Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ `ನಟ ಮಡೆನೂರು ಮನು’ ವಿರುದ್ಧ ಅತ್ಯಾಚಾರ ಆರೋಪ : `FIR’ ದಾಖಲು.!

22/05/2025 12:27 PM

BREAKING : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ ಕರೆ |bomb threat

22/05/2025 12:20 PM

BREAKING : ಅಮೇರಿಕದಲ್ಲಿ ಇಸ್ರೇಲ್ ಅಧಿಕಾರಿಗಳ ಹಂತಕ ಅರೆಸ್ಟ್ :`ಬಂಧಿಸುವಾಗ ‘ಫ್ರೀ ಪ್ಯಾಲೆಸ್ಟೈನ್’ ಘೋಷಣೆ | WATCH VIDEO

22/05/2025 12:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಪವರ್ ಕಟ್’ ಸಮಸ್ಯೆ ಪರಿಹಾರಕ್ಕೆ ಮಹತ್ವದ ಕ್ರಮ : ‘ತಡೆರಹಿತ ವಿದ್ಯುತ್‌ ಪೂರೈಕೆ’ಗೆ ವಿಶೇಷ ವಾಹನಗಳ ನಿಯೋಜನೆ
KARNATAKA

‘ಪವರ್ ಕಟ್’ ಸಮಸ್ಯೆ ಪರಿಹಾರಕ್ಕೆ ಮಹತ್ವದ ಕ್ರಮ : ‘ತಡೆರಹಿತ ವಿದ್ಯುತ್‌ ಪೂರೈಕೆ’ಗೆ ವಿಶೇಷ ವಾಹನಗಳ ನಿಯೋಜನೆ

By kannadanewsnow5702/04/2024 8:22 AM

ಬೆಂಗಳೂರು : ನಿರಂತರ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು ಮೈಸೂರು ಮತ್ತು ಗುಲ್ಬರ್ಗ ಪ್ರದೇಶಗಳ 400 ಕೆ.ವಿ.ವರೆಗಿನ ಪ್ರಸರಣ ಮಾರ್ಗಗಳು ಮತ್ತು ಸಬ್‌ಸ್ಟೇಷನ್‌ಗಳ ನಿರ್ವಹಣೆಗಾಗಿ ಎರಡು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳನ್ನು ನಿಯೋಜಿಸಲಿದೆ.

“ಸಾಮಾನ್ಯವಾಗಿ ವಿದ್ಯುತ್‌ ಮಾರ್ಗಗಳ ನಿರ್ವಹಣೆಗಾಗಿ ತಾಸುಗಟ್ಟಲೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಬೇಕಾಗುತ್ತದೆ. ಆದರೆ, ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳ ಬಳಕೆಯಿಂದ ಗ್ರಾಹಕರಿಗೆ ತಡೆರಹಿತ ವಿದ್ಯುತ್‌ ಪೂರೈಕೆ ಸಾಧ್ಯವಾಗಲಿದೆ. ಹಾಗಾಗಿ ಈ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗುತ್ತಿದೆ,”ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಬೆಂಗಳೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಈಗಾಗಲೇ ಇಂತಹ ಮೂರು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಕೆಪಿಟಿಸಿಎಲ್‌ಗೆ ಕೋಟ್ಯಂತರ ರೂಪಾಯಿಗಳ ಉಳಿತಾಯವಾಗುತ್ತದೆ,” ಎಂದು ಇಂಧನ ಸಚಿವ ಕೆ.ಜೆ ಜಾರ್ಜ್‌ ತಿಳಿಸಿದ್ದಾರೆ.

“ಸಾಂಪ್ರದಾಯಿಕ ವಿಧಾನದಲ್ಲಿ ಪ್ರಸರಣ ಮಾರ್ಗಗಳ ದುರಸ್ಥಿ ಅಥವಾ ನಿರ್ವಹಣೆಗೆ ವಿದ್ಯುತ್ ಲೈನ್ ಸ್ಥಗಿತಗೊಳಿಸುವುದು ಅನಿವಾರ್ಯ. ಅದೇ ರೀತಿ ಸ್ಥಗಿತಗೊಂಡ ವಿದ್ಯುಚ್ಛಕ್ತಿಯ ಮರುಸ್ಥಾಪನೆಗೆ ಕನಿಷ್ಠ 5 ಗಂಟೆಗಳ ಕಾಲಾವಕಾಶ ಬೇಕು. ಆದರೆ, ಹಾಟ್ (ಲೈವ್) ಲೈನ್ ನಿರ್ವಹಣೆ ತಂತ್ರಜ್ಞಾನದ ಅತ್ಯಾಧುನಿಕ ಇನ್ಸುಲೇಟೆಡ್ ಬಕೆಟ್ ವ್ಯಾನ್, ಇನ್ಸುಲೇಟೆಡ್ ಬಕೆಟ್ ಮತ್ತು ಇನ್ಸುಲೇಟೆಡ್ ಸ್ಕ್ಯಾಫೋಲ್ಡಿಂಗ್ ಬಳಕೆಯಿಂದ ವಿದ್ಯುತ್‌ ಸ್ಥಗಿತಗೊಳಿಸದೆ ನಿರ್ವಹಣಾ ಚಟುವಟಿಕೆಯನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಗ್ರಾಹಕರಿಗೆ ತಡೆ ರಹಿತ ವಿದ್ಯುತ್‌ ಪೂರೈಕೆ ಜತೆಗೆ ವಿದ್ಯುತ್‌ ಕಂಪನಿಗಳ ನಿರ್ವಹಣಾ ವೆಚ್ಚವನ್ನೂ ಕಡಿತಗೊಳಿಸುವ ಈ ತ್ರಂಜ್ಞಾನದ ಬಳಕೆಗೆ ಕೆಪಿಟಿಸಿಎಲ್ ಮುಂದಾಗಿದೆ,” ಎಂದು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಂಕಜ್ ಕುಮಾರ್ ಪಾಂಡೆ ವಿವರಿಸಿದರು.

“ಈ ತಂತ್ರಜ್ಞಾನದ ಬಳಕೆಗೆ ಕೆಪಿಟಿಸಿಎಲ್ ಈಗಾಗಲೇ l5 ಸಿಬ್ಬಂದಿಯನ್ನು ಗುರುತಿಸಿದ್ದು, ಅವರು ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ವಾಹನಗಳನ್ನು ನಿರ್ವಹಿಸಲು ವೃತ್ತಿಪರ ತರಬೇತಿಯನ್ನು ಪಡೆದಿದ್ದಾರೆ. ಬ್ರೆಜಿಲ್‌ನಿಂದ ಈ ವಾಹನಗಳನ್ನು ಆಮದು ಮಾಡಿಕೊಳ್ಳಲಾಗಿದೆ,”ಎಂದು ಅವರು ಹೇಳಿದರು.

ನಿರಂತರ ವಿದ್ಯುತ್ ಪೂರೈಕೆಯ ಖಾತರಿಗಾಗಿ 220 ಕೆ.ವಿ. ಸಾಮರ್ಥ್ಯದ ನೆಲಮಂಗಲ ಸ್ಥಾವರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಅವರು,’ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್’ ವಾಹನವನ್ನು ಪರಿಶೀಲಿಸಿ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

‘ಪವರ್ ಕಟ್’ ಸಮಸ್ಯೆ ಪರಿಹಾರಕ್ಕೆ ಮಹತ್ವದ ಕ್ರಮ : ‘ತಡೆರಹಿತ ವಿದ್ಯುತ್‌ ಪೂರೈಕೆ’ಗೆ ವಿಶೇಷ ವಾಹನಗಳ ನಿಯೋಜನೆ Special vehicles to be deployed for 'uninterrupted power supply'
Share. Facebook Twitter LinkedIn WhatsApp Email

Related Posts

BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ `ನಟ ಮಡೆನೂರು ಮನು’ ವಿರುದ್ಧ ಅತ್ಯಾಚಾರ ಆರೋಪ : `FIR’ ದಾಖಲು.!

22/05/2025 12:27 PM1 Min Read

BREAKING : ಕನ್ನಡ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಬೇಡಿ : ಕನ್ನಡದ ಬಗ್ಗೆ ಮತ್ತೆ ನಾಲಗೆ ಹರಿಬಿಟ್ಟ ಗಾಯಕ ಸೋನು ನಿಗಮ್.!

22/05/2025 11:25 AM2 Mins Read

Monsoon Alert: ರೈತರಿಗೆ ಗುಡ್ ನ್ಯೂಸ್: ಮೇ 27ರಂದೇ ರಾಜ್ಯಕ್ಕೆ ‘ಮುಂಗಾರು’ ಪ್ರವೇಶ ಸಾಧ್ಯತೆ

22/05/2025 11:19 AM2 Mins Read
Recent News

BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ `ನಟ ಮಡೆನೂರು ಮನು’ ವಿರುದ್ಧ ಅತ್ಯಾಚಾರ ಆರೋಪ : `FIR’ ದಾಖಲು.!

22/05/2025 12:27 PM

BREAKING : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ ಕರೆ |bomb threat

22/05/2025 12:20 PM

BREAKING : ಅಮೇರಿಕದಲ್ಲಿ ಇಸ್ರೇಲ್ ಅಧಿಕಾರಿಗಳ ಹಂತಕ ಅರೆಸ್ಟ್ :`ಬಂಧಿಸುವಾಗ ‘ಫ್ರೀ ಪ್ಯಾಲೆಸ್ಟೈನ್’ ಘೋಷಣೆ | WATCH VIDEO

22/05/2025 12:05 PM

‘ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದರೆ, ಅವರು ಇರುವಲ್ಲಿಯೇ ಹೋಗಿ ಅವರನ್ನು ಹೊಡೆಯುತ್ತೇವೆ’ : ಸಚಿವ ಜೈಶಂಕರ್

22/05/2025 11:59 AM
State News
KARNATAKA

BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ `ನಟ ಮಡೆನೂರು ಮನು’ ವಿರುದ್ಧ ಅತ್ಯಾಚಾರ ಆರೋಪ : `FIR’ ದಾಖಲು.!

By kannadanewsnow5722/05/2025 12:27 PM KARNATAKA 1 Min Read

ಬೆಂಗಳೂರು : ಕಾಮಿಟಿ ಕಿಲಾಡಿ ಶೋ ಮೂಲಕ ಮಿಂಚಿದ್ದ ನಟ ಮಡೆನೋರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು,…

BREAKING : ಕನ್ನಡ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಬೇಡಿ : ಕನ್ನಡದ ಬಗ್ಗೆ ಮತ್ತೆ ನಾಲಗೆ ಹರಿಬಿಟ್ಟ ಗಾಯಕ ಸೋನು ನಿಗಮ್.!

22/05/2025 11:25 AM

Monsoon Alert: ರೈತರಿಗೆ ಗುಡ್ ನ್ಯೂಸ್: ಮೇ 27ರಂದೇ ರಾಜ್ಯಕ್ಕೆ ‘ಮುಂಗಾರು’ ಪ್ರವೇಶ ಸಾಧ್ಯತೆ

22/05/2025 11:19 AM

ALERT : ಸಾರ್ವಜನಿಕರೇ ಎಚ್ಚರ : `ಆಧಾರ್ ಕಾರ್ಡ್’ ನಲ್ಲಿ ಈ ತಪ್ಪು ಮಾಡಿದ್ರೆ 3 ವರ್ಷ ಜೈಲು, 1 ಲಕ್ಷ ರೂ.ದಂಡ ಫಿಕ್ಸ್.!

22/05/2025 10:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.