Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch video | ಭಾರತಕ್ಕೆ ಚೊಚ್ಚಲ ಮಹಿಳಾ ವಿಶ್ವಕಪ್ : ಕಣ್ಣೀರು ಸುರಿಸಿದ ಜೂಲನ್ ಗೋಸ್ವಾಮಿ

03/11/2025 7:49 AM

BREAKING: ವಿಶ್ವಕಪ್ ವಿಜೇತ ಮಹಿಳಾ ತಂಡಕ್ಕೆ 51 ಕೋಟಿ ರೂ. ಬಹುಮಾನ ಘೋಷಿಸಿದ BCCI

03/11/2025 7:46 AM

ವೀರಪ್ಪನ್ ಇದ್ದಾಗಲೇ ಕಾಡು ಚನ್ನಾಗಿತ್ತು : ಸಚಿವ ಈಶ್ವರ್ ಖಂಡ್ರೆ ಮುಂದೆ ರೈತರ ಆಕ್ರೋಶ

03/11/2025 7:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಸರ್ಕಾರಿ ವೈದ್ಯ’ರ ಉನ್ನತ ವ್ಯಾಸಂಗಕ್ಕೆ ಅನುಮತಿಗೆ ಈ ‘ಮಾರ್ಗಸೂಚಿ ಪಾಲನೆ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
KARNATAKA

BIG NEWS: ‘ಸರ್ಕಾರಿ ವೈದ್ಯ’ರ ಉನ್ನತ ವ್ಯಾಸಂಗಕ್ಕೆ ಅನುಮತಿಗೆ ಈ ‘ಮಾರ್ಗಸೂಚಿ ಪಾಲನೆ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

By kannadanewsnow0914/10/2025 6:13 AM

ಬೆಂಗಳೂರು: ಉನ್ನತ ವ್ಯಾಸಂಗ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳಿಗೆ ವೈದ್ಯಾಧಿಕಾರಿಗಳನ್ನು ಸೇವಾನಿರತ ಕೋಟಾದಡಿ ಅನುಮೋದಿಸಲು ಅಥವಾ ನಿಯೋಜನೆ ಮುಖಾಂತರ ಪ್ರಾಯೋಜಿಸಲು ಈ ಮಾರ್ಗಸೂಚಿಗಳನ್ನು ಹಾಗೂ ಅರ್ಹತಾ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿಎಸ್ ಅವರು ನಡವಳಿಯನ್ನು ಹೊರಡಿಸಿದ್ದು, ವೈದ್ಯಾಧಿಕಾರಿಗಳನ್ನು ಸ್ನಾತಕೋತ್ತರ ವ್ಯಾಸಂಗ ಮತ್ತು ಸೂಪರ್-ಸ್ಪೆಷಾಲಿಟಿ ಉನ್ನತ ವ್ಯಾಸಂಗಕ್ಕೆ ಸೇವಾನಿರತವಾಗಿ ನಿಯೋಜಿಸುವ ಸಂದರ್ಭದಲ್ಲಿ ಪ್ರಸ್ತುತ ‘ಕರ್ನಾಟಕ ನಾಗರಿಕ ಸೇವಾ ನಿಯಮಗಳು’, ‘ಕರ್ನಾಟಕ ಸರ್ಕಾರಿ ಸೇವಾ (ಸಮೂಹ-ಎ ಅಧಿಕಾರಿಗಳ ಉನ್ನತ ಅಧ್ಯಯನಕ್ಕೆ ಪ್ರತಿನಿಯೋಜನೆ ಮತ್ತು ತರಬೇತಿ ರಜೆ) ನಿಯಮಗಳು, 2008’ ಮತ್ತು ‘ಕರ್ನಾಟಕ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಆಯ್ಕೆ ಮತ್ತು ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯ ನಡವಳಿಕೆ ನಿಯಮಗಳು 2006’ರ ನಿಯಮ ಮತ್ತು ನಿಬಂಧನೆಗಳೊಂದಿಗೆ ನಡೆಸಲಾಗುತ್ತಿದ ಎಂಬುದನ್ನು ಗಮನಿಸಲಾಗಿದೆ. ಆದಾಗ್ಯೂ, ಈ ನಿಯಮಗಳ ನಡುವೆ ಸ್ಥಿರತೆ ಮತ್ತು ಹೊಂದಾಣಿಕೆಯ ಕೊರತೆಯು-ವಿಶೇಷವಾಗಿ ಅರ್ಹತಾ ಮಾನದಂಡಗಳು, ಕನಿಷ್ಠ ಸೇವೆ ಮತ್ತು ನಿಯೋಜನೆ ಪ್ರಯೋಜನಗಳ ಸ್ವೀಕಾರಾರ್ಹತೆಗೆ ಸಂಬಂಧಿಸಿದಂತೆ-ಕಾರ್ಯವಿಧಾನದ ಗೊಂದಲ, ನಿಯಮಗಳ ಅಸಮಾನ ಅನ್ವಯತೆ ಮತ್ತು ಸೇವಾ ಪುಯೋಜನಗಳ ಅರ್ಹತೆಯ ಬಗ್ಗೆ ವಿವಾದಗಳಿಗೆ ಕಾರಣವಾಗಿದೆ ಎಂದಿದ್ದಾರೆ.

ಅಲ್ಲದೇ, ಹಲವಾರು ಸೇವಾನಿರತ ವೈದ್ಯಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅಗತ್ಯವಿಲ್ಲದ ವೈದ್ಯಕೀಯ ವಿಭಾಗ (ತಜ್ಞತ/ವಿಷಯ)ಗಳಿಗೆ ನಿಯೋಜನೆಯನ್ನು ಕೋರುತ್ತಿರುವುದನ್ನು ಮತ್ತು ಇದರಿಂದಾಗಿ ಇಲಾಖೆಯ ಸಿಬ್ಬಂದಿ ಅಗತ್ಯತೆಗಳು ಮತ್ತು ವೈದ್ಯರ ನಿಯೋಜನೆಯ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂಬುದನ್ನು ಸರ್ಕಾರ ಗಮನಿಸಿರುತ್ತದೆ. ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು (GDMOS) ಕನಿಷ್ಠ ಗ್ರಾಮೀಣ ಸೇವೆಯನ್ನು ನಿರ್ವಹಿಸಬೇಕಾಗಿರುತ್ತದೆ. ಆದರೆ, ಉನ್ನತ ವ್ಯಾಸಂಗಕ್ಕೆ ನಿಯೋಜಿಸುವ ಸಂಧರ್ಭದಲ್ಲಿ ಈ ಅವಶ್ಯಕತೆಯ ಜಾರಿಗೊಳಿಸಲಾಗುತ್ತಿಲ್ಲವೆಂಬುದನ್ನು ಅನುಸರಣೆಯನ್ನು ಕಟ್ಟುನಿಟ್ಟಾಗಿ ಗಮನಿಸಲಾಗಿದೆ. ಈ ಅಂತರಗಳು ಗ್ರಾಮೀಣ ಪುದೇಶಗಳಲ್ಲಿ ಸಮಾನ ಆರೋಗ್ಯ ರಕ್ಷಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಮತ್ತು ತರಬೇತಿ ಪಡೆದ ತಜ್ಞರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಇಲಾಖೆಯ ಸಾಮರ್ಥ್ಯವನ್ನು ಮಿತಿಗೊಳಿಸುತ್ತವೆ ಎಂದು ತಿಳಿಸಿದ್ದಾರೆ.

ಆದ್ದರಿಂದ, ಪ್ರಸ್ತುತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಕಾನೂನಾತ್ಮಕವಾಗಿ ಸಮರ್ಥವಾದ ನಿಯೋಜನಾ ನೀತಿಯನ್ನು ರೂಪಿಸಬೇಕಾಗಿರುತ್ತದೆ. ಆದ್ದರಿಂದ ಈ ಸಂಬಂಧ ಸರ್ಕಾರ ಸಮಗ್ರವಾದ ನೀತಿಯನ್ನು ರೂಪಿಸಿ ಆದೇಶ ಹೊರಡಿಸಲು ಮತ್ತು ಈ ಆದೇಶದಲ್ಲಿ ವೈದ್ಯಾಧಿಕಾರಿಗಳನ್ನು ಸ್ನಾತಕೋತ್ತರ ಮತ್ತು ಸೂಪರ್ ಸ್ಪೆಷಾಲಿಟಿ ವ್ಯಾಸಂಗಕ್ಕೆ ಸೇವಾನಿರತವಾಗಿ ಅಥವಾ ನಿಯೋಜನೆ ಮೇಲೆ ನಿಯೋಜಿಸುವಾಗ ಶಾಸನಬದ್ಧ, ಆಡಳಿತಾತ್ಮಕ ಅಗತ್ಯತೆ ಮತ್ತು ಸೇವಾ ಅಗತ್ಯತೆಗೆ ಅನುಗುಣವಾಗಿ ನಿಯೋಜನಾ ಅರ್ಹತೆ ನಿಬಂಧನೆ ಮತ್ತು ಮಿತಿಗಳನ್ನು ವ್ಯಾಖ್ಯಾನಿಸಲು ನಿರ್ಧರಿಸಿದೆ.

ಆದ್ದರಿಂದ, ಪ್ರಸ್ತುತ ಅನ್ವಯವಾಗುವ ನಿಬಂಧನೆಗಳನ್ನು ಕ್ರೋಢೀಕರಿಸಲು, ನಿಯೋಜನೆಯ ನೀತಿಯ ಏಕರೂಪ ಮತ್ತು ಕಾನೂನುಬದ್ಧ ಅನ್ವಯವನ್ನು ಖಚಿತಪಡಿಸಿಕೊಳ್ಳಲು ಮತ್ತು ವಿಶಾಲವಾದ ಸಾರ್ವಜನಿಕ ಸೇವೆಯ ಅಗತ್ಯಗಳೊಂದಿಗೆ ವೈಯಕ್ತಿಕ ವೃತ್ತಿಪರ ಆಕಾಂಕ್ಷೆಗಳನ್ನು ಸಮತೋಲನಗೊಳಿಸಲು, ಸರ್ಕಾರವು ಸಮಗ್ರ ಸರ್ಕಾರಿ ಆದೇಶವನ್ನು ಹೊರಡಿಸುವುದು ಸೂಕ್ತವೆಂದು ಭಾವಿಸುತ್ತದೆ. ಈ ಆದೇಶವು ಶಾಸನಬದ್ಧ ನಿಬಂಧನೆಗಳು, ಆಡಳಿತಾತ್ಮಕ ಕಾರ್ಯಸಾಧ್ಯತೆ ಮತ್ತು ಸೇವಾ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಅಧಿಕಾರಿಗಳಿಗೆ ಸೇವೆಯಲ್ಲಿರುವ ಕೋಟಾಕ್ಕೆ ಅಥವಾ ಸ್ನಾತಕೋತ್ತರ ಮತ್ತು ಸೂವರ್-ಸ್ಪೆಷಾಲಿಟಿ ಶಿಕ್ಷಣಕ್ಕೆ ನಿಯೋಜಿಸಬಹುದಾದ ಅರ್ಹತೆ, ಷರತ್ತುಗಳು ಮತ್ತು ಮಿತಿಗಳನ್ನು ವ್ಯಾಖ್ಯಾನಿಸಲು ಮತ್ತು ನಿಯಂತ್ರಿಸಲು ಸಹಕಾರಿಯಾಗುತ್ತದೆ.

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಆಕುಕ 317 ಎಚ್‌ಎಸ್‌ಎಚ್ 2011, ದಿನಾಂಕ:10-08- 2011 ಸೇರಿದಂತೆ, ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ, ‘ಕರ್ನಾಟಕ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಆಯ್ಕೆ ಮತ್ತು ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯ ನಡವಳಿಕೆ ನಿಯಮಗಳು, 2006’ರ ಅಡಿಯಲ್ಲಿ ನಿಗದಿಪಡಿಸಲಾದ ಷರತ್ತುಗಳ ಮುಂದುವರಿಕೆಯಾಗಿ ಹೊರಡಿಸಲಾಗಿದೆ

ಈ ಸಂಬಂಧ ಹೊರಡಿಸಲಾದ ಹಿಂದಿನ ಎಲ್ಲಾ ಆದೇಶಗಳು ಅಥವಾ ಸೂಚನೆಗಳನ್ನು ರದ್ದುಪಡಿಸಿ, ಸರ್ಕಾರವು ಈ ಕೆಳಗಿನಂತೆ ನಿರ್ದೇಶಿಸುತ್ತದೆ:

1. ಉನ್ನತ ವ್ಯಾಸಂಗಕ್ಕೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವ ಸಂಬಂಧ ಎರಡು ಪ್ರತ್ಯೇಕ ರೀತಿಯ ಅನುಮತಿಗಳಿರುತ್ತವೆ. ಮೊದಲನೆದಾಗಿ, ಲಭ್ಯವಿರುವ ಕೋರ್ಸ್‌ಗಳಿಗೆ ಆಯ್ಕೆ ಮಾಡಲು ಅರ್ಹ ಮಾಡಿ ಅಭ್ಯರ್ಥಿಗಳನ್ನು ಸೇವಾನಿರತ ಕೋಟಾದಡಿ ಸಮಾಲೋಚನೆ ಮೂಲಕ ಅನುಮತಿಸುವ ಕುರಿತಾಗಿರುತ್ತದೆ. ಎರಡನೆಯದು, ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ಕೈಗೊಳ್ಳುವ ಅಭ್ಯರ್ಥಿಗಳನ್ನು ಪ್ರಾಯೋಜಿಸಿ ಅವರುಗಳ ವ್ಯಾಸಂಗ ಶುಲ್ಮ, ವ್ಯಾಸಂಗ ಸಮಯದಲ್ಲಿನ ಸಂಬಳ ಮತ್ತು ಇತರ ಎಲ್ಲಾ ಸೇವಾ ಪುಯೋಜನಗಳಿಗೆ ಅನುಮೋದಿಸುವ ಕುರಿತಾಗಿರುತ್ತದೆ.

2. ಕೆಲವು ವೈದ್ಯಾಧಿಕಾರಿಗಳನ್ನು ಕೇವಲ ಸೇವಾನಿರತ ಕೋಟಾದಡಿ ಅನುಮತಿಸುವ ಸಾಧ್ಯತೆಯಿರುತ್ತದೆ. ಆವಾಗ ವೈದ್ಯಾಧಿಕಾರಿಯು ಉನ್ನತ ವ್ಯಾಸಂಗವನ್ನು ತನ್ನ ಸ್ವಂತ ಖರ್ಚಿನಲ್ಲಿ ಕೈಗೊಳ್ಳಬೇಕಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ವೈದ್ಯಾಧಿಕಾರಿಯು ಯಾವುದೇ ನಿಯೋಜನಾ ಸೌಲಭ್ಯ, ವೇತನ ಸಂರಕ್ಷಣೆ ಮತ್ತು ವೇತನ ಸಹಿತ ವ್ಯಾಸಂಗ ರಜೆಗೆ ಅರ್ಹರಾಗುವುದಿಲ್ಲ ಮತ್ತು ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ವಯ ವೇತನ ರಹಿತ ರಜೆ ಅಥವಾ ಇತರ ಯಾವುದೇ ಅರ್ಹ ರಜೆಯನ್ನು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ಪಡೆಯಬೇಕಾಗುತ್ತದೆ.

3. ಸ್ನಾತಕೋತ್ತರ ಅಥವಾ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಉನ್ನತ ವ್ಯಾಸಂಗ ಕೈಗೊಳ್ಳಲು ಅನುಮತಿ ಕೋರುವ ವೈದ್ಯಾಧಿಕಾರಿಗಳು (ಅಂದರೆ, ಸೇವಾನಿರತ ಕೋಟಾದಡಿ ಅಥವಾ ನಿಯೋಜನೆಗಾಗಿ) ಎರಡು ವರ್ಷಗಳ ಖಾಯಂಪೂರ್ವ ಸೇವೆ ಹಾಗೂ 5 ವರ್ಷಗಳ ನಿಯಮಿತ ಸೇವೆ ಸೇರಿ ‘ಕರ್ನಾಟಕ ಸರ್ಕಾರಿ ಸೇವಾ (ಸಮೂಹ-ಎ ಅಧಿಕಾರಿಗಳ ಉನ್ನತ ಅಧ್ಯಯನಕ್ಕೆ ಪ್ರತಿನಿಯೋಜನ ಮತ್ತು ತರಬೇತಿ ರಜೆ) ನಿಯಮಗಳು, 2008 ರನ್ವಯ ಕನಿಷ್ಠ ಏಳು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮಾತ್ರ ಅರ್ಹರಾಗಿರುತ್ತಾರೆ. ಈ ಷರತ್ತು ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು (ಸಮೂಹ-ಎ ಅಧಿಕಾರಿಗಳ ಉನ್ನತ ಅಧ್ಯಯನಕ್ಕೆ ಪ್ರತಿನಿಯೋಜನೆ ಮತ್ತು ತರಬೇತಿ ರಜೆ) ನಿಯಮಗಳು, 2008’ ರ ಪುಕಾರವಾಗಿರುತ್ತದೆ ಮತ್ತು ಭವಿಷ್ಯದ ಎಲ್ಲಾ ನಿಯೋಜನೆ ಪ್ರಸ್ತಾವನೆಗಳಲ್ಲಿ ಇದನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

4. ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಾಗಿ ಆರೋಗ್ಯ (GDMOs) ಮತ್ತು ಕುಟುಂಬ ನೇಮಕಗೊಂಡ ಕಲ್ಯಾಣ ವೈದ್ಯಾಧಿಕಾರಿಗಳು ‘ಕರ್ನಾಟಕ ನಿರ್ದೇಶನಾಲಯ(ನೇಮಕಾತಿ)(ತಿದ್ದುಪಡಿ) ನಿಯಮಗಳು, 1992 ರನ್ವಯ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಆರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರವೇ ಸೇವಾನಿರತ ಕೋಟಾ ಮತ್ತು / ಅಥವಾ ನಿಯೋಜನೆಯಡಿ ಉನ್ನತ ವ್ಯಾಸಂಗಕ್ಕೆ ಅರ್ಹರಾಗುತ್ತಾರೆ.

5. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಕಾರ್ಯಾತ್ಮಕವಾಗಿ ಅಗತ್ಯವಿರುವ ವಿಭಾಗ/ವಿಷಯ/ತಜ್ಞತೆಗಳಲ್ಲಿ ಮಾತ್ರ ಸೇವಾನಿರತ ಕೋಟಾ ಮತ್ತು / ಅಥವಾ ನಿಯೋಜನೆ ಮೇಲೆ ಉನ್ನತ ವ್ಯಾಸಂಗಕ್ಕೆ ಅನುಮತಿಸಲಾಗುತ್ತದೆ. ‘ಕರ್ನಾಟಕ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಆಯ್ಕೆ ಮತ್ತು ಪವೇಶಕ್ಕಾಗಿ ಪ್ರವೇಶ ಪರೀಕ್ಷೆಯ ನಡವಳಿಕೆ ನಿಯಮಗಳು, 2006 ರ ನಿಯಮ 5(ಎ)(2) ರನ್ವಯ ಇಲಾಖೆಯಲ್ಲಿನ ವೈದ್ಯಕೀಯ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧವಿಲ್ಲದ ಅಥವಾ ಅಗತ್ಯವಿಲ್ಲದ ವಿಷಯಗಳಲ್ಲಿ ವೈದ್ಯಾಧಿಕಾರಿಗಳು ಸೇವಾನಿರತ ಕೋಟಾ ಮತ್ತು / ಅಥವಾ ನಿಯೋಜನೆ ಮೇಲೆ ಉನ್ನತ ವ್ಯಾಸಂಗಕ್ಕೆ ತೆರಳಲು ಅರ್ಹರಾಗಿರುವುದಿಲ್ಲ.

6, ಉನ್ನತ ವ್ಯಾಸಂಗಕ್ಕಾಗಿ ಸೇವಾನಿರತ ಕೋಟ ಮತ್ತು / ಅಥವಾ ನಿಯೋಜನೆ ಪಡೆಯಲು ಉದ್ದೇಶಿಸಿರುವ ವೈದ್ಯಾಧಿಕಾರಿಗಳು ಯಾವುದೇ ಪ್ರವೇಶ ಅಥವಾ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಥವಾ ಹಾಜರಾಗುವ ಪೂರ್ವದಲ್ಲಿ ಇಲಾಖೆಗೆ ಕಡ್ಡಾಯವಾಗಿ ಲಿಖಿತ ಅರ್ಜಿಯನ್ನು ಸಲ್ಲಿಸಬೇಕು. ಇಲಾಖೆಯಿಂದ ಮುಂಚಿತವಾಗಿ ಲಿಖಿತ ಅನುಮತಿಯನ್ನು ಪಡಯುವ ಅಭ್ಯರ್ಥಿಗಳನ್ನು ಮಾತ್ರ ಅರ್ಹತಾ ಷರತ್ತುಗಳ ಈಡೇರಿಕೆ ಮತ್ತು ಅಗತ್ಯ ವಿಭಾಗಗಳಲ್ಲಿ ಸೀಟುಗಳ ಲಭ್ಯತೆಗೆ ಒಳಪಟ್ಟು ಸೇವೆಯಲ್ಲಿರುವ ಕೋಟಾ ಮತ್ತು/ಅಥವಾ ನಿಯೋಜನೆಗೆ ಪರಿಗಣಿಸಲಾಗುತ್ತದೆ. ವೈದ್ಯಾಧಿಕಾರಿಯೊಬ್ಬರು ಅರ್ಜಿಯನ್ನು ಸಲ್ಲಿಸಿದ ಸಂದರ್ಭದಲ್ಲಿ, ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆಯು ಸ್ವೀಕೃತಗೊಳ್ಳದಿದ್ದ ಪಕ್ಷದಲ್ಲಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಪರಿಗಣಿಸತಕ್ಕದ್ದು. ಆದಾಗ್ಯೂ, ಅಂತಹ ಪರಿಗಣಿತ ಅನುಮತಿಯು ಅಭ್ಯರ್ಥಿಗೆ ಸೇವಾನಿರತ ಕೋಟಾ ಮತ್ತು / ಅಥವಾ ನಿಯೋಜನೆಯನ್ನು ಪಡೆಯಲು ಸ್ವಯಂಚಾಲಿತವಾಗಿ ಅರ್ಹತೆ ನೀಡುವುದಿಲ್ಲ. ಇದನ್ನು ಸೇವಾ ಅರ್ಹತೆ ಮತ್ತು ಇಲಾಖಾ ಮಾನದಂಡಗಳ ಆಧಾರದ ಮೇಲೆ ಕಟ್ಟುನಿಟ್ಟಾಗಿ ನಿರ್ಧರಿಸಲಾಗುತ್ತದೆ. ಮತ್ತೊಂದೆಡೆ, ಪರಿಗಣಿತ ಅಥವಾ ಪುತ್ತೇಕ ಅನುಮತಿಯಿಲ್ಲದೆ ಪ್ರವೇಶ ಅಥವಾ ಅರ್ಹತಾ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳನ್ನು ಯಾವುದೇ ಸಂದರ್ಭಗಳಲ್ಲಿಯೂ ಸೇವಾನಿರತ ಕೋಟಾ ಮತ್ತು / ಅಥವಾ ಉನ್ನತ ವ್ಯಾಸಂಗಕ್ಕೆ ನಿಯೋಜಿಸಲು ಪರಿಗಣಿಸಲಾಗುವುದಿಲ್ಲ. ಇಂತಹ ವೈದ್ಯರು ಸಂಪೂರ್ಣವಾಗಿ ಅವರ ಸ್ವಂತ ಜವಾಬ್ದಾರಿಯ ಮೇಲೆ ಹಾಜರಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

7. ಅರ್ಹ ವೈದ್ಯಾಧಿಕಾರಿಗಳಿಗೆ ಡಿ.ಎನ್‌.ಬಿ. ಕೋರ್ಸ್‌ಗಳನ್ನು ಮುಂದುವರಿಸಲು ಸೇವೆಯಲ್ಲಿರುವ ಕೋಟಾದಲ್ಲಿ ಅನುಮತಿ ನೀಡಬಹುದು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಇಲಾಖಾ ಆಸ್ಪತ್ರೆಗಳಲ್ಲಿ ಕೋರ್ಸ್ ಅನ್ನು ನಡೆಸಿದರೆ ಅಂತಹ ಕೋರ್ಸ್‌ಗಳಿಗೆ ನಿಯೋಜನೆಗಾಗಿ ಪರಿಗಣಿಸಬಹುದು.

8. ಅದೇ ರೀತಿ, ಅರ್ಹ ವೈದ್ಯಾಧಿಕಾರಿಗಳಿಗೆ ಸೇವಾನಿರತ ಕೋಟಾದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಮುಂದುವರಿಸಲು ಅವಕಾಶ ನೀಡಬಹುದು, ಆದರೆ ಅವರು ನಿಯೋಜನೆಗೆ ಅರ್ಹರಾಗಿರುವುದಿಲ್ಲ. ಅವರು ಅಂತಹ ಕೋರ್ಸ್ ಅನ್ನು ಮುಂದುವರಿಸಲು ಬಯಸಿದರೆ, ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪಿಜಿ ಕೋರ್ಸ್‌ಗಳನ್ನು ಮುಂದುವರಿಸಬೇಕಾಗುತ್ತದೆ. ಸ್ವ-ಹಣಕಾಸು ಸ್ವರೂಪದ ಅಂತಹ ಅಧ್ಯಯನಗಳ ಹೊರತಾಗಿಯೂ, ಪಿಜಿ ಕೋರ್ಸ್‌ಗಳಿಗೆ ಸೇವೆಯಲ್ಲಿರುವ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ಅಂತಹ ಅಭ್ಯರ್ಥಿಗಳನ್ನು ಬಾಂಡ್ ಷರತ್ತುಗಳಿಗೆ ಬದ್ಧರೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ವೈದ್ಯಕೀಯ ಕಾಲೇಜಿನಲ್ಲಿ ಇಲಾಖೆಗೆ ಕ್ರಿಯಾತ್ಮಕವಾಗಿ ಅಗತ್ಯವಿರುವ ವಿಭಾಗದಲ್ಲಿ ಸ್ವಂತ ಮೆರಿಟ್ ಆಧಾರದ ಮೇಲೆ ಸರ್ಕಾರಿ ಕೋಟಾದಡಿ ನೀಟ್ ಪರೀಕ್ಷೆ (NEET) ಮೂಲಕ ಪ್ರವೇಶ ಪಡೆಯುವ ಅರ್ಹ ವೈದ್ಯಾಧಿಕಾರಿಗಳನ್ನು ನಿಯೋಜನೆ ಮೂಲಕ ಸ್ನಾತಕೋತ್ತರ ವ್ಯಾಸಂಗಕ್ಕೆ ಪರಿಗಣಿಸಬಹುದು.

9, ಸೇವಾನಿರತ ಕೋಟಾದಡಿಯಲ್ಲಿ DNB ಅಥವಾ PG ಕೋರ್ಸ್‌ಗಳನ್ನು ನಿರ್ವಹಿಸುವ ಎಲ್ಲಾ ಅದ ಸೇವಾನಿರತ ವೈದ್ಯಾಧಿಕಾರಿಗಳು ಕನಿಷ್ಠ ಹತ್ತು ವರ್ಷಗಳ ಅವಧಿಗೆ ಅಥವಾ ಅವರ ವಯೋ ನಿವೃತ್ತಿಯ ದಿನಾಂಕದವರೆಗೆ, ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸರ್ಕಾರಕ್ಕೆ ಸೇವೆ ನೀಡುವುದಾಗಿ ಬಾಂಡ್ ಪತ್ರವನ್ನು ಸಲ್ಲಿಸಬೇಕು. ಈ ಬಾಂಡ್ ಅವಧಿಯಲ್ಲಿ, ಸದರಿ ವೈದ್ಯಾಧಿಕಾರಿಗಳನ್ನು ಅವರ ಅಧ್ಯಯನಕ್ಕಾಗಿ ನಿಯೋಜಿಸಲಾದ ಅದೇ ಕ್ಲಿನಿಕಲ್ ವಿಭಾಗದಲ್ಲಿ ಕಡ್ಡಾಯವಾಗಿ ನಿಯೋಜಿಸತಕ್ಕದ್ದು ಮತ್ತು ಯಾವುದೇ ಆಡಳಿತಾತ್ಮಕ ಹುದ್ದೆಗೆ ಅಥವಾ ಅವರು ಅರ್ಹತೆಯನ್ನು ಪಡೆದ ವಿಶೇಷತೆಗಾಗಿ ಗುರುತಿಸದ (ಬೇರೆ ತಜ್ಞತೆಯ) ಯಾವುದೇ ಹುದ್ದೆಗೆ ನಿಯೋಜಿಸತಕ್ಕದ್ದಲ್ಲ.

10. DM, MCH ಅಥವಾ ಮಾನ್ಯತೆ ಪಡೆದ ಫೆಲೋಶಿಪ್ ಕೋರ್ಸ್‌ಗಳು ಸೇರಿದಂತೆ ಸೂಪರ್-ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಸೇವಾನಿರತ ಕೋಟಾ ಮತ್ತು/ ಅಥವಾ ನಿಯೋಜನೆಗಳನ್ನು ಅನುಮತಿಸಲಾಗುವುದಿಲ್ಲ.

11. ಈ ಆದೇಶದ ಪ್ರಕಾರ ಉನ್ನತ ವ್ಯಾಸಂಗಕ್ಕಾಗಿ ಯಾವುದೇ ಒಂದು ಅಥವಾ ಹೆಚ್ಚಿನ ಅರ್ಹತಾ ಮಾನದಂಡಗಳನ್ನು ಪೂರೈಸದ ವೈದ್ಯಾಧಿಕಾರಿಗಳು, ಆದಾಗ್ಯೂ ತಮ್ಮ ಸ್ವಂತ ವೆಚ್ಚದಲ್ಲಿ ಉನ್ನತ ಅಧ್ಯಯನವನ್ನು ಕೈಗೊಳ್ಳಲು ಬಯಸಿದರೆ, ವೇತನ ರಹಿತವಾಗಿ ವ್ಯಾಸಂಗ ರಜೆ ಪಡೆಯುವ ಮೂಲಕ ವ್ಯಾಸಂಗವನ್ನು ಕೈಗೊಳ್ಳಬಹುದು. ಅಂತಹ ವೈದ್ಯಾಧಿಕಾರಿಗಳು ಅಧ್ಯಯನದ ಸಮಯದಲ್ಲಿ ಯಾವುದೇ ನಿಯೋಜನಾ ಪುಯೋಜನಗಳಿಗೆ (Any Deputation Benefits) ಅರ್ಹರಾಗಿರುವುದಿಲ್ಲ ಮತ್ತು ಅಧ್ಯಯನದ ಅವಧಿಯನ್ನು ಸೇವೆಗೆ ಸಂಬಂಧಿಸಿದ ಎಲ್ಲಾ ಉದ್ದೇಶಗಳಿಗಾಗಿ ಡೈಸ್-ನಾನ್ ಎಂದು ಪರಿಗಣಿಸಲಾಗುತ್ತದೆ. ಅವರು ಯಾವುದೇ ಸೇವಾನಿರತ ಕೋಟಾಗಳಿಗೂ ಸಹ ಅರ್ಹರಾಗಿರುವುದಿಲ್ಲ.

ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ ಮತ್ತು ವೈದ್ಯಾಧಿಕಾರಿಗಳ ಉನ್ನತ ವ್ಯಾಸಂಗದ ವಿಯೋಜನೆ ಸಂಬಂಧ ಭವಿಷ್ಯದಲ್ಲಿ ಸ್ವೀಕೃತವಾಗುವ ಎಲ್ಲಾ ಪುಸ್ತಾವನೆಗಳಿಗೆ ಅನ್ವಯಿಸುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಎಲ್ಲಾ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳು ಮೇಲ್ಕಂಡ ಷರತ್ತು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

ಶಿವಮೊಗ್ಗ: ನಾಳೆ, ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!

Share. Facebook Twitter LinkedIn WhatsApp Email

Related Posts

ವೀರಪ್ಪನ್ ಇದ್ದಾಗಲೇ ಕಾಡು ಚನ್ನಾಗಿತ್ತು : ಸಚಿವ ಈಶ್ವರ್ ಖಂಡ್ರೆ ಮುಂದೆ ರೈತರ ಆಕ್ರೋಶ

03/11/2025 7:42 AM3 Mins Read

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ’ ಯೋಜನೆಯ ಸಹಾಯಕ್ಕಾಗಿ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

03/11/2025 6:58 AM1 Min Read

ರಾಜ್ಯದ ಗ್ರಾಮ ಪಂಚಾಯ್ತಿ ವಾಟರ್ ಮೆನ್, ಪಂಪ್ ಆಪರೇಟರ್, ಮೆಕ್ಯಾನಿಕ್ ಕರ್ತವ್ಯಗಳೇನು? ಇಲ್ಲಿದೆ ಮಾಹಿತಿ

03/11/2025 6:57 AM2 Mins Read
Recent News

Watch video | ಭಾರತಕ್ಕೆ ಚೊಚ್ಚಲ ಮಹಿಳಾ ವಿಶ್ವಕಪ್ : ಕಣ್ಣೀರು ಸುರಿಸಿದ ಜೂಲನ್ ಗೋಸ್ವಾಮಿ

03/11/2025 7:49 AM

BREAKING: ವಿಶ್ವಕಪ್ ವಿಜೇತ ಮಹಿಳಾ ತಂಡಕ್ಕೆ 51 ಕೋಟಿ ರೂ. ಬಹುಮಾನ ಘೋಷಿಸಿದ BCCI

03/11/2025 7:46 AM

ವೀರಪ್ಪನ್ ಇದ್ದಾಗಲೇ ಕಾಡು ಚನ್ನಾಗಿತ್ತು : ಸಚಿವ ಈಶ್ವರ್ ಖಂಡ್ರೆ ಮುಂದೆ ರೈತರ ಆಕ್ರೋಶ

03/11/2025 7:42 AM

ವಿಶ್ವಕಪ್ ಫೈನಲ್ ಪಂದ್ಯದ ಚಿತ್ರಣ ಬದಲಿಸಿದ `ಅಮಾನ್ ಜೋತ್ ಕೌರ್’ ಹಿಡಿದ ಅದ್ಭುತ ಕ್ಯಾಚ್ : ವಿಡಿಯೋ ವೈರಲ್ | WATCH VIDEO

03/11/2025 7:21 AM
State News
KARNATAKA

ವೀರಪ್ಪನ್ ಇದ್ದಾಗಲೇ ಕಾಡು ಚನ್ನಾಗಿತ್ತು : ಸಚಿವ ಈಶ್ವರ್ ಖಂಡ್ರೆ ಮುಂದೆ ರೈತರ ಆಕ್ರೋಶ

By kannadanewsnow5703/11/2025 7:42 AM KARNATAKA 3 Mins Read

ಚಾಮರಾಜನಗರ : ವೀರಪ್ಪನ್ ಇದ್ದಾಗಲೇ ಕಾಡು ಚನ್ನಾಗಿತ್ತು. ಅಧಿಕಾರಿಗಳಿಗಿಂತ ವೀರಪ್ಪನ್ ವಾಸಿ ಎಂದು ರೈತರು ಅರಣ್ಯ ಸಚಿವ ಈಶ್ವರ್ ಖಂಡ್ರೆ…

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ’ ಯೋಜನೆಯ ಸಹಾಯಕ್ಕಾಗಿ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

03/11/2025 6:58 AM

ರಾಜ್ಯದ ಗ್ರಾಮ ಪಂಚಾಯ್ತಿ ವಾಟರ್ ಮೆನ್, ಪಂಪ್ ಆಪರೇಟರ್, ಮೆಕ್ಯಾನಿಕ್ ಕರ್ತವ್ಯಗಳೇನು? ಇಲ್ಲಿದೆ ಮಾಹಿತಿ

03/11/2025 6:57 AM

ALERT :ನಿಮ್ಮ ಹೆಸರಿನಲ್ಲಿ `ನಕಲಿ ಸಿಮ್ ಕಾರ್ಡ್’ ಇದ್ರೆ ಜಸ್ಟ್ ಹೀಗೆ ಬ್ಲಾಕ್ ಮಾಡಿ.!

03/11/2025 6:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.