Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಡಕೆ ಹಾನಿಕಾರಕವಲ್ಲ ಎಂದು ಸಂಶೋಧನಾ ವರದಿ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ

18/03/2026 6:16 AM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ `ಕೃಷಿ ಭೂಮಿಯಲ್ಲಿನ ಮನೆಗಳಿಗೂ ಸಿಗಲಿದೆ ಅಧಿಕೃತ ದಾಖಲೆ !

18/03/2026 6:14 AM

GOOD NEWS : ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳ 5,202 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ !

18/03/2026 6:07 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸಾಗರದ ಜಂಬಗಾರು ರೈಲು ನಿಲ್ದಾಣದಲ್ಲಿ ‘ಸ್ಟೇಷನ್ ಮಹೋತ್ಸವ’ ಆಚರಣೆ
KARNATAKA

ಶಿವಮೊಗ್ಗ: ಸಾಗರದ ಜಂಬಗಾರು ರೈಲು ನಿಲ್ದಾಣದಲ್ಲಿ ‘ಸ್ಟೇಷನ್ ಮಹೋತ್ಸವ’ ಆಚರಣೆ

By kannadanewsnow0923/12/2025 3:35 PM

ಶಿವಮೊಗ್ಗ: ಇಂದು ಮಲೆನಾಡು ಪ್ರದೇಶದ ಇತಿಹಾಸ ಮತ್ತು ಅಭಿವೃದ್ಧಿಯ ಹೆಮ್ಮೆಯ ಸಂಕೇತವಾದ ಸಾಗರ ಜಂಬಗಾರು ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವವನ್ನು ಆಚರಿಸಲಾಯಿತು. ರೈಲ್ವೆ ಇಲಾಖೆಯ ಅಧಿಕೃತ ದಾಖಲೆಗಳ ಪ್ರಕಾರ, ಈ ನಿಲ್ದಾಣವು 1938–39ರಲ್ಲಿ ಸ್ಥಾಪನೆಯಾಗಿ ಹಲವು ದಶಕಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸ್ಟೇಷನ್ ಮಹೋತ್ಸವವು ಭಾರತೀಯ ರೈಲ್ವೆಯ ಮಹತ್ವದ ಉಪಕ್ರಮವಾಗಿದ್ದು, ರೈಲು ನಿಲ್ದಾಣಗಳ ಇತಿಹಾಸ, ಪರಂಪರೆ, ಅಭಿವೃದ್ಧಿ ಹಾಗೂ ಸಾರ್ವಜನಿಕ ಸೇವೆಯ ಪಾತ್ರವನ್ನು ಜನರಿಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ. ವಿಶೇಷವಾಗಿ ಶಾಲಾ ಮಕ್ಕಳನ್ನು ಒಳಗೊಂಡಂತೆ ಯುವ ಪೀಳಿಗೆಗೆ ರಾಷ್ಟ್ರ ನಿರ್ಮಾಣದಲ್ಲಿ ರೈಲ್ವೆಯ ಮಹತ್ವವನ್ನು ಅರಿವುಗೊಳಿಸುವುದಕ್ಕೆ ಇದು ಸಹಕಾರಿಯಾಗಿದೆ.

ಭಾರತೀಯ ರೈಲ್ವೆ ದಾಖಲೆಗಳಲ್ಲಿ ಸಾಗರವನ್ನು ಅಧಿಕೃತವಾಗಿ ಸಾಗರ ಜಂಬಗಾರು ಎಂದು ದಾಖಲಿಸಲಾಗಿದೆ. ಸಾಗರಕ್ಕೆ ಸೇವೆ ನೀಡಿದ ಮೊದಲ ರೈಲು ನಿಲ್ದಾಣವು ಬಸವನ ಹೊಳೆ ಅತ್ತ ಇರುವ ಜಂಬಗಾರು ಗ್ರಾಮದಲ್ಲಿ ಸ್ಥಾಪಿತವಾಗಿತ್ತು. ಮೀಟರ್ ಗೇಜ್ ಅವಧಿಯಲ್ಲಿ ಸಾಗರ ಜಂಬಗಾರು ನಿಲ್ದಾಣವನ್ನು ಎಸ್ಆರ್ ಎಫ್ ಕೋಡ್‌ನಿಂದ ಗುರುತಿಸಲಾಗುತ್ತಿದ್ದು, ತಾಲಗುಪ್ಪ ನಿಲ್ದಾಣಕ್ಕೆ ಟಿಎಲ್ ಜಿಪಿ ಕೋಡ್ ಇತ್ತು. ಪ್ರಾರಂಭದಲ್ಲಿ ಮಲೆನಾಡಿನ ಪರ್ವತ ಪ್ರದೇಶದ ಸಂಪನ್ಮೂಲಗಳನ್ನು ಆರ್ಥಿಕವಾಗಿ ಬಳಸುವ ಉದ್ದೇಶದಿಂದ ಈ ಮೀಟರ್ ಗೇಜ್ ಮಾರ್ಗವನ್ನು ನಿರ್ಮಿಸಲಾಯಿತಾದರೂ, ನಂತರ ಲಿಂಗನಮಕ್ಕಿ ಅಣೆಕಟ್ಟಿನ ನಿರ್ಮಾಣ ಕಾರ್ಯಗಳಿಗೆ ಇದು ಮಹತ್ವದ ಪಾತ್ರ ವಹಿಸಿತು.

ಈ ನಿಲ್ದಾಣವನ್ನು 1938ರಲ್ಲಿ ಮೈಸೂರು ರಾಜ್ಯ ರೈಲ್ವೆಯವರು ನಿರ್ಮಿಸಿದ್ದು, ಸರ್ ಮಿರ್ಜಾ ಇಸ್ಮಾಯಿಲ್ ಅವರು ಸಾಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆನಂದಪುರದಿಂದ ಸಾಗರವರೆಗೆ ರೈಲು ಮಾರ್ಗವನ್ನು ವಿಸ್ತರಿಸಲಾಯಿತು. 1949ರಲ್ಲಿ ಮಹಾರಾಜ ಶ್ರೀ ಚಾಮರಾಜ ವಡಿಯರ್ ಅವರು ಮಹಾತ್ಮ ಗಾಂಧಿ ವಿದ್ಯುತ್ ಸ್ಥಾವರದ ಉದ್ಘಾಟನೆಗಾಗಿ ಸಾಗರಕ್ಕೆ ರೈಲಿನಲ್ಲಿ ಆಗಮಿಸಿ ಜೋಗ ಜಲಪಾತಕ್ಕೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಪ್ರಯಾಣಿಸಿದ ವಿಶೇಷ ಹಳದಿ ಬಣ್ಣದ ರೈಲನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

ಹಲವಾರು ದಶಕಗಳ ಕಾಲ ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಂದ ವಾರ್ತಾಪತ್ರಿಕೆಗಳು, ಅಂಚೆ ಪತ್ರಗಳು ಹಾಗೂ ದೈನಂದಿನ ಅಗತ್ಯ ವಸ್ತುಗಳು ರೈಲಿನ ಮೂಲಕ ಸಾಗರಕ್ಕೆ ಬರುತ್ತಿದ್ದವು. ಈ ಕಾರಣದಿಂದ ರೈಲು ನಿಲ್ದಾಣವು ಈ ಪ್ರದೇಶದ ಜೀವನಾಡಿಯಾಗಿ ಕಾರ್ಯನಿರ್ವಹಿಸಿತು. ಡಾ.ರಾಜ್‌ಕುಮಾರ್, ಬಸವರಾಜ ಕಟ್ಟಿಮನಿ, ಅನಕೃ ಸೇರಿದಂತೆ ಅನೇಕ ಗಣ್ಯರು ತಮ್ಮ ಭೇಟಿಯ ಸಂದರ್ಭದಲ್ಲಿ ಈ ನಿಲ್ದಾಣದ ಅತಿಥಿ ಗೃಹದಲ್ಲಿ ತಂಗಿದ್ದರು.

ಇತಿಹಾಸದಲ್ಲಿ ಈ ನಿಲ್ದಾಣದ ಮುಂಭಾಗದಲ್ಲಿ ಸುಂದರವಾದ ಗುಲಾಬಿ ಹೂಗಳ ತೋಟವಿದ್ದು, ಆ ಕಾಲಕ್ಕೆ ಇದು ಮಾದರಿ ರೈಲು ನಿಲ್ದಾಣವೆಂದು ಪರಿಗಣಿಸಲ್ಪಟ್ಟಿತ್ತು. ಶಿವಮೊಗ್ಗ–ತಾಲಗುಪ್ಪ ವಿಭಾಗದಲ್ಲಿ ನೂರಾರು ರೈಲ್ವೆ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದು, ರೈಲು ಕಾರ್ಯಾಚರಣೆಗೆ ಮಹತ್ವದ ಕೊಡುಗೆ ನೀಡಿದರು.

1994ರಲ್ಲಿ ಗೇಜ್ ಪರಿವರ್ತನೆಯ ಹಿನ್ನೆಲೆಯಲ್ಲಿ ಮೀಟರ್ ಗೇಜ್ ಸೇವೆಯನ್ನು ಸ್ಥಗಿತಗೊಳಿಸಿ, ಎರಡು ಬೋಗಿಗಳ ರೈಲ್ ಬಸ್ ಸೇವೆಯನ್ನು ಆರಂಭಿಸಲಾಯಿತು. ನಂತರ 1995–96ರಲ್ಲಿ ಎನ್. ಡಿಸೋಜಾ ಅವರ ನೇತೃತ್ವದಲ್ಲಿ ಬ್ರಾಡ್ ಗೇಜ್ ಸಮಿತಿ ರಚನೆಯಾಗಿ ನಿರಂತರ ಹೋರಾಟ ನಡೆಯಿತು. ಈ ಪ್ರಯತ್ನಗಳ ಫಲವಾಗಿ 2011ರಲ್ಲಿ ಮೈಸೂರು–ಸಾಗರ ಇಂಟರ್‌ಸಿಟಿ ಬ್ರಾಡ್ ಗೇಜ್ ರೈಲು ಸೇವೆ ಆರಂಭವಾಯಿತು. ಪ್ರಸ್ತುತ ಈ ಮಾರ್ಗದಲ್ಲಿ ಹತ್ತು ರೈಲುಗಳು ಸಂಚರಿಸುತ್ತಿವೆ.

ಈ ರೈಲು ಮಾರ್ಗವು ಸಾಗರ ಮಾತ್ರವಲ್ಲದೆ ಶಿರಸಿ, ಸಿದ್ಧಾಪುರ, ಹೊಸನಗರ, ಸೊರಬ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ಮೊದಲಾದ ನೆರೆಯ ತಾಲ್ಲೂಕುಗಳ ಪ್ರಯಾಣಿಕರಿಗೆ ಸಹ ಸೇವೆ ನೀಡುತ್ತಿದ್ದು, ರೈಲ್ವೆ ಮತ್ತು ಮಲೆನಾಡಿನ ಜನರ ನಡುವಿನ ಆಳವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಖ್ಯಾತ ಜನಪದ ಹಾಗೂ ಚಲನಚಿತ್ರ ಕಲಾವಿದೆ ಲಕ್ಷ್ಮೀ ರಾಮಪ್ಪ ಗಡೇಮನೆ ಮತ್ತು ನಿವೃತ್ತ ರೈಲ್ವೆ ನೌಕರರಾದ ರಾಮದಾಸ್ ಪಿ.ಡಿ. ಅವರನ್ನು ಅವರ ಸೇವೆಗೆ ಗೌರವಿಸಿ ಸನ್ಮಾನಿಸಲಾಯಿತು. ನಿರ್ಮಲಾ ಬಾಲಕಿಯರ ಪ್ರೌಢಶಾಲೆ, ಸಾಗರದ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ಈ ಕಾರ್ಯಕ್ರಮಕ್ಕೆ ಹರಿರಾಮ್ ಮೀನಾ, ADEN, ಶಿವಮೊಗ್ಗ, ರಾಮೋದ್ ಕುಮಾರ್, ADME, ಅರಸೀಕೆರೆ, ರವಿ ಕೈತೋಟ, ಸ್ಟೇಷನ್ ಕನ್ಸಾಲಿಡೇಟೆಡ್ ಸಮಿತಿಯ ಸದಸ್ಯರು, ರೈಲ್ವೆ ಸಿಬ್ಬಂದಿ, ನಿರ್ಮಲಾ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ನಿವೃತ್ತ ರೈಲ್ವೆ ನೌಕರರು, ಕಲಾವಿದರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಸಾಗರ ಜಂಬಗಾರು ರೈಲು ನಿಲ್ದಾಣದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಿ, ಅದರ ಇತಿಹಾಸವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವದಾಗಿ ತಿಳಿಸಲಾಯಿತು.

ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ವಾಪಸ್ ಪಡೆಯುವಂತೆ ಕಾನೂನು ರೀತಿಯ ಹೋರಾಟ: ಬಿಜೆಪಿ ಸಿ.ಕೆ.ರಾಮಮೂರ್ತಿ

Share. Facebook Twitter LinkedIn WhatsApp Email

Related Posts

ಅಡಕೆ ಹಾನಿಕಾರಕವಲ್ಲ ಎಂದು ಸಂಶೋಧನಾ ವರದಿ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ

18/03/2026 6:16 AM1 Min Read

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ `ಕೃಷಿ ಭೂಮಿಯಲ್ಲಿನ ಮನೆಗಳಿಗೂ ಸಿಗಲಿದೆ ಅಧಿಕೃತ ದಾಖಲೆ !

18/03/2026 6:14 AM1 Min Read

GOOD NEWS : ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳ 5,202 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ !

18/03/2026 6:07 AM1 Min Read
Recent News

ಅಡಕೆ ಹಾನಿಕಾರಕವಲ್ಲ ಎಂದು ಸಂಶೋಧನಾ ವರದಿ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ

18/03/2026 6:16 AM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ `ಕೃಷಿ ಭೂಮಿಯಲ್ಲಿನ ಮನೆಗಳಿಗೂ ಸಿಗಲಿದೆ ಅಧಿಕೃತ ದಾಖಲೆ !

18/03/2026 6:14 AM

GOOD NEWS : ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳ 5,202 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ !

18/03/2026 6:07 AM

ರಾಜ್ಯದ ಶಿಕ್ಷಕಿಯರಿಗೆ ಗುಡ್ ನ್ಯೂಸ್ : `ಮಾತೃತ್ವ ರಜೆ’ಯಿಂದ ಮರಳಿದ ಬಳಿಕ 5 ವರ್ಷ ಇಚ್ಛಿಸಿದ ಶಾಲೆಯಲ್ಲಿ ಕೆಲಸ !

18/03/2026 6:02 AM
State News
KARNATAKA

ಅಡಕೆ ಹಾನಿಕಾರಕವಲ್ಲ ಎಂದು ಸಂಶೋಧನಾ ವರದಿ: ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ

By kannadanewsnow5718/03/2026 6:16 AM KARNATAKA 1 Min Read

ಬೆಂಗಳೂರು: ಅಡಕೆಯು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಸಂಶೋಧನಾ ವರದಿ ತಿಳಿಸಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ…

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ಮುಂದೆ `ಕೃಷಿ ಭೂಮಿಯಲ್ಲಿನ ಮನೆಗಳಿಗೂ ಸಿಗಲಿದೆ ಅಧಿಕೃತ ದಾಖಲೆ !

18/03/2026 6:14 AM

GOOD NEWS : ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳ 5,202 ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ !

18/03/2026 6:07 AM

ರಾಜ್ಯದ ಶಿಕ್ಷಕಿಯರಿಗೆ ಗುಡ್ ನ್ಯೂಸ್ : `ಮಾತೃತ್ವ ರಜೆ’ಯಿಂದ ಮರಳಿದ ಬಳಿಕ 5 ವರ್ಷ ಇಚ್ಛಿಸಿದ ಶಾಲೆಯಲ್ಲಿ ಕೆಲಸ !

18/03/2026 6:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.