Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗ ವಾರ್ತೆ : `CRPF’ ನಲ್ಲಿ 9,195 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | CRPF Recruitment 2026

02/05/2026 5:43 AM

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

01/05/2026 10:14 PM

ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ದಿಢೀರ್ ಅಸ್ವಸ್ಥ: ಮನೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನಾಯಕ ಆಸ್ಪತ್ರೆಗೆ ದಾಖಲು

01/05/2026 9:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಲ್ಲಿ ಸಮೀಕ್ಷೆ ನಡೆಸದೇ ಸ್ಟಿಕ್ಕರ್ ಅಂಟಿಸಿ ಕಳ್ಳಾಟ: ಬಿಬಿಎಂಪಿಯಿಂದ ಮತ್ತಿಬ್ಬರು ಅಧಿಕಾರಿ ಸಸ್ಪೆಂಡ್
KARNATAKA

BREAKING: ಬೆಂಗಳೂರಲ್ಲಿ ಸಮೀಕ್ಷೆ ನಡೆಸದೇ ಸ್ಟಿಕ್ಕರ್ ಅಂಟಿಸಿ ಕಳ್ಳಾಟ: ಬಿಬಿಎಂಪಿಯಿಂದ ಮತ್ತಿಬ್ಬರು ಅಧಿಕಾರಿ ಸಸ್ಪೆಂಡ್

By kannadanewsnow0905/07/2025 3:38 PM

ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಸಂಬಂಧ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಇಬ್ಬರನ್ನು ಅಮಾನತ್ತುಗೊಳಿಸಲಾಗಿದೆ.

ಪಶ್ಚಿಮ ವಲಯದ ಮತ್ತಿಕೆರೆ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲ್ಯಮಾಪಕರಾದ ರಾಮಾಂಜನೇಯಲು, ಆರ್. ಆರ್ ನಗರ ವಲಯ ಕೆಂಗೇರಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲ್ಯಮಾಪಕರಾದ ಪ್ರವೀಣ್ ಕುಮಾರ್ ಸಿ.ಎನ್ ರವರನ್ನು ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದ ಭಾಗವಾದ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಆದೇಶದಲ್ಲಿ ಏನಿದೆ.?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದಲ್ಲಿ ನ್ಯಾಯಮೂರ್ತಿ ಡಾ.ಹೆಚ್‌.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ಇವರ ಸೂಚನೆಯಂತೆ ಪರಿಶಿಷ್ಟ ಜಾತಿಗೆ ಸೇರಿದವರ ಪ್ರಾತಿನಿದ್ಯತೆ ಕುರಿತು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾತಿ ಸಮೀಕ್ಷೆ-2025ರ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಮನೆಯ ಗೋಡೆಗೆ ಅಥವಾ ಬಾಗಿಲಿಗೆ ಬಿತ್ತಿ ಪತ್ರವನ್ನು ಅಂಟಿಸಿ, BBMP SC Survey House Visit App ನಲ್ಲಿ ವರದಿ ಮಾಡಲು ಮಾನ್ಯ ವಿಶೇಷ ಆಯುಕ್ತರು (ಕಂದಾಯ) ರವರು ಮಾನ್ಯ ವಿಶೇಷ ಆಯುಕ್ತರು (ಕಂದಾಯ) ರವರ ಆರೆ ಸರ್ಕಾರಿ ಪತ್ರ ಸಂಖ್ಯೆ:DO No.1/SC Caste Survey/2025-26, ದಿನಾಂಕ: 20-06-2025, 24-06-2025, 25-06-2025 ಮತ್ತು 27-06-2025 ರಲ್ಲಿ ಸೂಚಿಸಿರುವಂತೆ ಆದೇಶ ಸಂಖ್ಯೆ: ಕ೦.ಅ(ಮ)/ಪಿಆರ್ 126/2025-26, ದಿನಾಂಕ:17-06-2025 ರಂತೆ ತಮ್ಮನ್ನು ಗಣತಿದಾರರನ್ನಾಗಿ ಪಶ್ಚಿಮ ವಲಯದ ಮತ್ತಿಕೆರೆ ಉಪ-ವಿಭಾಗದ ವಾರ್ಡ್ ಸಂಖ್ಯೆ: 45 ರಲ್ಲಿ ನೇಮಿಸಲಾಗಿತು.

ಮಾನ್ಯ ವಿಶೇಷ ಆಯುಕ್ತರು (ಕಂದಾಯ) ರವರ ಅರೆ ಸರ್ಕಾರಿ ಪತ್ರ ಸಂಖ್ಯೆ: DONo.1/SC Caste Survey/2025-26, : 20-06-2025, 24-06-2025, 25-06-2025 27-06-2025 S ಮನೆಗೆ ಭೇಟಿ ನೀಡಿ ಸರ್ವೇ ಕಾರ್ಯ ನಡೆಸಲು ಸೂಚಿಸಲಾಗಿದೆ. ಸಮೀಕ್ಷೆ ಕಾರ್ಯದಲ್ಲಿ ವಿಫಲರಾದ ಸಿಬ್ಬಂದಿಯವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿರುತ್ತಾರೆ.

ದಿನಾಂಕ: 04-07-2025 ರ ಸಂಜೆ: 6:00 ಗಂಟೆಯಿಂದ ಈ ಕೆಳಗೆ ಸಹಿ ಮಾಡಿದ ನಾನು, ಜಂಟಿ ಆಯುಕ್ತರು (ಪಶ್ಚಿಮ), ಸಹಾಯಕ ಕಂದಾಯ ಅಧಿಕಾರಿ (ಮತ್ತಿಕೆರೆ) (ಪ್ರಭಾರ) ಮತ್ತು ವಾರ್ಡ್ ನೋಡಲ್ ಅಧಿಕಾರಿ ಇವರುಗಳೊಂದಿಗೆ ವಾರ್ಡ್ ಸಂಖ್ಯೆ: 45 ರ (ಮತ್ತಿಕೆರೆ) ಉಪ-ವಿಭಾಗದ, ಮಲ್ಲೇಶ್ವರಂ ||ನೇ ಮುಖ್ಯರಸ್ತೆಯ ಕೌಡ್) ಆಸತ್ರೆಯ ಹತ್ತಿರ ಸಮೀಕ್ಷೆಯ ಪ್ರಗತಿಯ ಕುರಿತು. ಪರಿಶೀಲಿಸಲಾಗಿ ಅರ್ಪಾಟಮೆಂಟ್‌ ಗೇಟ್‌ ಗೆ ಬಿತ್ತಿ ಪತ್ರ ಅಂಟಿಸಿ ಅರ್ಪಾಟಮೆಂಟ್‌ನ ಇತರೆ ಮನೆಗಳ ಸಮೀಕ್ಷೆ ಮಾಡದಿರುವುದು ಕಂಡುಬಂದಿರುತ್ತದೆ. ಸದರಿ ಪ್ರದೇಶದಲ್ಲಿ ವಾಸವಿರುವ ಕುಟುಂಬಸ್ಥರನ್ನು ವಿಚಾರಿಸಲಾಗಿ ಸಮೀಕ್ಷೆ ಮಾಡಲು ಬಿಬಿಎಂಪಿಯಿಂದ ಯಾವುದೇ ಸಿಬ್ಬಂದಿ ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ.

ಮೇಲಾಧಿಕಾರಿಗಳು. ಲಿಖಿತವಾಗಿ ಸೂಚಿಸಿರುವಂತೆ ಸಮೀಕ್ಷೆಯ ಕರ್ತವ್ಯವನ್ನು ನಿರ್ವಹಿಸದೆ ಬೇಜಬ್ದಾರಿತನದಿಂದ ಸಮೀಕ್ಷೆ ಮಾಡಿರುವುದನ್ನು ಗಮನಿಸಲಾಗಿದೆ. ಸರ್ಕಾರದ ಮಹತ್ವಕಾಂಕ್ಷೆಯ ಕಾರ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಸದರಿ ನೌಕರರು ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಾವಳಿ 1966ರ ನಿಯಮ-3(1) ಮತ್ತು (ii) ರನ್ನು ಉಲ್ಲಂಘಿಸಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ನಿಯಮ 10ರನ್ವಯ ಕ್ರಮ ಜರುಗಿಸುವುದು ಸೂಕ್ತವೆಂದು ಅಭಿಪ್ರಾಯಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ರಾಮಾಂಜನೆಯಲು, ಮೌಲ್ಯಮಾಪಕರು ವಾರ್ಡ್-45, (ಮತ್ತಿಕೆರೆ) ಉಪ-ವಿಭಾಗ ಇವರು ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಕಾರ್ಯದಲ್ಲಿ ಕರ್ತವ್ಯಲೋಪವೆಸಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ನಿಯಮ ರನ್ವಯ ಇಲಾಖಾ ವಿಚಾರಣಾ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.

ನೌಕರರು ಕರ್ನಾಟಕ ಸರ್ಕಾರಿ ಸೇವಾ ನಿಯಮ 1958 ರನ್ವಯ ಜೀವನಾಧರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಮತ್ತು ಪೂರ್ವನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಬಾರದೆಂದು ಸೂಚಿಸಿದೆ.

BDA ನಾಮನಿರ್ದೇಶಿತ ಸದಸ್ಯೆಯಾಗಿ ಮಂಜುಳಾ ನಾಯ್ಡು ಸೇರಿ ನಾಲ್ವರ ನೇಮಕ

BREAKING: ರಾಜ್ಯದಲ್ಲಿ ಹೃದಯಾಘಾತದಿಂದ ಸಾವು ಪ್ರಕರಣ: ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ ಟೆಕ್ನಿಕಲ್ ಕಮಿಟಿ

Share. Facebook Twitter LinkedIn WhatsApp Email

Related Posts

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

01/05/2026 10:14 PM3 Mins Read

ಮೇ.16ರಿಂದ ಪ್ರತಿ ಶನಿವಾರ ಜಿಬಿಎ ವ್ಯಾಪ್ತಿಯಲ್ಲಿ ‘ನನ್ನ ಇ-ಖಾತೆ’ ಆಂದೋಲನ: ಡಿಸಿಎಂ‌ ಡಿ.ಕೆ ಶಿವಕುಮಾರ್

01/05/2026 8:26 PM4 Mins Read

‘HIV ಪರೀಕ್ಷೆ’ಗೆ ಮುಜುಗರವೇ? ಈಗ ‘ಕ್ಯೂಆರ್ ಕೋಡ್’ ಮೂಲಕ ಸಿಗಲಿದೆ ಪರಿಹಾರ, ಜಸ್ಟ್ ಹೀಗೆ ಮಾಡಿ ಸಾಕು

01/05/2026 8:24 PM2 Mins Read
Recent News

ಉದ್ಯೋಗ ವಾರ್ತೆ : `CRPF’ ನಲ್ಲಿ 9,195 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | CRPF Recruitment 2026

02/05/2026 5:43 AM

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

01/05/2026 10:14 PM

ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ದಿಢೀರ್ ಅಸ್ವಸ್ಥ: ಮನೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನಾಯಕ ಆಸ್ಪತ್ರೆಗೆ ದಾಖಲು

01/05/2026 9:00 PM

ಸಣ್ಣ ಗಾಯವಾದರೂ ರಕ್ತ ನಿಲ್ಲುತ್ತಿಲ್ಲವೇ? ನಿರ್ಲಕ್ಷಿಸಬೇಡಿ, ಇದು ‘ಹಿಮೋಫಿಲಿಯಾ’ ಲಕ್ಷಣವಿರಬಹುದು!

01/05/2026 8:51 PM
State News
KARNATAKA

ಸಾಗರ ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆ; ಮತ್ತೆ ಗೆದ್ದು ಬೀಗಿದ ಮಾಲತೇಶಪ್ಪ, ಸದ್ಗುರು ಶಿಕ್ಷಕರ ಬಳಗ ಜಯಭೇರಿ

By kannadanewsnow0901/05/2026 10:14 PM KARNATAKA 3 Mins Read

ಶಿವಮೊಗ್ಗ: ಇಂದು ಸಾಗರ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಸದ್ಗುರು ವರ್ಸಸ್ ಸ್ವಾಭಿಮಾನಿ ಶಿಕ್ಷಕರ…

ಮೇ.16ರಿಂದ ಪ್ರತಿ ಶನಿವಾರ ಜಿಬಿಎ ವ್ಯಾಪ್ತಿಯಲ್ಲಿ ‘ನನ್ನ ಇ-ಖಾತೆ’ ಆಂದೋಲನ: ಡಿಸಿಎಂ‌ ಡಿ.ಕೆ ಶಿವಕುಮಾರ್

01/05/2026 8:26 PM

‘HIV ಪರೀಕ್ಷೆ’ಗೆ ಮುಜುಗರವೇ? ಈಗ ‘ಕ್ಯೂಆರ್ ಕೋಡ್’ ಮೂಲಕ ಸಿಗಲಿದೆ ಪರಿಹಾರ, ಜಸ್ಟ್ ಹೀಗೆ ಮಾಡಿ ಸಾಕು

01/05/2026 8:24 PM

ಬೆಂಗಳೂರು ಜನತೆ ಗಮನಕ್ಕೆ: ಮೇ.16ರಿಂದ ಪ್ರತಿ ಶನಿವಾರ ‘ನನ್ನ ಇ-ಖಾತಾ ಅಭಿಯಾನ’ ಆರಂಭ

01/05/2026 8:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.