Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜಸ್ಥಾನದಲ್ಲಿ ಭಾರೀ ಮಳೆಗೆ ಶಾಲಾ ಕಟ್ಟಡ ಕುಸಿತ : ಐವರು ವಿದ್ಯಾರ್ಥಿಗಳು ಸಾವು.!

25/07/2025 9:44 AM

BREAKING : ಬೆಳ್ಳಂಬೆಳಗ್ಗೆ ರಾಜಸ್ಥಾನದಲ್ಲಿ ಶಾಲೆಯ ಛಾವಣಿ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು.!

25/07/2025 9:37 AM

`ಇಂಟೆಲ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 25,000 ಕ್ಕೂ ಹೆಚ್ಚು ನೌಕರರ ವಜಾ | Intel layoffs

25/07/2025 9:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » HMT ಸ್ವಾಧೀನದ ಅರಣ್ಯ ಭೂಮಿ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
KARNATAKA

HMT ಸ್ವಾಧೀನದ ಅರಣ್ಯ ಭೂಮಿ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

By kannadanewsnow0916/01/2025 6:38 PM

ಬೆಂಗಳೂರು: ಎಚ್‌ಎಂಟಿ ಲಿಮಿಟೆಡ್‌ನ ಸ್ವಾಧಿನದಲ್ಲಿರುವ ರೂ.14300 ಕೋಟಿ ಮೌಲ್ಯದ ಅರಣ್ಯ ಭೂಮಿ ರಾಜ್ಯ ಸರ್ಕಾರಕ್ಕೆ ಹಿಂಪಡೆಯಲು ಅಗತ್ಯ ಕ್ರಮ ಜರುಗಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಅವರು ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಸಚಿವ ಸಂಪುಟ ಸಭೆಯ ನಂತರ ಸಂಪುಟದ ನಿರ್ಣಯದ ಕುರಿತು ವಿವರಿಸಿದರು.

ಎಚ್‌ಎಂಟಿ ಕಾರ್ಖಾನೆಯು ಬೆಂಗಳೂರಿನಲ್ಲಿ ಹೊಂದಿರುವ ಪ್ರದೇಶಗಳನ್ನು ಕೇಂದ್ರ ಸರ್ಕಾರದ ಇತರೆ ಸಂಸ್ಥೆಗಳಿಗೆ ಹಸ್ತಾಂತರಿಸಲು ನಿರಾಕ್ಷೇಪಣಾ ಪತ್ರ ನೀಡುವ ಕುರಿತು ಅಧಿಕಾರಿಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಂಡಿದ್ದು ಮತ್ತು ಸಚಿವ ಸಂಪುಟದ ಪೂರ್ವಾನುಮತಿ ಅಥವಾ ಉನ್ನತ ಮಟ್ಟದ ಸಮಿತಿಯ ಅನುಮೋದನೆಯನ್ನು ಪಡೆಯದೇ ಸುಪ್ರಿಂ ಕೋರ್ಟ್ಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ಸಲ್ಲಿಸಲಾಗಿರುವ ರಾಜ್ಯ ಸರ್ಕಾರದ ಅರ್ಜಿ ಸಲ್ಲಿಕೆಗೆ ಅರಣ್ಯ ಸಚಿವರು ತೆಗೆದುಕೊಂಡಿರುವ ನಿರ್ಣಯಕ್ಕೆ ರಾಜ್ಯ ಸಚಿವ ಸಂಪುಟ ಘಟನೋತ್ತರ ಮಂಜೂರಾತಿ ನೀಡಿದೆ ಎಂದು ತಿಳಿಸಿದರು.

20015ರಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯಲ್ಲಿ ಹಲವು ಬಾರಿ ಸಭೆಗಳಲ್ಲಿ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಕುರಿತು ಚರ್ಚೆ ನಡೆಸಲಾಗಿತ್ತು. ದಿನಾಂಕ: 17.07.2018 ರಂದು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯಲ್ಲಿ ಇನ್ನೂ ಹಸಿರು ಹೊದಿಕೆಯನ್ನು ಹೊಂದಿದ ಅರಣ್ಯ ಭೂಮಿಯನ್ನು ಎಚ್‌ಎಂಟಿ ಸಂಸ್ಥೆಯು ಮಾರಾಟ ಮತ್ತು ಹರಾಜು ಮಾಡುತ್ತಿದ್ದು, ಇದು ಬೆಂಗಳೂರಿಗೆ ಜೀವ ಉಳಿಸುವ ಮತ್ತು ಅತ್ಯಗತ್ಯವಾದ ಉಸಿರಾಟಕಾರಕವಾಗಿದೆ (ಬೆಂಗಳೂರಿನಲ್ಲಿ ಹೆಚ್ಚು ಅಗತ್ಯವಿರುವ ಶ್ವಾಸಕೋಶದ ಸ್ಥಳ) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ದಿನಾಂಕ: 15.07.2020ರಂದು ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯಲ್ಲಿ ಈ ಕೆಳಗಿನಂತೆ ಸ್ಪಷ್ಟವಾಗಿ ದಾಖಲಿಸಲಾಗಿದೆ.

“The Additional chief Secretary, Forest, Environment and Ecology Department has been directed to submit a proposal for denotification of such forest areas for cabinet decision after obtaining the opinion of the Advocate General on the sanctions of areas made to various / government institutions prior to 1980”.

ಆದರೆ ಅಧಿಕಾರಿಗಳು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಂಡಿದ್ದು 2020ರಲ್ಲಿ ವಿವಾದಿತ ಭೂಮಿಯ ಡಿನೊಟಿಫಿಕೇಶನ್ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಕೋರಿದೆ. ಅಧಿಕಾರಿಗಳು ರೂ.14,300 ಕೋಟಿ ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು, ಕಾಯ್ದಿರಿಸಿದ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿರುವುದು ಕರ್ತವ್ಯ ಲೋಪವಾಗಿರುತ್ತದೆ ಎಂದು ವಿವರಿಸಿದರು.

ಎಚ್‌ಎಂಟಿ ಸಂಸ್ಥೆಯು ಈ ಎಲ್ಲಾ ಭೂಮಿಯನ್ನು ಇತರೆ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿರುವುದರಿಂದ ರಾಜ್ಯಕ್ಕೆ ಭಾರೀ ಆರ್ಥಿಕ ನಷ್ಟವನ್ನು ಉಂಟಾಗುತ್ತದೆ ಮತ್ತು ಬೆಂಗಳೂರಿಗರಿಗೆ ಶ್ವಾಸಕೋಶದ ಸ್ಥಳವನ್ನು ಕಳೆದುಕೊಳ್ಳುತ್ತದೆ ಎಂಬುದು ಕಾನೂನು ಇಲಾಖೆಯ ಅಭಿಪ್ರಾಯವಾಗಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.

ಬೆಂಗಳೂರು ಅರಮನೆ TDR ಪ್ರಕರಣ: ರಾಜ್ಯ ಸರ್ಕಾರದಿಂದ ತುರ್ತು ವಿಚಾರಣೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆಗೆ ನಿರ್ಧಾರ

GOOD NEWS: ರಾಜ್ಯ ಸರ್ಕಾರದಿಂದ ‘VA’ಗಳಿಗೆ ಭರ್ಜರಿ ಗುಡ್ ನ್ಯೂಸ್: ‘ಲ್ಯಾಪ್ ಟಾಪ್’ ವಿತರಣೆಗೆ ಸಚಿವ ಸಂಪುಟ ಅನುಮೋದನೆ

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

25/07/2025 9:26 AM3 Mins Read

BREAKING : ಗೋವಾದಲ್ಲಿ ಇನ್ಮುಂದೆ ಕನ್ನಡಿಗರು `ವಾಹನ’ ಖರೀದಿಸುವಂತಿಲ್ಲ : ಹೊಸ ರೂಲ್ಸ್ ಜಾರಿ.!

25/07/2025 9:12 AM1 Min Read

BIG NEWS : ರಾಜ್ಯದಲ್ಲಿ 2025-26ರ ಅವಧಿಗೆ 890 ಔಷಧಗಳು, ಮಾತ್ರೆಗಳ ಸಂಗ್ರಹಣೆಗೆ ಸಚಿವ ಸಂಪುಟ ಅನುಮೋದನೆ.!

25/07/2025 9:01 AM2 Mins Read
Recent News

BREAKING : ರಾಜಸ್ಥಾನದಲ್ಲಿ ಭಾರೀ ಮಳೆಗೆ ಶಾಲಾ ಕಟ್ಟಡ ಕುಸಿತ : ಐವರು ವಿದ್ಯಾರ್ಥಿಗಳು ಸಾವು.!

25/07/2025 9:44 AM

BREAKING : ಬೆಳ್ಳಂಬೆಳಗ್ಗೆ ರಾಜಸ್ಥಾನದಲ್ಲಿ ಶಾಲೆಯ ಛಾವಣಿ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು.!

25/07/2025 9:37 AM

`ಇಂಟೆಲ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 25,000 ಕ್ಕೂ ಹೆಚ್ಚು ನೌಕರರ ವಜಾ | Intel layoffs

25/07/2025 9:34 AM

BREAKING : ರಾಜಸ್ಥಾನದಲ್ಲಿ ಶಾಲಾ ಕಟ್ಟಡ ಕುಸಿದು ಘೋರ ದುರಂತ : ಐವರು ವಿದ್ಯಾರ್ಥಿಗಳು ಸಾವು.!

25/07/2025 9:30 AM
State News
KARNATAKA

BREAKING : ರಾಜ್ಯದಲ್ಲಿ `SSLC-PUC’ ಪಾಸ್ ಗೆ 35% ಅಲ್ಲ, 33% ಮಾರ್ಕ್ಸ್ ಸಾಕು : ವಿದ್ಯಾರ್ಥಿಗಳ `ಉತ್ತೀರ್ಣ’ಕ್ಕೆ ಸರ್ಕಾರದಿಂದ ಹೊಸ ಕ್ರಮ.!

By kannadanewsnow5725/07/2025 9:26 AM KARNATAKA 3 Mins Read

ಬೆಂಗಳೂರು : ರಾಜ್ಯದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ…

BREAKING : ಗೋವಾದಲ್ಲಿ ಇನ್ಮುಂದೆ ಕನ್ನಡಿಗರು `ವಾಹನ’ ಖರೀದಿಸುವಂತಿಲ್ಲ : ಹೊಸ ರೂಲ್ಸ್ ಜಾರಿ.!

25/07/2025 9:12 AM

BIG NEWS : ರಾಜ್ಯದಲ್ಲಿ 2025-26ರ ಅವಧಿಗೆ 890 ಔಷಧಗಳು, ಮಾತ್ರೆಗಳ ಸಂಗ್ರಹಣೆಗೆ ಸಚಿವ ಸಂಪುಟ ಅನುಮೋದನೆ.!

25/07/2025 9:01 AM

ರಾಜ್ಯದಲ್ಲಿ ಇದೇ ಮೊದಲ ಬಾರಿ : ಗ್ರಾಪಂ ಕಾರ್ಯದರ್ಶಿ, ಲೆಕ್ಕ ಸಹಾಯಕರ ವರ್ಗಾವಣೆಗೆ ಆನ್ ಲೈನ್ ಕೌನ್ಸೆಲಿಂಗ್

25/07/2025 8:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.