Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Watch Video: ಟೇಕಪ್ ಆದ 30 ಸೆಕೆಂಡಲ್ಲೇ ಏರ್ ಇಂಡಿಯಾ ವಿಮಾನ ಪತನ: ಬೆಚ್ಚಿ ಬೀಳಿಸೋ ವೀಡಿಯೋ ವೈರಲ್ | Ahmedabad Plane Crash

12/06/2025 9:19 PM

BREAKING : ಭಾರತದ ಗಗನಯಾತ್ರಿ ‘ಶುಭಾಂಶು ಶುಕ್ಲಾ’ ಒಳಗೊಂಡ ‘ಆಕ್ಸಿಯಮ್ ಮಿಷನ್ 4′ ಬಾಹ್ಯಾಕಾಶ ಉಡಾವಣೆ’ ಮತ್ತೆ ಮುಂದೂಡಿಕೆ

12/06/2025 9:11 PM

ರಾಜ್ಯದಲ್ಲಿಂದು ಕೊರೋನಾಘಾತ: 240 ಮಂದಿಗೆ ಕೋವಿಡ್ ಪಾಸಿಟಿವ್

12/06/2025 9:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ನವದೆಹಲಿಯ ‘ಕರ್ನಾಟಕ ಭವನ’ದ ವಾಸ್ತವ್ಯ ದರ, ಷರತ್ತು, ನಿಬಂಧನೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ
KARNATAKA

BREAKING: ನವದೆಹಲಿಯ ‘ಕರ್ನಾಟಕ ಭವನ’ದ ವಾಸ್ತವ್ಯ ದರ, ಷರತ್ತು, ನಿಬಂಧನೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ

By kannadanewsnow0911/06/2025 3:37 PM

ಬೆಂಗಳೂರು: ರಾಜ್ಯ ಸರ್ಕಾರವು ನವದೆಹಲಿಯಲ್ಲಿರುವಂತ ಕರ್ನಾಟಕ ಭವನದ ವಾಸ್ತವ್ಯ ದರಗಳು ಹಾಗೂ ಷರತ್ತು, ನಿಬಂಧನೆಗಳನ್ನು ಪರಿಷ್ಕರಣೆ ಮಾಡಿ ಆದೇಶಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ನವದೆಹಲಿಯ ಕರ್ನಾಟಕ ಭವನವು ರಾಜ್ಯ ಸರ್ಕಾರದ ಆತಿಥ್ಯ ಸಂಸ್ಥೆಯ ಅಂಗವಾಗಿದ್ದು ಪ್ರಸ್ತುತ 03 ಭವನಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಭವನ-1 ಅನೆಕ್ಸ್ ಕಟ್ಟಡ (ಚಾಣಕ್ಯಪುರಿ), ಕರ್ನಾಟಕ ಭವನ-2 (ಶರಾವತಿ) ಹಾಗೂ ಕರ್ನಾಟಕ ಭವನ-3 (ಭೀಮಾ), ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ನವದೆಹಲಿಯಲ್ಲಿರುವ ಕರ್ನಾಟಕ ಭವನಗಳ ವಾಸ್ತವ್ಯದ ದರಗಳನ್ನು ಹಾಗೂ ಷರತ್ತುಗಳನ್ನು ನಿಗದಿಪಡಿಸಿ ಪಕಟಿಸಲಾಗಿದೆ. ಆದರೆ, ಮೇಲೆ ಓದಲಾದ (2)ರ ಪತ್ರದಲ್ಲಿ ದರ ಹಾಗೂ ಕೊಠಡಿ ಹಂಚಿಕೆ ಮಾರ್ಗಸೂಚಿಗಳಿಗೆ ಕೆಲವೊಂದು ಮಾರ್ಪಾಡು ಮಾಡುವಂತೆ ನಿವಾಸಿ ಆಯುಕ್ತರು ಮತ್ತೊಮ್ಮೆ ಪಸ್ತಾವನೆ ಸಲ್ಲಿಸಿರುತ್ತಾರೆ. ಅಲ್ಲದೇ, ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಹಾಗೂ ಹಕ್ಕು ಭಾದ್ಯತೆಗಳ ಸಮಿತಿಗಳು ಸಹ ಕೆಲವೊಂದು ಮಾರ್ಪಾಡುಗಳನ್ನು ತರುವಂತೆ ಸೂಚಿಸಿರುತ್ತಾರೆ.

ಈ ಪುಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ. ನವದೆಹಲಿಯ ಕರ್ನಾಟಕ ಭವನಗಳ ವಾಸ್ತವ್ಯ ದರಗಳು, ಷರತ್ತು & ನಿಬಂಧನೆಗಳು ಹಾಗೂ ಕೊಠಡಿಗಳ ಹಂಚಿಕೆ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ದಿನಾಂಕ: 29.03.2025ರ ಸಮ ಸಂಖ್ಯೆಯ ಸರ್ಕಾರದ ಆದೇಶ ಸಂಖ್ಯೆಯ ಅನುಬಂಧ-1ರಲ್ಲಿರುವ ವಾಸ್ತವ್ಯ ದರಗಳನ್ನು ಹಾಗೂ ಅನುಬಂಧ-2ರಲ್ಲಿರುವ ಕೊಠಡಿ ಹಂಚಿಕೆ ಮಾರ್ಗಸೂಚಿಗಳನ್ನು ಕ್ರಮವಾಗಿ ಷರತ್ತು & ನಿಬಂಧನೆಗಳೊಂದಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ.

ಷರತ್ತುಗಳು:

1. ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಯವರು, ಮಾನ್ಯ ಮುಖ್ಯಮಂತ್ರಿಯವರು, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಹಾಗೂ ಸರ್ಕಾರ ಸೂಚಿಸುವ ಯಾವುದೇ ಗಣ್ಯರು/ವ್ಯಕ್ತಿಗಳಿಗೆ “ರಾಜ್ಯ ಅತಿಥಿ” ಸೌಲಭ್ಯಗಳನ್ನು ನೀಡಲಾಗುವುದು. ಈ ಸೌಲಭ್ಯಗಳನ್ನು ಪಾವತಿ ರಹಿತವಾಗಿ ನೀಡಲಾಗುವುದು.

2 ವಿವಿಧ ಸರ್ಕಾರಿ ಆದೇಶಗಳಂತೆ ಭವನವಾರು ವಾಸ್ತವ್ಯಕ್ಕೆ ಯಾರು ಅರ್ಹರೆಂದು ನಿರ್ಧರಿಸಲಾಗಿದ್ದು, (ಅನುಬಂಧ-1) ಅವರುಗಳಿಗೆ ಮಾತ್ರ ಆಯಾಯ ಭವನವಾರು ಕೊಠಡಿ ಹಂಚಿಕೆ ಮಾಡುವುದು ಹಾಗೂ ಮೇಲಿನ ಕೋಷ್ಟಕದಲ್ಲಿ ತಿಳಿಸಿರುವಂತೆ ಕೊಠಡಿ ಬಾಡಿಗೆ ದರ ವಿಧಿಸುವುದು.

3.ಅರ್ಹ ಸರ್ಕಾರಿ ನೌಕರರು ಮತ್ತು ಅವರ “ಕುಟುಂಬದ ಅವಲಂಬಿತ ಸದಸ್ಯರು ಒಟ್ಟಿಗೆ ಬಂದಲ್ಲಿ ಮೇಲಿನ ಕೋಷ್ಟಕದಲ್ಲಿ ತಿಳಿಸಿರುವಂತೆ ದರ ವಿಧಿಸುವುದು (12 ವರ್ಷದವರೆಗಿನ ಮಕ್ಕಳಿಗೆ ವಿನಾಯಿತಿ ನೀಡುವುದು). ಸರ್ಕಾರಿ ನೌಕರರ ಕುಟುಂಬ ಸದಸ್ಯರು ಪ್ರತ್ಯೇಕವಾಗಿ (ಸರ್ಕಾರಿ ನೌಕರರನ್ನು ಹೊರತುಪಡಿಸಿ) ವಾಸ್ತವ್ಯ ಹೂಡಿದಾದಲ್ಲಿ ಅವರಿಗೆ ಖಾಸಗಿ ದರ ವಿಧಿಸುವುದು.

4 ಸರ್ಕಾರಿ ನೌಕರರು ನವದೆಹಲಿಯ ಕರ್ನಾಟಕ ಭವನದಲ್ಲಿ ಆರಂಭದಲ್ಲಿ 10 ದಿನಗಳು ವಾಸ್ತವ್ಯ ಹೂಡಿ ನಿರ್ಗಮಿಸಿದ ನಂತರ ಪುನಃ ವಾಸ್ತವ್ಯ ಹೊಂದಲು ಇಚ್ಚಿಸಿದಲ್ಲಿ ನಿರ್ಗಮನ ಹಾಗೂ ಪುನರ್- ಆಗಮನದ ನಡುವಿನ ಅಂತರದ ದಿವಸಗಳು ಕನಿಷ್ಠ 10 ದಿನಗಳು ಇರತಕ್ಕದು (ಸರ್ಕಾರಿ ಆದೇಶಗಳಿರುವ ನೌಕರರು/ಅಧಿಕಾರಿಗಳ ಹೊರತುಪಡಿಸಿ). 10 ದಿನಗಳ ಮೇಲ್ಪಟ್ಟು ಸರ್ಕಾರಿ ಆದೇಶವಿದ್ದಲ್ಲಿ ಮಾತ್ರ ಸಾಮಾನ್ಯ ದರ ವಿಧಿಸುವುದು.

5 ಮಾನ್ಯ ಸಂಸದರು ಅಧಿಕೃತ ವಸತಿ ಹೊಂದಿದ್ದು. ಅನಿವಾರ್ಯ ಸಂದರ್ಭಗಳಲ್ಲಿ (ವಸತಿ ದುರಸ್ತಿಯಲ್ಲಿರುವಾಗ ಮತ್ತು ಇತರೆ ಸಂದರ್ಭಗಳಲ್ಲಿ ಅಧಿಕೃತ ವಸತಿ ಗೃಹದಲ್ಲಿ ಸ್ಥಳಾವಕಾಶವಿಲ್ಲದಿದ್ದಾಗ) ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಮೇಲಿನ ಕೋಷ್ಟಕದ ಕ್ರಮ ಸಂಖ್ಯೆ 2ರಲ್ಲಿ ಸೂಚಿಸಿರುವ ದರವನ್ನೇ ವಿಧಿಸುವುದು.

6 “ಹೊಸದಾಗಿ ಸಂಸದರಾದವರಿಗೆ ವಸತಿ ಹಂಚಿಕೆಯಾಗುವವರೆಗೆ ಹಾಗೂ ಮಾನ್ಯ ಸಂಸದರು ಅಧಿಕೃತ ವಸತಿ ಹೊಂದಿದ್ದು, ಅನಿವಾರ್ಯ ಸಂದರ್ಭಗಳಲ್ಲಿ (ವಸತಿ ದುರಸ್ತಿಯಲ್ಲಿದ್ದಾಗ ಮತ್ತು ಇತರೆ ಸಂದರ್ಭಗಳಲ್ಲಿ ವಸತಿ ಗ್ರಹದಲ್ಲಿ ಸ್ಥಳಾವಕಾಶವಿಲ್ಲದಿದ್ದಾಗ) ಕರ್ನಾಟಕ ಭವನದಲ್ಲಿ ವಾಸ್ತವ್ಯ ಪಡೆದಾಗ ಕರ್ನಾಟಕ ಭವನ- 1(ಕಾವೇರಿ) ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯವನ್ನು ಕಲ್ಪಿಸಬಹುದಾಗಿದೆ”

7.”ಕರ್ನಾಟಕ ವಿಧಾನ ಮಂಡಲದ ಮಾನ್ಯ ಸದಸ್ಯರ ಅವಲಂಬಿತ ಕುಟುಂಬದವರು ಪ್ರತ್ಯೇಕವಾಗಿ ಬಂದಲ್ಲಿ ಅವರಿಗೆ ಕರ್ನಾಟಕ ಭವನ-3ರಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಿ, ಅವರಿಗೆ ನಿಯಮಾನುಸಾರ ಖಾಸಗಿ ವ್ಯಕ್ತಿಗಳಿಗೆ ವಿಧಿಸುವ ದರವನ್ನು ವಿಧಿಸಲಾಗುವುದು”

8 ಅಡಿಯಲ್ಲಿ “ಕರ್ನಾಟಕ ಉಭಯ ಮಂಡಲಗಳ ಸರ್ಕಾರದ ಮುಖ್ಯ ಸಚೇತಕರಿಗೆ ಕರ್ನಾಟಕ ಭವನ-1 (ಕಾವೇರಿ) ಕಟ್ಟಡದ ವಿಐಪಿ ಸಿಟ್ ಔಟ್ ಕೊಠಡಿಗಳನ್ನು ಒದಗಿಸಲಾಗುವುದು”

9.ರಾಜ್ಯ ಅತಿಥಿಗಳೊಂದಿಗೆ ಬರುವ ಅವರ ಅವಲಂಬಿತ ಕುಟುಂಬದವರನ್ನು ಪಾವತಿ ರಹಿತ ಅತಿಥಿಗಳೆಂದು ಪರಿಗಣಿಸುವುದು. ಅವಲಂಬಿತ ಕುಟುಂಬದವರು ಪ್ರತ್ಯೇಕವಾಗಿ ಬಂದಲ್ಲಿ ಗಣ್ಯರು/ಅರ್ಹ ಸರ್ಕಾರಿ ನೌಕರರು ಹಾಗೂ ಇತರರಿಗೆ ವಿಧಿಸುವ ದರವನ್ನು ವಿಧಿಸುವುದು.

10 ರಾಜ್ಯ ಸರ್ಕಾರದಿಂದ (ಕಾರ್ಯಾಂಗದ/ ನ್ಯಾಯಾಂಗದ) ನವದೆಹಲಿಯಲ್ಲಿರುವ ಕೇಂದ್ರ/ ರಾಜ್ಯ ಕಛೇರಿಗಳಿಗೆ ನಿಯೋಜನೆ/ ವರ್ಗಾವಣೆ ಮೇಲೆ ಬರುವ ಅಧಿಕಾರಿಗಳಿಗೆ 03 ತಿಂಗಳವರೆಗೆ ಅಥವಾ ಅವರಿಗೆ ವಸತಿ ಮಂಜೂರಾಗುವವರೆಗೆ 7 ದಿನಗಳವರೆಗೆ ವಿಧಿಸುವ ದರವನ್ನು ವಿಧಿಸಿ. ಅವರಿಗೆ ಕರ್ನಾಟಕ ಭವನ-2 ಅಥವಾ 3 ರಲ್ಲಿ ಕೊಠಡಿ ಹಂಚಿಕೆ ಮಾಡಲಾಗುವುದು.

11 ರಾಜ್ಯ ಅತಿಥಿಗಳ ವರ್ಗದವರು ಮಾಜಿಗಳಾದಲ್ಲಿ ನಿವೃತ್ತರಾದಲ್ಲಿ 07 ದಿನದವರೆಗೆ ಪಾವತಿ ರಹಿತವೆಂದು ಪರಿಗಣಿಸುವುದು ನಂತರ ಮೇಲಿನ ಕೋಷ್ಟಕದ ಕ್ರಮ ಸಂಖ್ಯೆ 2 ರಲ್ಲಿ ಸೂಚಿಸಿರುವ ದರಗಳನ್ನು ವಿಧಿಸುವುದು.

12 ನಿವೃತ್ತ ಸರ್ಕಾರಿ ಅಧಿಕಾರಿಗಳು/ನೌಕರರುಗಳಿಗೆ ಅರ್ಹ ಸರ್ಕಾರಿ ನೌಕರರುಗಳಿಗೆ ವಿಧಿಸುವ ದರಗಳನ್ನೇ ವಿಧಿಸುವುದು.

13 ಹಾಲಿ ಮತ್ತು ನಿವೃತ್ತ ಸಿ ಹಾಗೂ ಡಿ ವೃಂದದ ಸರ್ಕಾರಿ ನೌಕರರಿಗೆ ಮೇಲೆ ವಿವರಿಸಿದ ದರಗಳಲ್ಲಿ ಶೇಕಡ 50% ರಷ್ಟು ರಿಯಾಯಿತಿ ನೀಡುವುದು.

14 “ಭಾರತದ ಸರ್ಕಾರದ ಪದ್ಮ ಪ್ರಶಸ್ತಿ ಪುರಸ್ಕೃತರಿಗವರ್ಷಕ್ಕೆ ಒಂದು ಬಾರಿ 05 ದಿನಗಳಿಗೆ ಮೀರದಂತೆ ಅನೆಕ್ಸ್ ಕಟ್ಟಡದಲ್ಲಿ ಪಾವತಿ ರಹಿತವಾಗಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು.

BREAKING: ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು

ಕೋವಿಡ್-19 ಉಲ್ಬಣ: ಪ್ರಧಾನಿ ಮೋದಿ ಭೇಟಿ ಮಾಡುವ ಮೊದಲು ಸಚಿವರಿಗೆ RT-PCR ಪರೀಕ್ಷೆ ಕಡ್ಡಾಯ:

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿಂದು ಕೊರೋನಾಘಾತ: 240 ಮಂದಿಗೆ ಕೋವಿಡ್ ಪಾಸಿಟಿವ್

12/06/2025 9:10 PM1 Min Read

BREAKING : ರಾಜ್ಯದ ಖಾಸಗಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ನಿವೃತ್ತಿ ವೇತನ’ ಹೆಚ್ಚಳ ಮಾಡಿ ಸರ್ಕಾರ ಆದೇಶ.!

12/06/2025 8:38 PM1 Min Read

ನಿಮ್ಮ ವ್ಯಾಪಾರದ ಯಶಸ್ಸಿಗೆ ಈ ಪರಿಹಾರ ಮಾಡಿ, ಹೆಚ್ಚು ಲಾಭ ಗ್ಯಾರಂಟಿ

12/06/2025 7:10 PM3 Mins Read
Recent News

Watch Video: ಟೇಕಪ್ ಆದ 30 ಸೆಕೆಂಡಲ್ಲೇ ಏರ್ ಇಂಡಿಯಾ ವಿಮಾನ ಪತನ: ಬೆಚ್ಚಿ ಬೀಳಿಸೋ ವೀಡಿಯೋ ವೈರಲ್ | Ahmedabad Plane Crash

12/06/2025 9:19 PM

BREAKING : ಭಾರತದ ಗಗನಯಾತ್ರಿ ‘ಶುಭಾಂಶು ಶುಕ್ಲಾ’ ಒಳಗೊಂಡ ‘ಆಕ್ಸಿಯಮ್ ಮಿಷನ್ 4′ ಬಾಹ್ಯಾಕಾಶ ಉಡಾವಣೆ’ ಮತ್ತೆ ಮುಂದೂಡಿಕೆ

12/06/2025 9:11 PM

ರಾಜ್ಯದಲ್ಲಿಂದು ಕೊರೋನಾಘಾತ: 240 ಮಂದಿಗೆ ಕೋವಿಡ್ ಪಾಸಿಟಿವ್

12/06/2025 9:10 PM

VIDEO : ಟೇಕಾಫ್’ನಿಂದ ಪತನದವರೆಗೂ.! ವಿಮಾನ ಅಪಘಾತದ ಮತ್ತೊಂದು ಭಯಾನಕ ವಿಡಿಯೋ ಇಲ್ಲಿದೆ!

12/06/2025 9:02 PM
State News
KARNATAKA

ರಾಜ್ಯದಲ್ಲಿಂದು ಕೊರೋನಾಘಾತ: 240 ಮಂದಿಗೆ ಕೋವಿಡ್ ಪಾಸಿಟಿವ್

By kannadanewsnow0912/06/2025 9:10 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾಘಾತವೇ ಉಂಟಾಗಿದೆ. ಇಂದು ಬರೋಬ್ಬರಿ 240 ಜನರಿಗೆ ಕೋವಿಡ್ ಪಾಸಿಟಿವ್ ಅಂತ ವರದಿಯಿಂದ ದೃಢಪಟ್ಟಿದೆ. ಈ…

BREAKING : ರಾಜ್ಯದ ಖಾಸಗಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ನಿವೃತ್ತಿ ವೇತನ’ ಹೆಚ್ಚಳ ಮಾಡಿ ಸರ್ಕಾರ ಆದೇಶ.!

12/06/2025 8:38 PM

ನಿಮ್ಮ ವ್ಯಾಪಾರದ ಯಶಸ್ಸಿಗೆ ಈ ಪರಿಹಾರ ಮಾಡಿ, ಹೆಚ್ಚು ಲಾಭ ಗ್ಯಾರಂಟಿ

12/06/2025 7:10 PM

ನೀವು ‘ಸ್ವಚ್ಛ ಬೆಂಗಳೂರು’ ಬಯಸುತ್ತೀರಾ? ಹಾಗಿದ್ರೆ ‘ಕ್ಲೀನ್ ಸಿಟಿ’ಗಾಗಿ ಈ ಸಂಖ್ಯೆಗೆ ‘WhatsApp’ ಮಾಡಿ

12/06/2025 6:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.