Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

26/08/2025 11:41 AM

ಟ್ರಂಪ್ ಸುಂಕ: ಅಂಗಡಿಗಳಲ್ಲಿ ‘ಸ್ವದೇಶಿ ಮಾತ್ರ’ ಫಲಕ ಇಡುವಂತೆ ಪ್ರಧಾನಿ ಮೋದಿ ಕರೆ | Swadeshi Only

26/08/2025 11:18 AM

ಬೊಜ್ಜು ಬಿಕ್ಕಟ್ಟು: ಪ್ರಧಾನಿ ಎಚ್ಚರಿಕೆ ನಂತರ ಮೊದಲ ಮಾರ್ಗಸೂಚಿ ಸಿದ್ಧಪಡಿಸಿದ ಕೇಂದ್ರ ಸರ್ಕಾರ

26/08/2025 11:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರದ ಮೊತ್ತಕ್ಕೆ ಸಮನಾದ ಮೊತ್ತ ಸೇರಿಸಿ ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರ ನೀಡಲಿ- ಬಸವರಾಜ
KARNATAKA

ಕೇಂದ್ರದ ಮೊತ್ತಕ್ಕೆ ಸಮನಾದ ಮೊತ್ತ ಸೇರಿಸಿ ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರ ನೀಡಲಿ- ಬಸವರಾಜ

By kannadanewsnow0928/04/2024 3:17 PM

ಹಾವೇರಿ: ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ಮೊತ್ತಕ್ಕೆ ಸಮನಾಗಿ ರಾಜ್ಯ ಸರ್ಕಾರವೂ ತನ್ನ ಖಜಾನೆಯಿಂದ ಹಣ ಹಣ ಸೇರಿಸಿ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿಯಲ್ಲಿಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ ಯುಪಿಎ ಹಾಗೂ ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಬಿಡಿಗಡೆಯಾದ ಪರಿಹಾರದ ದಾಖಲೆ ಬಿಡುಗಡೆ ಮಾಡಿ ಮಾತಮಾಡಿದರು. ಬರ ಪರಿಹಾರದ ಬಗ್ಗೆ ಕಾಂಗ್ರೆಸ್ ಸರ್ಕಾರ ಹಿಂದೆದು ಕಾಣದ ರಾಜಕಾಣರ ಮಾಡುತ್ತಿದೆ. ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಳಂಬ ಆಯಿತು ಎಂದು ಕಾಂಗ್ರೆಸ್ ನವರು ಹೇಳಿದ್ದಾರೆ. ಯುಪಿಎ ಅವಧಿಯಲ್ಲಿ ಒಂದು ವರ್ಷ, ಎಂಟು ತಿಂಗಳ ನಂತರ ಬರ ಪರಿಹಾರ ಕೊಟ್ಟಿದ್ದಾರೆ. ಆಗ ಎಂದೂ ಪ್ರತಿಭಟನೆ ಮಾಡದ ಕಾಂಗ್ರೆಸ್ ನವರು ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ. ಆನೆ ಹೊಟ್ಟಿಗೆ ಅರೆ ಕಾಸಿನ ಮಜ್ಜಿಗೆ ಅಂತ ಹೇಳಿದ್ದಾರೆ.ಆದರೆ, ಯುಪಿಎ ಅವಧಿಯಲ್ಲಿ ಹತ್ತು ವರ್ಷದಲ್ಲಿ 1954 ಕೋಟಿ ರೂ. ಪರಿಹಾರ ಕೊಟ್ಟಿದ್ದಾರೆ.

2004-05 ರಲ್ಲಿ ರಾಜ್ಯ ಸರ್ಕಾರ 1147 ಕೋಟಿ ರೂ. ಕೇಳಿತ್ತು, ಆಗ ಅವರು ಕೊಟ್ಠಿದ್ದು, 83 ಕೋಟಿ ಕೇವಲ ಶೇ 7% ನೀಡಿದೆ. 2006-07ರಲ್ಲಿ ರಾಜ್ಯ ಸರ್ಕಾರ 1262 ಕೇಳಿತ್ತು, ಕೇಂದ್ರ ಸರ್ಕಾರ ಕೊಟ್ಟಿದ್ದು 78 ಕೋಟಿ ರೂ. 2008-09 ರಲ್ಲಿ ರಾಜ್ಯ ಸರ್ಕಾರ 2043 ಕೋಟಿ ರೂ. ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಕೊಟ್ಟಿದ್ದು 83 ಕೋಟಿ ರೂ. ಮಾತ್ರ.2011-12 ರಲ್ಲಿ 6214 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ 760 ಕೋಟಿ ರೂ. ನೀಡಿತ್ತು. 2012-13 ರಲ್ಲಿ 7642 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗೊತ್ತು. ಆಗ ಕೇಂದ್ರದಿಂದ 526 ಕೋಟಿ ರೂ.ಬಿಡುಗಡೆಯಾಗಿತ್ತು. 2013-14 ರಲ್ಲಿ 877.ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿತ್ತು ಕೇಂದ್ರ ಸರ್ಕಾರ 308 ಮಾತ್ರ ಬಿಡುಗಡೆ ಮಾಡಿತ್ತು ಎಂದು ವಿವರಣೆ ನೀಡಿದರು.

ಇನ್ನು 2014 ರಿಂದ 24 ರ ವರೆಗೆ ಎನ್ ಡಿಎ ಅವಧಿಯಲ್ಲಿ 2014-15 ರಲ್ಲಿ ರಾಜ್ಯ ಸರ್ಕಾರ 930 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ 305 ಕೋಟಿ ರೂ. ಪರಿಹಾರ ನೀಡಿತ್ತು. 2015-16 ರಲ್ಲಿ 5247 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ 2263 ಕೋಟಿ ರೂ. ಬಿಡುಗಡೆ ಮಾಡಿತ್ತು. 2016-17 ರಲ್ಲಿ 7572 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ 2577 ಕೋಟಿ ರೂ. ಪರಿಹಾರ ನೀಡಿತ್ತು. 2018-19 ರಲ್ಲಿ ರಾಜ್ಯ ಸರ್ಕಾರ 4064 ಕೋಟಿ ರೂ. ಮನವಿ ಮಾಡಿತ್ತು ಕೇಂದ್ರ ಸರ್ಕಾರ 1040 ಕೋಟಿ ರೂ. ಬಿಡುಗಡೆ ಮಾಡಿತ್ತು.

ಯುಪಿಎ ಎನ್ ಡಿ ಎ ಪರಿಹಾರ ಅಜಗಜಾಂತರ

ಕೇಂದ್ರದಿಂದ ಬದಂದಿರುವ ಬರ ಪರಿಹಾರದಲ್ಲಿ ಯುಪಿಎ ಅವಧಿಯಲ್ಲಿ 2004-14 ರ ವರೆಗೆ ಹತ್ತು ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಬರ ಪರಿಹಾರಕ್ಕೆ 19,579 ಕೋಟಿ ರೂ.ಮನವಿ ಸಲ್ಲಿಸಲಾಗಿತ್ತು.ಅಂದಿನ ಯುಪಿಎ ಸರ್ಕಾರ ಹತ್ತು ವರ್ಷದಲ್ಲಿ ಬಿಡುಗಡೆ ಮಾಡಿರುವ ಹಣ ಕೇವಲ 1954 ಕೋಟಿ ರೂ. ಮಾತ್ರ, ಇದು ಒಟ್ಟು ಬೇಡಿಕೆ ಶೇ 10% ಮಾತ್ರ ಯುಪಿಎ ಅವಧಿಯಲ್ಲಿ ಪರಿಹಾರ ಬಂದಿತ್ತು.

ಎನ್ ಡಿಎ ಅವಧಿಯಲ್ಲಿ 2014-24 ವರೆಗೆ ರಾಜ್ಯ ಸರ್ಕಾರದಿಂದ 18,747 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರ 6185 ಕೋಟಿ ರೂ. ಬಿಡುಗಡೆ ಮಾಡಿತ್ತು. ಅಂದರೆ, ಶೇ 30% ಪರಿಹಾರ ಬಿಡುಗಡೆ ಮಾಡಿತ್ತು. ಅಲ್ಲದೇ ನಿನ್ನೆ 3454 ಕೋಟಿ ರೂ. ಘೋಷಣೆ ಮಾಡಿದೆ. ಯುಪಿಎ ಅವಧಿಯಲ್ಲಿ ಈಗ ಕೊಟ್ಡಿರುವ ಹಣದ ಶೇ 30% ರಷ್ಟು ಮಾತ್ರ ಅವರು ಕೊಟ್ಟಿದ್ದಾರೆ. ಆಗ ಕಾಂಗ್ರೆಸ್ ನವರು ಯಾಕೆ ಪ್ರತಿಭಟನೆ ಮಾಡಲಿಲ್ಲ. ಈಗ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿದರೆ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನವರು ಇದ್ದಾರೆ ಎಂದು ಹೇಳಿದರು.

ದುಪ್ಪಟ್ಟು ಪರಿಹಾರ

ನಮ್ಮ ಕಾಲದಲ್ಲಿ ಹಾಗೂ ಯಡಿಯೂರಪ್ಪ ಅವರ ಅವಧಿಯಲ್ಲಿ ಪ್ರವಾಹ ಬಂದಾಗ ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾದವಾಗಿ 10 ಸಾವಿರ ಬಿಡುಗಡೆ ಮಾಡಿದ್ದೇವು. ಪೂರ್ಣ ಪ್ರಮಾಣದ ಮನೆ ಬಿದ್ದರೆ 5 ಲಕ್ಷ, ಭಾಗಶಹ ಬಿದ್ದರೆ 3 ಲಕ್ಷ, ಹಾಗೂ ಅಲ್ಪ ಪ್ರಮಾಣದ ಹಾನಿಗೆ 50 ಸಾವಿರ ರೂ. ಪರಿಹಾರ ನೀಡಿದ್ದೇವು. ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆಯಿಂದ ನಯಾಪೈಸೆ ಪರಿಹಾರ ನೀಡಿಲ್ಲ. ಹೀಗಾಗಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ನಾಟಕ ಹೂಡಿದ್ದಾರೆ, ನೀವು ರಾಜ್ಯ ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆ ಮಾಡಿದ್ದರೆ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡುವ ನೈತಿಕತೆ ಇರುತ್ತಿತ್ತು ಎಂದು ಹೇಳಿದರು.

ಪ್ರವಾಹ ಬಂದಾಗ ಬೆಳೆ ಪರಿಹಾರ ಎರಡು ಪಟ್ಡು ಕೊಟ್ಡಿದ್ದೇವೆ. ಪ್ರತಿ ಹೆಕ್ಟೇರ್ ಗೆ 6 ಸಾವಿರ ಇತ್ತು ನಾವು 13600 ಕೋಟಿ ರೂ. ಕೊಟ್ಟಿದ್ದೇವು, ನೀರಾವರಿ ಬೆಳೆ ಹಾನಿಗೆ 13000 ಕೋಟಿ ಇತ್ತು ನಾವು 25000 ಕೋಟಿ ರೂ. ಕೊಟ್ಟಿದ್ದೇವು. ತೋಟಗಾರಿಕೆ ಬೆಳೆಗಳಿಗೆ 18000 ಕೋಟಿ ಇತ್ತು. ನಾವು 28000 ಕೋಟಿ ರೂ. ಪರಿಹಾರ ನೀಡಿದ್ದೇವು ಎಂದು ಹೇಳಿದರು.

ಪ್ರಧಾನಿ ಮೋದಿ ಟೀಕಿಸುವುದು ಫ್ಯಾಷನ್

ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ರಾಜಕಾರಣದ ಫ್ಯಾಷನ್ ಆಗಿದೆ. ಕಾಂಗ್ರೆಸ್ ಗೆ ಮೋದಿ ಫೋಬಿಯಾ ಶುರುವಾಗಿದೆ‌ ಮೋದಿ ಟೀಕಿಸಿದರೆ ತಮ್ಮ ಪ್ರಚಾರ ಹೆಚ್ಚಾಗುತ್ತದೆ ಎಂದು ಕೊಂಡಿದ್ದಾರೆ. ಆದರೆ, ಮಳದಿಯವರನ್ನು ಟೀಕಿಸಿದಷ್ಟು ಮೋದಿಯವರ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಹೇಳಿದರು.

ಇನ್ನು ಜನರ ಆಸ್ತಿ ಹಂಚಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್ ನವರು ಹೇಳಿದ್ದಾರೆ. ವಿರೊಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಸರ್ವೆ ಮಾಡುತ್ತೆವೆ ಅಂತ ಹೇಳುತ್ತಿದ್ದಾರೆ.
ಮೊದಲು ಕಾಂಗ್ರೆಸ್ ಪಕ್ಚದ ನಾಯಕರ ಬೇನಾಮಿ ಆಸ್ತಿ ಸರ್ವೆ ಆಗಬೇಕು. ನಮ್ಮ ಉಪ ಮುಖ್ಯಮಂತ್ರಿ ಗಳು ಬಹಳ ಹುಷಾರಿದ್ದಾರೆ. ಶಾಮ್ ಪಿತ್ರೊಡಾ ಹೇಳಿಕೆಗೂ ಪಕ್ಚಕ್ಕೂ ಸಂಬಂಧ ಇಲ ಅಂತ ಹೇಳಿದ್ದಾರೆ ಎಂದರು.

ಇನ್ನು ಉದ್ಯಮಿಗಳಾದ ಅದಾನಿ ಅಂಬಾನಿಯನ್ನು ಕಾಂಗ್ರೆಸ್ ನವರೇ ಬೆಳೆಸಿದ್ದಾರೆ.1980 ರ ದಶಕದಲ್ಲಿ ಯಾರು ಪ್ರಧಾನಿಯಾಗಿದ್ದರು. ಮನಮೋಹನ್ ಸಿಂಗ್ ಅವರು ಉದಾರಿಕರಣ, ಖಾಸಗೀಕರಣ ಮಾಡಿದರು. ಅದರ ಪರಿಣಾಮ ಖಾಸಗಿಯವರು ಶ್ರೀಮಂತರಾಗಿದ್ದಾರೆ. ಯಾವಾಗ ತಳ ಹಂತದ ಜನರಆದಾಯ ಹೆಚ್ಚಳವಾಗುತ್ತದೆ ಆಗ ದೇಶ ಶ್ರೀಮಂತ ವಾಗುತ್ತದೆ. ಮೋದಿಯವರ ಅವಧಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಕೊಟ್ಯಾದೀಶರಾಗಿದ್ದಾರೆ. 25 ಕೋಟಿ ಜನರ ಬಡತನ ನಿರ್ಮೂಲನೆ ಮಾಡಿ ಬಡವರ ನ್ನು ಶ್ರೀಮಂತರನ್ನಾಗಿ ಪ್ರಧಾನಿ ಮೋದಿ ಮಾಡಿದ್ದಾರೆ. ಶೇ 6.6 ಆರ್ಥಿಕ ಅಭಿವೃದ್ಧಿ ಆಗಿದೆ. ಬೇರೆ ಯಾವುದೇ ದೇಶ ಇಷ್ಟು ಅಭಿವೃದ್ಧಿ ಯಾಗುತ್ತಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿತು ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಕೊಡುವ ವರದಿಗೂ ಕೇಂದ್ರದ ವರದಿಗೂ ವ್ಯತ್ಯಾಸ ಆದಾಗ ಅದನ್ನು ಪರಿಶಿಲನೆ ಮಾಡಲು ಸಮಯ ತೆಗೆದುಕೊಳ್ಳಬೇಕು. ಆಡಳಿತ ಪಕ್ಷ ಸರಿಯಾಗಿ ವರದಿ ಕೊಟ್ಟಿಲ್ಲ ಎಂದರು.

ಸರಿಸಮ ಹಣ ಬಿಡುಗಡೆ ಮಾಡಲಿ

ಕೇಂದ್ರ ಸರ್ಕಾರ ಈಗ ಬಿಡುಗಡೆ ಮಾಡಿರುವ 5454 ಕೋಟಿ ರೂ. ಗೆ ಸರಿಯಾದ ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕು. ಆಗ ನನಗೆ ಖುಷಿಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ಬದ್ದತೆ ಇದ್ದರೆ, ಖಜಾನೆಯಲ್ಕಿ ಹಣ ಇದ್ದರೆ, ಜನರಿಗೆ ಕೊಡುವ ಮನಸಿದ್ದರೆ ರಾಜ್ಯ ಸರ್ಕಾರ. ತನ್ನ ಖಜಾನೆಯ ಹಣವನ್ನೂ ನೀಡಲಿ ಎಂದು ಆಗ್ರಹಿಸಿದರು.

ಹಾವೇರಿ ಕ್ಷೇತ್ರಕ್ಕೆ ನಡ್ಡಾ, ಅಮಿತ್ ಶಾ ಆಗಮನ

ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಏ 30 ರಂದು ಜೆಪಿ ನಡ್ಡಾ ಆಗಮಿಸಲಿದ್ದು, ಅಂದು ಕಾಗಿನೆಲೆಗೆ ಬಂದು ದೇವರ ದರ್ಶನ ಪಡೆದು, ಪ್ರಮುಖರ ಭೇಟಿ ಮಾಡಿ, ನಂತರ ಮೊಟೆಬೆನ್ನೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಕೆಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 1ಕ್ಕೆ ರಾಣೆಬೆನ್ನೂರಿಗೆ ಬರುತ್ತಾರೆ. ರೋಡ್ ಶೋ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಇನ್ನು ರಾಜ್ಯದ ಸ್ಟಾರ್ ಪ್ರಚಾರಕರಾದ ಸಂಸದ ಪ್ರತಾಪ್ ಸಿಂಹ ಸೋಮವಾರ ಬಂದು ಹಾವೇರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ, ಗದಗ ಬೆಟಗೇರಿಯಲ್ಲಿ ರೋಡ್ ಶೋ ಮಾಡುತ್ತಾರೆ. ನಟಿ ತಾರಾ ಅನುರಾಧ ಅವರೂ ಸೋಮವಾರ ಆಗಮಿಸಿ ಗದಗ ಬೆಟಗೇರಿ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.

BIG NEWS: ಪ್ರಜ್ವಲ್ ರೇವಣ್ಣ ‘ರಾಸಲೀಲೆ ವೀಡಿಯೋ’ ಕೇಸ್: ಪ್ರಕರಣವನ್ನು ‘SIT ತನಿಖೆ’ಗೆ ವಹಿಸಿ ‘ರಾಜ್ಯ ಸರ್ಕಾರ’ ಅಧಿಕೃತ ಆದೇಶ

ಕಾಂಗ್ರೆಸ್ ರಾಜಕುಮಾರ ನಮ್ಮ ಮಹಾರಾಜರನ್ನ ಅವಮಾನಿಸ್ತಾರೆ, ನವಾಬರ ದೌರ್ಜನ್ಯ ಮರೆತು ಬಿಡ್ತಾರೆ : ಪ್ರಧಾನಿ ಮೋದಿ

Share. Facebook Twitter LinkedIn WhatsApp Email

Related Posts

ಇನ್ಮುಂದೆ ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

26/08/2025 11:41 AM1 Min Read

BIG NEWS : ಬೆಂಗಳೂರಲ್ಲಿ ಕೇಸರಿ ಶಾಲು ಹಾಕಿದಕ್ಕೆ ಹಲ್ಲೆ ಆರೋಪ : ಮೂವರು ಕಿಡಿಗೇಡಿಗಳು ಅರೆಸ್ಟ್!

26/08/2025 11:12 AM1 Min Read

ಧರ್ಮಸ್ಥಳ ಪ್ರಕರಣ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ದಾಖಲೆ ವಶಕ್ಕೆ ಪಡೆದ ‘SIT’

26/08/2025 10:39 AM1 Min Read
Recent News

ಇನ್ಮುಂದೆ ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

26/08/2025 11:41 AM

ಟ್ರಂಪ್ ಸುಂಕ: ಅಂಗಡಿಗಳಲ್ಲಿ ‘ಸ್ವದೇಶಿ ಮಾತ್ರ’ ಫಲಕ ಇಡುವಂತೆ ಪ್ರಧಾನಿ ಮೋದಿ ಕರೆ | Swadeshi Only

26/08/2025 11:18 AM

ಬೊಜ್ಜು ಬಿಕ್ಕಟ್ಟು: ಪ್ರಧಾನಿ ಎಚ್ಚರಿಕೆ ನಂತರ ಮೊದಲ ಮಾರ್ಗಸೂಚಿ ಸಿದ್ಧಪಡಿಸಿದ ಕೇಂದ್ರ ಸರ್ಕಾರ

26/08/2025 11:12 AM

BIG NEWS : ಬೆಂಗಳೂರಲ್ಲಿ ಕೇಸರಿ ಶಾಲು ಹಾಕಿದಕ್ಕೆ ಹಲ್ಲೆ ಆರೋಪ : ಮೂವರು ಕಿಡಿಗೇಡಿಗಳು ಅರೆಸ್ಟ್!

26/08/2025 11:12 AM
State News
KARNATAKA

ಇನ್ಮುಂದೆ ಮಗುವಿಗೆ ಜನ್ಮನೀಡಲಿದೆ ರೊಬೋಟ್‌ – ಅಚ್ಚರಿಯ ಸಂಶೋಧನೆಯತ್ತ ಚೀನಾ

By kannadanewsnow0726/08/2025 11:41 AM KARNATAKA 1 Min Read

ನವದೆಹಲಿ: ಚೀನಾದ ವಿಜ್ಞಾನಿಗಳು ಗರ್ಭಧಾರಣೆಯನ್ನು ಅನುಕರಿಸಲು ಮತ್ತು ಜೀವಂತ ಮಗುವಿಗೆ ಜನ್ಮ ನೀಡಲು ವಿನ್ಯಾಸಗೊಳಿಸಲಾದ ಹುಮನಾಯ್ಡ್ ರೋಬೋಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ…

BIG NEWS : ಬೆಂಗಳೂರಲ್ಲಿ ಕೇಸರಿ ಶಾಲು ಹಾಕಿದಕ್ಕೆ ಹಲ್ಲೆ ಆರೋಪ : ಮೂವರು ಕಿಡಿಗೇಡಿಗಳು ಅರೆಸ್ಟ್!

26/08/2025 11:12 AM

ಧರ್ಮಸ್ಥಳ ಪ್ರಕರಣ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ದಾಖಲೆ ವಶಕ್ಕೆ ಪಡೆದ ‘SIT’

26/08/2025 10:39 AM

ಸರ್ಕಾರಿ ನೌಕರ, ಪತ್ನಿ ಇಬ್ಬರು ಮೃತಪಟ್ಟಲ್ಲಿ, ಆತನ ಸಹೋದರನಿಗೆ ಅನುಕಂಪದ ನೌಕರಿ ನೀಡಬಹುದು : ಹೈಕೋರ್ಟ್

26/08/2025 10:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.