Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `JEE ಅಡ್ವಾನ್ಸ್‌ಡ್ ಪರೀಕ್ಷೆ’ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ | JEE Advanced 2025

12/05/2025 10:52 AM

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

12/05/2025 10:37 AM

BREAKING : ‘ಭಗವಾನ್ ಬುದ್ಧನ ಜೀವನವು ವಿಶ್ವ ಸಮುದಾಯವನ್ನು ಶಾಂತಿಯತ್ತ ಪ್ರೇರೇಪಿಸುತ್ತದೆ’ : ಬುದ್ಧ ಪೂರ್ಣಿಮೆಗೆ ಶುಭ ಕೋರಿದ ಪ್ರಧಾನಿ ಮೋದಿ | PM Modi

12/05/2025 10:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ನೀಡಿ ಗಂಡಸ್ತನ ತೋರಿಸಲಿ- ಬೊಮ್ಮಾಯಿ
KARNATAKA

ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ನೀಡಿ ಗಂಡಸ್ತನ ತೋರಿಸಲಿ- ಬೊಮ್ಮಾಯಿ

By kannadanewsnow0904/04/2024 8:05 PM

ಹಾವೇರಿ: ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ಬಿಡುಗಡೆ ಮಾಡಿ ತನ್ನ ಗಂಡಸ್ತನ ತೋರಿಸಲಿ, ನಾವು ಅಧಿಕಾರದಲ್ಲಿದ್ದಾಗ ಪ್ರವಾಹಕ್ಕೆ ಎರಡು ಪಟ್ಟು ಪರಿಹಾರ ನೀಡಿ ನಮ್ಮ ಗಂಡಸ್ತನ ತೋರಿಸಿದ್ದೇವೆ‌ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾನಗಲ್ ತಾಲೂಕು ಆಡೂರು ಗ್ರಾಮದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮುಂದೆ ಬರಗಾಲದ ಬಗ್ಗೆ ಮಾತನಾಡಲು ಒಬ್ಬೇ ಒಬ್ಬ ಬಿಜೆಪಿ ನಾಯಕರು ಗಂಡಸರಾಗಿ ನಿಂತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನೋಡಿ, ಈಗ ಸದ್ಯ ಗಂಡಸ್ಥನ ಟೆಸ್ಟ್ ಆಗೋದು ಯಾರು ಅಧಿಕಾರದಲ್ಲಿದ್ದಾರೆ ಅವರದ್ದು, ಸಿದ್ದರಾಮಯ್ಯರನ್ನು ಜನ ಅಧಿಕಾರಕ್ಕೆ ತಂದಿದ್ದಾರೆ. ಅಧಿಕಾರಕ್ಕೆ ತಂದ ಮಾಲೀಕರು ಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಧಾವಿಸುವುದು ಅವರ ಕೆಲಸ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಯಾರಿಗೂ ಕಾಯದೇ ಪ್ರವಾಹ ಪರಿಹಾರ ಎರಡು ಪಟ್ಟು ಬಿಡುಗಡೆ ಮಾಡಿದ್ದೇವೆ
17 ಲಕ್ಷ ಜನರಿಗೆ ಪರಿಹಾರ ಕೊಟ್ಟಿರುವುದು ನಮ್ಮ ಗಂಡಸ್ಥನ. ನಮ್ಮ ಗಂಡಸ್ತನ ನಾವು ಈಗಾಗಲೇ ತೋರಿಸಿದ್ದೇವೆ ಎಂದು ತಿರುಗೇಟು ನೀಡಿದರು.

ನಾವೇನು ಯಾರ ಮೇಲೂ ಬೊಟ್ಟು ಮಾಡಿ ತೋರಿಸಿಲ್ಲ

ನಿಜವಾದ ಗಂಡಸ್ಥನದ ಪರೀಕ್ಷೆ ಈಗ ಇವರದಿದೆ. ಇವರು ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸದೇ ತಮ್ಮ ಖಜಾನೆಯಿಂದ ದುಡ್ಡು ಬಿಡುಗಡೆ ಮಾಡಿ ತೋರಿಸಲಿ ಎಂದು ಹೇಳಿದರು.

ನಮಗೇನು ಆಗ ಮೇಲಿಂದ ಪರಿಹಾರ ಬಂದಿತ್ತಾ? ಆ ಮೇಲೆ ಬಂತು. ಈಗ ರೈತರಿಗೆ ಪರಿಹಾರ ಕೊಡಲು ಖಜಾನೆ ಖಾಲಿಯಾಗಿದೆ. ತಮ್ಮ ವೈಫಲ್ಯ ಮುಚ್ಚಿ ಹಾಕಲು ಕುಂಟು ನೆಪ ಹೇಳುತ್ತಾರೆ. ವೈಫಲ್ಯ ಮುಚ್ಚಿಕೊಳ್ಳಲು ಗಂಡಸ್ಥನದ ಮಾತು ಹೇಳುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ನಿಜವಾದ ಗಂಡಸ್ಥನ ನಾವು ತೋರಿಸಿದ್ದೇವೆ. ಅವರು ಈಗ ಅಧಿಕಾರದಲ್ಲಿದ್ದಾರೆ, ಅವರು ಪರಿಹಾರ ನೀಡುವುದರಲ್ಲಿ ಗಂಡಸ್ಥನ ತೋರಿಸಲಿ ಎಂದು ಸವಾಲು ಹಾಕಿದರು.

ರಾಮರಾಜ್ಯ ಮಾಡುತ್ತೇವೆ

ರಾಮ ಮಂದಿರ ತೋರಿಸಿ ಬಿಜೆಪಿ ಮತ ಯಾಚನೆ ಮಾಡುತ್ತಿದ್ದಾರೆಂಬ ಕಾಂಗ್ರೆಸ್ಸಿಗರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಾವು ರಾಮನ ಹೆಸರೂ ಹೇಳುತ್ತೇವೆ, ರಾಮ ರಾಜ್ಯವನ್ನೂ ಮಾಡಿದ್ದೇವೆ. ಕರ್ನಾಟಕದಲ್ಲಿ ಕೊಡುತ್ತಿರುವುದು ನರೇಂದ್ರ ಮೋದಿ ಕೊಟ್ಟಿರುವ ಅಕ್ಕಿ. ಅನ್ನ ಕೊಟ್ಟಿರುವುದು ನರೇಂದ್ರ ಮೋದಿಯವರು. ಸಿದ್ದರಾಮಯ್ಯ ಒಂದು ಬಿಡಿಗಾಳನ್ನೂ ಕೊಟ್ಟಿಲ್ಲ. ಅನ್ನದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.

ಈಶ್ವರಪ್ಪ ಹೇಳಿಕೆಯಲ್ಲಿ ಹುರುಳಿಲ್ಲ

ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೊಂದಾಣಿಕೆ ರಾಜಕೀಯ ಮಾಡ್ತಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಈ ತರದ ಹೇಳಿಕೆಗಳು ಸಹಜ. ಅಂತಿಮ ತೀರ್ಪು ಜನ ಕೊಡುತ್ತಾರೆ. ಆದ್ದರಿಂದ ಯಾರೂ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲ
ಜನ ಎಲ್ಲಾ ಗಮನಿಸುತ್ತಾರೆ. ಈಶ್ವರಪ್ಪ ಅವರು ಅವರ ಅನುಕೂಲಕ್ಕೆ ತಕ್ಕಂತೆ ಅವರು ವಾದ ಮಾಡುತ್ತಾರೆ. ಈಶ್ವರಪ್ಪ ಅವರ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಹೇಳಿದರು.

ಎಸ್ಡಿಪಿಐ ಕಾಂಗ್ರೆಸ್ ಮರಿ

ಕೇರಳದಲ್ಲಿ ಕಾಂಗ್ರೆಸ್ ಜೊತೆ ಎಸ್ ಡಿ ಪಿ ಐ ಹೊಂದಾಣಿಕೆ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್ ಡಿ ಪಿ ಐ ಕಾಂಗ್ರೆಸ್ ಹುಟ್ಟು ಹಾಕಿರುವ ಒಂದು ಮರಿ. ಹೀಗಾಗಿ ಅದರ ಪಾಲನೆ ಪೋಷಣೆ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಅದಕ್ಕೆ ಅವರು ಅವರ ಜೊತೆಗೇ ಇರುತ್ತಾರೆ ಎಂದು ಹೇಳಿದರು.

‘ಅಪರಾಧಿಗಳು ಜೈಲಿನಲ್ಲಿ ಜೀವನ ಕಳೆಯುತ್ತಾರೆ’: ‘ಮಮತಾ’ಗೆ ಸಂದೇಶ್ಖಾಲಿ ನೆನಪಿಸಿದ ‘ಪ್ರಧಾನಿ ಮೋದಿ’

ಗಮನಿಸಿ: ಏ.9ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕಾಲಾವಕಾಶ

ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಬರ ಪರಿಹಾರ ನೀಡಿ ಗಂಡಸ್ತನ ತೋರಿಸಲಿ- ಬೊಮ್ಮಾಯಿ State govt should show manhood by providing drought relief from its treasury: Bommai
Share. Facebook Twitter LinkedIn WhatsApp Email

Related Posts

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

12/05/2025 10:37 AM3 Mins Read

GOOD NEWS : ಕಣ್ಣಿನ ಸಮಸ್ಯೆವುಳ್ಳ ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕಣ್ಣಿನ ಚಿಕಿತ್ಸೆ, ಕನ್ನಡಕ, ಲೆನ್ಸ್ ವಿತರಣೆಗೆ ರಾಜ್ಯಾದ್ಯಂತ ‘ಆಶಾಕಿರಣ’ ಯೋಜನೆ ವಿಸ್ತರಣೆ.!

12/05/2025 9:32 AM1 Min Read

BIG NEWS : ಗ್ಯಾರಂಟಿಗಳ ಮೂಲಕ 52,000 ಕೋಟಿ ರೂ. ಜನರಿಗೆ ತಲುಪಿಸುತ್ತಿದ್ದೇವೆ : DCM ಡಿ.ಕೆ. ಶಿವಕುಮಾರ್

12/05/2025 9:26 AM1 Min Read
Recent News

BREAKING : `JEE ಅಡ್ವಾನ್ಸ್‌ಡ್ ಪರೀಕ್ಷೆ’ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ | JEE Advanced 2025

12/05/2025 10:52 AM

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

12/05/2025 10:37 AM

BREAKING : ‘ಭಗವಾನ್ ಬುದ್ಧನ ಜೀವನವು ವಿಶ್ವ ಸಮುದಾಯವನ್ನು ಶಾಂತಿಯತ್ತ ಪ್ರೇರೇಪಿಸುತ್ತದೆ’ : ಬುದ್ಧ ಪೂರ್ಣಿಮೆಗೆ ಶುಭ ಕೋರಿದ ಪ್ರಧಾನಿ ಮೋದಿ | PM Modi

12/05/2025 10:31 AM

BREAKING : ಭಾರತೀಯ ಪೈಲಟ್ ಬಂಧನದಲ್ಲಿಲ್ಲ, ನಮ್ಮ ಒಂದು ಜೆಟ್ ಅನ್ನು ಹೊಡೆದುರುಳಿಸಲಾಗಿದೆ : ಪಾಕಿಸ್ತಾನ ಸೇನೆ ಸ್ಪಷ್ಟನೆ

12/05/2025 10:24 AM
State News
KARNATAKA

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

By kannadanewsnow5712/05/2025 10:37 AM KARNATAKA 3 Mins Read

ಸಾಕಷ್ಟು ಕಠಿಣ ಪರಿಶ್ರಮದ ನಂತರವೂ, ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯದಿದ್ದರೆ ಅಥವಾ ನಿಮ್ಮ ಕೈಯಲ್ಲಿ ಹಣ ನಿಲ್ಲಬೇಕಾದರೆ ಏನು ಮಾಡಬೇಕು..?…

GOOD NEWS : ಕಣ್ಣಿನ ಸಮಸ್ಯೆವುಳ್ಳ ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕಣ್ಣಿನ ಚಿಕಿತ್ಸೆ, ಕನ್ನಡಕ, ಲೆನ್ಸ್ ವಿತರಣೆಗೆ ರಾಜ್ಯಾದ್ಯಂತ ‘ಆಶಾಕಿರಣ’ ಯೋಜನೆ ವಿಸ್ತರಣೆ.!

12/05/2025 9:32 AM

BIG NEWS : ಗ್ಯಾರಂಟಿಗಳ ಮೂಲಕ 52,000 ಕೋಟಿ ರೂ. ಜನರಿಗೆ ತಲುಪಿಸುತ್ತಿದ್ದೇವೆ : DCM ಡಿ.ಕೆ. ಶಿವಕುಮಾರ್

12/05/2025 9:26 AM

BREAKING : ಬೆಂಗಳೂರಿನಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಓಡಾಡುತ್ತಿರುವ ವ್ಯಕ್ತಿ.!

12/05/2025 9:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.