಂಚಗುಳಿ ಸರ್ಕಾರಿ ಶಾಲೆ ಮಕ್ಕಳಿಗೆ ‘ನಮ್ಮ ಊರು ನಮ್ಮ ಉಸಿರು ಬಳಗ’ದ ವತಿಯಿಂದ ನೋಟ್ ಬುಕ್ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮುನುಚ್ಚೆಗೌಡರು ಉದ್ಘಾಟನೆ ಮಾಡಿ, ಬಳಿಕ ಮಾತನಾಡಿದಂತ ಅವರು, ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇವರ ಬಳಿಕ ಮಾತನಾಡಿದ ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ನಂದಿ ಜೆ ಹೂವಿನಹೊಳೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಗೌರವ ಸದಸ್ಯತ್ವ ಪ್ರದಾನ ಮಾಡಿ, ಮುಂದಿನ ಐದು ವರ್ಷಗಳಲ್ಲಿ ಹಂಚಗುಳಿ ಗ್ರಾಮದಲ್ಲಿ ನಾವು ಕೆಲಸ ಮಾಡಲು ಹಾಗೂ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೆವೆ ಎಂದು ತಿಳಿಸಿದರು.
ಎಸ್ ಡಿ ಟಿ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ದಿಲೀಪ್ ಕುಮಾರ್ ಮಾತನಾಡಿ ಶಿಕ್ಷಣ ಎಲ್ಲರ ಹಕ್ಕು ಪ್ರತಿ ಗ್ರಾಮದ ಯುವಕರಿಗೂ ಉನ್ನತ ಕೆಲಸ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ನಾಯ್ಕಲ್ ದೊಡ್ಡಿ ಚಂದ್ರಶೇಖರ್, ಪ್ರಧಾನ ಸಂಚಾಲಕರಾದಂತ ಹಂಚಗುಳಿ ಗಿರೀಶ್, ಸುನೀಲ್ ಕುಮಾರ್,ರಾಜಣ್ಣ ಹಾಗೂ ಗ್ರಾಮದ ಮುಖಂಡರಾದ ಚೆಲುವರಾಜು ಚಿಕೈದೆಗೌಡ, ಸುಂದ್ರೇಶ್, ಮಣಿಕಂಠ, ಮುತ್ತುರಾಜು, ಭಾಸ್ಕರ್, ಅರ್ಚಕ ಶಿವಕುಮಾರ್ ಗ್ರಾಮಸ್ಥರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.
ಡಿಜಿಟಲ್ ಡೆಸ್ಕ್: ಜಿಮೇಲ್ ಬಳಕೆದಾರರ..? ಹಾಗಾದ್ರೆ, ಈ ಜಿಮೇಲ್ ಅಪ್ ಡೇಟ್ ಬಗ್ಗೆ ನೀವು ಗಮನ ಹರಿಸಲೇ ಬೇಕಾಗುತ್ತೆ. ಯಾಕಂದ್ರೆ, ಟೆಕ್ ದೈತ್ಯ ಗೂಗಲ್ ತನ್ನ ವಿವಿಧ ವಿಶೇಷತೆಗಳಿಗಾಗಿ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಗೂಗಲ್ʼನ ಈ ಹೊಸ ನಿಯಮಗಳನ್ನ ಒಪ್ಪಿಕೊಳ್ಳದಿದ್ದರೆ, ಅದರ ವಿಶೇಷ ಲಕ್ಷಣಗಳನ್ನ ಬಳಸಲು ಸಾಧ್ಯವಿಲ್ಲ ಎಂದು ಜಿಮೇಲ್ ಬಳಕೆದಾರರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ.
ಜಿಮೇಲ್ ಅನೇಕ ವೈಶಿಷ್ಟ್ಯಗಳನ್ನ ನಿರ್ಬಂಧಿಸಲಾಗುವುದು..!
ವರದಿಯೊಂದರ ಪ್ರಕಾರ, ಈ ಹೊಸ ಜಿಮೇಲ್ ನಿಯಮಗಳನ್ನ ಗಡುವಿನೊಳಗೆ ಅಂಗೀಕರಿಸದಿದ್ದರೆ, ಸ್ಮಾರ್ಟ್ ಕಾಂಪೋಸಿಷನ್ʼಗಳು, ಸಹಾಯಕ ಜ್ಞಾಪನೆಗಳು ಮತ್ತು ಸ್ವಯಂಚಾಲಿತ ಇ-ಮೇಲ್ ಫಿಲ್ಟರಿಂಗ್ ನಂತಹ ಕೆಲವು ಪ್ರಮುಖ ಲಕ್ಷಣಗಳನ್ನ ನಿರ್ಬಂಧಿಸಲಾಗುವುದು ಎಂದು ಖಾಸಗಿ ವಾಹಿನಿ ಝೀ ಮೀಡಿಯಾ ಬ್ಯೂರೋ ವರದಿ ಮಾಡಿದೆ.
ಜಿಮೇಲ್ ಬಳಕೆದಾರರು ತಮ್ಮ ಡೇಟಾವನ್ನ ಕಂಪನಿಯೊಂದಿಗೆ ಹಂಚಿಕೊಳ್ಳಬೇಕು..!
ಗೂಗಲ್ ತನ್ನ ಜಿಮೇಲ್ ಸ್ಮಾಲ್ ಪ್ರಿಂಟ್ ಫೀಚರ್ ಅನ್ನ ಅಪ್ ಡೇಟ್ ಮಾಡಿದೆ. ಬಳಕೆದಾರರು ಅಪ್ಲಿಕೇಶನ್ʼನ ಕೆಲವು ವೈಶಿಷ್ಟ್ಯಗಳನ್ನ ಬಳಸಲು ಬಯಸಿದರೆ, ಅವರು ತಮ್ಮ ಡೇಟಾವನ್ನ ಕಂಪನಿಯೊಂದಿಗೆ ಹಂಚಿಕೊಳ್ಳಬೇಕು ಎನ್ನುವ ಆಯ್ಕೆಯನ್ನ ನೀಡುತ್ತದೆ. 25 ಜನವರಿ 2021ರ ನಂತರ ಬಳಕೆದಾರರು ಈ ವೈಶಿಷ್ಟ್ಯಗಳನ್ನ ಬಳಸಲು ಬಯಸಿದರೆ, ಈ ವಿಶೇಷ ವೈಶಿಷ್ಟ್ಯಗಳನ್ನ ಚಾಲನೆಯಲ್ಲಿಡಲು ಅವರು Google ಸೆಟ್ಟಿಂಗ್ʼಗಳಲ್ಲಿ ಆಯ್ಕೆಯನ್ನ ಮಾಡಬೇಕು.
ಬಳಕೆದಾರರು ಹೊಸ ನಿಯಮಗಳನ್ನ ಪಾಲಿಸದಿದ್ದರೆ, ಅವರ ಜಿಮೇಲ್, ಗೂಗಲ್ ಫೋಟೋಸ್ ಮತ್ತು ಗೂಗಲ್ ಡ್ರೈವ್ʼನ ವಿಷಯಗಳನ್ನ ಕೂಡ ಡಿಲೀಟ್ ಮಾಡಬಹುದು ಎಂದು ಗೂಗಲ್ ಈ ಹಿಂದೆ ಹೇಳಿತ್ತು.
ಇತ್ತೀಚೆಗೆ ಗೂಗಲ್ ಕೂಡ ಬಳಕೆದಾರರ ಅನುಭವವನ್ನ ಮತ್ತಷ್ಟು ಸರಳಗೊಳಿಸುವ ಸಲುವಾಗಿ ಸ್ಮಾರ್ಟ್ ಫೋನ್ʼಗಳಲ್ಲಿ ಸರ್ಚ್ ಫಲಿತಾಂಶಗಳ ನೋಟವನ್ನ ಮರು ವಿನ್ಯಾಸಗೊಳಿಸುತ್ತಿರುವುದಾಗಿ ಯೂಸರ್ ಎಕ್ಸ್ ಪೀರಿಯನ್ಸ್ ಅನ್ನ ಪ್ರಕಟಿಸಿದೆ. ಮೊಬೈಲ್ ಮರುವಿನ್ಯಾಸವು ಪಠ್ಯವನ್ನು ಹೆಚ್ಚು, ಬೋಲ್ಡ್ ಟೆಕ್ಸ್ಟ್ ಅನ್ನ ಬಳಸುವ ಮೂಲಕ ಓದಲು ಸುಲಭವಾಗುವಂತೆ ಮಾಡುತ್ತದೆ. ಇದರಿಂದ ಮಾನವ ಕಣ್ಣು ಶೋಧ ಫಲಿತಾಂಶಗಳನ್ನು ವೇಗವಾಗಿ ಸ್ಕ್ಯಾನ್ ಮಾಡಬಹುದು ಮತ್ತು ಅರ್ಥಮಾಡಿಕೊಳ್ಳಬಹುದು.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3qPyUfO
ನವದೆಹಲಿ: ಐಪಿಎಎಲ್ 2021 ರ ಆಟಗಾರರ ಹರಾಜು ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಬುಧವಾರ ತಿಳಿಸಿದೆ.
ಟ್ವಿಟರ್ ಹ್ಯಾಂಡಲ್ ಮೂಲಕ ಅಧಿಕೃತ ಮಾಹಿತಿ ನೀಡಿದ ಕ್ರಿಕೆಟ್ ಮಂಡಳಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಚೆನ್ನೈ ಆತಿಥ್ಯ ವಹಿಸಲಿದೆ. ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 17 ರಂದು ಕೊನೆಗೊಳ್ಳಲಿದ್ದು, ಮರುದಿನ ಐಪಿಎಲ್ ಹರಾಜು ನಡೆಯಲಿದೆ ಎಂದಿದೆ.
ಆಟಗಾರರನ್ನ ಉಳಿಸಿಕೊಳ್ಳುವ ಕೊನೆಯ ದಿನಾಂಕ ಜನವರಿ 20 ಆಗಿದ್ದರೆ, ವ್ಯಾಪಾರ ವಿಂಡೋ (ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಆಟಗಾರರ ವರ್ಗಾವಣೆ) ಫೆಬ್ರವರಿ 4 ರವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದೆ. ತಂಡಗಳಿಂದ ಬಿಡುಗಡೆಯಾದ ಆಟಗಾರರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (ರಾಜಸ್ಥಾನ್ ರಾಯಲ್ಸ್) ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ (ಕಿಂಗ್ಸ್ ಇಲೆವೆನ್ ಪಂಜಾಬ್) ದಂತಕಥೆಗಳು ಸೇರಿದ್ದಾರೆ.
ಐಪಿಎಲ್ ಹರಾಜು ತುಂಬಾ ಆಸಕ್ತಿದಾಯಕವಾಗಿದೆ.
ಐಪಿಎಲ್ 2021 ಹರಾಜು (ಐಪಿಎಲ್ 2021 ಹರಾಜು) ಬಹಳ ಆಸಕ್ತಿದಾಯಕವಾಗಲಿದೆ. ಯಾಕಂದ್ರೆ, ಬಹುತೇಕ ಎಲ್ಲಾ ತಂಡಗಳು ಪಂದ್ಯಾವಳಿಯ ಮೊದಲು ದೊಡ್ಡ ಆಟಗಾರರನ್ನ ಬಿಡುಗಡೆ ಮಾಡಿವೆ. ರಾಜಸ್ಥಾನ್ ರಾಯಲ್ಸ್ ತಮ್ಮ ನಾಯಕ ಸ್ಟೀವ್ ಸ್ಮಿತ್ ಅವ್ರಿಗೆ ಕೋಕ್ ನೀಡಿದೆ. ಆದ್ದರಿಂದ ಅವರ ಮೇಲೆ ಯಾವ ತಂಡವು ಪಣ ತೊಡುತ್ತದೆ ಎಂಬುದನ್ನ ನೋಡಬೇಕಿದೆ. ಗ್ಲೆನ್ ಮ್ಯಾಕ್ಸ್ವೆಲ್ ಅವರಂತಹ ಟಿ 20 ತಜ್ಞರನ್ನ ಸಹ ತಂಡದಿಂದ ಬಿಡುಗಡೆ ಮಾಡಲಾಗಿದೆ.
ಉಚಿತ, ತಾಜಾ ಸುದ್ದಿಗಾಗಿ ನಮ್ಮ WhatAapp ಗ್ರೂಪ್ ಸೇರಿಕೊಳ್ಳಿ
https://bit.ly/3qPyUfO
ಜನವರಿ 11ರಿಂದ ರಾಜ್ಯದಲ್ಲಿ ಬೋರ್ಡ್ ಪರೀಕ್ಷೆಗಳಿರುವಂತ ದ್ವಿತೀಯ ಪಿಯುಸಿ ತರಗತಿ ಆರಂಭಗೊಂಡಿತ್ತು. ಇದರ ಹಿನ್ನಲೆಯಲ್ಲಿ ಕೊಡಗಿನಲ್ಲಿಯೂ ಕಾಲೇಜು ಆರಂಭಗೊಂಡಿತ್ತು. ಹೀಗೆ ಆರಂಭಗೊಂಡಂತ ಗರಗಂದೂರು ಮೂರರ್ಜಿ ದೇಸಾಯಿ ಪಿಯು ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳಿಗೂ ಸೋಂಕಿನ ಭೀತಿ ಎದುರಾಗಿದೆ.
ಬೆಂಗಳೂರು : ರೈತರ ಐತಿಹಾಸಿಕ ಹೋರಾಟದ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ದುರದೃಷ್ಟಕರ. ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು. ಈಗಾಗಲೇ ರೈತರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು ಎಂಬುದೂ ಸತ್ಯ ಎಂದಿದ್ದಾರೆ.
ರೈತರ ಐತಿಹಾಸಿಕ ಹೋರಾಟದ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ದುರದೃಷ್ಟಕರ. ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು. ಈಗಾಗಲೇ ರೈತರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು ಎಂಬುದೂ ಸತ್ಯ. 1/4
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ನಿನ್ನೆಯ ಘಟನೆಗೆ ರೈತರನ್ನು ದೂಷಿಸುವಂಥ ಹೇಳಿಕೆಗಳು, ಅಭಿಪ್ರಾಯಗಳನ್ನು ಕೇಳಿ ಮನಸ್ಸಿಗೆ ನೋವಾಗಿದೆ. ಘಟನೆ ಯಾಕೆ ಆಯಿತು, ಹೇಗೆ ಆಯಿತು, ಘಾತಕ ಶಕ್ತಿಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆಯಾಗದೇ, ರೈತರನ್ನು ದೂಷಣೆ ಮಾಡುವುದು ಅಕ್ಷಮ್ಯ. ಕೆಂಪು ಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ಯಾರೊಬ್ಬರೂ ರೈತನ ತಲೆಗೆ ಕಟ್ಟಬಾರದು ಎಂದಿದ್ದಾರೆ.
ನಿನ್ನೆಯ ಘಟನೆಗೆ ರೈತರನ್ನು ದೂಷಿಸುವಂಥ ಹೇಳಿಕೆಗಳು, ಅಭಿಪ್ರಾಯಗಳನ್ನು ಕೇಳಿ ಮನಸ್ಸಿಗೆ ನೋವಾಗಿದೆ. ಘಟನೆ ಯಾಕೆ ಆಯಿತು, ಹೇಗೆ ಆಯಿತು, ಘಾತಕ ಶಕ್ತಿಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆಯಾಗದೇ, ರೈತರನ್ನು ದೂಷಣೆ ಮಾಡುವುದು ಅಕ್ಷಮ್ಯ. ಕೆಂಪು ಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ಯಾರೊಬ್ಬರೂ ರೈತನ ತಲೆಗೆ ಕಟ್ಟಬಾರದು. 2/4
ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಹಿಡಿದು ರೈತರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ ಎಂಬ ಅನುಮಾನ ವ್ಯಕ್ತ ಪಡಿಸಿದ್ದಾರೆ.
ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಹಿಡಿದು ರೈತರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ. 3/4
ಇದು ಸೂಕ್ತ ಮಾತುಕತೆ ಮೂಲಕ ಬಗೆಹರಿಯುವ ಸಮಸ್ಯೆ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ಆದರೆ, ಹಾಗೆ ಆಗದೇ ಇರುವುದು ಬೇಸರದ ಸಂಗತಿ. ಈ ಘಟನೆಯನ್ನು ಆಡಳಿತದಲ್ಲಿರುವವರು ತಪ್ಪಿಸಬಹುದಿತ್ತು. ಘಟನೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈಗಲೂ ಕಾಲ ಮಿಂಚಿಲ್ಲ. ಸೌಹಾರ್ದ ಮಾರ್ಗ ಇದಕ್ಕೆ ಮದ್ದು ಎಂದು ತಿಳಿಸಿದ್ದಾರೆ.
ಇದು ಸೂಕ್ತ ಮಾತುಕತೆ ಮೂಲಕ ಬಗೆಹರಿಯುವ ಸಮಸ್ಯೆ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ಆದರೆ, ಹಾಗೆ ಆಗದೇ ಇರುವುದು ಬೇಸರದ ಸಂಗತಿ. ಈ ಘಟನೆಯನ್ನು ಆಡಳಿತದಲ್ಲಿರುವವರು ತಪ್ಪಿಸಬಹುದಿತ್ತು. ಘಟನೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈಗಲೂ ಕಾಲ ಮಿಂಚಿಲ್ಲ. ಸೌಹಾರ್ದ ಮಾರ್ಗ ಇದಕ್ಕೆ ಮದ್ದು. 4/4