Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಿ-7 ಶೃಂಗಸಭೆ: ಫ್ರಾನ್ಸ್, ಸ್ಲೋವಾಕಿಯಾಗೆ ಪ್ರಧಾನಿ ಮೋದಿ ಐತಿಹಾಸಿಕ ಪ್ರವಾಸ ಆರಂಭ

​ತರಬೇತುದಾರ ಜಸ್ಪಾಲ್ ರಾಣಾ ನಿಧನಕ್ಕೆ ಕಣ್ಣೀರಿಟ್ಟ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್

ಭಾರತದಲ್ಲಿ ನೀವು ಎಂದಿಗೂ ನಿರ್ಲಕ್ಷಿಸಬಾರದ 10 ಅತ್ಯಂತ ಅಪಾಯಕಾರಿ ಹಾವುಗಳಿವು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೂ ವಂಚನೆ, ಯುವಜನರಿಗೂ ಅನ್ಯಾಯ: ಛಲವಾದಿ ನಾರಾಯಣಸ್ವಾಮಿ
KARNATAKA

ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೂ ವಂಚನೆ, ಯುವಜನರಿಗೂ ಅನ್ಯಾಯ: ಛಲವಾದಿ ನಾರಾಯಣಸ್ವಾಮಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕಾಂಗ್ರೆಸ್ ಸರಕಾರವು ಒಳ ಮೀಸಲಾತಿ ಜಾರಿ ಮಾಡಿಲ್ಲ. ಇಷ್ಟು ದಿನಗಳ ಕಾಲ ನೀವು ದಲಿತರಿಗೂ ವಂಚನೆ ಮಾಡಿದ್ದೀರಿ; ಯುವಜನರಿಗೂ ಅನ್ಯಾಯ ಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಈ ಪರಿಸ್ಥಿತಿಗೆ ಸರಕಾರದ ಲೋಪ ಕಾರಣವೇ ಹೊರತು ಜನರ ಲೋಪ ಅಲ್ಲ. ಈಗ ಯಾವ ರೀತಿ ಮೀಸಲಾತಿ ಕೊಡುತ್ತೀರೆಂದು ಹೇಳಿ ಎಂದು ಸವಾಲು ಹಾಕಿದರು. ಈಗ ಮೀಸಲಾತಿ ಹಳೆ ರೀತಿಯಲ್ಲೇ ಕೊಡುವುದಾದರೆ ಅದು ಒಳ ಮೀಸಲಾತಿ ಆಗುವುದಿಲ್ಲ ಎಂದು ನುಡಿದರು.

ಒಳ ಮೀಸಲಾತಿ ಕೊಡುವುದಾದರೆ ಶೇ 17 ರಂತೆ ಕೊಡಬೇಕು. ಅದು ಆಗುವುದಿಲ್ಲ. ಕೋರ್ಟಿನಲ್ಲಿ ಕೇಸಿದೆ. ಜಾರ್ಖಂಡ್, ಹರಿಯಾಣ, ತೆಲಂಗಾಣದಲ್ಲಿ ಕೊಟ್ಟಿದ್ದಾರೆ. ಎಸ್‍ಸಿ ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಜಾಸ್ತಿ ಆಗಿದೆ. ನೀವಿಲ್ಲಿ ಶೇ 50ರ ಮಿತಿ ಇದೆ ಎಂದಿದ್ದೀರಿ. ಆದರೆ, ಎಸ್‍ಸಿ, ಎಸ್‍ಟಿ ಮೀಸಲಾತಿಗೆ ಮಿತಿ ಇಲ್ಲ ಎಂದು ಗಮನ ಸೆಳೆದರು.

ಅದನ್ನು ಮನವರಿಕೆ ಮಾಡಿಕೊಡದೇ ಸರಕಾರ ವಿಫಲವಾಗಿದೆ. ಇದನ್ನು ಜನರ ಮೇಲೆ ಹಾಕುವುದು ಸರಿಯಲ್ಲ. ಯಾವ ರೀತಿ ಈ ಮೀಸಲಾತಿ ಕೊಡುತ್ತೀರೆಂದು ಜನರಿಗೆ ತಿಳಿಸಬೇಕು. ಇಲ್ಲವಾದರೆ ಈ ಜನರಿಗೆ ನೀವು ಅಪಮಾನ, ಮೋಸ ಮಾಡುವುದಾಗಿ ನಾವು ಹೇಳಬೇಕಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಬಸವರಾಜ ಬೊಮ್ಮಾಯಿಯವರು ಪರಿಶಿಷ್ಟ ಜಾತಿಗೆ ಶೇ 15ರಿಂದ 17ಕ್ಕೆ ಮೀಸಲಾತಿಯನ್ನು ಹೆಚ್ಚಿಸಿದ್ದರು. ಪರಿಶಿಷ್ಟ ವರ್ಗಗಳಿಗೆ ಶೇ 3ರಿಂದ 7ಕ್ಕೆ ಏರಿಸಿದ್ದರು. ಒಳ ಮೀಸಲಾತಿಗೆ ಒಳಪಡುವ ಪರಿಶಿಷ್ಟ ಜಾತಿಗಳ ಹೋರಾಟ ಎರಡ್ಮೂರು ದಶಕಗಳಿಂದ ನಡೆಯುತ್ತಿತ್ತು. ಒಳ ಮೀಸಲಾತಿ ಮಾಡಲು ಒತ್ತಡ ಹೆಚ್ಚಾದ ಕಾರಣ ಒಂದು ತೀರ್ಮಾನಕ್ಕೆ ಬಂದು ಎಬಿಸಿಡಿ ಗುಂಪುಗಳನ್ನು ಮಾಡಿ ಕೇಂದ್ರ ಸರಕಾರಕ್ಕೆ ಕಳಿಸಲಾಗಿತ್ತು. ಆಗ ನಮಗೆ ಅದನ್ನು ಜಾರಿಗೊಳಿಸಲು ಅಧಿಕಾರ ಇರಲಿಲ್ಲ ಎಂದು ವಿಶ್ಲೇಷಿಸಿದರು.

ಕೋರ್ಟಿನಲ್ಲಿ ಮೊಕದ್ದಮೆ ಬಾಕಿ ಇದ್ದುದರಿಂದ ಕೇಂದ್ರ ಸರಕಾರವು ಸ್ವಲ್ಪ ಕಾಯಲು ಹೇಳಿತ್ತು. ಬಳಿಕ ಕೋರ್ಟ್ ಆದೇಶ ಬಂತು. ಎಲ್ಲ ರಾಜ್ಯಗಳು ಅವರೇ ತೀರ್ಮಾನ ತೆಗೆದುಕೊಳ್ಳಬಹುದೆಂದು ತಿಳಿಸಿದರು. ಇದರಿಂದ ಬಹಳ ಸುಲಭ ಆಗಿದೆ. ಇದನ್ನು ರಾಜ್ಯ ಸರಕಾರ ಜಾರಿಗೊಳಿಸಬೇಕಿದೆ ಎಂದು ವಿವರಿಸಿದರು. ನಾವು ಶೇ 6, ಶೇ 5, ಶೇ 4 ಮತ್ತು ಶೇ 1 ಎಂದು ಮಾಡಿದ್ದೆವೋ ಅದನ್ನು ತಿದ್ದುಪಡಿ ಮಾಡಿ ರಾಜಕೀಯ ತೀರ್ಮಾನ ತೆಗೆದುಕೊಂಡು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ- ಅವರನ್ನು ಪ್ರತ್ಯೇಕವಾಗಿ ಇಟ್ಟಿದ್ದರು. ಅವರ ಮೂಲ ಜಾತಿಗಳು ಇದೇ ಆಗಿದೆ. ಅಲೆಮಾರಿಗಳು ಈ ಎಲ್ಲ ಗುಂಪಿಗೂ ಸೇರಿದ್ದರೂ ಅವರನ್ನು ಸಿ ಗುಂಪಿಗೆ ಹಾಕಿದ್ದಾರೆ ಎಂದರು.

ಇದು ಸರಿ ಇಲ್ಲದಿದ್ದರೂ ಒಂದು ಇತ್ಯರ್ಥ ಆಗಲೆಂದು, ಯಾರಿಗೋ ಅನ್ಯಾಯ ಆಗುವುದಾದರೆ ಮುಂದಿನ ದಿನಗಳಲ್ಲಿ ಸರಿಪಡಿಸಬಹುದೆಂದು ನಾವೆಲ್ಲರೂ ಒಪ್ಪಿದೆವು. ಒಂದೇ ಗುಂಪಿಗೆ ಎಲ್ಲ ಹುದ್ದೆಗಳು ಹೋಗಲಿದೆ ಎಂದು ರಾಜ್ಯದಲ್ಲಿ ಒಂದು ರೀತಿಯ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದು ನಡೆಯುವಾಗಲೇ ಧಾರವಾಡದಲ್ಲಿ ಯುವಜನರು ದೊಡ್ಡ ಹೋರಾಟ ಪ್ರಾರಂಭಿಸಿದ್ದರು. ಒಳ ಮೀಸಲಾತಿಯನ್ನು ತೋರಿಸಿಕೊಂಡು 2 ಲಕ್ಷ 84 ಸಾವಿರ ಹುದ್ದೆ ಭರ್ತಿ ಮಾಡದೇ ಬಾಕಿ ಉಳಿಸಿದ್ದೀರಿ ಎಂಬ ಆಕ್ಷೇಪ ಅವರದಾಗಿತ್ತು. ನಮ್ಮ ನಾಯಕರೆಲ್ಲ ಕೈಜೋಡಿಸಿದ್ದರಿಂದ ಆ ಹೋರಾಟದಲ್ಲಿ ಸರಕಾರಕ್ಕೆ ಜ್ವರ ಬಂತು. ತಕ್ಷಣ ಹೋಗಿ ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಅಂಕಿತವನ್ನು ಪಡೆದರು. ಆದರೆ ಮಾಡಿದ್ದೇನು? ಎಂದು ಪ್ರಶ್ನೆಯನ್ನು ಮುಂದಿಟ್ಟರು.

ನಾಳೆ ಹಾಸ್ಟೆಲ್ ಪ್ರವೇಶಕ್ಕೆ ಪರೀಕ್ಷೆ: 2.31 ಲಕ್ಷ ಮಕ್ಕಳು ಪರೀಕ್ಷೆ ಬರೆಯುವ ನಿರೀಕ್ಷೆ

Share. Facebook Twitter LinkedIn WhatsApp Email

Related Posts

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್ ಆರೋಪ: ಬೆಂಗಳೂರಿನ ನಿವಾಸಿ ಸೇರಿದಂತೆ 7 ಆರೋಪಿಗಳ ವಿರುದ್ಧ FIR ದಾಖಲು

2 Mins Read

BIG NEWS: ಬೆಂಗಳೂರು ಅಭಿವೃದ್ಧಿ ಖಾತೆ ಸ್ವೀಕರಿಸಲು ಕೃಷ್ಣ ಬೈರೇಗೌಡ ಹಿಂದೇಟು: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲೇ ಸಚಿವರ ಓಡಾಟ!

2 Mins Read
Recent News

ಜಿ-7 ಶೃಂಗಸಭೆ: ಫ್ರಾನ್ಸ್, ಸ್ಲೋವಾಕಿಯಾಗೆ ಪ್ರಧಾನಿ ಮೋದಿ ಐತಿಹಾಸಿಕ ಪ್ರವಾಸ ಆರಂಭ

​ತರಬೇತುದಾರ ಜಸ್ಪಾಲ್ ರಾಣಾ ನಿಧನಕ್ಕೆ ಕಣ್ಣೀರಿಟ್ಟ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್

ಭಾರತದಲ್ಲಿ ನೀವು ಎಂದಿಗೂ ನಿರ್ಲಕ್ಷಿಸಬಾರದ 10 ಅತ್ಯಂತ ಅಪಾಯಕಾರಿ ಹಾವುಗಳಿವು

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

State News
KARNATAKA

ರಾಜ್ಯದಲಲ್ಲೂಂದು ಘೋರ ಘಟನೆ: ನಂಬಿಸಿ ಹಣ ಪಡೆದವ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಕಾರವಾರ: ಕಾಲೇಜು ಶುಲ್ಕ ಪಾವತಿಸಲು ತಂದೆ ಕೊಟ್ಟಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿ, ಆತ ಹಣವನ್ನು ಸಕಾಲದಲ್ಲಿ ಮರಳಿ ನೀಡದ…

ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್ ಆರೋಪ: ಬೆಂಗಳೂರಿನ ನಿವಾಸಿ ಸೇರಿದಂತೆ 7 ಆರೋಪಿಗಳ ವಿರುದ್ಧ FIR ದಾಖಲು

BIG NEWS: ಬೆಂಗಳೂರು ಅಭಿವೃದ್ಧಿ ಖಾತೆ ಸ್ವೀಕರಿಸಲು ಕೃಷ್ಣ ಬೈರೇಗೌಡ ಹಿಂದೇಟು: ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲೇ ಸಚಿವರ ಓಡಾಟ!

ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳು ಈಡೇರಲು ಪ್ರತಿದಿನ 30 ಸೆಕೆಂಡ್ ಈ ಚಿತ್ರ ವೀಕ್ಷಿಸಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.