Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸಾಗರ ‘ಬೆಳೆಯೂರು ಶಾಲೆ’ಯಲ್ಲಿ ಊಟದ ವಿಚಾರದಲ್ಲಿ ‘ಜಾತಿ ತಾರತಮ್ಯ’, ಪ್ರಶ್ನಿಸಿದ್ದಕ್ಕೆ ಬೆದರಿಕೆ

08/11/2025 10:18 PM

ನೀವು ಯಾವ ಬ್ಯಾಂಕಿನಿಂದ ಎಷ್ಟು ಬಾರಿ ‘ಹಣ’ ವಿತ್ ಡ್ರಾ ಮಾಡ್ಬೋದು.? ಇಲ್ಲಿದೆ ಮಾಹಿತಿ.!

08/11/2025 10:12 PM

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಾಲಾ ಶಿಕ್ಷಣದಲ್ಲಿ ನೀತಿ ನಾವೀನ್ಯತೆ ವೇಗಗೊಳಿಸಲು ಮಹತ್ವದ ಕ್ರಮ: ‘J-PAL South Asia’ದೊಂದಿಗೆ ಒಡಂಬಡಿಕೆ
KARNATAKA

ಶಾಲಾ ಶಿಕ್ಷಣದಲ್ಲಿ ನೀತಿ ನಾವೀನ್ಯತೆ ವೇಗಗೊಳಿಸಲು ಮಹತ್ವದ ಕ್ರಮ: ‘J-PAL South Asia’ದೊಂದಿಗೆ ಒಡಂಬಡಿಕೆ

By kannadanewsnow0909/10/2024 2:15 PM

ಬೆಂಗಳೂರು : ಬೆಂಗಳೂರು -ಕರ್ನಾಟಕ ಸರ್ಕಾರವು ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್ (J-PAL) ದಕ್ಷಿಣ ಏಷ್ಯಾ ದೊಂದಿಗೆ ಪಾಲುದಾರಿಕೆ ಹೊಂದಿದ್ದು, ವೈಜ್ಞಾನಿಕ ಸಂಶೋದನೆ ಮತ್ತು ದತ್ತಾಂಶದ ಮೂಲಕ ಶಾಲಾ ಶಿಕ್ಷಣದಲ್ಲಿನ ಕೆಲವು ಸವಾಲುಗಳನ್ನು ಪರಿಹರಿಸಲು “ಕಲಿಕೆ ಲ್ಯಾಬ್” ಅನ್ನು ಸ್ಥಾಪಿಸುತ್ತದೆ.
“ಕಲಿಕೆ ಲ್ಯಾಬ್ ಗಳು” ಜಾಗತಿಕ ಸಂಶೋಧನಾ ಒಳನೋಟಗಳ ಮೂಲಕ ಕರ್ನಾಟಕದ ಶಾಲಾ ಶಿಕ್ಷಣದ ನೀತಿಗಳನ್ನು ರೂಪಿಸಲು ಸಹಕರಿಸುತ್ತದೆ ಹಾಗೂ ಯಾದೃಚ್ಛಿಕ ಮೌಲ್ಯಮಾಪನಗಳ ಮೂಲಕ ಹೊಸ ಮತ್ತು ಅಸ್ತಿತ್ವದಲ್ಲಿರುವ ಶಾಲಾ ಶಿಕ್ಷಣ ಕಾರ್ಯಕ್ರಮಗಳ ವೈಜ್ಞಾನಿಕ ಮೌಲ್ಯಮಾಪನಗಳಿಗೆ ಹೊಸ ಪ್ರಚೋದನೆಯನ್ನು ನೀಡುತ್ತದೆ.

ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, J-PALSouth Asia ರವರ ತಾಂತ್ರಿಕ ಪರಿಣತಿಯನ್ನು ಬಳಿಸಿಕೊಂಡು ವಿದ್ಯಾಥಿಗಳ ಮೂಲಭೂತ ಕಲಿಕೆಯನ್ನು ಬಲಪಡಿಸಲು ಮತ್ತು ಕಲಿಕೆಯ ಅಂತರವನ್ನು ಸುಧಾರಿಸಲು ಪರಿಣಾಮಕಾರಿಯಾದ ಶಾಲಾ ಶಿಕ್ಷಣದ ಮಧ್ಯವರ್ತನೆಗಳನ್ನು ಗುರುತಿಸಿ, ಅಳವಡಿಸಿಕೊಳ್ಳಲು ಕಾರ್ಯಗತಗೊಳಿಸುತ್ತದೆ. ಈ ಪ್ರಯತ್ನವು ಪೂರ್ವಪ್ರಾಥಮಿಕ ಹಂತದಿಂದ 12ನೇ ತರಗತಿ ಮಕ್ಕಳವರೆಗೂ ಪ್ರಯೋಜನವನ್ನು ನೀಡುತ್ತದೆ.

ಮಧು ಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ, ರಿತೇಶ್ ಕುಮಾರ್ ಸಿಂಗ್‌, ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಇಟ್ಬಾಲ್ ಧಲಿವಾಲ್, ಗ್ಲೋಬಲ್ ಕಾರ್ಯನಿರ್ವಾಹಕ ಕಾರ್ಯನಿರ್ವಾಹಕ ನಿರ್ದೇಶಕ, J-PALSouth Asia ರವರ ಉಪಸ್ಥಿತಿಯಲ್ಲಿ ಕೆ.ಎನ್.ರಮೇಶ್, ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್‌ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಶೋಭಿನಿ ಮುಖರ್ಜಿ, ಕಾರ್ಯನಿರ್ವಾಹಕ ನಿರ್ದೇಶಕರು, J-PAL South Asia, ರವರು, ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಈ ವೇಳೆ ಮಾತನಾಡಿದಂತ ಸಚಿವ ಮಧು ಬಂಗಾರಪ್ಪ ಅವರು “ಸದೃಢವಾದ ಶಾಲಾ ಶಿಕ್ಷಣ ನೀತಿಗಳು ಸಮೃದ್ಧ ಸಮಾಜವನ್ನು ನಿರ್ಮಿಸಲು ಪ್ರಮುಖವಾಗಿವೆ. ನಮ್ಮ ಗುರಿ ತಲುಪಲು J-PAL South Asia ರವರ ಅನುಭವ ಮತ್ತು ಸಂಕೀರ್ಣ ಅಭಿವೃದ್ಧಿ ಸಮಸ್ಯೆಗಳನ್ನು ಪರಿಹರಿಸುವ ಪರಿಣತಿಯು ಅವರನ್ನು ಮೌಲ್ಯಯುತ ಪಾಲುದಾರರನ್ನಾಗಿ ಮಾಡುತ್ತದೆ’ ಎಂದು ತಿಳಿಸಿದರು.

ಶೋಭಿನಿ ಮುಖರ್ಜಿ, ಕಾರ್ಯನಿರ್ವಾಹಕ ನಿರ್ದೇಶಕರು, J-PAL South Asia ರವರು, “ಮಕ್ಕಳನ್ನು ತರಗತಿಗಳಲ್ಲಿ ಸೇರಿಸುವುದು ಮಾತ್ರವಲ್ಲ ಶಿಕ್ಷಣ, ಅವರು ಕಲಿಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ. ಅದಕ್ಕಾಗಿಯೇ ನಮ್ಮ ಮಕ್ಕಳು ಕಲಿಯಲು ಮತ್ತು ಯಶಸ್ವಿಯಾಗಲು ಸಹಾಯ ಮಾಡಲು ಸಾಬೀತಾದ ಪರಿಣಾಮಕಾರಿತ್ವದೊಂದಿಗೆ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು ನಿರ್ಣಾಯಕವಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇತರರು ಅನುಸರಿಸಲು, ಬಲವಾದ ಉದಾಹರಣೆ ದಾಖಲಿಸಿದೆ’ ಎಂದು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರವು, J-PAL ದಕ್ಷಿಣ ಏಷ್ಯಾ ರವರ “ಎವರಿ ಚೈಲ್ಡ್ ಕೌಂಟ್ಸ್ (Every Child Counts) ” ಕಾಯಕ್ರಮದ, ಆಟ-ಆಧಾರಿತ ಗಣಿತ ಪಠ್ಯಕ್ರಮವನ್ನು ತಮ್ಮ ಪೂರ್ವ-ಪ್ರಾಥಮಿಕ ಶಾಲಾ ಪಠ್ಯಕ್ರಮ – ಚಿಲಿ ಪಿಲಿ ಪ್ಲಸ್‌ಗೆ ಸಂಯೋಜಿಸುವ ಮಾರ್ಗಗಳನ್ನು ಅನ್ವೇಷಿಸುತ್ತದೆ. ಪ್ರಾಯೋಗಿಕವಾಗಿ ಆರು ಜಿಲ್ಲೆಗಳಲ್ಲಿ 6000 ಮಕ್ಕಳನ್ನು ತಲುಪಲಿದೆ. J-PAL South Asia ರವರು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಕರ್ನಾಟಕದ ಎರಡು ಹೊಸ ಶಾಲಾ ಶಿಕ್ಷಣ ಕಾರ್ಯಕ್ರಮಗಳಾದ “ಮರು ಸಿಂಚನ” ಮತ್ತು “ಗಣಿತ ಗಣಕ” ದಲ್ಲಿ ಜ್ಞಾನ ಮತ್ತು ಸಂಶೋಧನಾ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತದೆ. J-PAL ನ ನೆಟ್‌ವರ್ಕ್‌ ಭಾಗವಾಗಿರುವ ಸಂಶೋಧಕರು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಮಾಡಿದ ಮೌಲ್ಯಮಾಪನಗಳಿಂದ ಎಲ್ಲಾ ಮೂರು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕರಿಸುತ್ತದೆ.

ಈ ಪಾಲುದಾರಿಕೆಯು ಅನೇಕ ಸಂಸ್ಥೆಗಳ ಒಕ್ಕೂಟದಿಂದ ಬೆಂಬಲಿತವಾಗಿದೆ: USAID ನ Development Innovation. Ventures, What Works Hub for Global Education, Alokit, Youth Impact, Transform Schools, Mantra4Change, Key Education Foundation and ASPIRE (J-PAL South Asia and Veddis Foundation) ಗಳು ಜಂಟಿಯಾಗಿ ನೀತಿ ಪ್ರಭಾವವನ್ನು ಹೆಚ್ಚಿಸಲು ಕೈ ಜೋಡಿಸಿವೆ.

J-PAL South Asia at IFMR

ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್ (ಜೆ-ಪಿಎಎಲ್) ಜಾಗತಿಕ ಸಂಶೋಧನಾ ಕೇಂದ್ರವಾಗಿದ್ದು, ವೈಜ್ಞಾನಿಕ ಪುರಾವೆಗಳಿಂದ ನೀತಿಗಳನ್ನು ರಚಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಬಡತನವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಪ್ರಪಂಚದಾದ್ಯಂತದ ವಿಶ್ವವಿದ್ಯಾನಿಲಯಗಳಲ್ಲಿ 900 ಕ್ಕೂ ಹೆಚ್ಚು ಸಂಯೋಜಿತ ಸಂಶೋಧಕರ ನೆಟ್‌ವರ್ಕ್‌ನಿಂದ, ಬಡತನದ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪ್ರಶ್ನೆಗಳಿಗೆ ಉತ್ತರಿಸಲು J-PAL ಯಾದೃಚ್ಛಿಕ ಪ್ರಭಾವದ ಮೌಲ್ಯಮಾಪನಗಳನ್ನು ನಡೆಸುತ್ತದೆ.

J-PAL ಅನ್ನು 2003 ರಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾರಂಭಿಸಲಾಯಿತು ಮತ್ತು ಪ್ರಪಂಚದಾದ್ಯಂತ 7 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಜೆ-ಪಾಲ್ ಸೌತ್ ಏಷ್ಯಾ, ಇನ್‌ಸ್ಟಿಟ್ಯೂಟ್ ಫಾರ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ (IFMR), ಚೆನ್ನೈ, ರವರು 30 ಭಾರತೀಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವಾಲಯಗಳೊಂದಿಗೆ ಹೊಸ ಸಂಶೋಧನೆ ಮತ್ತು ಪುರಾವೆ-ಮಾಹಿತಿ ನೀತಿ ರಚನೆಯ ಪ್ರಗತಿಗೆ ಪಾಲುದಾರಿಕೆಯನ್ನು ನಿರ್ಮಿಸಿದೆ, ಜೊತೆಗೆ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶ ಸರ್ಕಾರಗಳೊಂದಿಗೆ ತರಬೇತಿ ಪಾಲುದಾರಿಕೆಯನ್ನು ಹೊಂದಿದೆ.

ಉಡುಪಿ:ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

BREAKING : ಮಲಯಾಳಂನ ಖ್ಯಾತ ಹಿರಿಯ ನಟ ‘ಟಿ.ಪಿ.ಮಾಧವನ್’ ನಿಧನ |T.P. Madhavan No More

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸಾಗರ ‘ಬೆಳೆಯೂರು ಶಾಲೆ’ಯಲ್ಲಿ ಊಟದ ವಿಚಾರದಲ್ಲಿ ‘ಜಾತಿ ತಾರತಮ್ಯ’, ಪ್ರಶ್ನಿಸಿದ್ದಕ್ಕೆ ಬೆದರಿಕೆ

08/11/2025 10:18 PM2 Mins Read

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM2 Mins Read

ಚಿತ್ರದುರ್ಗ: ನ.9ರಂದು KUWJ ಸಂಘದ ಚುನಾವಣೆಗೆ ಮತದಾನ, ಕಣದಲ್ಲಿ 39 ಅಭ್ಯರ್ಥಿಗಳು

08/11/2025 8:33 PM3 Mins Read
Recent News

ಶಿವಮೊಗ್ಗ: ಸಾಗರ ‘ಬೆಳೆಯೂರು ಶಾಲೆ’ಯಲ್ಲಿ ಊಟದ ವಿಚಾರದಲ್ಲಿ ‘ಜಾತಿ ತಾರತಮ್ಯ’, ಪ್ರಶ್ನಿಸಿದ್ದಕ್ಕೆ ಬೆದರಿಕೆ

08/11/2025 10:18 PM

ನೀವು ಯಾವ ಬ್ಯಾಂಕಿನಿಂದ ಎಷ್ಟು ಬಾರಿ ‘ಹಣ’ ವಿತ್ ಡ್ರಾ ಮಾಡ್ಬೋದು.? ಇಲ್ಲಿದೆ ಮಾಹಿತಿ.!

08/11/2025 10:12 PM

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM

“ಭಾರತ ವಿಶ್ವ ನಾಯಕನಾಗಲಿದೆ, ಸಮಾಜವನ್ನ ಕಾನೂನಿನಿಂದಲ್ಲ, ಕರುಣೆಯಿಂದ ನಡೆಸಲಾಗ್ತಿದೆ” ; ಮೋಹನ್ ಭಾಗವತ್

08/11/2025 9:45 PM
State News
KARNATAKA

ಶಿವಮೊಗ್ಗ: ಸಾಗರ ‘ಬೆಳೆಯೂರು ಶಾಲೆ’ಯಲ್ಲಿ ಊಟದ ವಿಚಾರದಲ್ಲಿ ‘ಜಾತಿ ತಾರತಮ್ಯ’, ಪ್ರಶ್ನಿಸಿದ್ದಕ್ಕೆ ಬೆದರಿಕೆ

By kannadanewsnow0908/11/2025 10:18 PM KARNATAKA 2 Mins Read

ಶಿವಮೊಗ್ಗ: ಸರ್ಕಾರಿ ಶಾಲೆಗಳಲ್ಲಿ ಯಾವುದೇ ಬೇಧ ಭಾವ ಮಾಡದೇ, ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣಬೇಕು. ಅದೇ ಕಾರಣಕ್ಕೆ ಬಡವ-ಬಲ್ಲಿದ, ಮೇಲು-ಕೀಳು…

ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದವರು ಸಿಎಂ ಸಿದ್ದರಾಮಯ್ಯ ಮಾತ್ರ: ಸಚಿವ ಶಿವರಾಜ್ ತಂಗಡಗಿ

08/11/2025 10:01 PM

ಚಿತ್ರದುರ್ಗ: ನ.9ರಂದು KUWJ ಸಂಘದ ಚುನಾವಣೆಗೆ ಮತದಾನ, ಕಣದಲ್ಲಿ 39 ಅಭ್ಯರ್ಥಿಗಳು

08/11/2025 8:33 PM

ರಾಜ್ಯದಲ್ಲಿ ವೋಟ್ ಚೋರಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ: ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ

08/11/2025 8:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.