ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದೆ. ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತರಾವರಿ ಕಾಮೆಂಟ್ ಗಳು ತೋರಿ ಬರುತ್ತಿವೆ. ಹೀಗಾಗಿ ದಯವಿಟ್ಟು ಕೆಟ್ಟದಾಗಿ ನಟ ದರ್ಶನ್ ಬಗ್ಗೆ ಕಾಮೆಂಟ್ ಮಾಡದಂತೆ ನಟಿ ಸೋನುಗೌಡ ಮನವಿ ಮಾಡಿದ್ದಾರೆ.
ಈ ಬಗ್ಗೆ ರೀಲ್ಸ್ ಮಾಡಿರುವಂತ ಅವರು ದಯವಿಟ್ಟು ನಟ ದರ್ಶನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ದರ್ಶನ್ ಬಗ್ಗೆ ಮಾತಾಡುವಷ್ಟು ದೊಡ್ಡವಳು ನಾನು ಅಲ್ಲ ಎಂಬುದಾಗಿ ರೀಲ್ಸ್ ಮಾಡಿ ದರ್ಶನ್ ಕುಟುಂಬಕ್ಕೆ ಸೋನುಗೌಡ ಧೈರ್ಯ ಹೇಳಿದ್ದಾಳೆ.
ಇನ್ನೂ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ಕಾನೂನು ತೀರ್ಪು ಬರುವವರೆಗೂ ಕಾಯಿರಿ. ದಯವಿಟ್ಟು ನಟ ದರ್ಶನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ ಎಂಬುದಾಗಿ ಮನವಿ ಮಾಡಿದ್ದಾರೆ.
ಹಾವೇರಿ ಅಪಘಾತ ಪ್ರಕರಣ :ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಗಮನಿಸಿ: ಸೆ.15ರವರಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ತಾತ್ಕಾಲಿಕ ನಿಷೇಧ