ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದಂತ ಅವರಿಬ್ಬರದ್ದು 12 ವರ್ಷಗಳ ದಾಂಪತ್ಯ. ಆದರೇ ಪತಿಯ ಅನುಮಾನದ ಕಿಚ್ಚಿಗೆ, ಸುಂದರ ದಾಂಪತ್ಯವೇ ಅಂತ್ಯಗೊಂಡಿದೆ. ಅದು ಆಕೆ ಹಲವು ಪುರುಷರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಅನ್ನುವ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಪಾಪಿ ಪತಿಯೊಬ್ಬ ಕೊಲೆ ಮಾಡಿದ್ದರಿಂದ ಆಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಚೌಡೇಶ್ವರಿ ನಗರದಲ್ಲಿ ಹೀಗೊಂದು ಘಟನೆ ನಡೆದಿದೆ. ಅಜ್ಜಂಪುರ ತಾಲ್ಲೂಕಿನ ಬುರುಡೆಕಟ್ಟೆ ಗ್ರಾಮ ರಂಗನಾಥ್ ಹಾಗೂ ಮಮತಾ ಪರಸ್ಪರ ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.
7 ವರ್ಷಗಳ ಹಿಂದೆ ಬೀರೂರಿಗೆ ಬಂದು ರಂಗನಾಥ್ ಹಾಗೂ ಮಮತಾ ವಾಸಿಸುತ್ತಿದ್ದರು. ರಂಗನಾಥ್ ಗಾರೆ ಕೆಲಸ ಮಾಡುತ್ತಿದ್ದರೇ, ಮಮತಾ ಅಡಿಕೆ ಸುಲಿಯುವ ಕೆಲಸ, ಮದುವೆ ಮಂಟಪಗಳಲ್ಲಿ ಕೆಲಸ ಮಾಡುತ್ತಿದ್ದಳು.
ಹೀಗೆ ಕೆಲಸದ ನಿಮಿತ್ತ ಆಚೆ ಹೋಗುತ್ತಿದ್ದಂತ ಮಮತಾಗೆ ಮೊಬೈಲ್ ಚಟ ಹೆಚ್ಚಾಗಿದ್ದು ಪತಿ ರಂಗನಾಥ್ ಗೆ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಪತಿ ರಂಗನಾಥ್ ತನ್ನ ಪತ್ನಿ ಮಮತಾ ಹಲವು ಪುರುಷರ ಜೊತೆಗೆ ಸಂಪರ್ಕದಲ್ಲಿ ಇರೋ ಸಂಶಯ ಮೂಡಿತ್ತು.
ಕಳೆದ ಫೆಬ್ರವರಿ.4ರಂದು ಮಗನ ಹುಟ್ಟು ಹಬ್ಬ ಆಚರಣೆ ಸಿದ್ಧತೆಯಲ್ಲಿ ಇದ್ದಾಗ, ಮಮತಾ ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದಳು. ಇದರಿಂದ ಪತಿ ರಂಗನಾಥ್ ಕೋಪಗೊಂಡಿದ್ದರು. ಮಕ್ಕಳ ಮುಂದೆಯೇ ಪತಿ-ಪತ್ನಿ ಗಲಾಟೆ ಕೂಡ ಮಾಡಿಕೊಂಡಿದ್ದರು.
ಪತಿ ರಂಗನಾಥ್ ಹಾಗೂ ಪತ್ನಿ ಮಮತಾ ನಡುವೆ ಜಗಳ ತಾರಕ್ಕೇರಿದ ಸಂದರ್ಭದಲ್ಲಿ, ಪತ್ನಿಯನ್ನು ಕಡೆವಿ ಕತ್ತು ಹಿಸುಕಿ, ವೇಲ್ ನಿಂದ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಆ ಬಳಿಕ ಬೆಳಗ್ಗೆ ಬೀರೂರು ಠಾಣೆಗೆ ತೆರಳಿ, ರಾತ್ರಿ ಚೆನ್ನಾಗಿ ಪತ್ನಿ ಮಮತಾ ಇದ್ದಳು. ಬೆಳಗ್ಗೆ ಮೇಲೇಳುತ್ತಿಲ್ಲ ಎಂಬುದಾಗಿ ಗೋಳಾಡಿದ್ದಾನೆ. ಆದರೇ ಸ್ಥಳಕ್ಕೆ ತೆರಳಿದಂತ ಪೊಲೀಸರು ಪರಿಶೀಲಿಸಿದಾಗ ಕುತ್ತಿಗೆಗೆ ಬಿಗಿದು, ಉಸಿರು ಕಟ್ಟಿಸಿ ಕೊಲೆ ಮಾಡಿರೋದು ಕಂಡು ಬಂದಿದೆ.
ಈ ಹಿನ್ನಲೆಯಲ್ಲಿ ಮಮತ ಹತ್ಯೆಯಲ್ಲಿ ಪತಿ ರಂಗನಾಥ್ ಅವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇತ್ತ ತಂದೆ-ತಾಯಿ ಇಲ್ಲದೇ ಮಕ್ಕಳಿಬ್ಬರು ಅನಾಥರಾದಂತೆ ಆಗಿದೆ.
ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಸಂಪುಟದಲ್ಲಿ ಹಿಂದೂ ಮಂತ್ರಿ: ಯಾರದು ಗೊತ್ತಾ?








