Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಹಿಳೆಯರೇ ಎಚ್ಚರ : ಲಿಪ್ ಸ್ಟಿಕ್ ಹಚ್ಚಿದ ಮಹಿಳೆಗೆ ಅಪಾಯಕಾರಿ `ಹರ್ಪಿಸ್ ಸೋಂಕು’ ದೃಢ.!

03/04/2026 12:51 PM

ರಾಜ್ಯದ ರೈತರ ಗಮನಕ್ಕೆ : ನಿಮ್ಮ ಜಮೀನಿನ ಈ ದಾಖಲೆಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.!

03/04/2026 12:46 PM

BIG NEWS : ಪರಸ್ಪರ ಒಪ್ಪಿಗೆ ಸಂಬಂಧಗಳ ಪ್ರಕರಣಗಳಲ್ಲಿ `ಪೋಕ್ಸೋ ಕಾಯ್ದೆ’ಹೇರುವುದು ನ್ಯಾಯಸಮ್ಮತವಲ್ಲ : ಹೈಕೋರ್ಟ್ ಮಹತ್ವದ ತೀರ್ಪು

03/04/2026 12:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 16 ದಿನಗಳ ಬಿಎಲ್‌ಆರ್‌ ‘ನಮ್ಮ ಜಾತ್ರೆ’ಗೆ ವೇದಿಕೆ ಸಜ್ಜು: 500ಕ್ಕೂ ಹೆಚ್ಚು ಜಾನಪದ ಕಲಾವಿದರು ಭಾಗಿ, ನೃತ್ಯ ಪ್ರದರ್ಶನ
KARNATAKA

16 ದಿನಗಳ ಬಿಎಲ್‌ಆರ್‌ ‘ನಮ್ಮ ಜಾತ್ರೆ’ಗೆ ವೇದಿಕೆ ಸಜ್ಜು: 500ಕ್ಕೂ ಹೆಚ್ಚು ಜಾನಪದ ಕಲಾವಿದರು ಭಾಗಿ, ನೃತ್ಯ ಪ್ರದರ್ಶನ

By kannadanewsnow0928/11/2024 5:41 PM

ಬೆಂಗಳೂರು: ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ವತಿಯಿಂದ ಆಯೋಜಿಸಲಾಗಿರುವ ಬಹುನಿರೀಕ್ಷಿತ “ಬಿಎಲ್‌ಆರ್‌ಹಬ್ಬ”ವು ಇದೇ ನವೆಂಬರ್‌ 30 ರಿಂದ ಆರಂಭವಾಗಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರಿಂದ “ನಮ್ಮ ಜಾತ್ರೆ” ಉದ್ಘಾಟನಾ ಸಮಾರಂಭದ ಮೂಲಕ ಅದ್ಧೂರಿ ಚಾಲನೆ ದೊರೆಯಲಿದೆ.

ನವೆಂಬರ್‌ 30ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗ “ಬಿಎಲ್‌ಆರ್‌ ಹಬ್ಬ”ದ ಭಾಗವಾಗಿ ನಡೆಯಲಿರುವ “ನಮ್ಮ ಜಾತ್ರೆ”ಯ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ. ಈ ಮೂಲಕ ಕರ್ನಾಟಕದ ಶ್ರೀಮಂತ ಪರಂಪರೆ, ಕಲೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.

ಅಂದು ರಾಜ್ಯಾದ್ಯಂತ 50 ವೈವಿಧ್ಯಮಯ ಜಾನಪದ ನೃತ್ಯ ತಂಡಗಳಿಂದ 500 ಕ್ಕೂ ಹೆಚ್ಚು ಜಾನಪದ ನೃತ್ಯಗಾರರ ಸಮ್ಮೋಹನಗೊಳಿಸುವ ಪ್ರದರ್ಶನದೊಂದಿಗೆ ಉತ್ಸವ ಪ್ರಾರಂಭಗೊಳ್ಳಲಿದೆ. ವಿಶೇಷವಾಗಿ ಸಂಯೋಜಿಸಿದ ಸಂಗೀತಕ್ಕೆ ಹೊಂದಿಸಲಾದ ಈ ಪ್ರದರ್ಶನಗಳು ರಾಜ್ಯದ ನೃತ್ಯ ಪ್ರಕಾರಗಳ ಶ್ರೀಮಂತ ವೈವಿಧ್ಯತೆಯ ರೂಪಗಳನ್ನು ಅನಾವರಣಗೊಳಿಸಲಿವೆ.

ವಿಧಾನಸೌಧದ ಭವ್ಯವಾದ ಮೆಟ್ಟಿಲುಗಳ ಮೇಲೆ ಈ ರೋಮಾಂಚಕ ದೃಶ್ಯವನ್ನು ವೀಕ್ಷಿಸಲು ನಾಗರಿಕರನ್ನು ಆಹ್ವಾನಿಸಲಾಗಿದ್ದು, ನಮ್ಮ ಪರಂಪರೆ, ಆಚರಣೆಗಳನ್ನು ಕಣ್ತುಂಬಿಸಿಕೊಳ್ಳಲು ಅವಕಾಶ ನೀಡಲಿದೆ.

ಊದ್ಘಾಟನೆ ಹಾಗೂ ಕಲಾ ಪ್ರದರ್ಶನ ಬಳಿಕ ಅರ್ಧ ಕಿಲೋಮೀಟರ್ ಉದ್ದದ ಭವ್ಯ ಮೆರವಣಿಗೆಯ ನಡೆಯಲಿದೆ. ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಅತ್ಯುನ್ನತ ಅಂಶಗಳನ್ನು ಈ ಮೆರವಣಿಗೆ ವೇಳೆ ಪ್ರರ್ಶಿಸಲಾಗುತ್ತದೆ. ಮೆರವಣಿಗೆಯುದ್ದಕ್ಕೂ ರೋಮಾಂಚಕ ನೃತ್ಯಗಾರರು, ಗಾಯಕರು, ಎತ್ತಿನ ಬಂಡಿಗಳು ಮತ್ತು ಹೂವಿನ ಪಲ್ಲಕ್ಕಿಕ್ಕೆ ಸಾಗಲಿದೆ. ಈ ಮೆರವಣಿಗೆಯ ಮತ್ತೊಂದು ವಿಶೇಷತೆಯೆಂದರೆ ಕರ್ನಾಟಕದ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಗೌರವಾನ್ವಿತವಾಗಿದೆ, ಅವರನ್ನು ಸುಂದರವಾಗಿ ಅಲಂಕರಿಸಿದ ಹೂವಿನ ಪಲ್ಲಕ್ಕಿಗಳ ಮೂಲಕ ಗೌರವಿಸಲಾಗುವುದು. ಭವ್ಯವಾದ ಮೆರವಣಿಗೆಯು ಬೆಂಗಳೂರಿನ ಹೃದಯಭಾಗದಲ್ಲಿ ಸಂಚರಿಸಿ ಎಂ.ಜಿ. ರಸ್ತೆಯಲ್ಲಿ ಮುಕ್ತಾಯಗೊಳ್ಳಲಿದೆ. ರಾತ್ರಿ 10 ಗಂಟೆವರೆಗೂ ಜಾನಪದ ಸಂಗೀತ ಮತ್ತು ನೃತ್ಯದ ನೇರ ಪ್ರದರ್ಶನಗಳೊಂದಿಗೆ ಮೆಟ್ರೋ ರಂಗೋಲಿ ಬೌಲೆವಾರ್ಡ್‌ವರೆಗೂ ನಡೆಯಲಿದೆ.

ಬಿಎಲ್‌ಆರ್ ಹಬ್ಬಾದ ಮುಖ್ಯ ಸಂಚಾಲಕ ವಿ. ರವಿಚಂದರ್ ಮಾತನಾಡಿ, “ಬಿಎಲ್‌ಆರ್ ಹಬ್ಬ ಕೇವಲ ಒಂದು ಹಬ್ಬವಲ್ಲ, ಇದು ಬೆಂಗಳೂರಿನ ಸಾರವನ್ನು ಹಿಡಿದಿಟ್ಟುಕೊಳ್ಳುವ ಚಳುವಳಿಯಾಗಿದೆ. ನಮ್ಮ ಜಾತ್ರೆಯ ಮೂಲಕ, ಅದರ ಸಾಂಸ್ಕೃತಿಕ ಹೃದಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರದ ಆಳವಾದ ಬೇರೂರಿರುವ ಸಂಪ್ರದಾಯಗಳ ಮೇಲೆ ಬೆಳಕನ್ನು ಚೆಲ್ಲುವ ಗುರಿ ಹೊಂದಿದ್ದೇವೆ. ನಮ್ಮೊಂದಿಗೆ ಸಹಕರಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಾವು ಕೃತಜ್ಞರಾಗಿರುತ್ತೇವೆ, ಹಬ್ಬಕ್ಕೆ ಈ ಅದ್ಭುತವಾದ ಚಾಲನೆ ನಾವು ಆಭಾರಿಯಾಗಿದ್ದೇವೆ ಎಂದು ಹೇಳಿದರು.

“ಅನ್‌ಬಾಕ್ಸಿಂಗ್‌ಬಿಎಲ್‌ಆರ್‌ ಫೌಂಡೇಶನ್ ಸಿಇಒ ಮಾಲಿನಿ ಗೋಯಲ್‌ ಮಾತನಾಡಿ, ಬಿಎಲ್‌ಆರ್ ಹಬ್ಬಾದ ಮೂಲಕ, ರಾಜ್ಯದ ಪರಂಪರೆ, ಶ್ರೀಮಂತ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ನಾಗರಿಕರಿಗೆ ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಮ್ಮ ಜಾತ್ರೆ ನಡೆಸುತ್ತಿರುವುದು ಇದಕ್ಕೆ ಇನ್ನಷ್ಟು ಪ್ರೋತ್ಸಹ ನೀಡಿದಂತೆ ಎಂದರು.

ಬಿಎಲ್‌ಆರ್ ಹಬ್ಬದ ಉದ್ಘಾಟನಾದಲ್ಲಿ ಇದು ಬೆಂಗಳೂರಿನ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಮತ್ತು ಕ್ರಿಯಾತ್ಮಕ ಮನೋಭಾವವನ್ನು ಆಚರಿಸುವ ಉತ್ಸವಕ್ಕೆ ವೇದಿಕೆಯನ್ನು ಸಿದ್ಧಪಡಿಸಿದಂತೆ ಹೇಳಿದರು.

ಇನ್ನು, ಈ ಕಾರ್ಯಕ್ರಮವು ಆಧುನಿಕತೆಯೊಂದಿಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಾಮರಸ್ಯದಿಂದ ಸಂಯೋಜಿಸುವ ನಗರವಾಗಿ ಬೆಂಗಳೂರನ್ನು ಬೆಳೆಸಲು ಕಲ್ಪನೆ ಹೊಂದಿದೆ. ನವೆಂಬರ್ 30 ರಂದು ಸಂಜೆ 5 ಗಂಟೆಗೆ ನಮ್ಮ ಜಾತ್ರೆಯೊಂದಿಗೆ BLR ಹಬ್ಬ ಉದ್ಘಾಟನೆ ನಡೆಯಲಿದ್ದು, ಪ್ರತಿಯೊಬ್ಬರು ಪಾಲ್ಗೊಳ್ಳಬಹುದು. 16 ದಿನಗಳ BLRಹಬ್ಬದ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಪ್ರತಿದಿನದ ಕಾರ್ಯಕ್ರಮಗಳ ವಿವರವನ್ನು https://blrhubba.in ವೆಬ್‌ಸೈಟ್ ನಲ್ಲಿ ನೇರವಾಗಿ ತಮ್ಮ ನೆಚ್ಚಿನ ಚಟುವಟಿಕೆಗಳನ್ನು ಬುಕ್ ಮಾಡಬಹುದು, BLR ಹಬ್ಬಾ ಬ್ಯಾನರ್ ಅಡಿಯಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಉಚಿತ ಮತ್ತು ಎಲ್ಲರಿಗೂ ಮುಕ್ತವಾಗಿವೆ. ಬಿಎಲ್‌ಆರ್‌ ಹಬ್ಬಾ ಫೆಸ್ಟಿವಲ್ ಪ್ರಾಯೋಜಕರಲ್ಲಿ ಗೋ ನೇಟಿವ್, ಝೆರೋಧಾ, ಮಣಿಪಾಲ್ ಫೌಂಡೇಶನ್ ಮತ್ತು ಪ್ರೆಸ್ಟೀಜ್ ಗ್ರೂಪ್, ಗೀತಾಂಜಲಿ ವಿಕ್ರಮ್ ಕಿರ್ಲೋಸ್ಕರ್, ಪ್ರೊಸಸ್ ಮತ್ತು ಕ್ವೆಸ್ ಕಾರ್ಪೊರೇಷನ್ ಸೇರಿವೆ.

ರಾಜ್ಯದ ‘ದ್ವಿತೀಯ PUC ವಿದ್ಯಾರ್ಥಿ’ಗಳಿಗೆ ಮಹತ್ವದ ಮಾಹಿತಿ: ‘ಕೌಶಲ್ಯಾಭಿವೃದ್ಧಿ ತರಬೇತಿ’ಗೆ ಅರ್ಜಿ ಆಹ್ವಾನ – Kannada News | India News | Breaking news | Live news | Kannada | Kannada News | Karnataka News | Karnataka News

‘ಸ್ವ-ಉದ್ಯೋಗಾಕಾಂಕ್ಷಿ’ಗಳಿಗೆ ಗುಡ್ ನ್ಯೂಸ್: ‘ಡ್ರೋನ್ ತರಬೇತಿ’ ಪಡೆಯಲು ಅರ್ಜಿ ಆಹ್ವಾನ – Kannada News | India News | Breaking news | Live news | Kannada | Kannada News | Karnataka News | Karnataka News

Share. Facebook Twitter LinkedIn WhatsApp Email

Related Posts

ರಾಜ್ಯದ ರೈತರ ಗಮನಕ್ಕೆ : ನಿಮ್ಮ ಜಮೀನಿನ ಈ ದಾಖಲೆಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.!

03/04/2026 12:46 PM2 Mins Read

ಶಿವಮೊಗ್ಗ: ಸೊರಬದ ಹೊಡಬಟ್ಟೆಯ ಶ್ವೇತಾ ಹತ್ಯೆ ಕೇಸ್; ಅತ್ತೆ-ಮಾವ ಸೇರಿದಂತೆ ನಾಲ್ವರ ಬಂಧನ

03/04/2026 12:19 PM1 Min Read

‘SSLC 3ನೇ ಭಾಷೆ ಅಂಕಕ್ಕೆ ಬ್ರೇಕ್ ಹಾಕಿದ ವಿಚಾರ : ಸರ್ಕಾರದ ನಿರ್ಧಾರ ಪರಿಶೀಲಿಸುವಂತೆ ಸಿಎಸ್‌ಗೆ ರಾಜ್ಯಪಾಲರಿಂದ ಪತ್ರ

03/04/2026 12:10 PM1 Min Read
Recent News

ALERT : ಮಹಿಳೆಯರೇ ಎಚ್ಚರ : ಲಿಪ್ ಸ್ಟಿಕ್ ಹಚ್ಚಿದ ಮಹಿಳೆಗೆ ಅಪಾಯಕಾರಿ `ಹರ್ಪಿಸ್ ಸೋಂಕು’ ದೃಢ.!

03/04/2026 12:51 PM

ರಾಜ್ಯದ ರೈತರ ಗಮನಕ್ಕೆ : ನಿಮ್ಮ ಜಮೀನಿನ ಈ ದಾಖಲೆಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.!

03/04/2026 12:46 PM

BIG NEWS : ಪರಸ್ಪರ ಒಪ್ಪಿಗೆ ಸಂಬಂಧಗಳ ಪ್ರಕರಣಗಳಲ್ಲಿ `ಪೋಕ್ಸೋ ಕಾಯ್ದೆ’ಹೇರುವುದು ನ್ಯಾಯಸಮ್ಮತವಲ್ಲ : ಹೈಕೋರ್ಟ್ ಮಹತ್ವದ ತೀರ್ಪು

03/04/2026 12:44 PM

ಅಮೆರಿಕದ 2ನೇ  `F-35 ಫೈಟರ್ ಜೆಟ್’ ಹೊಡೆದುರುಳಿಸಿದ ಇರಾನ್ : ವಿಡಿಯೋ ವೈರಲ್ | WATCH VIDEO

03/04/2026 12:19 PM
State News
KARNATAKA

ರಾಜ್ಯದ ರೈತರ ಗಮನಕ್ಕೆ : ನಿಮ್ಮ ಜಮೀನಿನ ಈ ದಾಖಲೆಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.!

By kannadanewsnow5703/04/2026 12:46 PM KARNATAKA 2 Mins Read

ಬೆಂಗಳೂರು: ಪ್ರತಿಯೊಬ್ಬ ರೈತನಿಗೂ ತನ್ನ ಜಮೀನೇ ಆಸ್ತಿ ಮತ್ತು ಜೀವನೋಪಾಯ. ಆದರೆ, ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಲು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ…

ಶಿವಮೊಗ್ಗ: ಸೊರಬದ ಹೊಡಬಟ್ಟೆಯ ಶ್ವೇತಾ ಹತ್ಯೆ ಕೇಸ್; ಅತ್ತೆ-ಮಾವ ಸೇರಿದಂತೆ ನಾಲ್ವರ ಬಂಧನ

03/04/2026 12:19 PM

‘SSLC 3ನೇ ಭಾಷೆ ಅಂಕಕ್ಕೆ ಬ್ರೇಕ್ ಹಾಕಿದ ವಿಚಾರ : ಸರ್ಕಾರದ ನಿರ್ಧಾರ ಪರಿಶೀಲಿಸುವಂತೆ ಸಿಎಸ್‌ಗೆ ರಾಜ್ಯಪಾಲರಿಂದ ಪತ್ರ

03/04/2026 12:10 PM

BIG NEWS : ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪೋಕ್ಸೋ ಕಾಯ್ದೆಯ `ಬಾಲ ಗರ್ಭಿಣಿ ಕೇಸ್’ಗಳ ವರದಿ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

03/04/2026 12:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.